Showing posts with label karnataka. Show all posts
Showing posts with label karnataka. Show all posts

Monday, July 19, 2010

ಎಂ.ಇ.ಎಸ್ ಮತ್ತು ಶಿವಸೇನೆ ಎಂಬ ದೇಶದ್ರೋಹಿ ಸಂಘಟನೆಗಳು



ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕರ (ಎಂ.ಇ.ಎಸ್ ಮತ್ತು ಶಿವಸೇನೆ) ಗಲಭೆಯಲ್ಲಿ ಅಲ್ಲಿನ ಜನರಿಗೆ ತಾವು ಕಾಶ್ಮೀರದಲ್ಲಿ ಇರುವಂತೆ ಭಾಸವಾಗಿರುವುದರಲ್ಲಿ ಸಂಶಯವಿಲ್ಲ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮುಸ್ಲಿಮ್ ಭಯೋತ್ಪಾದಕರ ಹಲ್ಲೆ, ದೊಂಬಿಗೆ ಹೆದರಿ ಅಲ್ಲಿಂದ ಕಾಲ್ಕಿತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅದೇ ರೀತಿ ಈ ಶಿವಸೇನೆ ಮತ್ತು ಎಂ.ಇ.ಎಸ್ ಎಂಬ ಭಯೋತ್ಪಾದಕ ಸಂಘಟನೆಗಳ ದೊಂಬಿಗೆ ಬೆಳಗಾವಿಯ ಕನ್ನಡ ಹಾಗೂ ಮರಾಠಿ ಮಂದಿ ತತ್ತರಗೊಂಡಿದ್ದಾರೆ.
ಇದುವರೆಗೂ ಸೋದರ ಭಾವನೆಯಿಂದ, ಶಾಂತವಾಗಿದ್ದ ಬೆಳಗಾವಿ ಈ ಭಯೋತ್ಪಾದಕರ ಹಿಡಿತಕ್ಕೆ ಸಿಕ್ಕು ಇಂದು ಮತ್ತೊಂದು ಕಾಶ್ಮೀರವಾಗಿದೆ. ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆ ಕೇವಲ ಮರಾಠಿಗಳು ಮಾತ್ರ ಹಿಂದುಗಳು ಎಂಬ ಸಂಕುಚಿತ ಭಾವನೆಯನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ಶಿವಸೇನೆ ಇವತ್ತು ಎಂ.ಇ.ಎಸ್ ಎಂಬ ಮತ್ತೊಂದು ಭಯೋತ್ಪಾದಕ ಸಂಘಟನೆಯ ಜತೆ ಸೇರಿ ಕನ್ನಡಿಗರ ವಿರುದ್ದ ಕತ್ತಿ ಮಸೆಯುತ್ತಿರುವುದು ಶಾಂತಿಪ್ರಿಯರಾದ ಕನ್ನಡಿಗರನ್ನು ಕೆರಳಿಸಿದೆ.
ಬೆಳಗಾವಿಯಲ್ಲಿ ವಾಸಿಸುತ್ತಿರುವ ಮರಾಠಿಗಳೇ ಈ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿರುವುದು, ಈ ಭಯೋತ್ಪಾದಕ ಸಂಘಟನೆಗಳು ಮಹಾರಾಷ್ಟ್ರದಿಂದ ರೌಡಿಗಳನ್ನು ಕರೆದುಕೊಂಡು ಬಂದು ಇಲ್ಲಿ ಗಲಭೆ ಸೃಷ್ಟಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಸಂಘಟನೆಗಳಿಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೂ ನಂಟು ಇರುವ ಬಗ್ಗೆ ಕೂಲಂಕುಶ ತನಿಖೆ ನಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ದೇಶದಲ್ಲಿ ಹಿಂದೂಗಳ ವಿರುದ್ದವೇ ಗಲಭೆ, ದೊಂಬಿ ಮಾಡುತ್ತಾರೆಂದರೆ ಈ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ನಂಟು ಇಲ್ಲದಿರಲು ಸಾಧ್ಯವಿಲ್ಲ.
ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾದ ಬಾಳಥಾಕ್ರೆ ಎಂಬ ಭಯೋತ್ಪಾದಕ ಈಗ ಮುಂಬೈನಲ್ಲಿ ತನ್ನ ನೆಲೆ ಕಳೆದುಕೊಂಡು ಈಗ ಬೆಳಗಾವಿಯಲ್ಲಿ ತನ್ನ ಹೀನ ಕೃತ್ಯ ಶುರು ಮಾಡಲು ತಯಾರಾಗಿದ್ದಾನೆ. ಇದನ್ನೆಲ್ಲಾ ಕಣ್ಣು ಮುಚ್ಚಿಕೊಂಡು ನೋಡುತ್ತಿರುವ ಕರ್ನಾಟಕದ ಬಿ.ಜೆ.ಪಿ ಸರಕಾರ ಕನ್ನಡಿಗರ ವಿರುದ್ದ , ಕರ್ನಾಟಕದ ವಿರುದ್ದ ತನ್ನ ಬಹಿರಂಗ ಬೆಂಬಲವನ್ನು ಈ ಭಯೋತ್ಪಾದಕ ಸಂಘಟನೆಗಳಿಗೆ ನೀಡಿರುವುದು ಖಂಡನೀಯ.

