Monday, September 10, 2012

ಕನ್ನಡ ದ್ರೋಹಿಗಳು

ಕರ್ನಾಟಕದಲ್ಲಿ ಕನ್ನಡ ಬಡವಾಗುತ್ತಿದೆಯಾ?. ಇಂತಹ ಒಂದು ಪ್ರಶ್ನೆ ಈಗ ಎಲ್ಲರಿಗೂ ಮೂಡದೇ ಇರದು....ಏಕೆಂದರೆ ನಮ್ಮ ಬೆಂಗಳೂರಿನ ಎಲ್ಲಾ ಶಾಲೆಗಳಲ್ಲಿ ಕನ್ನಡ ಕಲಿಸುವ ಗುರುಗಳು ಇವತ್ತು ಒಬ್ಬ ಐದನೇ ತರಗತಿ ಓದಿದ ವಿದ್ಯಾರ್ಥಿಗಿಂತಲೂ ಕಡೆಯಾಗಿದ್ದಾರೆ. ಖಂಡಿತಾ ಇವತ್ತು ಒಂದು ಸಮೀಕ್ಷೆ ನಡೆಸಿದರೆ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇವತ್ತು ಕನ್ನಡ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ತಪ್ಪು ತಪ್ಪಾದ ಕನ್ನಡವನ್ನು ಕಲಿಸುತ್ತಿರುವುದು, ಮುಂದಿನ ದಿನಗಳಲ್ಲಿ ಕನ್ನಡದ ಸ್ಥಿತಿ ಹೇಗಿರಬಹುದು ಎಂಬುದನ್ನು ಊಹೆ ಮಾಡಬಹುದು. ಇಂದಿನ ಪೋಷಕರ ಆಂಗ್ಲ ವ್ಯಾಮೋಹ ಕೂಡ ಇವತ್ತು ಕನ್ನಡದ ಅವನತಿಗೆ ಕಾರಣವಾಗಿದೆ.ಕನ್ನಡವನ್ನು ಮೊದಲನೇ ಭಾಷೆಯನ್ನಾಗಿ ತೆಗೆದುಕೊಳ್ಳುವ ಬದಲು ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ತೆಗೆದುಕೊಳ್ಳುತ್ತಿರುವ ಇಂದಿನ ವಿದ್ಯಾರ್ಥಿಗಳು, ಒತ್ತಡ ತರುವ ಪೋಷಕರು ಕೂಡಾ ಇದಕ್ಕೆ ಕಾರಣರಾಗಿದ್ದಾರೆ. ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಕೆಗಾಗಿ ಸಂಸ್ಕೃತ, ಹಿಂದಿ, ಆಂಗ್ಲ ಭಾಷೆಗಳನ್ನು ಮೊದಲ ಭಾಷೆಯನ್ನಾಗಿ ತೆಗೆದುಕೊಳ್ಳುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಬೇಕಾಗಿದೆ. ನಾವು ಸ್ವಾವಲಂಬಿಗಳಾಗಿ ಬದುಕಲು ಇದೂ ಒಂದು ದಾರಿ, ಇಲ್ಲದಿದ್ದಲ್ಲಿ ಪರಾವಲಂಬಿಗಳಾಗಿ ಬದುಕಬೇಕಾಗುತ್ತದೆ. ಮಾತೃಭಾಷೆಗೆ ಬೆಲೆ ಕೊಡದವ ಕನ್ನಡಿಗನೇ ಅಲ್ಲ.... ಅವ ಕನ್ನಡದ್ರೋಹಿ, ರಾಜ್ಯದ್ರೋಹಿ.... ಮಾತೃ ದ್ರೋಹಿ.... ಧಿಕ್ಕಾರವಿರಲಿ ಈ ವಿದ್ಯಾರ್ಥಿಗಳಿಗೆ, ಧಿಕ್ಕಾರವಿರಲಿ ಈ ಪೋಷಕರಿಗೆ....ಧಿಕ್ಕಾರವಿರಲಿ ಈ ಶಾಲೆಗಳಿಗೆ, ಧಿಕ್ಕಾರವಿರಲಿ ಈ ಸರಕಾರಕ್ಕೆ.... ಕನ್ನಡವನ್ನು ಹತ್ತನೇ ತರಗತಿವರೆಗೆ ಕಡ್ಡಾಯ ಮಾಡಲು ಹಿಂಜರಿಯುತ್ತಿರುವ ಈ ನಪುಂಸಕ ಕರ್ನಾಟಕ ಸರಕಾರ ಇವತ್ತು ತನ್ನ ಖದರ್ ಕಳೆದುಕೊಂಡಿದೆ.

Tuesday, January 24, 2012

ಚಂಪಾ ಎಂಬ ’ಬುದ್ದಿಜೀವಿ

ಇತ್ತೀಚೆಗೆ ವಿ.ಕ.ದಲ್ಲಿ ಪ್ರಕಟವಾದ ಚಂಪಾ ಅವರ ಲೇಖನ ಓದಿ ಖೇದವಾಯಿತು. ಕೇವಲ ಬ್ರಾಹ್ಮಣರನ್ನು ದ್ವೇಷಿಸುವುದನ್ನೇ ಕಾಯಕವಾಗಿಸಿಕೊಂಡಿರುವ ಈ ಚಂಪಾ ಎಂಬ ’ಬುದ್ದಿಜೀವಿ’ಯ ಬಗ್ಗೆ ಅಸಹ್ಯದ ಜೊತೆಗೆ ಅನುಕಂಪವೂ ಉಂಟಾಯಿತು.

