Sunday, March 08, 2009

ತಮಿಳು ಸಂಘಟನೆಗಳ ದೇಶವಿರೋಧಿ ಜಾಥಾ

ಬೆಂಗಳೂರು ಮಾರ್ಚ್ ೮: ಇತ್ತೀಚೆಗೆ ಬೆಂಗಳೂರಿನಲ್ಲಿ ತಮಿಳು ಸಂಘಟನೆಗಳು ಒಂದು ಬೃ‍ಹತ್ ಜಾಥಾ ಏರ್ಪಡಿಸಿದ್ದವು. ಇಲ್ಲಿ ವಿಷಯ ಜಾಥಾ ನಡೆಸಿದ ಬಗ್ಗೆ ಅಲ್ಲ, ಅವರು ಜಾಥಾಗೆ ಬಳಸಿದ ವಿಷಯದ ಬಗ್ಗೆ. ಅಂದರೆ ಬೆಂಗಳೂರಿನ ಸಕಲ ತಮಿಳು ಸಂಘಟನೆಗಳು ಉಗ್ರಗಾಮಿಗಳ, ಭಯೋತ್ಪಾದಕರ ಪರ ಬೆಂಬಲ ಸೂಚಿಸಿ ಈ ಜಾಥಾ ಏರ್ಪಡಿಸಿದ್ದವು.

ಅಂದರೆ ತಮಿಳರಿಗೆ ಈ ದೇಶದ ಸಂವಿಧಾನದ ಮೇಲೆ ಇರುವ ನಂಬಿಕೆಯೇ ಪ್ರಶ್ನಾರ್ಹವಾಗಿದೆ. ಇದು ಈಗಿನಿಂದಲ್ಲ, ನಮ್ಮ ದೇಶ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆಯಾದಾಗಲೇ ಪ್ರತ್ಯೇಕತೆಯ ವಿಷಬೀಜವನ್ನು ತಮಿಳುನಾಡಿನ ನಾಯಕರುಗಳು ಆ ಜನರ ಮನದಲ್ಲಿ ಬಿತ್ತಿದ್ದರು.ಆಗ ಅದನ್ನು ಅಂದಿನ ಕಾಂಗ್ರೆಸ್ ಸರಕಾರ ಸಮರ್ಥವಾಗಿ ನಿಭಾಯಿಸಿ ತಮಿಳರಿಗೆ ತಿಳಿಹೇಳಲಾಗಿತ್ತು. ಆದರೆ ಈಗ ಅದೇ ತಪ್ಪನ್ನು ತಮಿಳುನಾಡಿನ ರಾಜಕಾರಣಿಗಳಾದ ವೈಕೋ, ಕರುಣಾನಿಧಿ, ಜಯಲಲಿತಾ ಮೊದಲಾದ ಪಾಖಂಡಿ ರಾಜಕಾರಣಿಗಳು ಮತ್ತೆ ಆ ವಿಷ ಬೀಜವನ್ನು ತಮಿಳರ ಮನದಲ್ಲಿ ಬಿತ್ತಲು ಶುರು ಮಾಡಿದ್ದಾರೆ.