Thursday, June 10, 2010

ನಗರ ಪಾಲಿಕೆ ಮತ್ತು ಕಾರ್ಯ ದಕ್ಷತೆ




ನೀವು ಮೇಲೆ ನೋಡುತ್ತಿರುವುದು ಬೆಂಗಳೂರಿನ ಬಿನ್ನಿ ಮಿಲ್ ರಸ್ತೆಯಲ್ಲಿ ದಿನಾಂಕ ೦೮-೦೬-೨೦೧೦ರಂದು ಬೆಳಿಗ್ಗೆ ನಾನು ಕಂಡ ಹೃದಯ ವಿದ್ರಾವಕ ದೃಶ್ಯ. ದನವೊಂದು ಅಪಘಾತಕ್ಕೆ ಈಡಾಗಿ ಸತ್ತು ಬಿದ್ದಿದೆ. ಅದನ್ನು ಎರಡು ದಿನವಾದರೂ ಸಂಬಂಧ ಪಟ್ಟವರು ತೆಗೆದಿಲ್ಲ. ಅದೇ ದಾರಿಯಲ್ಲಿ ಓಡಾಡುವ ಸರಕಾರಿ ವಾಹನಗಳು, ಪೋಲೀಸರು ಕೂಡಾ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಆ ದನ ಕೊಳೆತು ನಾರುತ್ತಿದೆ. ನಾಯಿ, ಕಾಗೆಗಳು ಅದರ ಮಾಂಸವನ್ನು ಕಚ್ಚಿ ಕಚ್ಚಿ ಎಳೆದು ತಿನ್ನುತ್ತಿವೆ. ಕೆಲ ಸಮಯದ ನಂತರ ಆ ನಾಯಿಗಳಿಗೆ ಹುಚ್ಚು ಹಿಡಿಯುವ ಸಾಧ್ಯತೆಯೂ ಇಲ್ಲದಿಲ್ಲ. ಆ ನಾಯಿಗಳು ದಾರಿಹೋಕರಿಗೆ ಕಚ್ಚದೇ ಇಅರಲು ಸಾಧ್ಯವೇ ಇಲ್ಲ. ಈ ದನ ಸತ್ತು ಇವತ್ತಿಗೆ ಮೂರು ದಿನ ಆದರೂ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂದರೆ ನಮ್ಮ ದರಿದ್ರ ಕರ್ನಾಟಕ ಸರಕಾರ, ದರಿದ್ರ ಬಿ.ಬಿ.ಎಂ.ಪಿ.ಗಳು ನಿದ್ದೆ ಮಾಡುತ್ತಿವೆಯೇ?. ಇದನ್ನು ನಾನು ಸಮೀಪದಲ್ಲೇ ಇದ್ದ ಪೋಲೀಸರಿಗೆ ತಿಳಿಸಿದರೂ ಅವರು ಅಸಡ್ಡೆ ಮಾಡಿರುತ್ತಾರೆ.
"ರೀ...ಅದು ನಮ್ಮೆ ಕೆಲಸ ಅಲ್ಲ. ಕಾರ್ಪೋರೇಶನ್ ಅಫೀಸಿಗೆ ಫೋನ್ ಮಾಡಿ ಹೇಳಿ. ಆ ಬೋಳೀ ಮಕ್ಳೇ ಇಲ್ಲಿ ತಂದು ಹಾಕಿರುತ್ತಾರೆ." ಎಂಬ ಮಾತು ಹೇಳಿದರು. ಅವರ ನಂಬರ್ ಕೊಡಿ ಎಂದರೆ...."ನಮಗೆ ಗೊತ್ತಿಲ್ಲ" ಎಂಬ ಹಾರಿಕೆಯ ಉತ್ತರ ಬೇರೆ.

