Sunday, October 31, 2010

ಪ್ರಾರ್ಥನಾ ಶಾಲೆ ಮತ್ತು ಟ್ರಾಫಿಕ್ ಕಿರಿಕ್ಕು






ಬೆಂಗಳೂರಿನ ಪದ್ಮನಾಭನಗರದ ಹತ್ತಿರ ಇರುವ ಪ್ರಾರ್ಥನಾ ಶಾಲೆಯಿಂದ ಸಾರ್ವಜನಿಕರಿಗೆ ಆ ರಸ್ತೆಯಲ್ಲಿ ಓಡಾಡಲೂ ಆಗದ ದುಸ್ತರ ಪರಿಸ್ಥಿತಿ ಎದುರಾಗಿದೆ. ಆ ಶಾಲೆಗೆ ಬರುವ ಪ್ರತೀ ಒಬ್ಬ ಮಗುವಿಗೆ ಒಂದು ಕಾರು ಆ ರಸ್ತೆಯಲ್ಲಿ ಓಡಾಡುವುದರಿಂದ ದಿನ ನಿತ್ಯ ಅಲ್ಲಿ ಸಾರ್ವಜನಿಕ ವಾಹನಗಳು, ದ್ವಿಚಕ್ರ ವಾಹನಗಳು ಓಡಾಡಲು ಅಲ್ಲದೆ ನಡೆದುಕೊಂಡು ಹೋಗಲೂ ಸಹ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ಸಂಚಾರಿ ಪೋಲಿಸರಿಗೂ ದಿನ ನಿತ್ಯ ಕಿರಿಕಿರಿ. ಅಲ್ಲದೆ ಉತ್ತರಹಳ್ಳಿಯಿಂದ ಕುಮಾರಸ್ವಾಮಿ ಬಡಾವಣೆಗೆ ಹೋಗಲು ಬಲಕ್ಕೆ ತಿರುಗುವ ಅವಕಾಶವಿಲ್ಲ. ಅದರೆ ಈ ಸಂಚಾರಿ ನಾಮಫಲಕದ ಮುಂಭಾಗವೇ ರಾಜಕೀಯ ಪಕ್ಷದ ಬ್ಯಾನರ್ ರಾರಾಜಿಸುತ್ತಿದೆ. ಇದರಿಂದ ಈ ನಾಮಫಲಕ ಕಾಣಿಸದಿರುವುದರಿಂದ ಅನೇಕರು ಬಲಕ್ಕೆ ತಿರುಗಿಸಲು ಹೋಗಿ, ಸುಮ್ಮನೇ ದಂಡ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಆ ಶಾಲೆಯ ಮಕ್ಕಳೂ ಕೂಡಾ ತಾವು ಅಭದ್ರತೆಯಿಂದ ಓಡಾಡುವಂತಾಗಿದೆ. ಇಲ್ಲಿ ಓಡಾಡುವ ವಾಹನಗಳಿಂದ ರಸ್ತೆ ದಾಟಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ದಾರಿಹೋಕರಿಗೆ ಹಾಗೂ ಸಾರ್ವಜನಿಕ ವಾಹನಗಳಿಗೆ ಒಡಾಡಲು ದುಸ್ತರವಾಗುವಂತೆ ಮಾಡಿದ ಈ ಪ್ರಾರ್ಥನಾ ಶಾಲೆಯನ್ನು ಆ ಜಾಗದಿಂದ ಎತ್ತಂಗಡಿ ಮಾಡಿಸದಿದ್ದರೆ ಮುಂದೆ ಆ ರಸ್ತೆಯಲ್ಲಿ ಖಂಡಿತಾ ಓಡಾಡಲು ಸಾದ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ದಯವಿಟ್ಟು ಅಲ್ಲಿನ ಜನನಾಯಕರು ಸಾರ್ವಜನಿಕ ಹಿತಾಸಕ್ತಿ ಕಾಯಿದೆಯ ಅನುಸಾರ ಆ ಶಾಲೆಯ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.

Thursday, October 28, 2010

ಅರುಂಧತಿ ರಾಯ್ ಎಂಬ ಒಬ್ಬ ದೇಶದ್ರೋಹಿ ಮಹಿಳೆ



ಅರುಂಧತಿ ರಾಯ್ ಎಂಬ ಒಬ್ಬ ದೇಶದ್ರೋಹಿ ಮಹಿಳೆ ಇವತ್ತು ನಮ್ಮ ದೇಶದ ವಿರುದ್ದವೇ ಕೆಲವು ಹೇಳಿಕೆಗಳನ್ನು ಧೈರ್ಯವಾಗಿ ಹೇಳುತ್ತಿರುವುದು ನಮ್ಮ ದೇಶದ ದುರ್ದೈವ. ಈ ದೇಶವಿರೋಧಿ ಹೇಳಿಕೆಗಳಿಗೆ ನಮ್ಮ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ನಾವು ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ.

ಈ ಮಹಿಳೆ ನಕ್ಸಲೈಟ್‌ಗಳಿಗೆ ಬೆಂಬಲ, ಪಾಕಿಸ್ತಾನೀ ಉಗ್ರರಿಗೆ ಬೆಂಬಲ ನೀಡುತ್ತಿರುವುದು ನಮ್ಮ ದೇಶದಲ್ಲಿ ಭಾರತೀಯರೇ ನಮ್ಮ ದೇಶದ ವಿರುದ್ದ ಕೆಲಸ ಮಾಡುತ್ತಿರುವುದಕ್ಕೆ ಸಾಕ್ಷ್ಯವಾಗಿದೆ. ಇಂತಹ ದೇಶದ್ರೋಹಿಗಳನ್ನು ಖಂಡಿತಾ ಬಹಿರಂಗವಾಗಿ ನೇಣಿಗೆ ಹಾಕಬೇಕು.

