Showing posts with label kannada. Show all posts
Showing posts with label kannada. Show all posts

Monday, July 19, 2010

ಎಂ.ಇ.ಎಸ್ ಮತ್ತು ಶಿವಸೇನೆ ಎಂಬ ದೇಶದ್ರೋಹಿ ಸಂಘಟನೆಗಳು



ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕರ (ಎಂ.ಇ.ಎಸ್ ಮತ್ತು ಶಿವಸೇನೆ) ಗಲಭೆಯಲ್ಲಿ ಅಲ್ಲಿನ ಜನರಿಗೆ ತಾವು ಕಾಶ್ಮೀರದಲ್ಲಿ ಇರುವಂತೆ ಭಾಸವಾಗಿರುವುದರಲ್ಲಿ ಸಂಶಯವಿಲ್ಲ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮುಸ್ಲಿಮ್ ಭಯೋತ್ಪಾದಕರ ಹಲ್ಲೆ, ದೊಂಬಿಗೆ ಹೆದರಿ ಅಲ್ಲಿಂದ ಕಾಲ್ಕಿತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅದೇ ರೀತಿ ಈ ಶಿವಸೇನೆ ಮತ್ತು ಎಂ.ಇ.ಎಸ್ ಎಂಬ ಭಯೋತ್ಪಾದಕ ಸಂಘಟನೆಗಳ ದೊಂಬಿಗೆ ಬೆಳಗಾವಿಯ ಕನ್ನಡ ಹಾಗೂ ಮರಾಠಿ ಮಂದಿ ತತ್ತರಗೊಂಡಿದ್ದಾರೆ.
ಇದುವರೆಗೂ ಸೋದರ ಭಾವನೆಯಿಂದ, ಶಾಂತವಾಗಿದ್ದ ಬೆಳಗಾವಿ ಈ ಭಯೋತ್ಪಾದಕರ ಹಿಡಿತಕ್ಕೆ ಸಿಕ್ಕು ಇಂದು ಮತ್ತೊಂದು ಕಾಶ್ಮೀರವಾಗಿದೆ. ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆ ಕೇವಲ ಮರಾಠಿಗಳು ಮಾತ್ರ ಹಿಂದುಗಳು ಎಂಬ ಸಂಕುಚಿತ ಭಾವನೆಯನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ಶಿವಸೇನೆ ಇವತ್ತು ಎಂ.ಇ.ಎಸ್ ಎಂಬ ಮತ್ತೊಂದು ಭಯೋತ್ಪಾದಕ ಸಂಘಟನೆಯ ಜತೆ ಸೇರಿ ಕನ್ನಡಿಗರ ವಿರುದ್ದ ಕತ್ತಿ ಮಸೆಯುತ್ತಿರುವುದು ಶಾಂತಿಪ್ರಿಯರಾದ ಕನ್ನಡಿಗರನ್ನು ಕೆರಳಿಸಿದೆ.
ಬೆಳಗಾವಿಯಲ್ಲಿ ವಾಸಿಸುತ್ತಿರುವ ಮರಾಠಿಗಳೇ ಈ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿರುವುದು, ಈ ಭಯೋತ್ಪಾದಕ ಸಂಘಟನೆಗಳು ಮಹಾರಾಷ್ಟ್ರದಿಂದ ರೌಡಿಗಳನ್ನು ಕರೆದುಕೊಂಡು ಬಂದು ಇಲ್ಲಿ ಗಲಭೆ ಸೃಷ್ಟಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಸಂಘಟನೆಗಳಿಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೂ ನಂಟು ಇರುವ ಬಗ್ಗೆ ಕೂಲಂಕುಶ ತನಿಖೆ ನಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ದೇಶದಲ್ಲಿ ಹಿಂದೂಗಳ ವಿರುದ್ದವೇ ಗಲಭೆ, ದೊಂಬಿ ಮಾಡುತ್ತಾರೆಂದರೆ ಈ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ನಂಟು ಇಲ್ಲದಿರಲು ಸಾಧ್ಯವಿಲ್ಲ.
ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾದ ಬಾಳಥಾಕ್ರೆ ಎಂಬ ಭಯೋತ್ಪಾದಕ ಈಗ ಮುಂಬೈನಲ್ಲಿ ತನ್ನ ನೆಲೆ ಕಳೆದುಕೊಂಡು ಈಗ ಬೆಳಗಾವಿಯಲ್ಲಿ ತನ್ನ ಹೀನ ಕೃತ್ಯ ಶುರು ಮಾಡಲು ತಯಾರಾಗಿದ್ದಾನೆ. ಇದನ್ನೆಲ್ಲಾ ಕಣ್ಣು ಮುಚ್ಚಿಕೊಂಡು ನೋಡುತ್ತಿರುವ ಕರ್ನಾಟಕದ ಬಿ.ಜೆ.ಪಿ ಸರಕಾರ ಕನ್ನಡಿಗರ ವಿರುದ್ದ , ಕರ್ನಾಟಕದ ವಿರುದ್ದ ತನ್ನ ಬಹಿರಂಗ ಬೆಂಬಲವನ್ನು ಈ ಭಯೋತ್ಪಾದಕ ಸಂಘಟನೆಗಳಿಗೆ ನೀಡಿರುವುದು ಖಂಡನೀಯ.