ಇವತ್ತು ಸರಕಾರದ ಕಾರ್ಯ ದಕ್ಷತೆ ಸತ್ತು ಹೋಗಿದೆ. ದುಡ್ಡು ಕೊಡದೆ ಯಾವ ಕೆಲಸವೂ ಆಗುವುದಿಲ್ಲ. ಆದರೆ ಇಂತಹ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಕ್ಕೂ ಇದು ಅನ್ವಯವಾದರೆ, ಈ ಸರಕಾರ ಇದ್ದೂ ಸತ್ತಂತೆ. ಒಬ್ಬ ಅಪ್ರಯೋಜಕ ಮುಖ್ಯಮಂತ್ರಿ, ಭ್ರಷ್ಟ ಮಂತ್ರಿಗಳನ್ನು ಒಳಗೊಂಡಿರುವ ಈ ಸರಕಾರ ಸಾರ್ವಜನಿಕರ ಬಗ್ಗೆ ಇನ್ನೆಷ್ಟು ಕಾಳಜಿ ತೋರಿಸಬಹುದು?.

Friday, June 04, 2010

ಕನ್ನಡ ಹಾಗೂ ಕರ್ನಾಟಕ ದ್ರೋಹಿಗಳು

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮ್ಮೇಳನ ಈಗ ರೈತರ ಎದೆಯಲ್ಲಿ ಭಾರೀ ಭಯ ಹುಟ್ಟಿಸಿದೆ. ಬಂಡವಾಳ ಹೂಡಿಕೆಯ ನೆಪದಲ್ಲಿ ಉದ್ಯೋಗ ಸೃಷ್ಟಿಯಾದರೂ ನಮ್ಮ ರೈತರಿಗೆ ಚಿಕ್ಕಾಸಿನ ಉಪಯೋಗವೂ ಇಲ್ಲ.
ಇನ್ನು ಶುರುವಾಗುತ್ತೆ ನೋಡಿ, ಈ ಸರಕಾರ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ, ರೈತರಿಗೆ ಸೇರಬೇಕಾದ ನೀರು, ವಿದ್ಯುತ್ ಮುಂತಾದವುಗಳನ್ನು ಕಸಿದುಕೊಂಡು ಕರ್ನಾಟಕ ರಾಜ್ಯದ ರೈತರಿಗೆ ಛಡಿ ಏಟು ನೀಡುತ್ತದೆ. ಈ ಬಿ.ಜೆ.ಪಿ. ಸರಕಾರ ಯಾಕಾದರೂ ಬಂತು ಎಂದು ರೈತರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ದೇವರೇ..ಈ ರಾಜ್ಯವನ್ನು ಈ ಬಿ.ಜೆ.ಪಿ. ಎಂಬ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಹಾಗೂ ರೈತ ವಿರೋಧಿ ಸರಕಾರದಿಂದ ಯಾರು ಕಾಪಾಡುತ್ತಾರೋ?. ಸಾಂಸ್ಕೃತಿಕ ಸೂಳೆಗಾರಿಕೆ ನಡೆಸುತ್ತಿರುವ ಐ.ಟಿ ಹಾಗೂ ಬಿ.ಟಿ. ಮಂದಿಯಿಂದ ನಮ್ಮ ರಾಜ್ಯವನ್ನು ರಕ್ಷಿಸುವವರಾರು?. ಕೇವಲ ಉದ್ಯೋಗ ಸೃಷ್ಟಿಯ ನೆಪದಿಂದ ರೈತರನ್ನು ದಮನಿಸುವ ಕೆಲಸ ಈ ಸರಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಖಂಡಿತಾ ನಗಣ್ಯ. ಏಕೆಂದರೆ ಈ ಕನ್ನಡ ವಿರೋಧಿ, ದರಿದ್ರ ಕರ್ನಾಟಕ ಸರಕಾರ ಭಾಷಾ ಅಲ್ಪಸಂಖ್ಯಾತರಿಗೆ ಮಣೆ ಹಾಕಿ ತಾನು ಮಾತ್ರ ಈ ದೇಶವನ್ನು ಪ್ರೀತಿಸುವ ಜಾತ್ಯಾತೀತ ಪಕ್ಷ ಎಂಬುದನ್ನು ಈ ಜಗತ್ತಿಗೆ ತೋರಿಸುವ ಒಂದು ನೀಚ ಕೆಲಸ ಮಾಡುತ್ತಿದೆ.
ಈ ಯಡಿಯೂರಪ್ಪ ಈಗ ರೆಡ್ಡಿ ಸಹೋದರರ ಕೃಪಾಕಟಾಕ್ಷದಿಂದ ತಾನು ಕೂಡಾ ರಾಜ್ಯವನ್ನು ಲೂಟಿ ಮಾಡುವತ್ತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಈ ಬಿ.ಜೆ.ಪಿ. ಗೂಂಡಾಗಳಿಗೆ ಜನ ಸರಿಯಾದ ಪಾಠ ಕಲಿಸದಿದ್ದರೆ, ಮುಂದೆ ಕರ್ನಾಟಕದಲ್ಲಿ ಕನ್ನಡಿಗರೇ ಇಲ್ಲದಂತಾಗುತ್ತದೆ. ಕಾಶ್ಮೀರದಲ್ಲಿ ಹೇಗೆ ಹಿಂದೂಗಳು ಇಲ್ಲವೋ, ಅದೇ ರೀತಿ ಕರ್ನಾಟಕದಲ್ಲಿ ಕನ್ನಡಿಗರೂ ಬದುಕುವುದು ಕಷ್ಟವಾಗುತ್ತದೆ. ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಹಣ ಹೆಂಡ ಹಂಚಿ ಕಾಂಗ್ರೆಸ್ ಸಂಸ್ಕೃತಿಯನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಳವಡಿಸಿಕೊಂಡು ಚುನಾವಣೆಯ ನಂತರ ಪಕ್ಕಾ ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖವಾಗಿ ಹೊಮ್ಮಿದೆ.
ಧಿಕ್ಕಾರವಿರಲಿ ಈ ಕನ್ನಡ ದ್ರೋಹಿಗಳಿಗೆ....ಧಿಕ್ಕಾರವಿರಲಿ ಈ ಸರಕಾರಕ್ಕೆ....ಧಿಕ್ಕಾರವಿರಲಿ ಈ ಬಿ.ಜೆ.ಪಿ.ಗೆ.

Monday, March 29, 2010

ಮತದಾನ ಕಡ್ಡಾಯ ಮಾಡಿ

ಇತ್ತೀಚೆಗೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಲು ನಿರುತ್ಸಾಹ ತೋರಿದ ಬೆಂಗಳೂರಿನ ಮತದಾರ ತಾನು ಒಬ್ಬ ಶತ ಮೂರ್ಖ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಮತದಾನ ಕಡಿಮೆಯಾದಷ್ಟು ಕಳ್ಳ ಖದೀಮರು ಆಯ್ಕೆಯಾಗುವ ಅವಕಾಶ ಜಾಸ್ತಿ. ಆದ್ದರಿಂದ ಈ ಮತದಾನ ಮಾಡದ ಮೂರ್ಖ ಮಂದಿ ಈ ಕಳ್ಳ ಖದೀಮರ ಆಯ್ಕೆಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ.

ಇದಕ್ಕೆಲ್ಲ ಒಂದೇ ಪರಿಹಾರ ಎಂದರೆ ಮತದಾನ ಕಡ್ಡಾಯ ಮಾಡುವುದು. ಮತದಾನ ಮಾಡದ ಈ ಸೋಂಬೇರಿಗಳಿಗೆ ಮತದಾನದ ಮಹತ್ವ ಗೊತ್ತಿಲ್ಲದಿರುವುದು ಈ ದೇಶದ ದುರಂತ. ಬೆಂಗಳೂರಿನಲ್ಲಿ ಅನಕ್ಷರತೆ ಇನ್ನೂ ಪ್ರತಿಶತ ೫೦ರಷ್ಟು ಇದೆ ಎಂಬುದನ್ನು ಇದು ತೋರಿಸುತ್ತದೆ. ಈ ಮತದಾನ ಮಾಡದ ಅನಕ್ಷರಸ್ಥ (?) ಮಂದಿಗೆ ಬೆಂಗಳೂರಿನಲ್ಲೂ ಸಂಜೆ ತರಗತಿಗಳನ್ನು ನಡೆಸಿ, ಅಕ್ಷರಾಭ್ಯಾಸ ಮಾಡಿಸಿ, ಈ ಮತದಾನದ ಬಗ್ಗೆ ಅವರಿಗೆ ತಿಳಿಸಿ ಹೇಳುವ ಅಗತ್ಯತೆ ಇವತ್ತು ಖಂಡಿತಾ ಇದೆ ಎಂಬುದು ನನ್ನ ಅಭಿಮತ.

ಈ ಮತದಾನವನ್ನು ಕಡ್ಡಾಯ ಮಾಡುವುದು ಇದಕ್ಕೆಲ್ಲಾ ಒಂದು ಪರಿಹಾರ. ಮತದಾನ ಮಾಡದ ಮಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿನ ಕ್ರಮ ತೆಗೆದುಕೊಳ್ಳಬೇಕಾದ್ದು ಸರಕಾರದ ಕರ್ತವ್ಯ. ಹೀಗಾದರೂ ಒಬ್ಬ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗುವುದು ಸಾಧ್ಯವೋ ಏನೋ?. ಮತದಾನ ಮಾಡದ ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅವರ ರೇಷನ್ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ಕಠಿನ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಕತ್ತೆಯ ಮೆದುಳಿನ ಮಂದಿಗೆ ಇದರ ಮಹತ್ವ ತಿಳಿಯುವುದು ಕಷ್ಟ.

Friday, February 12, 2010

ಮುತಾಲಿಕ್ ಮೇಲಿನ ಹಲ್ಲೆ- ಹಿಂದೂ ವಿರೋಧಿಗಳ ಅಟ್ಟಹಾಸ

ಕೆಲ ದಿನಗಳ ಹಿಂದೆ ಮಾನ್ಯ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಕೆಲ ಹಿಂದೂ ವಿರೋಧಿಗಳು ಮಸಿ ಬಳಿದು ಕೆಲ ಹಿಂದೂವಿರೋಧಿ ಕುನ್ನಿಗಳು ಭಾರತದ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ.