ಅಸಹ್ಯ ಏಕೆಂದರೆ ಕಾಂಗ್ರೆಸ್ ರಾಜಕಾರಣಿಗಳ ಹಿಂದೂ ವಿರೋಧಿ ಧೋರಣೆಯ ಥರ ಇಲ್ಲಿ ಬ್ರಾಹ್ಮಣ ವಿರೋಧವನ್ನೇ ತನ್ನ ಕಾಯಕವಾಗಿಸಿಕೊಂಡು ತಾನು ರಾಜಕೀಯ ನೆಲೆ ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ ಚಂಪಾ. ಅನುಕಂಪ ಏಕೆಂದರೆ ಊರು ಹೋಗು, ಕಾಡು ಬಾ ಅನ್ನುವ ಪರಿಸ್ಥಿತಿಯಲ್ಲಿರುವ ಚಂಪಾ ಬ್ರಾಹ್ಮಣರ ವಿರೋಧ ಕಟ್ಟಿಕೊಳ್ಳಲು ಹೊರಟಿರುವುದು. ಕೇವಲ ಬ್ರಾಹ್ಮಣ ಎನ್ನುವ ಕಾರಣಕ್ಕೆ ಮಾತ್ರ ಶ್ರೀ ಅನಂತಮೂರ್ತಿಯವರನ್ನು ವಿರೋಧಿಸುವ ಇಂತಹ ಜಾತಿವಾದಿಗಳಿಂದ ನಮ್ಮ ಸಮಾಜಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಅಲ್ಲದೆ ಈ ಚಂಪಾ ತಾನು ಕನ್ನಡದ ಮೇರು ಸಾಹಿತಿ, ಕರ್ನಾಟಕ ರತ್ನ, ಜ್ಞಾನಪೀಠ ಪ್ರಶಸ್ತಿ ತನಗೆ ಬಂದಿಲ್ಲ, ಕೇವಲ ಬ್ರಾಹ್ಮಣ ಸಾಹಿತಿಗಳಿಗೆ ಮಾತ್ರ ಸಿಗುತ್ತಿದೆ ಎಂಬ ವಿತಂಡ ವಾದವನ್ನು ಮಾಡುತ್ತಿರುವುದನ್ನು ನೋಡುತ್ತಿದ್ದರೆ ಇವರ ಮಾನಸಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬ ಸಂಶಯ ಮೂಡುವುದು ಸಹಜ. ಅದೂ ಅಲ್ಲದೆ ಈ ಸಾಹಿತಿಗೆ ಸಂಸ್ಕೃತ ವ್ಯಾಕರಣ ಜ್ಞಾನ ಕೂಡ ಇಲ್ಲದಿರುವುದು ಖೇದನೀಯ. "ಬ್ರಾಹ್ಮಣೋ ಬಹುಜನ ಪ್ರಿಯಃ" ಎಂಬುದನ್ನು ಚಂಪಾರಂಥ ಕೆಲ ಬ್ರಾಹ್ಮಣ ವಿರೋಧಿಗಳು "ಬ್ರಾಹ್ಮಣೋ ಭೋಜನ ಪ್ರಿಯಃ" ಎಂದು ತಿದ್ದಿ ಬ್ರಾಹ್ಮಣರನ್ನು ಕೇವಲ ಭೋಜನ ಪ್ರಿಯರೆಂದು ಟೀಕಿಸಿರುವುದು, ಜಾತಿವಾದ ಇನ್ನೂ ಜೀವಂತ ಇದೆ ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ. ಬ್ರಾಹ್ಮಣರು ಭೋಜನ ಪ್ರಿಯರಾದರೆ, ಉಳಿದ ಜಾತಿಯವರು ಯಾವುದರ ಪ್ರಿಯರು?. ಅಲ್ಲದೆ ಬ್ರಾಹ್ಮಣರು ಊಟ ಮಾಡಿದ ಎಲೆಯನ್ನೂ ತಿನ್ನುತ್ತಾರೆ ಎಂದು ಹೇಳಿ ತಾನೊಬ್ಬ ಎಂತಹ ನೀಚ ಸಾಹಿತಿ, ಬ್ರಾಹ್ಮಣರನ್ನು ತಾನು ಎಷ್ಟು ದ್ವೇಷಿಸುತ್ತೇನೆ ಎಂಬುದನ್ನು ಪ್ರಪಂಚಕ್ಕೆ ತಿಳಿಸಿದ್ದಾರೆ.

ಮಡೆಸ್ನಾನ ಎಂದರೆ ಬ್ರಾಹ್ಮಣರು ಉಂಡು ಬಿಟ್ಟ ಎಲೆಯಲ್ಲಿ ಹೊರಳಾಡುವುದು ಎಂಬುದಾಗಿ ತಿಳಿದುಕೊಂಡಿರುವ ಈ ಚಂಪಾರಂತಹ ಬ್ರಾಹ್ಮಣ ವಿರೋಧಿಗಳು, ಯಾವುದೋ ಊರಿನಲ್ಲಿ ಇತ್ತೀಚೆಗೆ ಕೆಳಜಾತಿಯವರು ಉಂಡ ಎಲೆಯಲ್ಲಿ ಬ್ರಾಹ್ಮಣರು ಮಡೆಸ್ನಾನ ಮಾಡಿದ್ದಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಮಡೆಸ್ನಾನ ಎನ್ನುವುದು ಒಂದು ನಂಬಿಕೆ, ಸಂಪ್ರದಾಯ ಅಷ್ಟೆ. ಅದು ಅವರವರ ನಂಬಿಕೆಗೆ ಬಿಟ್ಟ ವಿಷಯ. ಜನರ ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಇವರಿಗೆ ಇದೆಯಾ?. ಮುಂದೆ ಇವರು ದೇವಸ್ಥಾನಕ್ಕೆ ಹೋಗುವುದನ್ನೂ ಮಡೆಸ್ನಾನದಂತೆ ಅಸಹ್ಯ, ಮೂಢನಂಬಿಕೆ ಎಂದು ಹೇಳುವ ಕಾಲವೂ ಬರಬಹುದು. ಇಂತಹ ವಿತಂಡ ವಾದವನ್ನು ಮಂಡಿಸಿ ತಾನೊಬ್ಬ ಕರ್ನಾಟಕದ ಬುದ್ದಿಜೀವಿ ಸಂಘದ ಅಧ್ಯಕ್ಷ ಪಟ್ಟ ಅಲಂಕರಿಸಲು ಯೋಗ್ಯ ವ್ಯಕ್ತಿ ಎಂಬುದನ್ನು ಬಿಂಬಿಸಲು ಹೊರಟಂತಿದೆ ಈ ಚಂಪಾ. ಕೇವಲ ಹಿಂದೂ ಸಮಾಜದಲ್ಲಿ ನಡೆಯುವ ಕೆಲವು ಸಂಪ್ರದಾಯಗಳನ್ನೇ ಕೆದಕಿ ಅದರ ವಿರುದ್ದವಾಗಿ ದನಿಯೆತ್ತುವ ಇಂಥಹ ರಾಜಕಾರಣಿ ಸಾಹಿತಿಗಳು ಮುಸಲ್ಮಾನರಲ್ಲಿ ನಡೆಯುವ ಕೆಲ ಸಂಪ್ರದಾಯಗಳ ಬಗ್ಗೆ ದನಿಯೆತ್ತುವ ತಾಕತ್ತಿದೆಯೇ?. ಬರೆದಲ್ಲಿ ಮರುದಿನವೇ ಇವರಿಗೆ ಕಲ್ಲುಹೊಡೆಯುವುದರಲ್ಲಿ ಸಂಶಯವಿಲ್ಲ.

