Sunday, July 27, 2008

ದೇಶದ್ರೋಹಿ ಭಯೋತ್ಪಾದಕರು...ಕರ್ನಾಟಕ ದ್ರೋಹಿಗಳು

ಬೆಂಗಳೂರು ಜುಲೈ ೨೭:




ಶುಕ್ರವಾರ ಹಾಗೂ ಶನಿವಾರ ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲಿ ನಡೆದ ಬಾಂಬ್ ಸ್ಫೋಟ ಖಂಡನೀಯ ಹಾಗೂ ಒಂದು ರಾಕ್ಷಸೀ ಕೃತ್ಯವಾಗಿದೆ. ಅದೂ ಅಲ್ಲದೆ ಭಾರತದಲ್ಲಿ ನಡೆದ ಪ್ರತೀ ಸ್ಫೋಟಗಳೂ ಶುಕ್ರವಾರ, ಶನಿವಾರದಂದೇ ಆಗಿರುವುದು ವಿಶೇಷ. ಇದರ ಹಿಂದಿನ ಕಾಣದ ಕೈಗಳ ಕೈವಾಡವನ್ನು ಪತ್ತೆ ಹಚ್ಚಿ, ಇಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು.
ಇನ್ನೊಂದು ವಿಚಿತ್ರ ವಿಷಯವೆಂದರೆ ಬಾಂಬ್ ಸ್ಫೋಟ ನಡೆದಿರುವುದು ಕೇವಲ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ. ಇದು ಮೇಲ್ನೋಟಕ್ಕೆ ಈ ಸರಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರವೆಂದು ಯಾರು ಬೇಕಾದರೂ ಹೇಳಬಹುದು.ಇದನ್ನೂ ಕೂಡ ಕೇವಲ ರಾಜಕೀಯ ದೃಷ್ಟಿಯಿಂದ ನೋಡುತ್ತಿರುವುದು ಕೆಲವು ರಾಜಕಾರಣಿಗಳ ತಿಕ್ಕಲುತನವನ್ನು ತೋರಿಸುತ್ತದೆ. ಬೆಂಗಳೂರಿನಲ್ಲಿ ನಡೆದಿರುವ ಸ್ಫೋಟಕ್ಕೆ ಸ್ಥಳೀಯ ರಾಜಕಾರಣಿಗಳು ಹಾಗೂ ಸ್ಥಳೀಯ ಜನರ ಬೆಂಬಲ ಇರುವುದಂತೂ ಖಂಡಿತಾ ಸತ್ಯ. ಇದು ಯು.ಪಿ.ಎ. ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಭಾರತೀಯ ಜನತಾ ಪಕ್ಷ ಜಾರಿಗೆ ತಂದಿದ್ದ ಟಾಡಾ, ಪೋಟಾ ಮುಂತಾದ ಕಾಯಿದೆಗಳನ್ನು ರದ್ದು ಮಾಡಿರುವುದು ಭಯೋತ್ಪಾದಕರ ಪರ ತನ್ನ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಈಗ ಭಯೋತ್ಪಾದಕತೆಯನ್ನು ತನ್ನ ಕೀಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಯು.ಪಿ.ಎ ಹಾಗೂ ಎಡಪಕ್ಷಗಳ ಹೀನ, ಕೀಳು ಪ್ರವೃತ್ತಿಯನ್ನು ತೋರಿಸುತ್ತದೆ. ಓಟಿಗಾಗಿ ಈ ದೇಶವನ್ನು ಮಾರಲೂ ಹಿಂಜರಿಯದ ಈ ಕಾಂಗ್ರೆಸ್ಸ್, ಎಡಪಕ್ಷಗಳು ಇಂದು ಭಾರತ ದೇಶವನ್ನು ಅಸ್ಥಿರತೆ, ಭಯೋತ್ಪಾದಕತೆ, ಅರಾಜಕತೆಯಿಂದ ಬಳಲುವಂತೆ ಮಾಡಿವೆ.
ಈ ದೇಶದ ಜನ, ರಾಜಕಾರಣಿಗಳು, ಸರಕಾರ, ನ್ಯಾಯಾಲಯಗಳು ಇಂದು ಎಚ್ಚೆತ್ತುಕೊಳ್ಳಬೇಕಾಗಿದೆ, ಇಂತಹ ಸ್ಫೊಟಗಳ ಹಿಂದಿನ ದುಷ್ಟ ಶಕ್ತಿಗಳನ್ನು ಕಂಡುಹಿಡಿದು ಅವರನ್ನು ಗಲ್ಲಿಗೇರಿಸಿದರೆ ಮಾತ್ರ ಮುಂದೆ ಇಂತಹ ಕೃತ್ಯಗಳು ಮರುಕಳಿಸಲಾರದೇನೋ. ಆದರೆ ಬರೇ ಓಟಿಗಾಗಿ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ಜಾತ್ಯಾತೀತ(???) ಪಕ್ಷಗಳು ಇಂದು ಇದರ ಫಲವನ್ನು ಈ ರೀತಿಯಾಗಿ ಅನುಭವಿಸಬೇಕಾಗಿದೆ. ಒಂದು ನುಡಿಯೇ ಇದೆ. "All muslims are not terrorists......But All Terrorists are Muslims". (ಆದರೆ L.T.T.E ಮುಂತಾದ ಭಾರತೀಯ ಭಯೋತ್ಪಾದಕರು ಮಾತ್ರ ಇದಕ್ಕೆ ಅಪವಾದ).
ಈ ಸ್ಫೋಟಗಳು ಖಂಡಿತಾ ಬಿ.ಜೆ.ಪಿ. ಸರಕಾರವನ್ನು ಅಸ್ಥಿರಗೊಳಿಸಲು ನಡೆಸಿದ ಒಂದು ಕೃತ್ಯ ಹಾಗೂ ಇದರಲ್ಲಿ ಖಂಡಿತಾ ಕೆಲವು ದೇಶದ್ರೋಹಿ ಸಂಘಟನೆಗಳ ಕೈವಾಡ ಇರುವುದು ಸ್ಪಷ್ಟ. ಈಗ ಕರ್ನಾಟಕ ಸರಕಾರ ಎಚ್ಚೆತ್ತುಕೊಂಡು, ಕರ್ನಾಟಕದಲ್ಲಿ ಸಕ್ರಿಯವಾಗಿರುವ ಕೆಲವು