ಕಸ್ತೂರಿ ಚಾನಲ್‌ನಲ್ಲಿ ನಡೆಯುತ್ತಿದ್ದ ಈ ವ್ಯಾ(ಕ್)ಲೈಂಟೈನ್ಸ್ ಡೇ ವಿರುದ್ದ ಹಾಗೂ ಪರ ವಾಕ್ಸಮರದ ಅಂತಿಮ ಘಳಿಗೆಯಲ್ಲಿ ವೇದಿಕೆ ಏರಿ ಬಂದ ಕೆಲ ದುಷ್ಕರ್ಮಿಗಳು (ಇವರ ವಿಚಾರಣೆ ನಡೆಸುವುದೊಳಿತು, ಏಕೆಂದರೆ ಐ.ಎಸ್.ಐಗೆ ಇವರ ಸಂಬಂಧ ಇರಲೂ ಸಾಕು) ಮಾನ್ಯ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದು ಎಲ್ಲ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ.

ಅಲ್ಲರೀ...ಮುತಾಲಿಕ್ ಹೇಳುವುದರಲ್ಲಿ ಏನಿದೆ ತಪ್ಪು?. ಮದುವೆಯಾಗದ ಇಬ್ಬರು ಜೋಡಿಗಳು ಪರಸ್ಪರ ಕೈ ಹಿಡಿದುಕೊಂಡು, ಪಾರ್ಕ್‌ನಲ್ಲಿ ಕತ್ತಲಲ್ಲಿ ಪ್ರೀತಿ ಮಾಡುವುದನ್ನು ಈ ದುಷ್ಕರ್ಮಿಗಳು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?. ಇದು ಖಂಡಿತಾ ಸೂಳೆಗಾರಿಕೆಯ ಇನ್ನೊಂದು ಮುಖ. ಒಬ್ಬ ಹೆಣ್ಣು ಒಬ್ಬ ಗಂಡಸಿಗಿಂತ ಹೆಚ್ಚಿನ ಸಂಬಂಧ ಇಟ್ಟುಕೊಡರೆ ಸಮಾಜದಲ್ಲಿ ಏನು ಹೇಳುತ್ತಾರೆ ಎಂಬುದನ್ನು ಒಬ್ಬ ಸಾಮಾನ್ಯ ಪ್ರಜೆ ಕೂಡಾ ಹೇಳಬಲ್ಲ. ಈಗ ನೀವು ಪ್ರತೀ ಪಾರ್ಕ್‌ನಲ್ಲಿ ಹೋಗಿ ನೋಡಿ, ಪ್ರೀತಿಯ ಹೆಸರಿನಲ್ಲಿ ಲೈಂಗಿಕ ತೀಟೆ ತೀರಿಸಿಕೊಳ್ಳುವುದನ್ನು. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ. ಜಯನಗರದ ಪಾರ್ಕ್, ಹೆಬ್ಬಾಳದ ಪಾರ್ಕ್, ಬಸವನಗುಡಿಯ ಪಾರ್ಕ್, ಕಬ್ಬನ್ ಪಾರ್ಕ ಮುಂತಾದ ಕಡೆ ಮರ್ಯಾದಸ್ಥರು ಓಡಾದುವುದಕ್ಕೆ ಆಗುತ್ತಾ?. ಈಗ ನಿಜವಾಗಿ ಪ್ರೀತಿಸುವವರು ಎಷ್ಟು ಜನ ಇದ್ದಾರೆ?. ಈ ಪ್ರೀತಿ ಎನ್ನುವುದು ಗಂಡಸಿನ ಕೈಯಲ್ಲಿ ಹಣ ಇರುವ ತನಕ ಮಾತ್ರ, ನಿಮ್ಮ ಕೈಯಲ್ಲಿ ಹಣ, ಕಾರು ಇದ್ದರೆ ಎಂಥಹ ಹೆಣ್ಣು ಕೂಡಾ ಬಾಯಿ ಬಿಡುವ ಕಾಲ. ಅಂದರೆ ಹಣಕ್ಕೆ ಬೆಲೆ ಕೊಡುವ ಕಾಲ.