ಚಂಪಾರವರೇ ನಿಮಗೆ ಮಾಡಲು ಕೆಲಸವಿಲ್ಲದಿದ್ದರೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆಂದೋಲನದಲ್ಲಿ ಭಾಗವಹಿಸಿ. ದೇಶದಲ್ಲಿ ಅನೇಕ ಸಮಸ್ಯೆಗಳಿವೆ ಬೆಲೆ ಏರಿಕೆ, ಕಪ್ಪುಹಣ, ಭ್ರಷ್ಟಾಚಾರ, ನಕ್ಸಲ್ ಸಮಸ್ಯೆ....ಇದರ ವಿರುದ್ದವಾಗಿ ನೀವೇಕೆ ದನಿ ಎತ್ತುತ್ತಿಲ್ಲ?. ಕೇವಲ ಬ್ರಾಹ್ಮಣ ವಿರೋಧೀ ನಿಲುವು ತಳೆದು, ಬ್ರಾಹ್ಮಣರ ಏಳಿಗೆ ಸಹಿಸದೆ, ಬ್ರಾಹ್ಮಣರು ಸುಮ್ಮನಿದ್ದರೂ ಅವರ ಸಂಪ್ರದಾಯಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಕೆಣಕುವ ಇಂತಹ ಸಾಹಿತಿಗಳಿಗೆ ಕಾಲವೇ ಬುದ್ದಿ ಕಲಿಸಬೇಕು.

Thursday, August 25, 2011

ದೇಶಕ್ಕೊಬ್ಬನೇ ಅಣ್ಣಾ....ಜನಲೋಕಪಾಲ್ ಮಸೂದೆ ಬೆಂಬಲಿಸಿ

ಅಣ್ಣಾ ಹಜಾರೆಯವರು ತಮ್ಮ ಸ್ವಾರ್ಥವನ್ನು ಬಿಟ್ಟು ದೇಶಕ್ಕಾಗಿ ನಿರಶನವನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಮ್ಮ ದೇಶದ ಒಬ್ಬ ನಾಲಾಯಕ್ ಪ್ರಧಾನಿ ಹಾಗೂ ಭ್ರಷ್ಟ ರಾಜಕಾರಣಿಗಳು ಇವತ್ತಿಗೆ ಹತ್ತು ದಿನವಾದರೂ ಈ ಬಗ್ಗೆ ಕಾಳಜಿ ವಹಿಸದಿರುವುದು ಈ ಕೇಂದ್ರ ಸರಕಾರದ ಜನಪರ ಕಾಳಜಿಯನ್ನು ತೋರಿಸುತ್ತದೆ.

ಒಬ್ಬ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರೆಷ್ಟು, ಹೋದರೆಷ್ಟು?. ಒಬ್ಬ ನಾಲಾಯಕ್ ಪ್ರಧಾನಿ ಈ ದೇಶದ ಜನರ ಬಗ್ಗೆ ಹೇಗೆ ತಾನೆ ಚಿಂತಿಸಿಯಾನು?. ಕೇಂದ್ರದ ಎಲ್ಲ ಭ್ರಷ್ಟ ಮಂತ್ರಿ ಹಾಗೂ ರಾಜಕಾರಣಿಗಳು ಇವತ್ತು ಒಬ್ಬ ಸಾಮಾನ್ಯ ಪ್ರಜೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುವಲ್ಲಿ ಮಗ್ನವಾಗಿದ್ದಾರೆ. ಎಲ್ಲ ಜನರು ಕೇಂದ್ರದ ಈ ಜನದ್ರೋಹಿ ನಡವಳಿಕೆಯನ್ನು ಖಂಡಿಸಬೇಕು. ಕೇಂದ್ರಸರಕಾರದ ಎಲ್ಲ ರಾಜಕಾರಣಿಗಳು ಇವತ್ತು ಸ್ವಿಸ್ ಬ್ಯಾಂಕ್ ನಲ್ಲಿ ತಾವು ಇಟ್ಟಿರುವ ಹಣದ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಮಾಮೂಲಿ ಜನರ ಸಮಸ್ಯೆಯನ್ನು ಆಲಿಸಲು ಅವರಿಗೆ ಸಮಯವಿಲ್ಲ.

ಅಣ್ಣಾ ಹಜಾರೆಯವರು ಹತ್ತು ದಿನದಿಂದ ಉಪವಾಸ ಹೇಗೆ ಇದ್ದಾರೆ ಎಂಬುದೇ ಅಚ್ಚರಿಯ ವಿಷಯ. ಒಂದು ದಿನ ಉಪವಾಸ ಇದ್ದರೆ ನಮಗೆ ತಡೆಯಲು ಸಾಧ್ಯವಿಲ್ಲದಿರುವಾಗ, ಅವರ ಸ್ಥೈರ್ಯವನ್ನು ಮೆಚ್ಚಲೇಬೇಕು. ಎಲ್ಲರೂ ಅಣ್ಣಾ ಹಜಾರೆಯವರನ್ನು ಬೆಂಬಲಿಸಿ. ಎಲ್ಲ ಸಂಸದರ ಮನೆಯ ಮುಂದೆ ಧರಣಿ ನಡೆಸಿ, ಪ್ರಬಲ ಜನಲೋಕಪಾಲ ಮಸೂದೆಯ ಜಾರಿಗೆ ಬೆಂಬಲಿಸಿ. ಜೈ ಹಿಂದ್....