ಜನದ್ರೋಹಿ, ದೇಶದ್ರೋಹಿ, ಕರ್ನಾಟಕ ದ್ರೋಹಿ ಸಂಘಟನೆಗಳ ನಾಯಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಕೆಲವು ಮಾಹಿತಿಗಳು ಸಿಗಬಹುದು. ಆದರೆ ಕರ್ನಾಟಕದಲ್ಲಿ ನಡೆದಿರುವ ಕೃತ್ಯಗಳ ಹಿಂದೆ ತಮಿಳು ಸಂಘಟನೆಗಳ ಕೈವಾಡವನ್ನು ಕೂಡಾ ತಳ್ಳಿಹಾಕುವಂತಿಲ್ಲ. ಏಕೆಂದರೆ ಈಗಾಗಲೇ ಹೊಗೆನಕಲ್ ವಿವಾದ ಹೊಗೆಯಾಡುತ್ತಿರುವುದರಿಂದ ಪೋಲಿಸರು ಇವರ ಬಗ್ಗೆಯೂ ಒಂದು ಕಣ್ಣು ಇಟ್ಟಿರುವುದು ಕ್ಷೇಮಕರ.
ಇದನ್ನು ತಡೆಗಟ್ಟಲು ಕೆಲವು ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.
೧. ಪರ ರಾಜ್ಯದಿಂದ (ಮುಖ್ಯವಾಗಿ ತಮಿಳುನಾಡಿನಿಂದ) ಬರುವ ಎಲ್ಲರಿಗೂ ಪರಿಚಯ ಪತ್ರ ಕಡ್ಡಾಯ ಮಾಡಬೇಕು.
೨. ಹೊರದೇಶದ ಯಾವುದೇ ಪ್ರಜೆ ಪೋಲಿಸ್ ಠಾಣೆಯಲ್ಲಿ ತನ್ನ ಎಲ್ಲ ದಾಖಲೆಗಳು, ಪರಿಚಯ ಪತ್ರ ನೀಡಬೇಕು.
೩. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಚೈನಾ, ಶ್ರೀಲಂಕಾ, ಅಫ್‌ಘನಿಸ್ತಾನ ದೇಶಗಳಿಂದ ಬರುವ ಎಲ್ಲ ಪ್ರಜೆಗಳನ್ನು ಕೂಲಂಕುಶವಾಗಿ ತನಿಖೆ ಮಾಡಿ, ಅವರ ಚಲನವಲನಗಳ ಬಗ್ಗೆ ನಿಗಾ ಇಡಬೇಕು.
೪. ಹಾಗೂ ಸ್ಥಳೀಯ ರಾಜಕಾರಣಿಗಳ, ಕೆಲ ಪಕ್ಷಗಳ ಕಾರ್ಯಕರ್ತರ ಚಲನವಲನದ ಬಗ್ಗೆ ನಿಗಾ ಇಡಬೇಕು.
೫. ಎಲ್ಲಾ ಅಲ್ಪ ಸಂಖ್ಯಾತ ಸಂಘಟನೆಗಳು, ಅನ್ಯ ಭಾಷಾ ಸಂಘಟನೆಗಳ ಕಾರ್ಯಕರ್ತರ ಚಲನವಲನಗಳ ಬಗ್ಗೆ ನಿಗಾ ಇಡಬೇಕು.
"ಕನ್ನಡಿಗರೇ...ನಮ್ಮ ರಾಜ್ಯವನ್ನು ನಾವೇ ರಕ್ಷಿಸಬೇಕಾಗಿದೆ....ನಮ್ಮ ದೇಶವನ್ನು ನಾವೇ ರಕ್ಷಿಸಬೇಕಾಗಿದೆ...."