ಯಾವ ಒಬ್ಬ ಹೆಣ್ಣು ಹೆತ್ತ ತಂದೆ, ತಾಯಿಗಳು ತಮ್ಮ ಮಗಳು ಈ ಥರಾ ಅನ್ಯ ಹುಡುಗನ ಜೊತೆ ಶಾಲೆ-ಕಾಲೆಜ್‌ಗೆ ಚಕ್ಕರ್ ಹೊಡೆದು ಪಾರ್ಕ್‌ನಲ್ಲಿ ಮೋಜು ಮಾಡುವುದನ್ನು ಸಮರ್ಥಿಸಿಕೊಳ್ಳುತ್ತಾರೆ?. ಆದರೆ ಇದನ್ನೆಲ್ಲ ಕಾಮನ್ ಎನ್ನುವ ರೀತಿಯಲ್ಲಿ ನೋಡುವ ಹೆತ್ತವರೂ ಇದ್ದಾರೆ. ಆದರೆ ಅದೇ ಮೋಜು-ಮಸ್ತಿ ತಮ್ಮ ಮಗಳ ಬಾಳನ್ನು ಹಾಳು ಮಾಡಿದಾಗ ಇವರು ಎಚ್ಚೆತ್ತುಕೊಳ್ಳುತ್ತಾರೆ. ಹಾಗಂತ ನಾನು ಈ ಪಡ್ಡೆ ಹುಡುಗರಿಗೆ ಬೆಂಬಲ ನೀಡುತ್ತಿಲ್ಲ. ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ-ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ. ಆದ್ದರಿಂದ ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ನಿಜವಾಗಿ ಜಾಗರೂಕರಾಗಿರಬೇಕು.

ಈಗಿನ ಕಾಲೆಜ್ ಜೀವನದಲ್ಲಿ ಈ ಪ್ರೀತಿ ಎನ್ನುವುದು ಫ್ಯಾಶನ್ ಆಗಿಬಿಟ್ಟಿದೆ. ಒಬ್ಬ ಹುಡುಗಿಗೆ-ಒಬ್ಬ ಹುಡುಗ ಜೋಡಿ ಇರಲೇ ಬೇಕು. ಆದರೆ ಇದು ಸಮರ್ಥನೀಯವೇ?. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಎನ್ನುವ ಮುತಾಲಿಕ್ ವಾದ ತಪ್ಪೇ?.