Thursday, January 20, 2011

ಮಧ್ಯಮ ವರ್ಗದವರ ವಿರೋಧಿ ಸರಕಾರಗಳು


ಕೇಂದ್ರದ ಕಾಂಗ್ರೆಸ್ ಹಾಗೂ ರಾಜ್ಯದ ಬಿ.ಜೆ.ಪಿ. ಸರಕಾರಗಳು ಕೇವಲ ದುಡ್ಡು ಮಾಡಿಕೊಳ್ಳುವ ಭರದಲ್ಲಿ ಮಧ್ಯಮ ವರ್ಗದವರನ್ನು ಮರೆತೇ ಹೋಗಿದೆ. ಏಕೆಂದರೆ ದಿನದಿಂದ ದಿನಕ್ಕೆ ಎಲ್ಲಾ ಬೆಲೆಗಳು ಗಗನಕ್ಕೇರಿರುವುದರಿಂದ ಮಧ್ಯಮ ವರ್ಗದ ಜನ ಇವತ್ತು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇದನ್ನು ಅರ್ಥಮಾಡಿಕೊಳ್ಳದ ಎರಡೂ ಸರಕಾರಗಳು ಇವತ್ತು ಕಣ್ಣು ಮುಚ್ಚಿ ಕುಳಿತಿವೆ.
ನಮ್ಮ ದೇಶದ ಒಬ್ಬ ನಾಲಾಯಕ್ ಪ್ರಧಾನಿ ಹಾಗೂ ಒಬ್ಬ ನಾಲಾಯಕ್ ಮುಖ್ಯಮಂತ್ರಿಯಿಂದಾಗಿ ಸಾಮಾನ್ಯ ಜನ ಇವತ್ತು ಬವಣೆ ಪಡುತ್ತಿರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲ. ಇವರಿಬ್ಬರೂ ಜನರ ಕಣ್ಣಿಗೆ ಮಣ್ಣೆರಚಿ ದುಡ್ಡು ಮಾಡಿಕೊಳ್ಳುವುದು ಹೇಗೆ, ಭೂಮಿ ಕಬಳಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿಂದ ಬೆಲೆ ಏರಿಕೆ ಎಂಬುದು ಸಾಮಾನ್ಯ ವಿಷಯವಾಗಿದೆ. ಇದನ್ನು ತಡೆಗಟ್ಟಲು ಕೇಂದ್ರ, ರಾಜ್ಯ ಸರಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜನ ಸತ್ತರೆ ಸಾಯಲಿ ನಾವು ಮಾತ್ರ ನೆಮ್ಮದಿಯಿಂದ ಬದುಕಬೇಕು ಎಂಬ ದುರಾಲೋಚನೆ ಸರಕಾರಗಳದ್ದು.
ಗಣಿಲೂಟಿ, ಭೂಗಳ್ಳತನ, ಮರಳು ಮಾಫಿಯಾ ಮುಂತಾದ ರಾಜ್ಯದ್ರೋಹಿ, ಜನದ್ರೋಹಿ ಕೆಲಸದಲ್ಲಿ ಮಗ್ನವಾಗಿರುವ ಈ ಮೂರನೇ ದರ್ಜೆ ಕರ್ನಾಟಕ ಸರಕಾರ ಅತೀಭ್ರಷ್ಟ ರಾಜ್ಯಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ. ಈ ಯೆಡಿಯೂರಪ್ಪ ಎಂಬ ಮನುಷ್ಯನಿಗೆ ಸ್ವಲ್ಪವಾದರೂ ರೈತರ ಬಗ್ಗೆ, ಮಧ್ಯಮ ವರ್ಗದವರ ಬಗ್ಗೆ, ಬಡವರ ಬಗ್ಗೆ ಕನಿಕರ ಇದೆಯಾ?. ಪ್ರಧಾನಿ ಬಿಡಿ ಅವನೊಬ್ಬ ವಿದೇಶೀ ಮಹಿಳೆಯ ಬಂಟ. ಅವನಿಗೆಲ್ಲಿದೆ ಜನಸಾಮಾನ್ಯರ ಬವಣೆ ಬಗ್ಗೆ ಚಿಂತೆ?.
ಎದ್ದೇಳಿ ಜನರೇ....ಇಂತಹ ಭ್ರಷ್ಟ, ಜನದ್ರೋಹಿ, ದೇಶದ್ರೋಹಿಗಳ ವಿರುದ್ದ ತೊಡೆ ತಟ್ಟಿ...ಇಂತಹವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ.....ಈ ಮನೆಹಾಳರನ್ನು ಶಾಶ್ವತವಾಗಿ ಮನೆಗೆ ಕಳಿಸಿ.

Sunday, October 31, 2010

ಪ್ರಾರ್ಥನಾ ಶಾಲೆ ಮತ್ತು ಟ್ರಾಫಿಕ್ ಕಿರಿಕ್ಕು






ಬೆಂಗಳೂರಿನ ಪದ್ಮನಾಭನಗರದ ಹತ್ತಿರ ಇರುವ ಪ್ರಾರ್ಥನಾ ಶಾಲೆಯಿಂದ ಸಾರ್ವಜನಿಕರಿಗೆ ಆ ರಸ್ತೆಯಲ್ಲಿ ಓಡಾಡಲೂ ಆಗದ ದುಸ್ತರ ಪರಿಸ್ಥಿತಿ ಎದುರಾಗಿದೆ. ಆ ಶಾಲೆಗೆ ಬರುವ ಪ್ರತೀ ಒಬ್ಬ ಮಗುವಿಗೆ ಒಂದು ಕಾರು ಆ ರಸ್ತೆಯಲ್ಲಿ ಓಡಾಡುವುದರಿಂದ ದಿನ ನಿತ್ಯ ಅಲ್ಲಿ ಸಾರ್ವಜನಿಕ ವಾಹನಗಳು, ದ್ವಿಚಕ್ರ ವಾಹನಗಳು ಓಡಾಡಲು ಅಲ್ಲದೆ ನಡೆದುಕೊಂಡು ಹೋಗಲೂ ಸಹ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ಸಂಚಾರಿ ಪೋಲಿಸರಿಗೂ ದಿನ ನಿತ್ಯ ಕಿರಿಕಿರಿ. ಅಲ್ಲದೆ ಉತ್ತರಹಳ್ಳಿಯಿಂದ ಕುಮಾರಸ್ವಾಮಿ ಬಡಾವಣೆಗೆ ಹೋಗಲು ಬಲಕ್ಕೆ ತಿರುಗುವ ಅವಕಾಶವಿಲ್ಲ. ಅದರೆ ಈ ಸಂಚಾರಿ ನಾಮಫಲಕದ ಮುಂಭಾಗವೇ ರಾಜಕೀಯ ಪಕ್ಷದ ಬ್ಯಾನರ್ ರಾರಾಜಿಸುತ್ತಿದೆ. ಇದರಿಂದ ಈ ನಾಮಫಲಕ ಕಾಣಿಸದಿರುವುದರಿಂದ ಅನೇಕರು ಬಲಕ್ಕೆ ತಿರುಗಿಸಲು ಹೋಗಿ, ಸುಮ್ಮನೇ ದಂಡ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಆ ಶಾಲೆಯ ಮಕ್ಕಳೂ ಕೂಡಾ ತಾವು ಅಭದ್ರತೆಯಿಂದ ಓಡಾಡುವಂತಾಗಿದೆ. ಇಲ್ಲಿ ಓಡಾಡುವ ವಾಹನಗಳಿಂದ ರಸ್ತೆ ದಾಟಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ದಾರಿಹೋಕರಿಗೆ ಹಾಗೂ ಸಾರ್ವಜನಿಕ ವಾಹನಗಳಿಗೆ ಒಡಾಡಲು ದುಸ್ತರವಾಗುವಂತೆ ಮಾಡಿದ ಈ ಪ್ರಾರ್ಥನಾ ಶಾಲೆಯನ್ನು ಆ ಜಾಗದಿಂದ ಎತ್ತಂಗಡಿ ಮಾಡಿಸದಿದ್ದರೆ ಮುಂದೆ ಆ ರಸ್ತೆಯಲ್ಲಿ ಖಂಡಿತಾ ಓಡಾಡಲು ಸಾದ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ದಯವಿಟ್ಟು ಅಲ್ಲಿನ ಜನನಾಯಕರು ಸಾರ್ವಜನಿಕ ಹಿತಾಸಕ್ತಿ ಕಾಯಿದೆಯ ಅನುಸಾರ ಆ ಶಾಲೆಯ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.