ಆದರೆ ಬೆಂಗಳೂರಿನಲ್ಲಿ ನಡೆದ ಭಯೋತ್ಪಾದಕರ ಪರ ಜಾಥಾಗೆ ಪರೋಕ್ಷ ಬೆಂಬಲ ನೀಡಿದ ಬಿ.ಜೆ.ಪಿ. ಸರಕಾರ, ಮೌನವಾಗಿದ್ದ ಕಾಂಗ್ರೆಸ್, ಜೆ.ಡಿ.ಎಸ್ ಮೊದಲಾದ ರಾಜಕೀಯ ಪಕ್ಷಗಳ ಮೇಲೆ ಅನುಮಾನ ಶುರುವಾಗಿದೆ. ಮೊದಲಿನಿಂದಲೂ ಮುಸಲ್ಮಾನರನ್ನು ಓಲೈಸಿ ಅದರ ಫಲವನ್ನು ಇಂದು ಭಯೋತ್ಪಾದಕತೆಯ ರೂಪದಲ್ಲಿ ಅನುಭವಿಸುತ್ತಿರುವ ಭಾರತ, ಈಗ ಈ ತಮಿಳರ ನಡೆಯಿಂದ ಮತ್ತೊಂದು ಭಯೋತ್ಪಾದಕತೆಯನ್ನು ಎದುರು ನೋಡಲಿದೆಯೇ?. ಅಂದರೆ LTTE ಎಂಬ ಭಯೋತ್ಪಾದಕ, ಉಗ್ರಗಾಮಿ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡಿದ ಈ ಸಂಘಟನೆಗಳ ವಿರುದ್ಧ ಸರಕಾರ ಯಾಕೆ ಕಣ್ಣು ಮುಚ್ಚಿ ಕುಳಿತಿದೆ?. ನಮ್ಮ ಭಾರತದ ವಿರುದ್ಧ ಭಯೋತ್ಪಾದಕತೆಯನ್ನು ಮಾಡುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ಕೂಡ ಬೆಂಬಲ ಸಿಗುವುದಿಲ್ಲ. ಅಂದರೆ ಅಲ್ಲಿನ ನಾಗರಿಕರು ಇದರ ವಿರುದ್ಧ ದನಿಯೆತ್ತುತ್ತಿದ್ದಾರೆ. ಆದರೆ ಅದಕ್ಕೆ ವಿರುದ್ದವಾಗಿ ಈ ತಮಿಳರು ಪಾಕಿಸ್ತಾನೀಯರಿಗಿಂತ ಕನಿಷ್ಠವಾಗಿ ವರ್ತಿಸುತ್ತಿರುವುದು ಅವರಿಗೆ ಈ ದೇಶದ ಸಂವಿಧಾನದ ಮೇಲೆ ಇರುವ ನಂಬಿಕೆಯನ್ನು ಪ್ರಶ್ನಾರ್ಹವಾಗಿಸಿದೆ. ಈ ತಮಿಳು ಸಂಘಟನೆಗಳು ಯಾವತ್ತಿದ್ದರೂ ಕರ್ನಾಟಕಕ್ಕೆ ಅಪಾಯಕಾರಿ ಹಾಗೂ ಭಾರತಕ್ಕೂ ಅಪಾಯಕಾರಿ. ಇತ್ತ ರಾಜ್ಯ ಸರಕಾರ ಭಯೋತ್ಪಾದನಾ ವಿರೋಧಿ ಆಂದೋಲನ ನಡೆಸುತ್ತಿದ್ದರೆ ಇತ್ತ ತಮಿಳರು ಭಯೋತ್ಪಾದಕರ ಪರ ಜಾಥಾ ಆಯೋಜಿಸಿದ್ದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈಗ ತೆಪ್ಪಗಿರುವ ರಾಜ್ಯ ಸರಕಾರ ಮುಂದೆ ಕರ್ನಾಟಕವನ್ನೂ ಮತ್ತೊಂದು ಶ್ರೀಲಂಕಾ ಆಗುವುದನ್ನು ತಪ್ಪಿಸಲು ಸಾಧ್ಯವಿರಲಾರದು.

ಅಷ್ಟಕ್ಕೂ LTTE ಎಂಬ ಭಯೋತ್ಪಾದಕ ಸಂಘಟನೆ ಶ್ರೀಲಂಕಾ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ಅಲ್ಲಿನ ಜನರ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಯಾವ ನ್ಯಾಯ?. ಈ ತಮಿಳರಿಗೆ ಅಲ್ಲಿ ಪ್ರತ್ಯೇಕ ರಾಷ್ಟ್ರ ಕೇಳಲು ಯಾವ ಹಕ್ಕಿದೆ?. ಶ್ರೀಲಂಕಾ ಸರಕಾರ ಒಂದು ಉತ್ತಮ ಕ್ರಮವನ್ನೇ ತೆಗೆದುಕೊಂಡಿದೆ.

ಕೂಡಲೇ ಪೋಲಿಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ಈ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವುದು ಸೂಕ್ತ. ಇಲ್ಲದಿದ್ದಲ್ಲಿ ಈಗ ಶ್ರೀಲಂಕಾದಲ್ಲಿ ಆಗುತ್ತಿರುವುದು ಮುಂದೆ ಕರ್ನಾಟಕದಲ್ಲಿ, ಇಡೀ ರಾಷ್ಟ್ರದಲ್ಲಿ ಆಗಬಹುದು.

1 comment:

Anonymous said...

Kick the Tamilians from KArnataka...All are Anti-Nationals...