Sunday, July 20, 2008

ಕೇಂದ್ರದ ಕಾಂಗ್ರೆಸ್‌ನಿಂದ ಕರ್ನಾಟಕ ವಿರೋಧಿ ನೀತಿ (ರಾಜ್ಯ ದ್ರೋಹ)

ಬೆಂಗಳೂರು ಜುಲೈ ೨೫: ಕೇಂದ್ರ ಸರಕಾರದ ತಾರತಮ್ಯದ ನೀತಿ ಕರ್ನಾಟಕದ ವಿರುದ್ಧ ನಿರಂತರ ನಡೆಯುತ್ತಿರುವುದಕ್ಕೆ ಈಗ ಕರ್ನಾಟಕ ಸರಕಾರ ಎದುರಿಸುತ್ತಿರುವ ಭೀಕರತೆಯೇ ಸಾಕ್ಷಿ:
೧) ಕೇಂದ್ರ ಸರಕಾರದಿಂದ ರೈತರಿಗೆ ರಸಗೊಬ್ಬರ ಪೂರೈಕೆಯನ್ನು ತಡೆಹಿಡಿದದ್ದು
೨) ಕೇಂದ್ರ ಸರಕಾರದಿಂದ ವಿದ್ಯುತ್ ಪೂರೈಕೆ ಸ್ಥಗಿತ (ಕರ್ನಾಟಕದ ಪಾಲಿನ ವಿದ್ಯುತ್ ಆಂಧ್ರಕ್ಕೆ ಪೂರೈಕೆ)
೩) ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲು ಒಪ್ಪದಿರುವುದು
೪) ಹೊಗೆನಕಲ್ ವಿವಾದದಲ್ಲಿ ತಮಿಳುನಾಡಿನ ಪರ ವಕಾಲತ್ತು
೫) ಕರ್ನಾಟಕಕ್ಕೆ ಇಂಧನ ಪೂರೈಕೆ ಸ್ಥಗಿತ
ಇವು ಕೇವಲ ಕೆಲವು ಉದಾಹರಣೆಗಳಷ್ಟೆ.....ಇನ್ನೂ ಪಟ್ಟಿ ಮಾಡಿದರೆ ಕೇಂದ್ರ ಸರಕಾರದ ರಾಜ್ಯದ್ರೋಹ ಮುಗಿಲು ಮುಟ್ಟಲಿದೆ. ಇದು ಕೇವಲ ರಾಜ್ಯ ಸರಕಾರವನ್ನು ಅಸ್ಥಿರ ಮಾಡುವ ಹುನ್ನಾರ.
ಇಂತಹ ಜನದ್ರೋಹಿ ಸರಕಾರವನ್ನು, ಅವರಿಗೆ ಬೆಂಬಲ ನೀಡುತ್ತಿರುವ ನಮ್ಮ ರಾಜ್ಯದ ಕಾಂಗ್ರೆಸ್ ರಾಜಕಾರಣಿಗಳು ಯಾಕೆ ಬೆಂಬಲಿಸುತ್ತಿದಾರೆ ಎಂಬುದು ತಿಳಿಯದಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾಂಗ್ರೆಸ್ ತನ್ನ ಶವಪೆಟ್ಟಿಗೆಗೆ ತಾನೇ ಮೊಳೆ ಹೊಡೆದುಕೊಳ್ಳುವ ದಿನ ದೂರವಿಲ್ಲ (ಅದೀಗಲೇ ಆರಂಭವಾಗಿದೆ).ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಈ ಕಾಂಗ್ರೆಸಿಗರು, ಈಗ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ರಾಜ್ಯದ ಕಾಂಗ್ರೆಸಿಗರ ರಾಜ್ಯನಿಷ್ಠೆಯನ್ನು ಈಗ ಸಂಶಯಿಸುವಂತಾಗಿದೆ.
ಈ ಜನದ್ರೋಹಿ, ಕರ್ನಾಟಕ ದ್ರೋಹಿ , ಕನ್ನಡಿಗರ ವಿರೋಧಿ ಕೇಂದ್ರ ಸರಕಾರವನ್ನು ಕಿತ್ತೊಗೆಯಲು, ಕಾಂಗ್ರೆಸ್ಸನ್ನು ಈ ರಾಜ್ಯದಿಂದಲೇ ನಿರ್ನಾಮ ಮಾಡಲು ಈ ರಾಜ್ಯದ ಜನ ಪಣತೊಡಬೇಕಾಗಿದೆ.

ಕನ್ನಡಿಗರೇ ಎದ್ದೇಳಿ........ಕನ್ನಡಿಗರ ಮೇಲಿನ ದೌರ್ಜನ್ಯಕ್ಕೆ ಸೂಕ್ತ ಉತ್ತರ ಕೊಡೋಣ....ಮುಂದಿನ ಮತದಾನದಲ್ಲಿ ...ಕಾಂಗ್ರೆಸ್‌ಗೆ ಒಂದೂ ಸ್ಥಾನ ಗಳಿಸಲು ಅವಕಾಶ ಕೊಡದೆ ನಮ್ಮ ಸೇಡು ತೀರಿಸಿಕೊಳ್ಳಬೇಕಾಗಿದೆ.

ಲಾಲ್‌ಬಾಗ್‌ಗೊಂದು ರಜಾದಿನದ ಭೇಟಿ
















ಲಾಲ್‌ಬಾಗ್‌ನ ಸೌಂದರ್ಯ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಾಗ...................

Tuesday, July 08, 2008

ಮಂಗನಿಂದ ಮಾನವ ಅಥವಾ ಮಾನವನಿಂದ ಮಂಗ?