Friday, June 04, 2010

ಕನ್ನಡ ಹಾಗೂ ಕರ್ನಾಟಕ ದ್ರೋಹಿಗಳು

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮ್ಮೇಳನ ಈಗ ರೈತರ ಎದೆಯಲ್ಲಿ ಭಾರೀ ಭಯ ಹುಟ್ಟಿಸಿದೆ. ಬಂಡವಾಳ ಹೂಡಿಕೆಯ ನೆಪದಲ್ಲಿ ಉದ್ಯೋಗ ಸೃಷ್ಟಿಯಾದರೂ ನಮ್ಮ ರೈತರಿಗೆ ಚಿಕ್ಕಾಸಿನ ಉಪಯೋಗವೂ ಇಲ್ಲ.
ಇನ್ನು ಶುರುವಾಗುತ್ತೆ ನೋಡಿ, ಈ ಸರಕಾರ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ, ರೈತರಿಗೆ ಸೇರಬೇಕಾದ ನೀರು, ವಿದ್ಯುತ್ ಮುಂತಾದವುಗಳನ್ನು ಕಸಿದುಕೊಂಡು ಕರ್ನಾಟಕ ರಾಜ್ಯದ ರೈತರಿಗೆ ಛಡಿ ಏಟು ನೀಡುತ್ತದೆ. ಈ ಬಿ.ಜೆ.ಪಿ. ಸರಕಾರ ಯಾಕಾದರೂ ಬಂತು ಎಂದು ರೈತರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ದೇವರೇ..ಈ ರಾಜ್ಯವನ್ನು ಈ ಬಿ.ಜೆ.ಪಿ. ಎಂಬ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಹಾಗೂ ರೈತ ವಿರೋಧಿ ಸರಕಾರದಿಂದ ಯಾರು ಕಾಪಾಡುತ್ತಾರೋ?. ಸಾಂಸ್ಕೃತಿಕ ಸೂಳೆಗಾರಿಕೆ ನಡೆಸುತ್ತಿರುವ ಐ.ಟಿ ಹಾಗೂ ಬಿ.ಟಿ. ಮಂದಿಯಿಂದ ನಮ್ಮ ರಾಜ್ಯವನ್ನು ರಕ್ಷಿಸುವವರಾರು?. ಕೇವಲ ಉದ್ಯೋಗ ಸೃಷ್ಟಿಯ ನೆಪದಿಂದ ರೈತರನ್ನು ದಮನಿಸುವ ಕೆಲಸ ಈ ಸರಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಖಂಡಿತಾ ನಗಣ್ಯ. ಏಕೆಂದರೆ ಈ ಕನ್ನಡ ವಿರೋಧಿ, ದರಿದ್ರ ಕರ್ನಾಟಕ ಸರಕಾರ ಭಾಷಾ ಅಲ್ಪಸಂಖ್ಯಾತರಿಗೆ ಮಣೆ ಹಾಕಿ ತಾನು ಮಾತ್ರ ಈ ದೇಶವನ್ನು ಪ್ರೀತಿಸುವ ಜಾತ್ಯಾತೀತ ಪಕ್ಷ ಎಂಬುದನ್ನು ಈ ಜಗತ್ತಿಗೆ ತೋರಿಸುವ ಒಂದು ನೀಚ ಕೆಲಸ ಮಾಡುತ್ತಿದೆ.
ಈ ಯಡಿಯೂರಪ್ಪ ಈಗ ರೆಡ್ಡಿ ಸಹೋದರರ ಕೃಪಾಕಟಾಕ್ಷದಿಂದ ತಾನು ಕೂಡಾ ರಾಜ್ಯವನ್ನು ಲೂಟಿ ಮಾಡುವತ್ತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಈ ಬಿ.ಜೆ.ಪಿ. ಗೂಂಡಾಗಳಿಗೆ ಜನ ಸರಿಯಾದ ಪಾಠ ಕಲಿಸದಿದ್ದರೆ, ಮುಂದೆ ಕರ್ನಾಟಕದಲ್ಲಿ ಕನ್ನಡಿಗರೇ ಇಲ್ಲದಂತಾಗುತ್ತದೆ. ಕಾಶ್ಮೀರದಲ್ಲಿ ಹೇಗೆ ಹಿಂದೂಗಳು ಇಲ್ಲವೋ, ಅದೇ ರೀತಿ ಕರ್ನಾಟಕದಲ್ಲಿ ಕನ್ನಡಿಗರೂ ಬದುಕುವುದು ಕಷ್ಟವಾಗುತ್ತದೆ. ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಹಣ ಹೆಂಡ ಹಂಚಿ ಕಾಂಗ್ರೆಸ್ ಸಂಸ್ಕೃತಿಯನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಳವಡಿಸಿಕೊಂಡು ಚುನಾವಣೆಯ ನಂತರ ಪಕ್ಕಾ ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖವಾಗಿ ಹೊಮ್ಮಿದೆ.
ಧಿಕ್ಕಾರವಿರಲಿ ಈ ಕನ್ನಡ ದ್ರೋಹಿಗಳಿಗೆ....ಧಿಕ್ಕಾರವಿರಲಿ ಈ ಸರಕಾರಕ್ಕೆ....ಧಿಕ್ಕಾರವಿರಲಿ ಈ ಬಿ.ಜೆ.ಪಿ.ಗೆ.