ಇಂತಹಾ ದೇಶದ್ರೋಹಿಗಳನ್ನು ಕೇಶ ಮುಂಡನ ಮಾಡಿ,ಕತ್ತೆ ಮೇಲೆ ಮೆರವಣಿಗೆ ಮಾಡಿ, ಚಪ್ಪಲಿ ಸೇವೆ ಮಾಡಿ, ಬಹಿರಂಗವಾಗಿ ನೇಣಿಗೆ ಹಾಕಬೇಕು. ಮತ್ತೆ ಯಾರೂ ದೇಶದ್ರೋಹ ಮಾಡಲು ಹಿಂಜರಿಯಬೇಕು.
ಥೂ.....ಇಂತಹ ಹೆಣ್ಣುಮಗಳನ್ನು ಹೆತ್ತ ಭಾರತ ಮಾತೆ.....ಇವತ್ತು ಸಂಕಟ ಪಡುತ್ತಿದ್ದಾಳೆ.

ಉಗೀರಿ ಅವಳ ಮುಖಕ್ಕೆ....ಧಿಕ್ಕಾರವಿರಲಿ ಅವಳ ಜನ್ಮಕ್ಕೆ......

Monday, July 19, 2010

ಎಂ.ಇ.ಎಸ್ ಮತ್ತು ಶಿವಸೇನೆ ಎಂಬ ದೇಶದ್ರೋಹಿ ಸಂಘಟನೆಗಳು



ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕರ (ಎಂ.ಇ.ಎಸ್ ಮತ್ತು ಶಿವಸೇನೆ) ಗಲಭೆಯಲ್ಲಿ ಅಲ್ಲಿನ ಜನರಿಗೆ ತಾವು ಕಾಶ್ಮೀರದಲ್ಲಿ ಇರುವಂತೆ ಭಾಸವಾಗಿರುವುದರಲ್ಲಿ ಸಂಶಯವಿಲ್ಲ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮುಸ್ಲಿಮ್ ಭಯೋತ್ಪಾದಕರ ಹಲ್ಲೆ, ದೊಂಬಿಗೆ ಹೆದರಿ ಅಲ್ಲಿಂದ ಕಾಲ್ಕಿತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅದೇ ರೀತಿ ಈ ಶಿವಸೇನೆ ಮತ್ತು ಎಂ.ಇ.ಎಸ್ ಎಂಬ ಭಯೋತ್ಪಾದಕ ಸಂಘಟನೆಗಳ ದೊಂಬಿಗೆ ಬೆಳಗಾವಿಯ ಕನ್ನಡ ಹಾಗೂ ಮರಾಠಿ ಮಂದಿ ತತ್ತರಗೊಂಡಿದ್ದಾರೆ.
ಇದುವರೆಗೂ ಸೋದರ ಭಾವನೆಯಿಂದ, ಶಾಂತವಾಗಿದ್ದ ಬೆಳಗಾವಿ ಈ ಭಯೋತ್ಪಾದಕರ ಹಿಡಿತಕ್ಕೆ ಸಿಕ್ಕು ಇಂದು ಮತ್ತೊಂದು ಕಾಶ್ಮೀರವಾಗಿದೆ. ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆ ಕೇವಲ ಮರಾಠಿಗಳು ಮಾತ್ರ ಹಿಂದುಗಳು ಎಂಬ ಸಂಕುಚಿತ ಭಾವನೆಯನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ಶಿವಸೇನೆ ಇವತ್ತು ಎಂ.ಇ.ಎಸ್ ಎಂಬ ಮತ್ತೊಂದು ಭಯೋತ್ಪಾದಕ ಸಂಘಟನೆಯ ಜತೆ ಸೇರಿ ಕನ್ನಡಿಗರ ವಿರುದ್ದ ಕತ್ತಿ ಮಸೆಯುತ್ತಿರುವುದು ಶಾಂತಿಪ್ರಿಯರಾದ ಕನ್ನಡಿಗರನ್ನು ಕೆರಳಿಸಿದೆ.
ಬೆಳಗಾವಿಯಲ್ಲಿ ವಾಸಿಸುತ್ತಿರುವ ಮರಾಠಿಗಳೇ ಈ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿರುವುದು, ಈ ಭಯೋತ್ಪಾದಕ ಸಂಘಟನೆಗಳು ಮಹಾರಾಷ್ಟ್ರದಿಂದ ರೌಡಿಗಳನ್ನು ಕರೆದುಕೊಂಡು ಬಂದು ಇಲ್ಲಿ ಗಲಭೆ ಸೃಷ್ಟಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಸಂಘಟನೆಗಳಿಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೂ ನಂಟು ಇರುವ ಬಗ್ಗೆ ಕೂಲಂಕುಶ ತನಿಖೆ ನಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ದೇಶದಲ್ಲಿ ಹಿಂದೂಗಳ ವಿರುದ್ದವೇ ಗಲಭೆ, ದೊಂಬಿ ಮಾಡುತ್ತಾರೆಂದರೆ ಈ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ನಂಟು ಇಲ್ಲದಿರಲು ಸಾಧ್ಯವಿಲ್ಲ.
ಈ ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾದ ಬಾಳಥಾಕ್ರೆ ಎಂಬ ಭಯೋತ್ಪಾದಕ ಈಗ ಮುಂಬೈನಲ್ಲಿ ತನ್ನ ನೆಲೆ ಕಳೆದುಕೊಂಡು ಈಗ ಬೆಳಗಾವಿಯಲ್ಲಿ ತನ್ನ ಹೀನ ಕೃತ್ಯ ಶುರು ಮಾಡಲು ತಯಾರಾಗಿದ್ದಾನೆ. ಇದನ್ನೆಲ್ಲಾ ಕಣ್ಣು ಮುಚ್ಚಿಕೊಂಡು ನೋಡುತ್ತಿರುವ ಕರ್ನಾಟಕದ ಬಿ.ಜೆ.ಪಿ ಸರಕಾರ ಕನ್ನಡಿಗರ ವಿರುದ್ದ , ಕರ್ನಾಟಕದ ವಿರುದ್ದ ತನ್ನ ಬಹಿರಂಗ ಬೆಂಬಲವನ್ನು ಈ ಭಯೋತ್ಪಾದಕ ಸಂಘಟನೆಗಳಿಗೆ ನೀಡಿರುವುದು ಖಂಡನೀಯ.