ಬೆಂಗಳೂರು ಜುಲೈ 8 : ಇಲ್ಲಿ ಕೊಟ್ಟಿರುವ ಕೆಲವು ಫೋಟೋ ನೋಡಿದರೆ ನಿಮಗೆ ಏನನ್ನಿಸುತ್ತೆ?. ಈಗ ಇರುವ ಸನ್ನಿವೇಶದಲ್ಲಿ ಎಲ್ಲರೂ ಮಂಗನಿಂದ ಮಾನವ ಎಂಬ ಇತಿಹಾಸ ಬಲ್ಲವರಾಗಿದ್ದಾರೆ. ಆದರೆ ಈಗ ಮಾನವ ತನ್ನ ಮೂಲ ರೂಪ ಕಳೆದುಕೊಂಡು ಮಂಗನ ರೂಪ ಹೊಂದುತ್ತಿದ್ದಾನೆ. ಇದು ಕೆಲ ವಿಜ್ಞಾನಿಗಳ ಖಚಿತ ಅಭಿಪ್ರಾಯ.
ಮನುಷ್ಯ ತಾನು ತಿನ್ನುವ ಪ್ರತಿ ಆಹಾರದ ಕಣದಲ್ಲಿಯೂ ವಿಷಕರ ಅಂಶಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆ ವಿಷ ಮಾನವನ ಅಸ್ಥಿ, ಕ್ರೋಮೋಜೋಮ್ ಗಳ ಒಳಗೆ ನಿಧಾನವಾಗಿ ಸೇರಿಕೊಂಡು ಪ್ರತಿ ತಲೆಮಾರಿಗೂ ಬದಲಾಗುತ್ತಿರುತ್ತದೆ. ಆದ್ದರಿಂದ ನಿಧಾನವಾಗಿ ಮಾನವ ತನ್ನ ನಿಜ ರೂಪವನ್ನು ಕಳೆದುಕೊಂಡು ತನ್ನ ಪೂರ್ವಜ ಮಂಗನ ರೂಪ ತಾಳುತ್ತಿದ್ದಾನೆ. ಅಂದರೆ ಇದು ನೂರಿನ್ನೂರು ವರ್ಷಗಳಲ್ಲಿ ಆಗುವುದಲ್ಲ.....ಕ್ರಮೇಣ ಮನುಷ್ಯನ ಆಕಾರ ತಲೆಮಾರಿನಿಂದ ತಲೆಮಾರಿಗೆ ಬದಲಾಗಿ ಮಂಗನ ರೂಪ ಅಥವಾ ವಿಚಿತ್ರ ರೂಪ ಹೊಂದಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳಲಿದ್ದಾನೆ. ತದನಂತರ ಮಾನವನ ಅಧಿಪತ್ಯ ಈ ಜಗತ್ತಿನಲ್ಲಿ ಕೊನೆಗಾಣಲಿದೆ.
ಕೆಲವು ಪೂರ್ವಜರು ಈ ಬಗ್ಗೆ ಆಗಲೇ ಭವಿಷ್ಯ ನುಡಿದಿದ್ದಾರೆ. ಅಂದರೆ ಕಾಲಕ್ರಮೇಣ ಮನುಷ್ಯ ತನ್ನ ಅಧಿಪತ್ಯವನ್ನು ಕಳೆದುಕೊಳ್ಳಲಿದ್ದಾನೆ. ಮನುಷ್ಯನ ಜಾಗದಲ್ಲಿ ಇನ್ನೊಂದು ಪ್ರಾಣಿ ತನ್ನ ಅಧಿಪತ್ಯವನ್ನು ಸಾಧಿಸಲಿದೆ. ಆಗ ಈ ಭೂಮಿಯ ರೂಪವೇ ಬದಲಾಗಲಿದೆ. ಭೂಮಿ ತನ್ನ ಇರವನ್ನು ಬದಲಿಸಲಿದೆ, ಕೆಲವು ದೇಶಗಳು ಮಾಯವಾಗಲಿವೆ.
ಕೆಲವು ಶಾಸ್ತ್ರಜ್ಞರ ಪ್ರಕಾರ ಭಾರತವು ಮೊದಲು ಈಗ ಆಸ್ಟ್ರೇಲಿಯಾ ಖಂಡದ ಜಾಗದಲ್ಲಿ ಇತ್ತು. ಅದು ಕ್ರಮೇಣ ಚಲಿಸಿ, ಚಲಿಸಿ ಏಶ್ಯಾ ಖಂಡಕ್ಕೆ ಹೊಂದಿಕೊಂಡಿತು. ಅದು ಮತ್ತೆ, ಮತ್ತೆ ಚಲಿಸಿ ಹಿಮಾಲಯ ಪರ್ವತ ಉತ್ಪತ್ತಿಯಾಯಿತು.
ಭಯ ಬೀಳಬೇಡಿ...ಇದು ನಡೆಯಲು ಇನ್ನೂ ಕೆಲ ಶತಮಾನಗಳು ಇವೆ. ಈಗಲೇ ಗಾಬರಿ ಬೀಳದಿರಿ.