Thursday, May 20, 2010

ಯೆಡಿಯೂರಪ್ಪ ಮತ್ತು ಅನಾಥ ಕರ್ನಾಟಕ

ನಮ್ಮ ಕರ್ನಾಟಕದ ದುಸ್ಥಿತಿಯನ್ನು ಕಂಡು ದೇಶದ ಎಲ್ಲೆಡೆ ಮುಸಿಮುಸಿ ನಗುತ್ತಿರುವುದು ನನ್ನ ಹೊಟ್ಟೆ ಕಿವುಚಿದ ಹಾಗಾಗುತ್ತಿದೆ. ಗುಜರಾತ್ ಮಾದರಿ ಎಂದು ಕರ್ನಾಟಕವನ್ನು ದೇಶದ ಅತೀ ಕೀಳು ಮಟ್ಟದ ರಾಜ್ಯವನ್ನಾಗಿ ಮಾಡಿದ ಕೀರ್ತಿ ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಯೆಡಿಯೂರಪ್ಪನಿಗೆ ಸಲ್ಲಬೇಕು.

ಈ ರಾಜ್ಯವನ್ನು ಬಳ್ಳಾರಿಯ ಗಣಿ ರೌಡಿಗಳ ಕೈಗೆ ಒತ್ತೆ ಇಟ್ಟು, ರಾಜ್ಯದ ಚುನಾವಣೆ ಗೆದ್ದು, ಬಿ.ಬಿ.ಎಂ.ಪಿ.ಯನ್ನೂ ಬುಟ್ಟಿಗೆ ಹಾಕಿಕೊಂಡು ರಾಜ್ಯವನ್ನು ಇನ್ನಿಲ್ಲದಂತೆ ದೋಚುತ್ತಿರುವ ಈ ಬಿ.ಜೆ.ಪಿ. ಮಂದಿಯನ್ನು ನೋಡಿದಾಗ ನನಗೆ ದಂತೇವಾಡದಲ್ಲಿ ನಕ್ಸಲರು ಮುಗ್ದ ಜನರ ಹತ್ಯೆ ಮಾಡಿದ್ದರ ಬದಲಾಗಿ ಇಲ್ಲಿನ ಈ ಭ್ರಷ್ಟ ರಾಜಕಾರಣಿಗಳನ್ನಾದರೂ ಬಲಿತೆಗೆದುಕೊಳ್ಳಬಾರದಿತ್ತೇ ಎಂಬ ಯೋಚನೆ ಬಂದಿದ್ದಂತೂ ನಿಜ.

