Saturday, May 24, 2008

ಬೆಂಗಳೂರು ತುಂಬೆಲ್ಲ ಉಗುಳು ಭಟರು!!!

ಬೆಂಗಳೂರು ಮೇ ೨೪: ಬೆಂಗಳೂರು ಎಷ್ಟು ಹೊಲಸಾಗಿದೆ ಎಂದರೆ ನೀವೇನಾದರೂ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ ಈ ಅನುಭವ ಆಗಿರಲಿಕ್ಕೆ ಸಾಕು. ಅಂದರೆ ನೀವು ಯಾವುದೇ ಬಿ.ಟಿ.ಎಸ್. ಬಸ್ಸನ್ನು ಓವರ್ ಟೇಕ್ ಮಾಡಿದಲ್ಲಿ ಈ ಅನುಭವ ಖಂಡಿತಾ ಕಾದಿದೆ.
ಬಸ್ಸಲ್ಲಿ ಕುಳಿತಿರುವ ಕೆಲವು ಪೋಲಿಗಳು ಯಾರಾದರೂ ಇದ್ದಾರಾ ಎಂದು ನೋಡದೇನೇ ಥೂ...ಎಂದು ಉಗಿಯುತ್ತಾರೆ. ಅದು ನಿಮ್ಮ ಮುಖದ ಮೇಲೆ, ಶಿರಸ್ತ್ರಾಣದ ಮೇಲೆ, ಅಂಗಿ ಮೇಲೆ ಬೀಳದೇ ಇರಲು ಸಾಧ್ಯವೇ ಇಲ್ಲ. ಪಾನ್ ಪರಾಗ್, ಎಲೆಅಡಿಕೆ, ಗುಟ್ಕಾ ಮುಂತಾದ ಅಮಲೇರಿಸುವ ಪದಾರ್ಥಗಳನ್ನು ತಿಂದು, ಹಂದಿಗಳಿಗಿಂತ ತಾನೇನೂ ಕಮ್ಮಿ ಇಲ್ಲವೆಂದು ತೋರಿಸಲು ಈ ರೀತಿ ಮಾಡುತ್ತಿರಬಹುದೇ?. ಇಂತಹ ಮೂರನೇ ವರ್ಗದ ಬುದ್ದಿ ಇರುವ ಜನ ದಿನೇ ದಿನೇ ಹೆಚ್ಚುತ್ತಿರುವುದು, ಐಟಿ ಸಿಟಿ ಎಂದು ಕರೆಸಿಕೊಳ್ಳುತ್ತಿರುವ ಬೆಂಗಳೂರಿಗೆ ಒಂದು ಕಪ್ಪು ಚುಕ್ಕೆಯಾಗಿದೆ.
ಹಸಿರು ನಗರ, ಗಾರ್ಡನ್ ಸಿಟಿ.....ಎಂದು ಕರೆಸಿಕೊಳ್ಳುತ್ತಿರುವ ನಗರ್ ಇತ್ತೀಚೆಗೆ ಈ ಉಗುಳು ಭಟರಿಂದಾಗಿ ಕ್ರಮೇಣ ಕೆಂಪು ಬಣ್ಣಕ್ಕೆ ತಿರುಗುತ್ತಿರುವುದು ವಾಸ್ತವವಾದರೂ ಕಟು ಸತ್ಯ. ಆದ್ದರಿಂದ ಈ ಉಗುಳು ಪ್ರಾಣಿಗಳಿಗೆ ಉಗುಳುವುದನ್ನು ನಿಲ್ಲಿಸಲು ಒಂದು ಕಾನೂನು ಜಾರಿಗೆ ತರಬೇಕಾದ ಅವಶ್ಯಕತೆಯಿದೆ. ಇವರಿಗೆ ಜೀವಾವಧಿ ಶಿಕ್ಷೆ ಕೊಟ್ಟರೂ ಕಡಿಮೆಯೇ......ಇನ್ನೂ ಉಗುಳು ನಿಲ್ಲಿಸದಿದ್ದಲ್ಲಿ ಜೀವನ ಪರ್ಯಂತ ಜೈಲಿಗೆ ಹಾಕಿ, ಅಲ್ಲೇ ಉಗುಳಲು ಒಂದು ಪ್ರತ್ಯೇಕ ತೊಟ್ಟಿಯನ್ನು ಕೊಟ್ಟು ಅವರನ್ನು ಅಲ್ಲೇ ತಮ್ಮ ಜೀವನದ ಅಂತಿಮ ಘಳಿಗೆ ಕಳೆಯಲು ಏರ್ಪಾಡು ಮಾಡಿ...ನಮ್ಮಂತಹ ದ್ವಿಚಕ್ರ ವಾಹನಸವಾರರನ್ನು ಈ ಉಗಿತದಿಂದ ಕಾಪಾಡಿ ಪುಣ್ಯಕಟ್ಟಿಕೊಳ್ಳಿ.

No comments: