Sunday, March 01, 2009

ಸತ್ಯ ಹೇಳಿದ್ದಕ್ಕೆ ಈ ಶಿಕ್ಷೆ?...ಇದು ಕಾಂಗ್ರೆಸ್ ನೀತಿ...

ಬೆಂಗಳೂರು ದಿನಾಂಕ ೦೧-೦೩-೨೦೦೯: ಮಂಗಳೂರಿನ ಪಬ್ ಧಾಳಿಯ ತನಿಖೆಯ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ರೀಮತಿ ನಿರ್ಮಲಾ ವೆಂಕಟೇಶ್ ಅವರನ್ನು ಸತ್ಯ ಹೇಳಿದ್ದಕ್ಕಾಗಿ ಸದಸ್ಯ ಸ್ಥಾನದಿಂದ ಕಿತ್ತೊಗೆಯಲಾಗಿದೆ. ಇಷ್ಟಾದರೂ ಅವರು ತಮ್ಮ ತನಿಖಾ ವರದಿಯಲ್ಲಿ ಹೇಳಿದ್ದಾದರೂ ಏನು?. "ಪಬ್‍ನಲ್ಲಿ ಸೂಕ್ತ ಭದ್ರತೆ ಇರಲಿಲ್ಲ ಹಾಗೂ ಪಬ್ ನಡೆಸಲು ಸೂಕ್ತ ಅನುಮತಿ ಪತ್ರ ಇರಲಿಲ್ಲ " ಎನ್ನುವುದು.
ಅದು ಈಗಾಗಲೇ ಎಲ್ಲರಿಗೂ ಬಹಿರಂಗವಾಗಿ ತಿಳಿದಿದ್ದರೂ, ರೇಣುಕಾ ಚೌಧರಿ ಎಂಬ ಭ್ರಷ್ಟ ಮಹಿಳೆ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಶ್ರೀಮತಿ ನಿರ್ಮಲಾ ಅವರನ್ನು ಕಿತ್ತೊಗೆದಿದ್ದಾಳೆ. ಅವಳು ತನ್ನ ಸ್ಥಾನದ ದುರುಪಯೋಗ ಪಡಿಸಿಕೊಂಡು ಅಧಿಕಾರದ ಅಮಲಿನಿಂದ ನಿರ್ಮಲಾ ಅವರ ವಿರುದ್ದ ಸೇಡು ತೀರಿಸಿಕೊಂಡಿದ್ದಾಳೆ.ಇವರಂಥಹ ಜನರ ಮನಸ್ಸು ಯಾವ ರೀತಿ ಇರುತ್ತದೆ ಎಂದರೆ, ತಾನೂ ಹಾಳಾಗಿರುವುದಲ್ಲದೆ-ಜಗತ್ತನ್ನೂ ಹಾಳು ಮಾಡಬೇಕು ಎನ್ನುವುದು. ಅದೂ ಅಲ್ಲದೆ ಮಂಗಳೂರಿನಲ್ಲಿ ನಡೆದ ಒಂದು ಸಣ್ಣ ಘಟನೆಯನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್‍ನ ಎಲ್ಲ ನಾಯಕರೂ ಬಿ.ಜೆ.ಪಿ.ಯನ್ನು ತುಳಿಯಲು ಒಂದು ಅಸ್ತ್ರ ಸಿಕ್ಕಿತು ಎಂದು ಕೂಗಾಡಿದ್ದೇ ಕೂಗಾಡಿದ್ದು.
ಆದರೆ ಈ ಚೌಧರಿ ಎನ್ನುವ ಮಹಿಳೆ ಇನ್ನೂ ಸ್ವಲ್ಪ ಮುಂದೆ ಹೋಗಿ- ಮಂಗಳೂರಿಗರನ್ನು ತಾಲಿಬಾನಿಗರೆಂದು ಕರೆದು ತನ್ನ ದೇಶಕ್ಕೇ ಅವಮಾನ ಮಾಡಿದ್ದಾಳೆ. ಅಂದರೆ ಯಾವುದೇ ಸುಸಂಸ್ಕೃತ ಹಾಗೂ ಸಭ್ಯ ಮನೆತನದ ಮಹಿಳೆಯೂ ಪಬ್‍ಗೆ ಹೋಗಿ ಕುಡಿಯುವ ಅಭ್ಯಾಸ ನಮ್ಮ ದೇಶದಲ್ಲಿ ರೂಢಿಸಿಕೊಂಡಿಲ್ಲ. ಪಬ್‍ಗೆ ಹೋದರೆ, ಅದೂ ಪರ ಪುರುಷನ ಜೊತೆ ಹೋದರೆ ಆ ಮಹಿಳೆಯ ಸಂಸ್ಕೃತಿ ಪ್ರಶ್ನಾರ್ಹವಾದದ್ದೇ. ಈ ರೇಣುಕಾ ಚೌಧರಿಯಂತಹ ಮಹಿಳೆಯರು ಹಿಂದೆ ಮುಂದೆ ನೋಡದೆ ಎಲ್ಲರೂ ತಮ್ಮಂತೇ ಇರುತ್ತಾರೆಂದು ತಾವೇ ನಿರ್ಧರಿಸಿ ಬಾಯಿಗೆ ಬಂದಂತೆ ಮಾತಾಡುತ್ತಾರೆ.

1 comment:

Anonymous said...

How can you accept something from a prostitute?. All the pub going girls are like prostitutes only...we will use them and throw them thats all......