ಒಬ್ಬ ಅಯೋಗ್ಯ ( ಆ ಹುದ್ದೆಗೇ ಅಯೋಗ್ಯ) ಮುಖ್ಯಮಂತ್ರಿ, ನಾಲಾಯಕ್ ಗೃಹಸಚಿವ, ಕ್ರಿಮಿನಲ್ ಹಾಲಪ್ಪ, ರಾಜ್ಯದ ಗಣಿ ಲೂಟಿ ಮಾಡುತ್ತಿರುವ ರೆಡ್ಡಿ ಸಹೋದರರು,ನಮ್ಮ ರಾಜ್ಯದ ಹೆಮ್ಮೆಯಾದ ಕೆ.ಎಂ.ಎಫ್.ನ್ನೂ ಬಿಡದೆ ಅಲ್ಲೂ ರೈತರ ಹೆಸರಿನಲ್ಲಿ ಸ್ವಾಹಾ ಮಾಡುತ್ತಿರುವ ಮಂತ್ರಿಗಳು ಮೊದಲಾದವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡು ರಾಜ್ಯದ ಜನತೆ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವಂತೆ ಆಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ "ಕನ್ನಡ ವಿರೋಧಿ" ಸರಕಾರ ಅಧಿಕಾರಕ್ಕೆ ಬಂದಿದೆ. ನಾನು ಒಬ್ಬ ಆರ್.ಎಸ್.ಎಸ್. ಬೆಂಬಲಿಗನಾಗಿ, ಕನ್ನಡ ಪ್ರೇಮಿಯಾಗಿ ಈ ಮತನ್ನು ಬಹಳ ವಿಷಾದದಿಂದ ಹೇಳಬೇಕಾಗಿದೆ. ಮೊದಲಿನಿಂದಲೂ ಕನ್ನಡ ವಿರೋಧಿ ನೀತಿ, ತಮಿಳು, ತೆಲುಗು ಪರ ಬೆಂಬಲ ಸೂಚಿಸುವ ಪ್ರಥಮ ಸರಕಾರ ಈ ಬಿ.ಜೆ.ಪಿ. ಸರಕಾರ ಎಂಬುದು ಖೇದಕರ ವಿಷಯ. ಕನ್ನಡ ಪರ ಸಂಘಟನೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಹೋರಾಟವನ್ನು ಹತ್ತಿಕ್ಕಿ ತಾನು ಮಾತ್ರ ನಿಜವಾದ ಜಾತ್ಯಾತೀತ ಎಂಬುದನ್ನು ತೋರಿಸುವ ನಾಮರ್ದ ಭಂಡತನ ಪ್ರದರ್ಶಿಸಿದೆ. ಕನ್ನಡಿಗರೇ ಎದ್ದೇಳಿ...ಕನ್ನಡ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆಯಿರಿ...ಪೊರಕೆ ಸೇವೆ ಮಾಡಿ....
ಹೊಗೇನಕಲ್ ವಿಚಾರದಲ್ಲಿ ನಮ್ಮ ಸರಕಾರ ಶಿಖಂಡಿತನ ಪ್ರದರ್ಶಿಸಿದೆ. ಅಲ್ಲದೆ ಬೆಳಗಾವಿ ವಿಚಾರದಲ್ಲಿ ತನ್ನ ನಾಮರ್ದತನವನ್ನು ಎಲ್ಲರಿಗೂ ತೋರಿಸಿದೆ. ಕರ್ನಾಟಕದಲ್ಲಿ ಹುಟ್ಟಿ, ಕರ್ನಾಟಕದ ಅನ್ನ ತಿಂದು, ಇಲ್ಲಿನ ಕಾವೇರಿ ನೀರು ಕುಡಿದು ಇಲ್ಲಿನ ಜನರಿಗೇ ದ್ರೋಹ ಬಗೆಯುತ್ತಿರುವ ಬಿ.ಜೆ.ಪಿ. ಸರಕಾರವನ್ನು ಕಿತ್ತೊಗೆಯಬೇಕು. ಪುಟಗೋಸಿ ತಮಿಳರ ಓಟಿಗಾಗಿ ಕರುಣಾನಿಧಿಯ ಕಾಲು ನೆಕ್ಕುವ ಈ ರಾಜಕಾರಣಿಗಳನ್ನು ಮೆಟ್ಟಲ್ಲಿ ಹೊಡೆಯಿರಿ...

