Saturday, April 05, 2008

ಈ ಕರುಣಾನಿಧಿ- ಭಯೋತ್ಪಾದಕನೇ ಅಥವಾ ದೇಶದ್ರೋಹಿಯೇ?

ಬೆಂಗಳೂರು ಎಪ್ರಿಲ್ ೫: ಕರ್ನಾಟಕ ಇಂದು ಸಂಕಷ್ಟದಲ್ಲಿದೆ. ಅತ್ತ ದರಿ ಇತ್ತ ಪುಲಿ ಎಂಬ ಗಾದೆಯಂತೆ ದಿನಕ್ಕೊಂದು ಅತ್ಯಾಚಾರ ನಡೆಯುತ್ತಿದೆ, ಕೆಲವು ಭಯೋತ್ಪಾದಕರಿಂದ.
ಅಲ್ಲಾರೀ, ಕರ್ನಾಟಕಕ್ಕೆ ಎಂತಹ ದುರ್ಗತಿ ಬಂತೂರೀ......ಅತ್ತ ಮಹಾರಾಷ್ಟ್ರದ ಗಡಿ ಗಲಾಟೆ, ಇತ್ತ ಆಂಧ್ರದಿಂದ ಗಣಿ,ಗಡಿ ಗಲಾಟೆ, ಮತ್ತೊಂದೆಡೆ ತಮಿಳುನಾಡಿನ ಗಡಿ, ನೀರಿನ ಗಲಾಟೆ, ಮಗದೊಂದೆಡೆ ಕೇರಳದ ಗಡಿ, ನೀರಿನ ಗಲಾಟೆ.....ಭಾರತಕ್ಕೆ ಹೇಗೆ ನಾಲ್ಕೂ ಕಡೆಯಿಂದ ಭಯೋತ್ಪಾದಕರ ಬೆದರಿಕೆ ಇದೆಯೋ, ಅದೇ ರೀತಿ ಕರ್ನಾಟಕಕ್ಕೆ ನಾಲ್ಕೂ ದಿಕ್ಕಿನಿಂದಲೂ ಭಯೋತ್ಪಾದಕರ ದಾಳಿ ನಡೆಯುತ್ತಿದೆ. ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ತಾಕತ್ತು ಕರ್ನಾಟಕಕ್ಕೆ ಇದೆಯೇ?.....
ಖಂಡಿತಾ ಇದೆ...ಆದರೆ ಅದು ಕನ್ನಡಿಗರಿಂದ, ಕರ್ನಾಟಕ ಪ್ರೇಮಿಗಳಿಂದ, ದೇಶಪ್ರೇಮಿಗಳಿಂದ, ನಮ್ಮ ದೇಶದ ಏಕತೆಯನ್ನು ಬಯಸುವವರಿಂದ ಮಾತ್ರ. ಆದರೆ ನಮ್ಮ ಸುತ್ತ ಮುತ್ತ ಇರುವ ನಾಲ್ಕು ಭಯೋತ್ಪಾದಕ ಮುಖ್ಯಮಂತ್ರಿಗಳಿಂದ ನಮ್ಮ ದೇಶದ ಏಕತೆಗೆ ಭಂಗ ಬರುತ್ತಿದೆ. ಹಿಂದುಸ್ತಾನದಲ್ಲಿ ಹಿಂದುಗಳು ಹೇಗೆ ಅತಂತ್ರರೋ, ಹಾಗೆಯೇ ಕನ್ನಡ ನಾಡಿನಲ್ಲಿ ಕನ್ನಡಿಗರು ಅತಂತ್ರರಾಗಿದ್ದಾರೆ. ನಮ್ಮಿಂದ ಓಟು ಪಡೆದು ನಮ್ಮ ರಕ್ಷಣೆ ಮಾಡಬೇಕಾದ ಚುನಾಯಿತರಾದ ೨೮ ಮಂದಿ ನಪುಂಸಕರು ಏನೂ ಮಾಡಲಾಗದ ದೈನೇಸಿ ಪರಿಸ್ಥಿತಿ ಎದುರಿಸುತ್ತಿರುವಾಗ, ಒಬ್ಬ ಸಾಮಾನ್ಯ ಕನ್ನಡಿಗ ಏನು ತಾನೆ ಮಾಡಲು ಸಾಧ್ಯ?. "ಕರ್ನಾಟಕ ರಕ್ಷಣಾ ವೇದಿಕೆ"ಯಂತಹ ಕನ್ನಡ ಸಂಘಟನೆಗಳು ಇಲ್ಲದಿದ್ದಲ್ಲಿ ಇಂದು ನಮ್ಮ ಮಾತ್ರುಭಾಷೆಯನ್ನು ಭೂತಕನ್ನಡಿ ಹಿಡಿದು ಹುಡುಕಾಡಬೇಕಾದ ಪರಿಸ್ಥಿತಿ ಇರುತ್ತಿತ್ತು.
ಮುಷರಫ್ ಸಾಹೇಬರಿಂದ ಪ್ರಚೋದಿತನಾಗಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಕನ್ನಡ ಹಾಗೂ ತಮಿಳರ ಮಧ್ಯೆ ಗಲಭೆ ಉಂಟುಮಾಡಿ ಮತ್ತೆ ತನ್ನ ಕುರ್ಚಿಯನ್ನು ಭದ್ರಪಡಿಸುವ ಹುನ್ನಾರ ಈ ಕರುಣಾನಿಧಿಯದ್ದು. ಇವನೊಬ್ಬ ಹುಟ್ಟಾ ಭಯೋತ್ಪಾದಕ ಎಂದರೆ ತಪ್ಪಾಗಲಾರದು. ಏಕೆಂದರೆ ಇವ ಬಹಿರಂಗವಾಗಿ ಎಲ್.ಟಿ.ಟಿ.ಇ ಗೆ ಬೆಂಬಲ ಸಾರಿದ್ದ. ಇವನೊಂದಿಗಿರುವ ಚೇಲಾಗಳೂ ಸಹ ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನಿಸುವ ಅಹಂಕಾರ ತೋರಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಇದುವರೆಗೂ ನಮ್ಮ ದೇಶದಲ್ಲಿ ಇರಗೊಟ್ಟಿದ್ದೇ ತಪ್ಪು.
ಕನ್ನಡ ಪ್ರೇಮಿ "ನಾರಾಯಣ ಗೌಡ್ರೆ".....ವಂದನೆಗಳು. ಕನ್ನಡಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ತಮ್ಮನ್ನು ನಾನು ಮನಃಪೂರ್ವಕವಾಗಿ ಅಭಿವಂದಿಸುತ್ತೇನೆ. ನಿಮ್ಮಂತಹ ಸಾವಿರ ಜನ ಕನ್ನಡಿಗರು ಇಂದು ಜನ್ಮ ತಾಳಬೇಕಾಗಿದೆ ನಮ್ಮ ತಾಯ್ನೆಲದ ರಕ್ಷಣೆಗೆ.
" ಜೈ ಕರ್ನಾಟಕ ಮಾತೆ.....ಜೈ ಭುವನೇಶ್ವರಿ....ಸಿರಿಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ ! "

No comments: