Thursday, August 25, 2011

ದೇಶಕ್ಕೊಬ್ಬನೇ ಅಣ್ಣಾ....ಜನಲೋಕಪಾಲ್ ಮಸೂದೆ ಬೆಂಬಲಿಸಿ

ಅಣ್ಣಾ ಹಜಾರೆಯವರು ತಮ್ಮ ಸ್ವಾರ್ಥವನ್ನು ಬಿಟ್ಟು ದೇಶಕ್ಕಾಗಿ ನಿರಶನವನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಮ್ಮ ದೇಶದ ಒಬ್ಬ ನಾಲಾಯಕ್ ಪ್ರಧಾನಿ ಹಾಗೂ ಭ್ರಷ್ಟ ರಾಜಕಾರಣಿಗಳು ಇವತ್ತಿಗೆ ಹತ್ತು ದಿನವಾದರೂ ಈ ಬಗ್ಗೆ ಕಾಳಜಿ ವಹಿಸದಿರುವುದು ಈ ಕೇಂದ್ರ ಸರಕಾರದ ಜನಪರ ಕಾಳಜಿಯನ್ನು ತೋರಿಸುತ್ತದೆ.

ಒಬ್ಬ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರೆಷ್ಟು, ಹೋದರೆಷ್ಟು?. ಒಬ್ಬ ನಾಲಾಯಕ್ ಪ್ರಧಾನಿ ಈ ದೇಶದ ಜನರ ಬಗ್ಗೆ ಹೇಗೆ ತಾನೆ ಚಿಂತಿಸಿಯಾನು?. ಕೇಂದ್ರದ ಎಲ್ಲ ಭ್ರಷ್ಟ ಮಂತ್ರಿ ಹಾಗೂ ರಾಜಕಾರಣಿಗಳು ಇವತ್ತು ಒಬ್ಬ ಸಾಮಾನ್ಯ ಪ್ರಜೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುವಲ್ಲಿ ಮಗ್ನವಾಗಿದ್ದಾರೆ. ಎಲ್ಲ ಜನರು ಕೇಂದ್ರದ ಈ ಜನದ್ರೋಹಿ ನಡವಳಿಕೆಯನ್ನು ಖಂಡಿಸಬೇಕು. ಕೇಂದ್ರಸರಕಾರದ ಎಲ್ಲ ರಾಜಕಾರಣಿಗಳು ಇವತ್ತು ಸ್ವಿಸ್ ಬ್ಯಾಂಕ್ ನಲ್ಲಿ ತಾವು ಇಟ್ಟಿರುವ ಹಣದ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಮಾಮೂಲಿ ಜನರ ಸಮಸ್ಯೆಯನ್ನು ಆಲಿಸಲು ಅವರಿಗೆ ಸಮಯವಿಲ್ಲ.

ಅಣ್ಣಾ ಹಜಾರೆಯವರು ಹತ್ತು ದಿನದಿಂದ ಉಪವಾಸ ಹೇಗೆ ಇದ್ದಾರೆ ಎಂಬುದೇ ಅಚ್ಚರಿಯ ವಿಷಯ. ಒಂದು ದಿನ ಉಪವಾಸ ಇದ್ದರೆ ನಮಗೆ ತಡೆಯಲು ಸಾಧ್ಯವಿಲ್ಲದಿರುವಾಗ, ಅವರ ಸ್ಥೈರ್ಯವನ್ನು ಮೆಚ್ಚಲೇಬೇಕು. ಎಲ್ಲರೂ ಅಣ್ಣಾ ಹಜಾರೆಯವರನ್ನು ಬೆಂಬಲಿಸಿ. ಎಲ್ಲ ಸಂಸದರ ಮನೆಯ ಮುಂದೆ ಧರಣಿ ನಡೆಸಿ, ಪ್ರಬಲ ಜನಲೋಕಪಾಲ ಮಸೂದೆಯ ಜಾರಿಗೆ ಬೆಂಬಲಿಸಿ. ಜೈ ಹಿಂದ್....