Thursday, June 10, 2010

ನಗರ ಪಾಲಿಕೆ ಮತ್ತು ಕಾರ್ಯ ದಕ್ಷತೆ




ನೀವು ಮೇಲೆ ನೋಡುತ್ತಿರುವುದು ಬೆಂಗಳೂರಿನ ಬಿನ್ನಿ ಮಿಲ್ ರಸ್ತೆಯಲ್ಲಿ ದಿನಾಂಕ ೦೮-೦೬-೨೦೧೦ರಂದು ಬೆಳಿಗ್ಗೆ ನಾನು ಕಂಡ ಹೃದಯ ವಿದ್ರಾವಕ ದೃಶ್ಯ. ದನವೊಂದು ಅಪಘಾತಕ್ಕೆ ಈಡಾಗಿ ಸತ್ತು ಬಿದ್ದಿದೆ. ಅದನ್ನು ಎರಡು ದಿನವಾದರೂ ಸಂಬಂಧ ಪಟ್ಟವರು ತೆಗೆದಿಲ್ಲ. ಅದೇ ದಾರಿಯಲ್ಲಿ ಓಡಾಡುವ ಸರಕಾರಿ ವಾಹನಗಳು, ಪೋಲೀಸರು ಕೂಡಾ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಆ ದನ ಕೊಳೆತು ನಾರುತ್ತಿದೆ. ನಾಯಿ, ಕಾಗೆಗಳು ಅದರ ಮಾಂಸವನ್ನು ಕಚ್ಚಿ ಕಚ್ಚಿ ಎಳೆದು ತಿನ್ನುತ್ತಿವೆ. ಕೆಲ ಸಮಯದ ನಂತರ ಆ ನಾಯಿಗಳಿಗೆ ಹುಚ್ಚು ಹಿಡಿಯುವ ಸಾಧ್ಯತೆಯೂ ಇಲ್ಲದಿಲ್ಲ. ಆ ನಾಯಿಗಳು ದಾರಿಹೋಕರಿಗೆ ಕಚ್ಚದೇ ಇಅರಲು ಸಾಧ್ಯವೇ ಇಲ್ಲ. ಈ ದನ ಸತ್ತು ಇವತ್ತಿಗೆ ಮೂರು ದಿನ ಆದರೂ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂದರೆ ನಮ್ಮ ದರಿದ್ರ ಕರ್ನಾಟಕ ಸರಕಾರ, ದರಿದ್ರ ಬಿ.ಬಿ.ಎಂ.ಪಿ.ಗಳು ನಿದ್ದೆ ಮಾಡುತ್ತಿವೆಯೇ?. ಇದನ್ನು ನಾನು ಸಮೀಪದಲ್ಲೇ ಇದ್ದ ಪೋಲೀಸರಿಗೆ ತಿಳಿಸಿದರೂ ಅವರು ಅಸಡ್ಡೆ ಮಾಡಿರುತ್ತಾರೆ.
"ರೀ...ಅದು ನಮ್ಮೆ ಕೆಲಸ ಅಲ್ಲ. ಕಾರ್ಪೋರೇಶನ್ ಅಫೀಸಿಗೆ ಫೋನ್ ಮಾಡಿ ಹೇಳಿ. ಆ ಬೋಳೀ ಮಕ್ಳೇ ಇಲ್ಲಿ ತಂದು ಹಾಕಿರುತ್ತಾರೆ." ಎಂಬ ಮಾತು ಹೇಳಿದರು. ಅವರ ನಂಬರ್ ಕೊಡಿ ಎಂದರೆ...."ನಮಗೆ ಗೊತ್ತಿಲ್ಲ" ಎಂಬ ಹಾರಿಕೆಯ ಉತ್ತರ ಬೇರೆ.

ಇವತ್ತು ಸರಕಾರದ ಕಾರ್ಯ ದಕ್ಷತೆ ಸತ್ತು ಹೋಗಿದೆ. ದುಡ್ಡು ಕೊಡದೆ ಯಾವ ಕೆಲಸವೂ ಆಗುವುದಿಲ್ಲ. ಆದರೆ ಇಂತಹ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಕ್ಕೂ ಇದು ಅನ್ವಯವಾದರೆ, ಈ ಸರಕಾರ ಇದ್ದೂ ಸತ್ತಂತೆ. ಒಬ್ಬ ಅಪ್ರಯೋಜಕ ಮುಖ್ಯಮಂತ್ರಿ, ಭ್ರಷ್ಟ ಮಂತ್ರಿಗಳನ್ನು ಒಳಗೊಂಡಿರುವ ಈ ಸರಕಾರ ಸಾರ್ವಜನಿಕರ ಬಗ್ಗೆ ಇನ್ನೆಷ್ಟು ಕಾಳಜಿ ತೋರಿಸಬಹುದು?.