ಕನ್ನಡಿಗರೇ ಎದ್ದೇಳಿ...ನಮ್ಮ ಐಕ್ಯತೆಯನ್ನು ಪ್ರದರ್ಶಿಸಿ...ಈ ಕನ್ನಡ ವಿರೋಧಿ ಸರಕಾರವನ್ನು ಕಿತ್ತೊಗೆಯಿರಿ...ಇಲ್ಲದಿದ್ದಲ್ಲಿ ನಿಮ್ಮ ಮುಂದಿನ ಪೀಳಿಗೆ ನಿಮ್ಮನ್ನು ಕ್ಷಮಿಸಲಾರದು. ಇದೇ ಸರಕಾರ ಇನ್ನು ಐದು ವರ್ಷ ಇದ್ದರೆ ಖಂಡಿತಾ ಕನ್ನಡಿಗ ಅನಾಥನಾಗುತ್ತಾನೆ ಕಾಶ್ಮೀರದ ಹಿಂದೂಗಳಂತೆ. ಕಾಂಗ್ರೆಸ್ ಮತ್ತು ಜಾ.ದಳಕ್ಕೆ ಇದು ಸಕಾಲ, ನೀವಾದರೂ ನಿಜವಾದ ಕನ್ನಡಪ್ರೇಮವನ್ನು ತೋರಿಸಿ...ಕನ್ನಡದ ಉಳಿವಿಗಾಗಿ ಹೋರಾಡಿ...ಒಬ್ಬ ಕನ್ನಡಿಗನಾಗಿ, ಒಬ್ಬ ನೈಜ ಹಿಂದೂವಾಗಿ, ಒಬ್ಬ ಬ್ರಾಹ್ಮಣನಾಗಿ...ನಾನು ಯಾವತ್ತೂ ಬಿ.ಜೆ.ಪಿ. ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕದವನಾಗಿ...ಮುಂದೆ ಕನ್ನಡದ ಹಿತ ಕಾಯುವ ಪಕ್ಷಕ್ಕೆ ಮತ ಹಾಕುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ. ಅದು ಯಾರೇ ಇರಲಿ...ಮುಸ್ಲಿಂ ಲೀಗ್ ಆದರೂ ಸರಿ...ಕನ್ನಡದ ಹಿತ ಕಾಯುವವರಿಗೇ ನನ್ನ ಮತ...ನಿಮ್ಮ ಮತ ಯಾರಿಗೆ?......

