Monday, March 29, 2010

ಮತದಾನ ಕಡ್ಡಾಯ ಮಾಡಿ

ಇತ್ತೀಚೆಗೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಲು ನಿರುತ್ಸಾಹ ತೋರಿದ ಬೆಂಗಳೂರಿನ ಮತದಾರ ತಾನು ಒಬ್ಬ ಶತ ಮೂರ್ಖ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಮತದಾನ ಕಡಿಮೆಯಾದಷ್ಟು ಕಳ್ಳ ಖದೀಮರು ಆಯ್ಕೆಯಾಗುವ ಅವಕಾಶ ಜಾಸ್ತಿ. ಆದ್ದರಿಂದ ಈ ಮತದಾನ ಮಾಡದ ಮೂರ್ಖ ಮಂದಿ ಈ ಕಳ್ಳ ಖದೀಮರ ಆಯ್ಕೆಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ.

ಇದಕ್ಕೆಲ್ಲ ಒಂದೇ ಪರಿಹಾರ ಎಂದರೆ ಮತದಾನ ಕಡ್ಡಾಯ ಮಾಡುವುದು. ಮತದಾನ ಮಾಡದ ಈ ಸೋಂಬೇರಿಗಳಿಗೆ ಮತದಾನದ ಮಹತ್ವ ಗೊತ್ತಿಲ್ಲದಿರುವುದು ಈ ದೇಶದ ದುರಂತ. ಬೆಂಗಳೂರಿನಲ್ಲಿ ಅನಕ್ಷರತೆ ಇನ್ನೂ ಪ್ರತಿಶತ ೫೦ರಷ್ಟು ಇದೆ ಎಂಬುದನ್ನು ಇದು ತೋರಿಸುತ್ತದೆ. ಈ ಮತದಾನ ಮಾಡದ ಅನಕ್ಷರಸ್ಥ (?) ಮಂದಿಗೆ ಬೆಂಗಳೂರಿನಲ್ಲೂ ಸಂಜೆ ತರಗತಿಗಳನ್ನು ನಡೆಸಿ, ಅಕ್ಷರಾಭ್ಯಾಸ ಮಾಡಿಸಿ, ಈ ಮತದಾನದ ಬಗ್ಗೆ ಅವರಿಗೆ ತಿಳಿಸಿ ಹೇಳುವ ಅಗತ್ಯತೆ ಇವತ್ತು ಖಂಡಿತಾ ಇದೆ ಎಂಬುದು ನನ್ನ ಅಭಿಮತ.

ಈ ಮತದಾನವನ್ನು ಕಡ್ಡಾಯ ಮಾಡುವುದು ಇದಕ್ಕೆಲ್ಲಾ ಒಂದು ಪರಿಹಾರ. ಮತದಾನ ಮಾಡದ ಮಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿನ ಕ್ರಮ ತೆಗೆದುಕೊಳ್ಳಬೇಕಾದ್ದು ಸರಕಾರದ ಕರ್ತವ್ಯ. ಹೀಗಾದರೂ ಒಬ್ಬ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗುವುದು ಸಾಧ್ಯವೋ ಏನೋ?. ಮತದಾನ ಮಾಡದ ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅವರ ರೇಷನ್ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ಕಠಿನ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಕತ್ತೆಯ ಮೆದುಳಿನ ಮಂದಿಗೆ ಇದರ ಮಹತ್ವ ತಿಳಿಯುವುದು ಕಷ್ಟ.