Sunday, February 07, 2010

ಕರ್ನಾಟಕದ ಭಯೋತ್ಪಾದಕರು

ಕರ್ನಾಟಕದ ನೆಲದಲ್ಲಿ ಭಯೋತ್ಪಾದಕರ ಹಾವಳಿ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದಕ್ಕೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕ ಸಂಘಟನೆಯಾದ ಎಂ.ಇ.ಎಸ್. ಎಂಬ ತಿಕ್ಕಲು ಸಂಘಟನೆ ನಡೆಸಿದ ಸೀಮಾ ಪರಿಷತ್ ಎನ್ನುವ ಕಾರ್ಯಕ್ರಮವೇ ಸಾಕ್ಷಿ.
ಮುಂಬೈನಲ್ಲಿ ರೌಡಿಯಿಸಂ ಹುಟ್ಟಲು ಕಾರಣವಾದ ಶಿವಸೇನಾ ಎಂಬ ಸಂಘಟನೆಯೇ ಇದಕ್ಕೆ ಕಾರಣ. ಪ್ರಾದೇಶಿಕತೆಯ ಹೆಸರಿನಲ್ಲಿ ದೇಶದೆಲ್ಲೆಡೆ ಭಯೋತ್ಪಾದಕತೆಯನ್ನು ಹಬ್ಬಿಸುತ್ತಿರುವ ಈ ಸಂಘಟನೆಯನ್ನು ಅಲ್ಲಿನ ಕಾಂಗ್ರೆಸ್ ಸರಕಾರ ಯಾಕೆ ನಿಷೇಧಿಸುತ್ತಿಲ್ಲ?. ಮುಂಬೈ ಕೇವಲ ಮಹಾರಾಷ್ಟ್ರಿಗರಿಗೆ ಮಾತ್ರ ಎಂಬ ತಿಕ್ಕಲು ವಾದವನ್ನು ಸಮರ್ಥಿಸಿಕೊಳ್ಳುತ್ತಿರುವ ಈ ಸಂಘಟನೆ ಶಿವಾಜಿಯ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಉತ್ತರಭಾರತೀಯರನ್ನು ಮುಂಬೈನಿಂದ ಹೊರಗಟ್ಟುವಂತೆ ಕರೆ ನೀಡಿದ ಈ ಭಯೋತ್ಪಾದಕ ಸಂಘಟನೆಗೂ ಕಾಶ್ಮೀರದಲ್ಲಿ ಭಯೋತ್ಪಾದಕತೆಯನ್ನು ಸೃಷ್ಟಿಸುತ್ತಿರುವ ಮುಸ್ಲಿಂ ಭಯೋತ್ಪಾದಕರಿಗೂ ಯಾವ ವ್ಯತ್ಯಾಸವೂ ಇಲ್ಲ. ಏಕೆಂದರೆ ಈ ಎರಡೂ ಸಂಘಟನೆಗಳು ದೇಶವನ್ನು ಛಿದ್ರಮಾಡುವತ್ತ ತಮ್ಮ ಗುರಿ ಹೊಂದಿವೆ.
ಅದರಲ್ಲೂ ಬೆಳಗಾವಿಯ ಎಂ.ಇ.ಎಸ್. ಎಂಬ ಭಯೋತ್ಪಾದಕ ಸಂಘಟನೆಯಂತೂ ಕರ್ನಾಟಕದ ಅನ್ನ ತಿಂದು, ಇಲ್ಲಿನ ನೀರು ಕುಡಿದು, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹುಂಬ ವಾದವನ್ನು ಮಂಡಿಸಿ ತನ್ನ ದೇಶದ್ರೋಹಿತನವನ್ನು ತೋರಿಸಿದೆ. ಈ ಸೀಮಾ ಪರಿಷತ್ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು ನಮ್ಮ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತನ್ನ ಕನ್ನಡದ್ರೋಹಿತನವನ್ನು, ಕರ್ನಾಟಕ ವಿರೋಧಿ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕರ್ನಾಟಕ ದ್ರೋಹಿ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅಲ್ಲಿನ ಮರಾಠಿ ಪುಂಡರು ಥಳಿಸಿದಾಗಲೂ ತುಟಿ ಪಿಟಿಕ್ ಎನ್ನದ ಈ ಮುಖ್ಯಮಂತ್ರಿಗಳು ಮರಾಠಿ ಪುಂಡರಿಗೆ ಹೆದರಿ ಬಚ್ಚಿಟ್ಟುಕೊಂಡದ್ದು ನಮ್ಮ ದುರ್ದೈವ.
ಇದನ್ನು ಹೀಗೆಯೇ ಬಿಟ್ಟರೆ ಮುಂದೆ ಅಖಂಡ ಕರ್ನಾಟಕವು ಛಿದ್ರ ಛಿದ್ರವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಕರ್ನಾಟಕದ ಅತ್ಯಂತ ಬಲಹೀನ, ದುರ್ಬಲ ಮುಖ್ಯಮಂತ್ರಿಗೆ ಈ ಬಗ್ಗೆ ಕಾಳಜಿಯಿಲ್ಲದಿರುವುದು ಕರ್ನಾಟಕದ ದುರ್ದೈವ. ಕೇವಲ ಗಣಿಧಣಿಗಳ ಪಾದ ಪೂಜೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿರುವ ಯಡಿಯೂರಪ್ಪನವರಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲದೆ ಕೇವಲ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲೇ ಕಾಲ ಹರಣಮಾಡುತ್ತಿರುವುದು ಸೋಜಿಗ.
ಈ ಮರಾಠಿ ಭಯೋತ್ಪಾದಕರನ್ನ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕದಿದ್ದಲ್ಲಿ, ಈವರೆಗೆ ದಕ್ಷಿಣದಲ್ಲಿ ಇರದ ಭಯೋತ್ಪಾದಕತೆ ತಲೆ ಎತ್ತುವುದರಲ್ಲಿ ಸಂಶಯವಿಲ್ಲ.