Sunday, April 04, 2010

ದೇಶದ್ರೋಹಿ ಬಾಳ ಥಾಕ್ರೆ ಮತ್ತು ಭಯೋತ್ಪಾದಕ ಸಂಘಟನೆಗಳು

ಇತ್ತೀಚೆಗೆ ಬಾಳಥಾಕ್ರೆ ಎಂಬ ದೇಶದ್ರೋಹಿ (ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ) ಬಹಳ ನಿಗುರುತ್ತಿದ್ದಾನೆ. ಎಲ್ಲರೂ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಬಂದರೆ ಇವನದ್ದು ಉಲ್ಟಾ ಕೇಸು, ರಾಷ್ಟ್ರ ರಾಜಕಾರಣದಿಂದ ರಾಜ್ಯರಾಜಕಾರಣಕ್ಕೆ ಬರುತ್ತಿದ್ದಾನೆ. ಇವನ ಸಂಕುಚಿತ ಮನಸ್ಸು ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಸತ್ಯ.
ಇತ್ತೀಚೆಗೆ ತನ್ನ ದೇಶವಿರೋಧಿ ಪತ್ರಿಕೆ ’ಸಾಮ್ನಾ’ ದಲ್ಲಿ ಕರ್ನಾಟಕದ ಮುಖ್ಯಮಂತ್ರಿಯನ್ನು ಹುಚ್ಚ ಎಂದು ಸಂಬೋಧಿಸಿರುವುದು ಇವನ ಮೆದುಳಿನಲ್ಲಿ ತುಂಬಿರುವುದು ಸೆಗಣಿ ಏಮ್ಬುದನ್ನು ಸಾಬೀತುಪಡಿಸುತ್ತದೆ. ಇಂತಹಾ ಲುಚ್ಚಾಗಳನ್ನು ಈ ದೇಶದಿಂದಲೇ ಒದ್ದು ಹೊರಗೋಡಿಸದಿದ್ದಲ್ಲಿ ನಮ್ಮ ಭಾರತದ ಒಕ್ಕೂಟ ವ್ಯವಸ್ಥೆಗೆ ಅಪಾಯ. ಒಬ್ಬ ನಾಮರ್ದ ಮುಂಬೈನಲ್ಲಿ ಕೂತು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವನ ಜನ್ಮಕ್ಕೇ ಕಳಂಕ. ಅವನಿಗೆ ತಾಕತ್ತಿದ್ದರೆ ಬೆಂಗಳೂರಿಗೆ ಬಂದು ಅದೇ ರೀತಿಯ ಹೇಳಿಕೆ ಕೊಡಲಿ, ಕನ್ನಡಿಗರು ದೇಶದ್ರೋಹಿಗಳಿಗೆ ಯಾವ ರೀತಿಯ ಉತ್ತರ ಕೊಡುತ್ತಾರೆ ಎಂಬುದನ್ನು ಅವನು ತನ್ನ ಮುಂದಿನ ನಾರಾರು ಜನ್ಮಕ್ಕೆ ಅರಿತುಕೊಳ್ಳಬೇಕು.
ತನ್ನ ಕುಟುಂಬವನ್ನೇ ಸರಿಯಾದ ಹಾದಿಯಲ್ಲಿ ನಡೆಸಲು ಸಾಧ್ಯವಿಲ್ಲದ ಈ ಶಿಖಂಡಿ, ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹಗಲುಗನಸು ಕಾಣುತ್ತಿದ್ದಾನೆ. ಅದಕ್ಕಾಗಿ ಅವನು ತನ್ನ ಭಯೋತ್ಪಾದಕ ಸಂಘಟನೆಗಳಾದ ಶಿವಸೇನೆ, ಎಂ.ಇ.ಎಸ್.ಗಳನ್ನು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲು ಛೂ ಬಿಟ್ಟಿದ್ದಾನೆ. ಕಾಶ್ಮೀರ ವಿಷಯದಲ್ಲಿ ಹೇಗೆ ಪಾಕಿಸ್ತಾನ ಮೂಗು ತೂರಿಸುತ್ತದೋ ಅದೇ ರೀತಿ ಬೆಳಗಾವಿ ವಿಷಯದಲ್ಲಿ ಕಾಶ್ಮೀರಿ ಭಯೋತ್ಪಾದಕನಂತೆ ವರ್ತಿಸುತ್ತಿರುವುದು ನಮ್ಮ ದೇಶದ ದುರಂತ ಸಂಗತಿ. ಇದಕ್ಕಾಗಿ ಇವನನ್ನು ಬಂಧಿಸಿ ಜೈಲಿಗೆ ತಳ್ಳುವುದನ್ನು ಬಿಟ್ಟು ಮತ್ತಷ್ಟು ಬೊಗಳಲು ಅವಕಾಶ ಮಾಡಿಕೊಡುತ್ತಿರುವುದು ಮಹಾರಾಷ್ಟ್ರ ಸರಕಾರದ ದೊಡ್ಡ ತಪ್ಪು.
ಇಂತಹ ದೇಶದ್ರೋಹಿಗಳಿಗೆ ಮೆಟ್ಟಲ್ಲಿ ಹೊಡೆದು, ಸಾರ್ವಜನಿಕವಾಗಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿ ನೇಣಿಗೆ ಹಾಕಬೇಕು. ನಮ್ಮೊಳಗೇ ಭಯೋತ್ಪಾದಕ ಸಂಘಟನೆಗಳನ್ನಿಟ್ಟುಕೊಂಡು ಪಾಕಿಸ್ತಾನೀಯರಿಗೆ ಬುದ್ದಿ ಹೇಳಲು ನಮ್ಮ ಸರಕಾರಕ್ಕೆ ನಾಚಿಕೆಯಾಗಬೇಕು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಈ ಕೆಳಗಿನ ಸಂಘಟನೆಗಳನ್ನು ನಿಷೇಧಿಸಿ ಆ ಸಂಘಟನೆಗಳ ಮುಖ್ಯಸ್ಥರನ್ನು ನೇಣಿಗೆ ಹಾಕಿ ಭಯೋತ್ಪಾದಕತೆಯ ಮೂಲೋಚ್ಚಾಟನೆಗೆ ಕಟಿಬದ್ದರಾಗಿ.
೧. ಶಿವಸೇನೆ.
೨. ಎಂ.ಇ.ಎಸ್.
೩. ನಕ್ಸಲೀಯರು
೪. ಡಿ.ಎಂ.ಕೆ.
೫. ಎ.ಐ.ಡಿ.ಎಂ.ಕೆ.
೬. ಪಿ.ಎಂ.ಕೆ.
೭. ಎಲ್.ಟಿ.ಟಿ.ಇ.
೮. ಕೇರಳದ ಎಲ್.ಡಿ.ಎಫ್.