Tuesday, March 16, 2010

ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಕನ್ನಡಿಗರನ್ನು ಗೆಲ್ಲಿಸಿ

ಸದ್ಯದಲ್ಲೇ ಬಿ.ಬಿ.ಎಂ.ಪಿ ಚುನಾವಣೆ ಹತ್ತಿರ ಬರುತ್ತಿದೆ. ನಮ್ಮ ಕನ್ನಡಿಗರೆಲ್ಲಾ ಈಗ ಒಗ್ಗಟ್ಟಾಗಿ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ, ಕೇವಲ ಕನ್ನಡಿಗ ಅಭ್ಯರ್ಥಿಗಳನ್ನು ಚುನಾಯಿಸಬೇಕಾಗಿದೆ. ಏಕೆಂದರೆ ತಮಿಳುನಾಡಿನ ಕೆಲ ರಾಜ್ಯವಿರೋಧಿ ಶಕ್ತಿಗಳು (ಎ.ಐ.ಡಿ.ಎಂ.ಕೆ ಮತ್ತು ಡಿ.ಎಂ.ಕೆ) ಕೂಡಾ ಈ ಚುನಾವಣೆಯಲ್ಲಿ ಭಾಗವಹಿಸುತ್ತಿರುವುದು ಕಳವಳಕಾರಿಯಾಗಿದೆ. ತಮಿಳರು ಈಗ ನಗರಪಾಲಿಕೆಯಲ್ಲಿ ತಮ್ಮ ಇರವನ್ನು ತೋರ್ಪಡಿಸಿ, ಕನ್ನಡಿಗರನ್ನು ತುಳಿಯಲು ಹುನ್ನಾರ ನಡೆಸಿದ್ದಾರೆ.

ಕನ್ನಡಿಗರೇ ಎದ್ದೇಳಿ, ಕೇವಲ ಕನ್ನಡಿಗರನ್ನೇ ಆರಿಸಿ, ಅವರು ಯಾವ ಪಕ್ಷದ ಅಭ್ಯರ್ಥಿಯಾಗಿದ್ದರೂ ಸರಿ....ಆದರೆ ಯಾವುದೇ ಒಬ್ಬ ತಮಿಳ ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೆ ಅವನು ಎಷ್ಟೇ ಒಳ್ಳೆಯವನಾದರೂ ದಯವಿಟ್ಟು ಅವನನ್ನು ಚುನಾಯಿಸಬೇಡಿ. ಇದು ನಮ್ಮ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಏಕೆಂದರೆ ಈ ತಮಿಳರು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ. ಬೆಂಗಳೂರಿನಲ್ಲಿ ಕನ್ನಡಿಗರ ಇರುವಿಕೆಯನ್ನೇ ಪ್ರಶ್ನಿಸಿ ಬೆಂಗಳೂರಿನ ಕೆಲ ತಮಿಳು ಉಗ್ರವಾದಿ ಸಂಘಟನೆಗಳು ತಮ್ಮ ಅಂತರ್ಜಾಲ ಪುಟದಲ್ಲಿ ಲೇಖನಗಳನ್ನು ಬರೆದಿರುವುದು ಆತಂಕಕಾರಿಯಾಗಿದೆ. ಇದರ ವಿರುದ್ದ ನಮ್ಮ ಘನ ಸರಕಾರ ಕೂಡಾ ಚಕಾರ ಎತ್ತದಿರುವುದು ಕಳವಳಕಾರಿಯಾಗಿದೆ.
ಕೇವಲ ಪುಟಗೋಸಿ ತಮಿಳರ ಓಟಿಗೆ ಆಸೆಪಟ್ಟು ಇವತ್ತು ಭಾರತೀಯ ಜನತಾ ಪಕ್ಷದ ಕೆಲ ಮುಖಂಡರು ಅವರನ್ನು ಓಲೈಸುವ ಮಟ್ಟಕ್ಕೆ ಇಳಿದಿರುವುದು ಕನ್ನಡಿಗರಾದ ನಮಗೆ ಆತಂಕಕಾರಿ ವಿಷಯ.

ದಯವಿಟ್ಟು ಕನ್ನಡಿಗ ಅಭ್ಯರ್ಥಿಗಳನ್ನು ಗೆಲ್ಲಿಸಿ.....ಬೆಂಗಳೂರು ಉಳಿಸಿ....