Thursday, October 28, 2010

ಅರುಂಧತಿ ರಾಯ್ ಎಂಬ ಒಬ್ಬ ದೇಶದ್ರೋಹಿ ಮಹಿಳೆ



ಅರುಂಧತಿ ರಾಯ್ ಎಂಬ ಒಬ್ಬ ದೇಶದ್ರೋಹಿ ಮಹಿಳೆ ಇವತ್ತು ನಮ್ಮ ದೇಶದ ವಿರುದ್ದವೇ ಕೆಲವು ಹೇಳಿಕೆಗಳನ್ನು ಧೈರ್ಯವಾಗಿ ಹೇಳುತ್ತಿರುವುದು ನಮ್ಮ ದೇಶದ ದುರ್ದೈವ. ಈ ದೇಶವಿರೋಧಿ ಹೇಳಿಕೆಗಳಿಗೆ ನಮ್ಮ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ನಾವು ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ.

ಈ ಮಹಿಳೆ ನಕ್ಸಲೈಟ್‌ಗಳಿಗೆ ಬೆಂಬಲ, ಪಾಕಿಸ್ತಾನೀ ಉಗ್ರರಿಗೆ ಬೆಂಬಲ ನೀಡುತ್ತಿರುವುದು ನಮ್ಮ ದೇಶದಲ್ಲಿ ಭಾರತೀಯರೇ ನಮ್ಮ ದೇಶದ ವಿರುದ್ದ ಕೆಲಸ ಮಾಡುತ್ತಿರುವುದಕ್ಕೆ ಸಾಕ್ಷ್ಯವಾಗಿದೆ. ಇಂತಹ ದೇಶದ್ರೋಹಿಗಳನ್ನು ಖಂಡಿತಾ ಬಹಿರಂಗವಾಗಿ ನೇಣಿಗೆ ಹಾಕಬೇಕು.

ಇಂತಹಾ ದೇಶದ್ರೋಹಿಗಳನ್ನು ಕೇಶ ಮುಂಡನ ಮಾಡಿ,ಕತ್ತೆ ಮೇಲೆ ಮೆರವಣಿಗೆ ಮಾಡಿ, ಚಪ್ಪಲಿ ಸೇವೆ ಮಾಡಿ, ಬಹಿರಂಗವಾಗಿ ನೇಣಿಗೆ ಹಾಕಬೇಕು. ಮತ್ತೆ ಯಾರೂ ದೇಶದ್ರೋಹ ಮಾಡಲು ಹಿಂಜರಿಯಬೇಕು.
ಥೂ.....ಇಂತಹ ಹೆಣ್ಣುಮಗಳನ್ನು ಹೆತ್ತ ಭಾರತ ಮಾತೆ.....ಇವತ್ತು ಸಂಕಟ ಪಡುತ್ತಿದ್ದಾಳೆ.

ಉಗೀರಿ ಅವಳ ಮುಖಕ್ಕೆ....ಧಿಕ್ಕಾರವಿರಲಿ ಅವಳ ಜನ್ಮಕ್ಕೆ......