Friday, June 04, 2010

ಕನ್ನಡ ಹಾಗೂ ಕರ್ನಾಟಕ ದ್ರೋಹಿಗಳು

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮ್ಮೇಳನ ಈಗ ರೈತರ ಎದೆಯಲ್ಲಿ ಭಾರೀ ಭಯ ಹುಟ್ಟಿಸಿದೆ. ಬಂಡವಾಳ ಹೂಡಿಕೆಯ ನೆಪದಲ್ಲಿ ಉದ್ಯೋಗ ಸೃಷ್ಟಿಯಾದರೂ ನಮ್ಮ ರೈತರಿಗೆ ಚಿಕ್ಕಾಸಿನ ಉಪಯೋಗವೂ ಇಲ್ಲ.
ಇನ್ನು ಶುರುವಾಗುತ್ತೆ ನೋಡಿ, ಈ ಸರಕಾರ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ, ರೈತರಿಗೆ ಸೇರಬೇಕಾದ ನೀರು, ವಿದ್ಯುತ್ ಮುಂತಾದವುಗಳನ್ನು ಕಸಿದುಕೊಂಡು ಕರ್ನಾಟಕ ರಾಜ್ಯದ ರೈತರಿಗೆ ಛಡಿ ಏಟು ನೀಡುತ್ತದೆ. ಈ ಬಿ.ಜೆ.ಪಿ. ಸರಕಾರ ಯಾಕಾದರೂ ಬಂತು ಎಂದು ರೈತರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ದೇವರೇ..ಈ ರಾಜ್ಯವನ್ನು ಈ ಬಿ.ಜೆ.ಪಿ. ಎಂಬ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಹಾಗೂ ರೈತ ವಿರೋಧಿ ಸರಕಾರದಿಂದ ಯಾರು ಕಾಪಾಡುತ್ತಾರೋ?. ಸಾಂಸ್ಕೃತಿಕ ಸೂಳೆಗಾರಿಕೆ ನಡೆಸುತ್ತಿರುವ ಐ.ಟಿ ಹಾಗೂ ಬಿ.ಟಿ. ಮಂದಿಯಿಂದ ನಮ್ಮ ರಾಜ್ಯವನ್ನು ರಕ್ಷಿಸುವವರಾರು?. ಕೇವಲ ಉದ್ಯೋಗ ಸೃಷ್ಟಿಯ ನೆಪದಿಂದ ರೈತರನ್ನು ದಮನಿಸುವ ಕೆಲಸ ಈ ಸರಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಖಂಡಿತಾ ನಗಣ್ಯ. ಏಕೆಂದರೆ ಈ ಕನ್ನಡ ವಿರೋಧಿ, ದರಿದ್ರ ಕರ್ನಾಟಕ ಸರಕಾರ ಭಾಷಾ ಅಲ್ಪಸಂಖ್ಯಾತರಿಗೆ ಮಣೆ ಹಾಕಿ ತಾನು ಮಾತ್ರ ಈ ದೇಶವನ್ನು ಪ್ರೀತಿಸುವ ಜಾತ್ಯಾತೀತ ಪಕ್ಷ ಎಂಬುದನ್ನು ಈ ಜಗತ್ತಿಗೆ ತೋರಿಸುವ ಒಂದು ನೀಚ ಕೆಲಸ ಮಾಡುತ್ತಿದೆ.
ಈ ಯಡಿಯೂರಪ್ಪ ಈಗ ರೆಡ್ಡಿ ಸಹೋದರರ ಕೃಪಾಕಟಾಕ್ಷದಿಂದ ತಾನು ಕೂಡಾ ರಾಜ್ಯವನ್ನು ಲೂಟಿ ಮಾಡುವತ್ತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಈ ಬಿ.ಜೆ.ಪಿ. ಗೂಂಡಾಗಳಿಗೆ ಜನ ಸರಿಯಾದ ಪಾಠ ಕಲಿಸದಿದ್ದರೆ, ಮುಂದೆ ಕರ್ನಾಟಕದಲ್ಲಿ ಕನ್ನಡಿಗರೇ ಇಲ್ಲದಂತಾಗುತ್ತದೆ. ಕಾಶ್ಮೀರದಲ್ಲಿ ಹೇಗೆ ಹಿಂದೂಗಳು ಇಲ್ಲವೋ, ಅದೇ ರೀತಿ ಕರ್ನಾಟಕದಲ್ಲಿ ಕನ್ನಡಿಗರೂ ಬದುಕುವುದು ಕಷ್ಟವಾಗುತ್ತದೆ. ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಹಣ ಹೆಂಡ ಹಂಚಿ ಕಾಂಗ್ರೆಸ್ ಸಂಸ್ಕೃತಿಯನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಳವಡಿಸಿಕೊಂಡು ಚುನಾವಣೆಯ ನಂತರ ಪಕ್ಕಾ ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖವಾಗಿ ಹೊಮ್ಮಿದೆ.
ಧಿಕ್ಕಾರವಿರಲಿ ಈ ಕನ್ನಡ ದ್ರೋಹಿಗಳಿಗೆ....ಧಿಕ್ಕಾರವಿರಲಿ ಈ ಸರಕಾರಕ್ಕೆ....ಧಿಕ್ಕಾರವಿರಲಿ ಈ ಬಿ.ಜೆ.ಪಿ.ಗೆ.

Sunday, May 23, 2010

ಸಿಕ್ಸ್ ಒ ಕ್ಲಾಕ್ ಎಂಬ ಮಕ್ಮಲ್ ಟೋಪಿ ಸಂಸ್ಥೆ

ಇತ್ತೀಚೆಗೆ ಅನೇಕ ಮಕ್ಮಲ್ ಟೋಪಿ ಸಂಸ್ಥೆಗಳು ಜನರಿಂದ ಹಣ ವಸೂಲಿ ಮಾಡಿ ಬೆಂಗಳೂರಿನಿಂದ ಪರಾರಿಯಾಗಿವೆ. ಅದರಲ್ಲಿ ಇತ್ತೀಚೆಗೆ ಜನರಿಗೆ ಟೋಪಿ ಹಾಕಿ ಪರಾರಿಯಾಗಿರುವ “ಸಿಕ್ಸ್ ಒ ಕ್ಲಾಕ್” ಎಂಬ ಖದೀಮ ಸಂಸ್ಥೆ ಕೂಡಾ ಒಂದು.
ಜನರಿಗೆ ಪುಟಗೋಸಿ ಚಿಲ್ಲರೆ ಕಾಫಿ ಪುಡಿ ಕೊಟ್ಟು ನೂರು ರೂಪಾಯಿ ಕಟ್ಟಿಸಿಕೊಂಡು ಜನರಿಗೆ ವಾರದ ಆದಾಯದ ಆಸೆ ತೋರಿಸಿ ಕೋಟಿ ಆದಾಯಗಳಿಸಿ ಇದ್ದಕ್ಕಿದ್ದಂತೆ ಪಕ್ಕದ ಆಂಧ್ರದ ಒಬ್ಬ ಸೆಟ್ಟಿ ಬೆಂಗಳೂರಿನಿಂದ ಪರಾರಿಯಾಗಿದ್ದಾನೆ. ಅವನ ಜೊತೆ ಇದ್ದ ಇನ್ನೊಬ್ಬ ಸ್ಥಳೀಯ ನಿವಾಸಿ ಹೆಂಗಸು ಕೂಡಾ ನಾಪತ್ತೆಯಾಗಿದ್ದಾಳೆ.
ಜನ ಹಣ ಕೇಳಲು ಹೋದಾಗ ನನ್ನ ತಂದೆ ತೀರಿಹೋದರು, ನನ್ನ ತಮ್ಮ ತೀರಿ ಹೋದ ಎಂದು ಸುಳ್ಳು ಹೇಳಿ ಇಲ್ಲದ ಕಥೆ ಕಂತೆ ಕಟ್ಟಿ ಎಲ್ಲರನ್ನು ಸಾಗಹಾಕಿ ಜನರಿಗೆ ಚೆನ್ನಾಗಿ ಟೋಪಿ ಹಾಕಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ರೀತಿ ಮೋಸ ಮಾಡುವವರು ಹೆಚ್ಚಾಗಿ ಪಕ್ಕದ ಆಂಧ್ರ, ತಮಿಳುನಾಡಿನಿಂದ ವಲಸೆ ಬಂದವರು. ಇಲ್ಲಿ ಹಣ ಮಾಡಿ ಎಲ್ಲರಿಗೆ ಟೋಪಿ ಹಾಕಿ ಮತ್ತೆ ತಮ್ಮೂರಿಗೆ ಪಲಾಯನಗೈಯುವುದು ಇವರಿಗೆ ನೀರು ಕುಡಿದಷ್ಟು ಸಲೀಸು. ಇದಕ್ಕೆ ಉದಾಹರಣೆ ಎಂದರೆ “ವಿನಿವಿಂಕ್ ಖದೀಮ ಶಾಸ್ತ್ರಿ” ಮತ್ತು “ದಾರ್ಶನಿಕ ಫೌಂಡೇಶನ್‌ನ ಖದೀಮ ಕಳ್ಳ ಕೃಷ್ಣಮೂರ್ತಿ”. ಇವರೆಲ್ಲ ಮಾವಾಡು, ಮೀವಾಡು ಎಂದು ಮೊದಲು ಅವರ ಜಾತಿಯವರನ್ನು ಸೇರಿಸಿಕೊಂಡು ನಂತರ ಮಿಕ್ಕವರಿಗೆ ಸರಿಯಾಗಿ ಟೋಪಿ ಹಾಕಿ ಪರಾರಿಯಾಗುತ್ತಾರೆ. ಇದರಲ್ಲಿ ಸಿಕ್ಸ್ ಒ ಕ್ಲಾಕ್ ಸಂಸ್ಥೆಯ ಕಳ್ಳ ಖದೀಮನಾದ ಮಲ್ಲಿಕಾರ್ಜುನ ಸೆಟ್ಟಿ ಕೂಡಾ ಒಬ್ಬ. ಇವನು ಸ್ಥಳೀಯ ಮಹಿಳೆಯೊಬ್ಬಳೊಂದಿಗೆ ಸೇರಿಕೊಂಡು ಜನರಿಗೆ ಕಾಫಿಕುಡಿಸಿ ಚೆನ್ನಾಗಿ ಟೋಪಿ ಹಾಕಿದ್ದಾನೆ.
ಅಂದರೆ ನೂರು ರೂಪಾಯಿ ಕೊಟ್ಟು ಸದಸ್ಯರಾದರೆ ನೂರು ಗ್ರಾಂ ಕಾಫಿಪುಡಿ ಕೊಟ್ಟು ಮಿಕ್ಕಿದ ಹಣವನ್ನು ತಾನೇ ಇಟ್ಟುಕೊಂಡು ರೊಟೇಷನ್ ಮಾಡಿ ಕೆಲ ಜನರಿಗೆ ಕಮಿಷನ್ ಕೊಟ್ಟು ಆಸೆ ತೋರಿಸಿ, ಅನೇಕ ಜನರಿಂದ ಲಕ್ಷಗಟ್ಟಲೆ ಹಣ ಪಡೆದು, ಒಂದು ಕೋಟಿ ಆಗುವವರೆಗೂ ಕಾದು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಇವನನ್ನು ನಂಬಿ ಕರ್ನಾಟಕದಲ್ಲೇ ಅಲ್ಲದೆ ದೂರದ ಆಂಧ್ರ ಹಾಗೂ ತಮಿಳ್ನಾಡುಗಳಲ್ಲಿಯೂ ಜನ ಹಣ ವಿನಿಯೋಗಿಸಿ, ಮೂರು ನಾಮ ಹಾಕಿಸಿಕೊಂಡಿದ್ದಾರೆ.

ಈ ಕೆಳಗಿನ ವಿಳಾಸದಲ್ಲಿ ತಮ್ಮ ಕಛೇರಿ ತೆರೆದು ಜನರಿಗೆ ಟೋಪಿ ಹಾಕಿರುತ್ತಾರೆ.

Six ‘O’ Clock Enterprises
#50/1,1st Floor, 18th Main Road,
Muneswara Block, Bengaluru-26.
Ph:9964912581 / 9343711672

Thursday, May 20, 2010

ಯೆಡಿಯೂರಪ್ಪ ಮತ್ತು ಅನಾಥ ಕರ್ನಾಟಕ

ನಮ್ಮ ಕರ್ನಾಟಕದ ದುಸ್ಥಿತಿಯನ್ನು ಕಂಡು ದೇಶದ ಎಲ್ಲೆಡೆ ಮುಸಿಮುಸಿ ನಗುತ್ತಿರುವುದು ನನ್ನ ಹೊಟ್ಟೆ ಕಿವುಚಿದ ಹಾಗಾಗುತ್ತಿದೆ. ಗುಜರಾತ್ ಮಾದರಿ ಎಂದು ಕರ್ನಾಟಕವನ್ನು ದೇಶದ ಅತೀ ಕೀಳು ಮಟ್ಟದ ರಾಜ್ಯವನ್ನಾಗಿ ಮಾಡಿದ ಕೀರ್ತಿ ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಯೆಡಿಯೂರಪ್ಪನಿಗೆ ಸಲ್ಲಬೇಕು.