Monday, July 07, 2008

ಬೆಂಗಳೂರಿನಲ್ಲಿ ನಾಯಿಗಳ ಕಾಟ (ನಾಲ್ಕು ಕಾಲಿನ)


ಬೆಂಗಳೂರು ಜುಲೈ 07 : ಬೆಂಗಳೂರಿನಲ್ಲಿ ನಾಯಿಗಳ ಕಾಟ ಜಾಸ್ತಿಯಾಗಿದೆ. ಇದಕ್ಕೆ ಕಾರಣ ಎರಡು ಕಾಲಿನ ನಾಯಿಗಳೆಂದು ಬೆಂಗಳೂರು ತುಂಬಾ ಹಬ್ಬಿದೆ.
ಅಲ್ಲ ಮಾರಯ್ರೆ...ಬೆಳಿಗ್ಗೆ ಎದ್ದು ಹಾಲು ತರಲು ಹೋದರೆ ನಾಯಿಗಳು ಅಟ್ಟಿಸಿಕೊಂಡು ಬರುವುದಾ?....ಅದನ್ನು ಸಾಕಿದ ಎರಡು ಕಾಲಿನ ನಾಯಿಗಳು ಕೂಡಾ ನಾಲ್ಕು ಕಾಲಿನ ನಾಯಿಗಳಿಗೇ ಸಪೋರ್ಟು...
"ಏನಾಯ್ತ್ರೀ ಈಗ?..ಯಾಕ್ರೀ ಹಾಗಾಡ್ತೀರಾ?...ನಾಯಿ ಏನಾದ್ರೂ ಕಚ್ಚಿತಾ?...ಅಟ್ಟಿಸಿಕೊಂಡು ಬಂತು ಅಷ್ಟೇ ತಾನೇ?.." ಎಂಬ ಹುಚ್ಚು ಉತ್ತರ. ಕಂಗಾಲಾದೆ ನಾನು ಈ ಉತ್ತರದಿಂದ. ಅಲ್ಲ ನಾಯಿ ಕಚ್ಚಿದರೆ ಮಾತ್ರ ಇವರಿಗೆ ಲೆಕ್ಕ...ಇಲ್ಲದಿದ್ದಲ್ಲಿ ಲೆಕ್ಕಕ್ಕಿಲ್ಲ.
ಅಲ್ಲರೀ ನಿಮಗೆ ನಾಯಿ ಸಾಕಬೇಕೆಂದರೆ ನಿಮ್ಮ ಬೆಡ್ ರೂಮಿನಲ್ಲಿ ಇಟ್ಟುಕೊಂಡು ಮುದ್ದು ಮಾಡ್ರೀ...ಯಾರು ಬೇಡ ಅಂತಾರೆ?. ಇದನ್ನು ಹೊರಗೆ ಬಿಟ್ಟು ಇದ್ದವರಿಗೆಲ್ಲ ತೊಂದರೆ ಕೊಟ್ಟು ಮಜಾ ಅನುಭವಿಸುವ ಈ ನಾಲ್ಕು ಕಾಲಿನ ನಾಯಿಗಳನ್ನು ಯಾಕೆ ಕಾರ್ಪೋರೇಷನ್ ನಾಯಿ ಹಿಡಿಯುವ ತಂಡ ಹಿಡಿದು ಹಾಕಬಾರದು.

"ಬೆಂಗಳೂರಿನಲ್ಲಿ ಈ ನಾಲ್ಕು ಕಾಲಿನ ನಾಯಿಗಳ ಕಾಟಕ್ಕೆ ಕಾರಣ ಅದನ್ನು ಸಾಕುವ ಎರಡು ಕಾಲಿನ ನಾಯಿಗಳು"

ಎರಡು ಹಾಗೂ ನಾಲ್ಕು ಕಾಲಿನ ನಾಯಿಗಳ ಹೋಲಿಕೆಯನ್ನು ನೀವು ಈ ಪೇಜಿನಲ್ಲಿ ನೋಡಬಹುದು.....(ಹ್ಹ ಹ್ಹ ಹ್ಹಾ)