Monday, July 19, 2010

ಎಂ.ಇ.ಎಸ್ ಮತ್ತು ಶಿವಸೇನೆ ಎಂಬ ದೇಶದ್ರೋಹಿ ಸಂಘಟನೆಗಳು



ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕರ (ಎಂ.ಇ.ಎಸ್ ಮತ್ತು ಶಿವಸೇನೆ) ಗಲಭೆಯಲ್ಲಿ ಅಲ್ಲಿನ ಜನರಿಗೆ ತಾವು ಕಾಶ್ಮೀರದಲ್ಲಿ ಇರುವಂತೆ ಭಾಸವಾಗಿರುವುದರಲ್ಲಿ ಸಂಶಯವಿಲ್ಲ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮುಸ್ಲಿಮ್ ಭಯೋತ್ಪಾದಕರ ಹಲ್ಲೆ, ದೊಂಬಿಗೆ ಹೆದರಿ ಅಲ್ಲಿಂದ ಕಾಲ್ಕಿತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅದೇ ರೀತಿ ಈ ಶಿವಸೇನೆ ಮತ್ತು ಎಂ.ಇ.ಎಸ್ ಎಂಬ ಭಯೋತ್ಪಾದಕ ಸಂಘಟನೆಗಳ ದೊಂಬಿಗೆ ಬೆಳಗಾವಿಯ ಕನ್ನಡ ಹಾಗೂ ಮರಾಠಿ ಮಂದಿ ತತ್ತರಗೊಂಡಿದ್ದಾರೆ.
ಇದುವರೆಗೂ ಸೋದರ ಭಾವನೆಯಿಂದ, ಶಾಂತವಾಗಿದ್ದ ಬೆಳಗಾವಿ ಈ ಭಯೋತ್ಪಾದಕರ ಹಿಡಿತಕ್ಕೆ ಸಿಕ್ಕು ಇಂದು ಮತ್ತೊಂದು ಕಾಶ್ಮೀರವಾಗಿದೆ. ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆ ಕೇವಲ ಮರಾಠಿಗಳು ಮಾತ್ರ ಹಿಂದುಗಳು ಎಂಬ ಸಂಕುಚಿತ ಭಾವನೆಯನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ಶಿವಸೇನೆ ಇವತ್ತು ಎಂ.ಇ.ಎಸ್ ಎಂಬ ಮತ್ತೊಂದು ಭಯೋತ್ಪಾದಕ ಸಂಘಟನೆಯ ಜತೆ ಸೇರಿ ಕನ್ನಡಿಗರ ವಿರುದ್ದ ಕತ್ತಿ ಮಸೆಯುತ್ತಿರುವುದು ಶಾಂತಿಪ್ರಿಯರಾದ ಕನ್ನಡಿಗರನ್ನು ಕೆರಳಿಸಿದೆ.
ಬೆಳಗಾವಿಯಲ್ಲಿ ವಾಸಿಸುತ್ತಿರುವ ಮರಾಠಿಗಳೇ ಈ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿರುವುದು, ಈ ಭಯೋತ್ಪಾದಕ ಸಂಘಟನೆಗಳು ಮಹಾರಾಷ್ಟ್ರದಿಂದ ರೌಡಿಗಳನ್ನು ಕರೆದುಕೊಂಡು ಬಂದು ಇಲ್ಲಿ ಗಲಭೆ ಸೃಷ್ಟಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಸಂಘಟನೆಗಳಿಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೂ ನಂಟು ಇರುವ ಬಗ್ಗೆ ಕೂಲಂಕುಶ ತನಿಖೆ ನಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ದೇಶದಲ್ಲಿ ಹಿಂದೂಗಳ ವಿರುದ್ದವೇ ಗಲಭೆ, ದೊಂಬಿ ಮಾಡುತ್ತಾರೆಂದರೆ ಈ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ನಂಟು ಇಲ್ಲದಿರಲು ಸಾಧ್ಯವಿಲ್ಲ.
ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾದ ಬಾಳಥಾಕ್ರೆ ಎಂಬ ಭಯೋತ್ಪಾದಕ ಈಗ ಮುಂಬೈನಲ್ಲಿ ತನ್ನ ನೆಲೆ ಕಳೆದುಕೊಂಡು ಈಗ ಬೆಳಗಾವಿಯಲ್ಲಿ ತನ್ನ ಹೀನ ಕೃತ್ಯ ಶುರು ಮಾಡಲು ತಯಾರಾಗಿದ್ದಾನೆ. ಇದನ್ನೆಲ್ಲಾ ಕಣ್ಣು ಮುಚ್ಚಿಕೊಂಡು ನೋಡುತ್ತಿರುವ ಕರ್ನಾಟಕದ ಬಿ.ಜೆ.ಪಿ ಸರಕಾರ ಕನ್ನಡಿಗರ ವಿರುದ್ದ , ಕರ್ನಾಟಕದ ವಿರುದ್ದ ತನ್ನ ಬಹಿರಂಗ ಬೆಂಬಲವನ್ನು ಈ ಭಯೋತ್ಪಾದಕ ಸಂಘಟನೆಗಳಿಗೆ ನೀಡಿರುವುದು ಖಂಡನೀಯ.

Thursday, June 10, 2010

ನಗರ ಪಾಲಿಕೆ ಮತ್ತು ಕಾರ್ಯ ದಕ್ಷತೆ




ನೀವು ಮೇಲೆ ನೋಡುತ್ತಿರುವುದು ಬೆಂಗಳೂರಿನ ಬಿನ್ನಿ ಮಿಲ್ ರಸ್ತೆಯಲ್ಲಿ ದಿನಾಂಕ ೦೮-೦೬-೨೦೧೦ರಂದು ಬೆಳಿಗ್ಗೆ ನಾನು ಕಂಡ ಹೃದಯ ವಿದ್ರಾವಕ ದೃಶ್ಯ. ದನವೊಂದು ಅಪಘಾತಕ್ಕೆ ಈಡಾಗಿ ಸತ್ತು ಬಿದ್ದಿದೆ. ಅದನ್ನು ಎರಡು ದಿನವಾದರೂ ಸಂಬಂಧ ಪಟ್ಟವರು ತೆಗೆದಿಲ್ಲ. ಅದೇ ದಾರಿಯಲ್ಲಿ ಓಡಾಡುವ ಸರಕಾರಿ ವಾಹನಗಳು, ಪೋಲೀಸರು ಕೂಡಾ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಆ ದನ ಕೊಳೆತು ನಾರುತ್ತಿದೆ. ನಾಯಿ, ಕಾಗೆಗಳು ಅದರ ಮಾಂಸವನ್ನು ಕಚ್ಚಿ ಕಚ್ಚಿ ಎಳೆದು ತಿನ್ನುತ್ತಿವೆ. ಕೆಲ ಸಮಯದ ನಂತರ ಆ ನಾಯಿಗಳಿಗೆ ಹುಚ್ಚು ಹಿಡಿಯುವ ಸಾಧ್ಯತೆಯೂ ಇಲ್ಲದಿಲ್ಲ. ಆ ನಾಯಿಗಳು ದಾರಿಹೋಕರಿಗೆ ಕಚ್ಚದೇ ಇಅರಲು ಸಾಧ್ಯವೇ ಇಲ್ಲ. ಈ ದನ ಸತ್ತು ಇವತ್ತಿಗೆ ಮೂರು ದಿನ ಆದರೂ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂದರೆ ನಮ್ಮ ದರಿದ್ರ ಕರ್ನಾಟಕ ಸರಕಾರ, ದರಿದ್ರ ಬಿ.ಬಿ.ಎಂ.ಪಿ.ಗಳು ನಿದ್ದೆ ಮಾಡುತ್ತಿವೆಯೇ?. ಇದನ್ನು ನಾನು ಸಮೀಪದಲ್ಲೇ ಇದ್ದ ಪೋಲೀಸರಿಗೆ ತಿಳಿಸಿದರೂ ಅವರು ಅಸಡ್ಡೆ ಮಾಡಿರುತ್ತಾರೆ.
"ರೀ...ಅದು ನಮ್ಮೆ ಕೆಲಸ ಅಲ್ಲ. ಕಾರ್ಪೋರೇಶನ್ ಅಫೀಸಿಗೆ ಫೋನ್ ಮಾಡಿ ಹೇಳಿ. ಆ ಬೋಳೀ ಮಕ್ಳೇ ಇಲ್ಲಿ ತಂದು ಹಾಕಿರುತ್ತಾರೆ." ಎಂಬ ಮಾತು ಹೇಳಿದರು. ಅವರ ನಂಬರ್ ಕೊಡಿ ಎಂದರೆ...."ನಮಗೆ ಗೊತ್ತಿಲ್ಲ" ಎಂಬ ಹಾರಿಕೆಯ ಉತ್ತರ ಬೇರೆ.