ಈ ರಾಜ್ಯವನ್ನು ಬಳ್ಳಾರಿಯ ಗಣಿ ರೌಡಿಗಳ ಕೈಗೆ ಒತ್ತೆ ಇಟ್ಟು, ರಾಜ್ಯದ ಚುನಾವಣೆ ಗೆದ್ದು, ಬಿ.ಬಿ.ಎಂ.ಪಿ.ಯನ್ನೂ ಬುಟ್ಟಿಗೆ ಹಾಕಿಕೊಂಡು ರಾಜ್ಯವನ್ನು ಇನ್ನಿಲ್ಲದಂತೆ ದೋಚುತ್ತಿರುವ ಈ ಬಿ.ಜೆ.ಪಿ. ಮಂದಿಯನ್ನು ನೋಡಿದಾಗ ನನಗೆ ದಂತೇವಾಡದಲ್ಲಿ ನಕ್ಸಲರು ಮುಗ್ದ ಜನರ ಹತ್ಯೆ ಮಾಡಿದ್ದರ ಬದಲಾಗಿ ಇಲ್ಲಿನ ಈ ಭ್ರಷ್ಟ ರಾಜಕಾರಣಿಗಳನ್ನಾದರೂ ಬಲಿತೆಗೆದುಕೊಳ್ಳಬಾರದಿತ್ತೇ ಎಂಬ ಯೋಚನೆ ಬಂದಿದ್ದಂತೂ ನಿಜ.

ಒಬ್ಬ ಅಯೋಗ್ಯ ( ಆ ಹುದ್ದೆಗೇ ಅಯೋಗ್ಯ) ಮುಖ್ಯಮಂತ್ರಿ, ನಾಲಾಯಕ್ ಗೃಹಸಚಿವ, ಕ್ರಿಮಿನಲ್ ಹಾಲಪ್ಪ, ರಾಜ್ಯದ ಗಣಿ ಲೂಟಿ ಮಾಡುತ್ತಿರುವ ರೆಡ್ಡಿ ಸಹೋದರರು,ನಮ್ಮ ರಾಜ್ಯದ ಹೆಮ್ಮೆಯಾದ ಕೆ.ಎಂ.ಎಫ್.ನ್ನೂ ಬಿಡದೆ ಅಲ್ಲೂ ರೈತರ ಹೆಸರಿನಲ್ಲಿ ಸ್ವಾಹಾ ಮಾಡುತ್ತಿರುವ ಮಂತ್ರಿಗಳು ಮೊದಲಾದವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡು ರಾಜ್ಯದ ಜನತೆ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವಂತೆ ಆಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ "ಕನ್ನಡ ವಿರೋಧಿ" ಸರಕಾರ ಅಧಿಕಾರಕ್ಕೆ ಬಂದಿದೆ. ನಾನು ಒಬ್ಬ ಆರ್.ಎಸ್.ಎಸ್. ಬೆಂಬಲಿಗನಾಗಿ, ಕನ್ನಡ ಪ್ರೇಮಿಯಾಗಿ ಈ ಮತನ್ನು ಬಹಳ ವಿಷಾದದಿಂದ ಹೇಳಬೇಕಾಗಿದೆ. ಮೊದಲಿನಿಂದಲೂ ಕನ್ನಡ ವಿರೋಧಿ ನೀತಿ, ತಮಿಳು, ತೆಲುಗು ಪರ ಬೆಂಬಲ ಸೂಚಿಸುವ ಪ್ರಥಮ ಸರಕಾರ ಈ ಬಿ.ಜೆ.ಪಿ. ಸರಕಾರ ಎಂಬುದು ಖೇದಕರ ವಿಷಯ. ಕನ್ನಡ ಪರ ಸಂಘಟನೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಹೋರಾಟವನ್ನು ಹತ್ತಿಕ್ಕಿ ತಾನು ಮಾತ್ರ ನಿಜವಾದ ಜಾತ್ಯಾತೀತ ಎಂಬುದನ್ನು ತೋರಿಸುವ ನಾಮರ್ದ ಭಂಡತನ ಪ್ರದರ್ಶಿಸಿದೆ. ಕನ್ನಡಿಗರೇ ಎದ್ದೇಳಿ...ಕನ್ನಡ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆಯಿರಿ...ಪೊರಕೆ ಸೇವೆ ಮಾಡಿ....
ಹೊಗೇನಕಲ್ ವಿಚಾರದಲ್ಲಿ ನಮ್ಮ ಸರಕಾರ ಶಿಖಂಡಿತನ ಪ್ರದರ್ಶಿಸಿದೆ. ಅಲ್ಲದೆ ಬೆಳಗಾವಿ ವಿಚಾರದಲ್ಲಿ ತನ್ನ ನಾಮರ್ದತನವನ್ನು ಎಲ್ಲರಿಗೂ ತೋರಿಸಿದೆ. ಕರ್ನಾಟಕದಲ್ಲಿ ಹುಟ್ಟಿ, ಕರ್ನಾಟಕದ ಅನ್ನ ತಿಂದು, ಇಲ್ಲಿನ ಕಾವೇರಿ ನೀರು ಕುಡಿದು ಇಲ್ಲಿನ ಜನರಿಗೇ ದ್ರೋಹ ಬಗೆಯುತ್ತಿರುವ ಬಿ.ಜೆ.ಪಿ. ಸರಕಾರವನ್ನು ಕಿತ್ತೊಗೆಯಬೇಕು. ಪುಟಗೋಸಿ ತಮಿಳರ ಓಟಿಗಾಗಿ ಕರುಣಾನಿಧಿಯ ಕಾಲು ನೆಕ್ಕುವ ಈ ರಾಜಕಾರಣಿಗಳನ್ನು ಮೆಟ್ಟಲ್ಲಿ ಹೊಡೆಯಿರಿ...