Thursday, January 20, 2011

ಮಧ್ಯಮ ವರ್ಗದವರ ವಿರೋಧಿ ಸರಕಾರಗಳು


ಕೇಂದ್ರದ ಕಾಂಗ್ರೆಸ್ ಹಾಗೂ ರಾಜ್ಯದ ಬಿ.ಜೆ.ಪಿ. ಸರಕಾರಗಳು ಕೇವಲ ದುಡ್ಡು ಮಾಡಿಕೊಳ್ಳುವ ಭರದಲ್ಲಿ ಮಧ್ಯಮ ವರ್ಗದವರನ್ನು ಮರೆತೇ ಹೋಗಿದೆ. ಏಕೆಂದರೆ ದಿನದಿಂದ ದಿನಕ್ಕೆ ಎಲ್ಲಾ ಬೆಲೆಗಳು ಗಗನಕ್ಕೇರಿರುವುದರಿಂದ ಮಧ್ಯಮ ವರ್ಗದ ಜನ ಇವತ್ತು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇದನ್ನು ಅರ್ಥಮಾಡಿಕೊಳ್ಳದ ಎರಡೂ ಸರಕಾರಗಳು ಇವತ್ತು ಕಣ್ಣು ಮುಚ್ಚಿ ಕುಳಿತಿವೆ.
ನಮ್ಮ ದೇಶದ ಒಬ್ಬ ನಾಲಾಯಕ್ ಪ್ರಧಾನಿ ಹಾಗೂ ಒಬ್ಬ ನಾಲಾಯಕ್ ಮುಖ್ಯಮಂತ್ರಿಯಿಂದಾಗಿ ಸಾಮಾನ್ಯ ಜನ ಇವತ್ತು ಬವಣೆ ಪಡುತ್ತಿರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲ. ಇವರಿಬ್ಬರೂ ಜನರ ಕಣ್ಣಿಗೆ ಮಣ್ಣೆರಚಿ ದುಡ್ಡು ಮಾಡಿಕೊಳ್ಳುವುದು ಹೇಗೆ, ಭೂಮಿ ಕಬಳಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿಂದ ಬೆಲೆ ಏರಿಕೆ ಎಂಬುದು ಸಾಮಾನ್ಯ ವಿಷಯವಾಗಿದೆ. ಇದನ್ನು ತಡೆಗಟ್ಟಲು ಕೇಂದ್ರ, ರಾಜ್ಯ ಸರಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜನ ಸತ್ತರೆ ಸಾಯಲಿ ನಾವು ಮಾತ್ರ ನೆಮ್ಮದಿಯಿಂದ ಬದುಕಬೇಕು ಎಂಬ ದುರಾಲೋಚನೆ ಸರಕಾರಗಳದ್ದು.
ಗಣಿಲೂಟಿ, ಭೂಗಳ್ಳತನ, ಮರಳು ಮಾಫಿಯಾ ಮುಂತಾದ ರಾಜ್ಯದ್ರೋಹಿ, ಜನದ್ರೋಹಿ ಕೆಲಸದಲ್ಲಿ ಮಗ್ನವಾಗಿರುವ ಈ ಮೂರನೇ ದರ್ಜೆ ಕರ್ನಾಟಕ ಸರಕಾರ ಅತೀಭ್ರಷ್ಟ ರಾಜ್ಯಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ. ಈ ಯೆಡಿಯೂರಪ್ಪ ಎಂಬ ಮನುಷ್ಯನಿಗೆ ಸ್ವಲ್ಪವಾದರೂ ರೈತರ ಬಗ್ಗೆ, ಮಧ್ಯಮ ವರ್ಗದವರ ಬಗ್ಗೆ, ಬಡವರ ಬಗ್ಗೆ ಕನಿಕರ ಇದೆಯಾ?. ಪ್ರಧಾನಿ ಬಿಡಿ ಅವನೊಬ್ಬ ವಿದೇಶೀ ಮಹಿಳೆಯ ಬಂಟ. ಅವನಿಗೆಲ್ಲಿದೆ ಜನಸಾಮಾನ್ಯರ ಬವಣೆ ಬಗ್ಗೆ ಚಿಂತೆ?.
ಎದ್ದೇಳಿ ಜನರೇ....ಇಂತಹ ಭ್ರಷ್ಟ, ಜನದ್ರೋಹಿ, ದೇಶದ್ರೋಹಿಗಳ ವಿರುದ್ದ ತೊಡೆ ತಟ್ಟಿ...ಇಂತಹವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ.....ಈ ಮನೆಹಾಳರನ್ನು ಶಾಶ್ವತವಾಗಿ ಮನೆಗೆ ಕಳಿಸಿ.