ಇವತ್ತು ಸರಕಾರದ ಕಾರ್ಯ ದಕ್ಷತೆ ಸತ್ತು ಹೋಗಿದೆ. ದುಡ್ಡು ಕೊಡದೆ ಯಾವ ಕೆಲಸವೂ ಆಗುವುದಿಲ್ಲ. ಆದರೆ ಇಂತಹ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಕ್ಕೂ ಇದು ಅನ್ವಯವಾದರೆ, ಈ ಸರಕಾರ ಇದ್ದೂ ಸತ್ತಂತೆ. ಒಬ್ಬ ಅಪ್ರಯೋಜಕ ಮುಖ್ಯಮಂತ್ರಿ, ಭ್ರಷ್ಟ ಮಂತ್ರಿಗಳನ್ನು ಒಳಗೊಂಡಿರುವ ಈ ಸರಕಾರ ಸಾರ್ವಜನಿಕರ ಬಗ್ಗೆ ಇನ್ನೆಷ್ಟು ಕಾಳಜಿ ತೋರಿಸಬಹುದು?.

Friday, June 04, 2010

ಕನ್ನಡ ಹಾಗೂ ಕರ್ನಾಟಕ ದ್ರೋಹಿಗಳು

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮ್ಮೇಳನ ಈಗ ರೈತರ ಎದೆಯಲ್ಲಿ ಭಾರೀ ಭಯ ಹುಟ್ಟಿಸಿದೆ. ಬಂಡವಾಳ ಹೂಡಿಕೆಯ ನೆಪದಲ್ಲಿ ಉದ್ಯೋಗ ಸೃಷ್ಟಿಯಾದರೂ ನಮ್ಮ ರೈತರಿಗೆ ಚಿಕ್ಕಾಸಿನ ಉಪಯೋಗವೂ ಇಲ್ಲ.
ಇನ್ನು ಶುರುವಾಗುತ್ತೆ ನೋಡಿ, ಈ ಸರಕಾರ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ, ರೈತರಿಗೆ ಸೇರಬೇಕಾದ ನೀರು, ವಿದ್ಯುತ್ ಮುಂತಾದವುಗಳನ್ನು ಕಸಿದುಕೊಂಡು ಕರ್ನಾಟಕ ರಾಜ್ಯದ ರೈತರಿಗೆ ಛಡಿ ಏಟು ನೀಡುತ್ತದೆ. ಈ ಬಿ.ಜೆ.ಪಿ. ಸರಕಾರ ಯಾಕಾದರೂ ಬಂತು ಎಂದು ರೈತರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ದೇವರೇ..ಈ ರಾಜ್ಯವನ್ನು ಈ ಬಿ.ಜೆ.ಪಿ. ಎಂಬ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಹಾಗೂ ರೈತ ವಿರೋಧಿ ಸರಕಾರದಿಂದ ಯಾರು ಕಾಪಾಡುತ್ತಾರೋ?. ಸಾಂಸ್ಕೃತಿಕ ಸೂಳೆಗಾರಿಕೆ ನಡೆಸುತ್ತಿರುವ ಐ.ಟಿ ಹಾಗೂ ಬಿ.ಟಿ. ಮಂದಿಯಿಂದ ನಮ್ಮ ರಾಜ್ಯವನ್ನು ರಕ್ಷಿಸುವವರಾರು?. ಕೇವಲ ಉದ್ಯೋಗ ಸೃಷ್ಟಿಯ ನೆಪದಿಂದ ರೈತರನ್ನು ದಮನಿಸುವ ಕೆಲಸ ಈ ಸರಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಖಂಡಿತಾ ನಗಣ್ಯ. ಏಕೆಂದರೆ ಈ ಕನ್ನಡ ವಿರೋಧಿ, ದರಿದ್ರ ಕರ್ನಾಟಕ ಸರಕಾರ ಭಾಷಾ ಅಲ್ಪಸಂಖ್ಯಾತರಿಗೆ ಮಣೆ ಹಾಕಿ ತಾನು ಮಾತ್ರ ಈ ದೇಶವನ್ನು ಪ್ರೀತಿಸುವ ಜಾತ್ಯಾತೀತ ಪಕ್ಷ ಎಂಬುದನ್ನು ಈ ಜಗತ್ತಿಗೆ ತೋರಿಸುವ ಒಂದು ನೀಚ ಕೆಲಸ ಮಾಡುತ್ತಿದೆ.
ಈ ಯಡಿಯೂರಪ್ಪ ಈಗ ರೆಡ್ಡಿ ಸಹೋದರರ ಕೃಪಾಕಟಾಕ್ಷದಿಂದ ತಾನು ಕೂಡಾ ರಾಜ್ಯವನ್ನು ಲೂಟಿ ಮಾಡುವತ್ತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಈ ಬಿ.ಜೆ.ಪಿ. ಗೂಂಡಾಗಳಿಗೆ ಜನ ಸರಿಯಾದ ಪಾಠ ಕಲಿಸದಿದ್ದರೆ, ಮುಂದೆ ಕರ್ನಾಟಕದಲ್ಲಿ ಕನ್ನಡಿಗರೇ ಇಲ್ಲದಂತಾಗುತ್ತದೆ. ಕಾಶ್ಮೀರದಲ್ಲಿ ಹೇಗೆ ಹಿಂದೂಗಳು ಇಲ್ಲವೋ, ಅದೇ ರೀತಿ ಕರ್ನಾಟಕದಲ್ಲಿ ಕನ್ನಡಿಗರೂ ಬದುಕುವುದು ಕಷ್ಟವಾಗುತ್ತದೆ. ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಹಣ ಹೆಂಡ ಹಂಚಿ ಕಾಂಗ್ರೆಸ್ ಸಂಸ್ಕೃತಿಯನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಳವಡಿಸಿಕೊಂಡು ಚುನಾವಣೆಯ ನಂತರ ಪಕ್ಕಾ ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖವಾಗಿ ಹೊಮ್ಮಿದೆ.
ಧಿಕ್ಕಾರವಿರಲಿ ಈ ಕನ್ನಡ ದ್ರೋಹಿಗಳಿಗೆ....ಧಿಕ್ಕಾರವಿರಲಿ ಈ ಸರಕಾರಕ್ಕೆ....ಧಿಕ್ಕಾರವಿರಲಿ ಈ ಬಿ.ಜೆ.ಪಿ.ಗೆ.