ಇನ್ನೂ ಹಲವು ಸಂಘಟನೆಗಳು ದಕ್ಷಿಣ ಭಾರತದಲ್ಲಿ ಕಾರ್ಯನಿರತವಾಗಿದ್ದು, ಅವುಗಳು ಬೆಳೆಯುವ ಮೊದಲೇ ಚಿವುಟಿ ಹಾಕಿ, ಇಲ್ಲ ಅವುಗಳು ಈ ದೇಶವನ್ನೇ ಬಲಿತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

Monday, March 29, 2010

ಮತದಾನ ಕಡ್ಡಾಯ ಮಾಡಿ

ಇತ್ತೀಚೆಗೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಲು ನಿರುತ್ಸಾಹ ತೋರಿದ ಬೆಂಗಳೂರಿನ ಮತದಾರ ತಾನು ಒಬ್ಬ ಶತ ಮೂರ್ಖ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಮತದಾನ ಕಡಿಮೆಯಾದಷ್ಟು ಕಳ್ಳ ಖದೀಮರು ಆಯ್ಕೆಯಾಗುವ ಅವಕಾಶ ಜಾಸ್ತಿ. ಆದ್ದರಿಂದ ಈ ಮತದಾನ ಮಾಡದ ಮೂರ್ಖ ಮಂದಿ ಈ ಕಳ್ಳ ಖದೀಮರ ಆಯ್ಕೆಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ.

ಇದಕ್ಕೆಲ್ಲ ಒಂದೇ ಪರಿಹಾರ ಎಂದರೆ ಮತದಾನ ಕಡ್ಡಾಯ ಮಾಡುವುದು. ಮತದಾನ ಮಾಡದ ಈ ಸೋಂಬೇರಿಗಳಿಗೆ ಮತದಾನದ ಮಹತ್ವ ಗೊತ್ತಿಲ್ಲದಿರುವುದು ಈ ದೇಶದ ದುರಂತ. ಬೆಂಗಳೂರಿನಲ್ಲಿ ಅನಕ್ಷರತೆ ಇನ್ನೂ ಪ್ರತಿಶತ ೫೦ರಷ್ಟು ಇದೆ ಎಂಬುದನ್ನು ಇದು ತೋರಿಸುತ್ತದೆ. ಈ ಮತದಾನ ಮಾಡದ ಅನಕ್ಷರಸ್ಥ (?) ಮಂದಿಗೆ ಬೆಂಗಳೂರಿನಲ್ಲೂ ಸಂಜೆ ತರಗತಿಗಳನ್ನು ನಡೆಸಿ, ಅಕ್ಷರಾಭ್ಯಾಸ ಮಾಡಿಸಿ, ಈ ಮತದಾನದ ಬಗ್ಗೆ ಅವರಿಗೆ ತಿಳಿಸಿ ಹೇಳುವ ಅಗತ್ಯತೆ ಇವತ್ತು ಖಂಡಿತಾ ಇದೆ ಎಂಬುದು ನನ್ನ ಅಭಿಮತ.

ಈ ಮತದಾನವನ್ನು ಕಡ್ಡಾಯ ಮಾಡುವುದು ಇದಕ್ಕೆಲ್ಲಾ ಒಂದು ಪರಿಹಾರ. ಮತದಾನ ಮಾಡದ ಮಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿನ ಕ್ರಮ ತೆಗೆದುಕೊಳ್ಳಬೇಕಾದ್ದು ಸರಕಾರದ ಕರ್ತವ್ಯ. ಹೀಗಾದರೂ ಒಬ್ಬ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗುವುದು ಸಾಧ್ಯವೋ ಏನೋ?. ಮತದಾನ ಮಾಡದ ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅವರ ರೇಷನ್ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ಕಠಿನ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಕತ್ತೆಯ ಮೆದುಳಿನ ಮಂದಿಗೆ ಇದರ ಮಹತ್ವ ತಿಳಿಯುವುದು ಕಷ್ಟ.