ಕನ್ನಡಿಗರೇ ಎದ್ದೇಳಿ...ನಮ್ಮ ಐಕ್ಯತೆಯನ್ನು ಪ್ರದರ್ಶಿಸಿ...ಈ ಕನ್ನಡ ವಿರೋಧಿ ಸರಕಾರವನ್ನು ಕಿತ್ತೊಗೆಯಿರಿ...ಇಲ್ಲದಿದ್ದಲ್ಲಿ ನಿಮ್ಮ ಮುಂದಿನ ಪೀಳಿಗೆ ನಿಮ್ಮನ್ನು ಕ್ಷಮಿಸಲಾರದು. ಇದೇ ಸರಕಾರ ಇನ್ನು ಐದು ವರ್ಷ ಇದ್ದರೆ ಖಂಡಿತಾ ಕನ್ನಡಿಗ ಅನಾಥನಾಗುತ್ತಾನೆ ಕಾಶ್ಮೀರದ ಹಿಂದೂಗಳಂತೆ. ಕಾಂಗ್ರೆಸ್ ಮತ್ತು ಜಾ.ದಳಕ್ಕೆ ಇದು ಸಕಾಲ, ನೀವಾದರೂ ನಿಜವಾದ ಕನ್ನಡಪ್ರೇಮವನ್ನು ತೋರಿಸಿ...ಕನ್ನಡದ ಉಳಿವಿಗಾಗಿ ಹೋರಾಡಿ...ಒಬ್ಬ ಕನ್ನಡಿಗನಾಗಿ, ಒಬ್ಬ ನೈಜ ಹಿಂದೂವಾಗಿ, ಒಬ್ಬ ಬ್ರಾಹ್ಮಣನಾಗಿ...ನಾನು ಯಾವತ್ತೂ ಬಿ.ಜೆ.ಪಿ. ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕದವನಾಗಿ...ಮುಂದೆ ಕನ್ನಡದ ಹಿತ ಕಾಯುವ ಪಕ್ಷಕ್ಕೆ ಮತ ಹಾಕುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ. ಅದು ಯಾರೇ ಇರಲಿ...ಮುಸ್ಲಿಂ ಲೀಗ್ ಆದರೂ ಸರಿ...ಕನ್ನಡದ ಹಿತ ಕಾಯುವವರಿಗೇ ನನ್ನ ಮತ...ನಿಮ್ಮ ಮತ ಯಾರಿಗೆ?......

Sunday, April 04, 2010

ದೇಶದ್ರೋಹಿ ಬಾಳ ಥಾಕ್ರೆ ಮತ್ತು ಭಯೋತ್ಪಾದಕ ಸಂಘಟನೆಗಳು

ಇತ್ತೀಚೆಗೆ ಬಾಳಥಾಕ್ರೆ ಎಂಬ ದೇಶದ್ರೋಹಿ (ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ) ಬಹಳ ನಿಗುರುತ್ತಿದ್ದಾನೆ. ಎಲ್ಲರೂ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಬಂದರೆ ಇವನದ್ದು ಉಲ್ಟಾ ಕೇಸು, ರಾಷ್ಟ್ರ ರಾಜಕಾರಣದಿಂದ ರಾಜ್ಯರಾಜಕಾರಣಕ್ಕೆ ಬರುತ್ತಿದ್ದಾನೆ. ಇವನ ಸಂಕುಚಿತ ಮನಸ್ಸು ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಸತ್ಯ.
ಇತ್ತೀಚೆಗೆ ತನ್ನ ದೇಶವಿರೋಧಿ ಪತ್ರಿಕೆ ’ಸಾಮ್ನಾ’ ದಲ್ಲಿ ಕರ್ನಾಟಕದ ಮುಖ್ಯಮಂತ್ರಿಯನ್ನು ಹುಚ್ಚ ಎಂದು ಸಂಬೋಧಿಸಿರುವುದು ಇವನ ಮೆದುಳಿನಲ್ಲಿ ತುಂಬಿರುವುದು ಸೆಗಣಿ ಏಮ್ಬುದನ್ನು ಸಾಬೀತುಪಡಿಸುತ್ತದೆ. ಇಂತಹಾ ಲುಚ್ಚಾಗಳನ್ನು ಈ ದೇಶದಿಂದಲೇ ಒದ್ದು ಹೊರಗೋಡಿಸದಿದ್ದಲ್ಲಿ ನಮ್ಮ ಭಾರತದ ಒಕ್ಕೂಟ ವ್ಯವಸ್ಥೆಗೆ ಅಪಾಯ. ಒಬ್ಬ ನಾಮರ್ದ ಮುಂಬೈನಲ್ಲಿ ಕೂತು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವನ ಜನ್ಮಕ್ಕೇ ಕಳಂಕ. ಅವನಿಗೆ ತಾಕತ್ತಿದ್ದರೆ ಬೆಂಗಳೂರಿಗೆ ಬಂದು ಅದೇ ರೀತಿಯ ಹೇಳಿಕೆ ಕೊಡಲಿ, ಕನ್ನಡಿಗರು ದೇಶದ್ರೋಹಿಗಳಿಗೆ ಯಾವ ರೀತಿಯ ಉತ್ತರ ಕೊಡುತ್ತಾರೆ ಎಂಬುದನ್ನು ಅವನು ತನ್ನ ಮುಂದಿನ ನಾರಾರು ಜನ್ಮಕ್ಕೆ ಅರಿತುಕೊಳ್ಳಬೇಕು.
ತನ್ನ ಕುಟುಂಬವನ್ನೇ ಸರಿಯಾದ ಹಾದಿಯಲ್ಲಿ ನಡೆಸಲು ಸಾಧ್ಯವಿಲ್ಲದ ಈ ಶಿಖಂಡಿ, ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹಗಲುಗನಸು ಕಾಣುತ್ತಿದ್ದಾನೆ. ಅದಕ್ಕಾಗಿ ಅವನು ತನ್ನ ಭಯೋತ್ಪಾದಕ ಸಂಘಟನೆಗಳಾದ ಶಿವಸೇನೆ, ಎಂ.ಇ.ಎಸ್.ಗಳನ್ನು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲು ಛೂ ಬಿಟ್ಟಿದ್ದಾನೆ. ಕಾಶ್ಮೀರ ವಿಷಯದಲ್ಲಿ ಹೇಗೆ ಪಾಕಿಸ್ತಾನ ಮೂಗು ತೂರಿಸುತ್ತದೋ ಅದೇ ರೀತಿ ಬೆಳಗಾವಿ ವಿಷಯದಲ್ಲಿ ಕಾಶ್ಮೀರಿ ಭಯೋತ್ಪಾದಕನಂತೆ ವರ್ತಿಸುತ್ತಿರುವುದು ನಮ್ಮ ದೇಶದ ದುರಂತ ಸಂಗತಿ. ಇದಕ್ಕಾಗಿ ಇವನನ್ನು ಬಂಧಿಸಿ ಜೈಲಿಗೆ ತಳ್ಳುವುದನ್ನು ಬಿಟ್ಟು ಮತ್ತಷ್ಟು ಬೊಗಳಲು ಅವಕಾಶ ಮಾಡಿಕೊಡುತ್ತಿರುವುದು ಮಹಾರಾಷ್ಟ್ರ ಸರಕಾರದ ದೊಡ್ಡ ತಪ್ಪು.
ಇಂತಹ ದೇಶದ್ರೋಹಿಗಳಿಗೆ ಮೆಟ್ಟಲ್ಲಿ ಹೊಡೆದು, ಸಾರ್ವಜನಿಕವಾಗಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿ ನೇಣಿಗೆ ಹಾಕಬೇಕು. ನಮ್ಮೊಳಗೇ ಭಯೋತ್ಪಾದಕ ಸಂಘಟನೆಗಳನ್ನಿಟ್ಟುಕೊಂಡು ಪಾಕಿಸ್ತಾನೀಯರಿಗೆ ಬುದ್ದಿ ಹೇಳಲು ನಮ್ಮ ಸರಕಾರಕ್ಕೆ ನಾಚಿಕೆಯಾಗಬೇಕು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಈ ಕೆಳಗಿನ ಸಂಘಟನೆಗಳನ್ನು ನಿಷೇಧಿಸಿ ಆ ಸಂಘಟನೆಗಳ ಮುಖ್ಯಸ್ಥರನ್ನು ನೇಣಿಗೆ ಹಾಕಿ ಭಯೋತ್ಪಾದಕತೆಯ ಮೂಲೋಚ್ಚಾಟನೆಗೆ ಕಟಿಬದ್ದರಾಗಿ.
೧. ಶಿವಸೇನೆ.
೨. ಎಂ.ಇ.ಎಸ್.
೩. ನಕ್ಸಲೀಯರು
೪. ಡಿ.ಎಂ.ಕೆ.
೫. ಎ.ಐ.ಡಿ.ಎಂ.ಕೆ.
೬. ಪಿ.ಎಂ.ಕೆ.
೭. ಎಲ್.ಟಿ.ಟಿ.ಇ.
೮. ಕೇರಳದ ಎಲ್.ಡಿ.ಎಫ್.