Sunday, May 23, 2010

ಸಿಕ್ಸ್ ಒ ಕ್ಲಾಕ್ ಎಂಬ ಮಕ್ಮಲ್ ಟೋಪಿ ಸಂಸ್ಥೆ

ಇತ್ತೀಚೆಗೆ ಅನೇಕ ಮಕ್ಮಲ್ ಟೋಪಿ ಸಂಸ್ಥೆಗಳು ಜನರಿಂದ ಹಣ ವಸೂಲಿ ಮಾಡಿ ಬೆಂಗಳೂರಿನಿಂದ ಪರಾರಿಯಾಗಿವೆ. ಅದರಲ್ಲಿ ಇತ್ತೀಚೆಗೆ ಜನರಿಗೆ ಟೋಪಿ ಹಾಕಿ ಪರಾರಿಯಾಗಿರುವ “ಸಿಕ್ಸ್ ಒ ಕ್ಲಾಕ್” ಎಂಬ ಖದೀಮ ಸಂಸ್ಥೆ ಕೂಡಾ ಒಂದು.
ಜನರಿಗೆ ಪುಟಗೋಸಿ ಚಿಲ್ಲರೆ ಕಾಫಿ ಪುಡಿ ಕೊಟ್ಟು ನೂರು ರೂಪಾಯಿ ಕಟ್ಟಿಸಿಕೊಂಡು ಜನರಿಗೆ ವಾರದ ಆದಾಯದ ಆಸೆ ತೋರಿಸಿ ಕೋಟಿ ಆದಾಯಗಳಿಸಿ ಇದ್ದಕ್ಕಿದ್ದಂತೆ ಪಕ್ಕದ ಆಂಧ್ರದ ಒಬ್ಬ ಸೆಟ್ಟಿ ಬೆಂಗಳೂರಿನಿಂದ ಪರಾರಿಯಾಗಿದ್ದಾನೆ. ಅವನ ಜೊತೆ ಇದ್ದ ಇನ್ನೊಬ್ಬ ಸ್ಥಳೀಯ ನಿವಾಸಿ ಹೆಂಗಸು ಕೂಡಾ ನಾಪತ್ತೆಯಾಗಿದ್ದಾಳೆ.
ಜನ ಹಣ ಕೇಳಲು ಹೋದಾಗ ನನ್ನ ತಂದೆ ತೀರಿಹೋದರು, ನನ್ನ ತಮ್ಮ ತೀರಿ ಹೋದ ಎಂದು ಸುಳ್ಳು ಹೇಳಿ ಇಲ್ಲದ ಕಥೆ ಕಂತೆ ಕಟ್ಟಿ ಎಲ್ಲರನ್ನು ಸಾಗಹಾಕಿ ಜನರಿಗೆ ಚೆನ್ನಾಗಿ ಟೋಪಿ ಹಾಕಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ರೀತಿ ಮೋಸ ಮಾಡುವವರು ಹೆಚ್ಚಾಗಿ ಪಕ್ಕದ ಆಂಧ್ರ, ತಮಿಳುನಾಡಿನಿಂದ ವಲಸೆ ಬಂದವರು. ಇಲ್ಲಿ ಹಣ ಮಾಡಿ ಎಲ್ಲರಿಗೆ ಟೋಪಿ ಹಾಕಿ ಮತ್ತೆ ತಮ್ಮೂರಿಗೆ ಪಲಾಯನಗೈಯುವುದು ಇವರಿಗೆ ನೀರು ಕುಡಿದಷ್ಟು ಸಲೀಸು. ಇದಕ್ಕೆ ಉದಾಹರಣೆ ಎಂದರೆ “ವಿನಿವಿಂಕ್ ಖದೀಮ ಶಾಸ್ತ್ರಿ” ಮತ್ತು “ದಾರ್ಶನಿಕ ಫೌಂಡೇಶನ್‌ನ ಖದೀಮ ಕಳ್ಳ ಕೃಷ್ಣಮೂರ್ತಿ”. ಇವರೆಲ್ಲ ಮಾವಾಡು, ಮೀವಾಡು ಎಂದು ಮೊದಲು ಅವರ ಜಾತಿಯವರನ್ನು ಸೇರಿಸಿಕೊಂಡು ನಂತರ ಮಿಕ್ಕವರಿಗೆ ಸರಿಯಾಗಿ ಟೋಪಿ ಹಾಕಿ ಪರಾರಿಯಾಗುತ್ತಾರೆ. ಇದರಲ್ಲಿ ಸಿಕ್ಸ್ ಒ ಕ್ಲಾಕ್ ಸಂಸ್ಥೆಯ ಕಳ್ಳ ಖದೀಮನಾದ ಮಲ್ಲಿಕಾರ್ಜುನ ಸೆಟ್ಟಿ ಕೂಡಾ ಒಬ್ಬ. ಇವನು ಸ್ಥಳೀಯ ಮಹಿಳೆಯೊಬ್ಬಳೊಂದಿಗೆ ಸೇರಿಕೊಂಡು ಜನರಿಗೆ ಕಾಫಿಕುಡಿಸಿ ಚೆನ್ನಾಗಿ ಟೋಪಿ ಹಾಕಿದ್ದಾನೆ.
ಅಂದರೆ ನೂರು ರೂಪಾಯಿ ಕೊಟ್ಟು ಸದಸ್ಯರಾದರೆ ನೂರು ಗ್ರಾಂ ಕಾಫಿಪುಡಿ ಕೊಟ್ಟು ಮಿಕ್ಕಿದ ಹಣವನ್ನು ತಾನೇ ಇಟ್ಟುಕೊಂಡು ರೊಟೇಷನ್ ಮಾಡಿ ಕೆಲ ಜನರಿಗೆ ಕಮಿಷನ್ ಕೊಟ್ಟು ಆಸೆ ತೋರಿಸಿ, ಅನೇಕ ಜನರಿಂದ ಲಕ್ಷಗಟ್ಟಲೆ ಹಣ ಪಡೆದು, ಒಂದು ಕೋಟಿ ಆಗುವವರೆಗೂ ಕಾದು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಇವನನ್ನು ನಂಬಿ ಕರ್ನಾಟಕದಲ್ಲೇ ಅಲ್ಲದೆ ದೂರದ ಆಂಧ್ರ ಹಾಗೂ ತಮಿಳ್ನಾಡುಗಳಲ್ಲಿಯೂ ಜನ ಹಣ ವಿನಿಯೋಗಿಸಿ, ಮೂರು ನಾಮ ಹಾಕಿಸಿಕೊಂಡಿದ್ದಾರೆ.

ಈ ಕೆಳಗಿನ ವಿಳಾಸದಲ್ಲಿ ತಮ್ಮ ಕಛೇರಿ ತೆರೆದು ಜನರಿಗೆ ಟೋಪಿ ಹಾಕಿರುತ್ತಾರೆ.

Six ‘O’ Clock Enterprises
#50/1,1st Floor, 18th Main Road,
Muneswara Block, Bengaluru-26.
Ph:9964912581 / 9343711672