Tuesday, March 16, 2010

ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಕನ್ನಡಿಗರನ್ನು ಗೆಲ್ಲಿಸಿ

ಸದ್ಯದಲ್ಲೇ ಬಿ.ಬಿ.ಎಂ.ಪಿ ಚುನಾವಣೆ ಹತ್ತಿರ ಬರುತ್ತಿದೆ. ನಮ್ಮ ಕನ್ನಡಿಗರೆಲ್ಲಾ ಈಗ ಒಗ್ಗಟ್ಟಾಗಿ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ, ಕೇವಲ ಕನ್ನಡಿಗ ಅಭ್ಯರ್ಥಿಗಳನ್ನು ಚುನಾಯಿಸಬೇಕಾಗಿದೆ. ಏಕೆಂದರೆ ತಮಿಳುನಾಡಿನ ಕೆಲ ರಾಜ್ಯವಿರೋಧಿ ಶಕ್ತಿಗಳು (ಎ.ಐ.ಡಿ.ಎಂ.ಕೆ ಮತ್ತು ಡಿ.ಎಂ.ಕೆ) ಕೂಡಾ ಈ ಚುನಾವಣೆಯಲ್ಲಿ ಭಾಗವಹಿಸುತ್ತಿರುವುದು ಕಳವಳಕಾರಿಯಾಗಿದೆ. ತಮಿಳರು ಈಗ ನಗರಪಾಲಿಕೆಯಲ್ಲಿ ತಮ್ಮ ಇರವನ್ನು ತೋರ್ಪಡಿಸಿ, ಕನ್ನಡಿಗರನ್ನು ತುಳಿಯಲು ಹುನ್ನಾರ ನಡೆಸಿದ್ದಾರೆ.

ಕನ್ನಡಿಗರೇ ಎದ್ದೇಳಿ, ಕೇವಲ ಕನ್ನಡಿಗರನ್ನೇ ಆರಿಸಿ, ಅವರು ಯಾವ ಪಕ್ಷದ ಅಭ್ಯರ್ಥಿಯಾಗಿದ್ದರೂ ಸರಿ....ಆದರೆ ಯಾವುದೇ ಒಬ್ಬ ತಮಿಳ ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೆ ಅವನು ಎಷ್ಟೇ ಒಳ್ಳೆಯವನಾದರೂ ದಯವಿಟ್ಟು ಅವನನ್ನು ಚುನಾಯಿಸಬೇಡಿ. ಇದು ನಮ್ಮ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಏಕೆಂದರೆ ಈ ತಮಿಳರು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ. ಬೆಂಗಳೂರಿನಲ್ಲಿ ಕನ್ನಡಿಗರ ಇರುವಿಕೆಯನ್ನೇ ಪ್ರಶ್ನಿಸಿ ಬೆಂಗಳೂರಿನ ಕೆಲ ತಮಿಳು ಉಗ್ರವಾದಿ ಸಂಘಟನೆಗಳು ತಮ್ಮ ಅಂತರ್ಜಾಲ ಪುಟದಲ್ಲಿ ಲೇಖನಗಳನ್ನು ಬರೆದಿರುವುದು ಆತಂಕಕಾರಿಯಾಗಿದೆ. ಇದರ ವಿರುದ್ದ ನಮ್ಮ ಘನ ಸರಕಾರ ಕೂಡಾ ಚಕಾರ ಎತ್ತದಿರುವುದು ಕಳವಳಕಾರಿಯಾಗಿದೆ.
ಕೇವಲ ಪುಟಗೋಸಿ ತಮಿಳರ ಓಟಿಗೆ ಆಸೆಪಟ್ಟು ಇವತ್ತು ಭಾರತೀಯ ಜನತಾ ಪಕ್ಷದ ಕೆಲ ಮುಖಂಡರು ಅವರನ್ನು ಓಲೈಸುವ ಮಟ್ಟಕ್ಕೆ ಇಳಿದಿರುವುದು ಕನ್ನಡಿಗರಾದ ನಮಗೆ ಆತಂಕಕಾರಿ ವಿಷಯ.

ದಯವಿಟ್ಟು ಕನ್ನಡಿಗ ಅಭ್ಯರ್ಥಿಗಳನ್ನು ಗೆಲ್ಲಿಸಿ.....ಬೆಂಗಳೂರು ಉಳಿಸಿ....