ಇನ್ನೂ ಹಲವು ಸಂಘಟನೆಗಳು ದಕ್ಷಿಣ ಭಾರತದಲ್ಲಿ ಕಾರ್ಯನಿರತವಾಗಿದ್ದು, ಅವುಗಳು ಬೆಳೆಯುವ ಮೊದಲೇ ಚಿವುಟಿ ಹಾಕಿ, ಇಲ್ಲ ಅವುಗಳು ಈ ದೇಶವನ್ನೇ ಬಲಿತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

Monday, March 29, 2010

ಮತದಾನ ಕಡ್ಡಾಯ ಮಾಡಿ

ಇತ್ತೀಚೆಗೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಲು ನಿರುತ್ಸಾಹ ತೋರಿದ ಬೆಂಗಳೂರಿನ ಮತದಾರ ತಾನು ಒಬ್ಬ ಶತ ಮೂರ್ಖ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಮತದಾನ ಕಡಿಮೆಯಾದಷ್ಟು ಕಳ್ಳ ಖದೀಮರು ಆಯ್ಕೆಯಾಗುವ ಅವಕಾಶ ಜಾಸ್ತಿ. ಆದ್ದರಿಂದ ಈ ಮತದಾನ ಮಾಡದ ಮೂರ್ಖ ಮಂದಿ ಈ ಕಳ್ಳ ಖದೀಮರ ಆಯ್ಕೆಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ.

ಇದಕ್ಕೆಲ್ಲ ಒಂದೇ ಪರಿಹಾರ ಎಂದರೆ ಮತದಾನ ಕಡ್ಡಾಯ ಮಾಡುವುದು. ಮತದಾನ ಮಾಡದ ಈ ಸೋಂಬೇರಿಗಳಿಗೆ ಮತದಾನದ ಮಹತ್ವ ಗೊತ್ತಿಲ್ಲದಿರುವುದು ಈ ದೇಶದ ದುರಂತ. ಬೆಂಗಳೂರಿನಲ್ಲಿ ಅನಕ್ಷರತೆ ಇನ್ನೂ ಪ್ರತಿಶತ ೫೦ರಷ್ಟು ಇದೆ ಎಂಬುದನ್ನು ಇದು ತೋರಿಸುತ್ತದೆ. ಈ ಮತದಾನ ಮಾಡದ ಅನಕ್ಷರಸ್ಥ (?) ಮಂದಿಗೆ ಬೆಂಗಳೂರಿನಲ್ಲೂ ಸಂಜೆ ತರಗತಿಗಳನ್ನು ನಡೆಸಿ, ಅಕ್ಷರಾಭ್ಯಾಸ ಮಾಡಿಸಿ, ಈ ಮತದಾನದ ಬಗ್ಗೆ ಅವರಿಗೆ ತಿಳಿಸಿ ಹೇಳುವ ಅಗತ್ಯತೆ ಇವತ್ತು ಖಂಡಿತಾ ಇದೆ ಎಂಬುದು ನನ್ನ ಅಭಿಮತ.

ಈ ಮತದಾನವನ್ನು ಕಡ್ಡಾಯ ಮಾಡುವುದು ಇದಕ್ಕೆಲ್ಲಾ ಒಂದು ಪರಿಹಾರ. ಮತದಾನ ಮಾಡದ ಮಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿನ ಕ್ರಮ ತೆಗೆದುಕೊಳ್ಳಬೇಕಾದ್ದು ಸರಕಾರದ ಕರ್ತವ್ಯ. ಹೀಗಾದರೂ ಒಬ್ಬ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗುವುದು ಸಾಧ್ಯವೋ ಏನೋ?. ಮತದಾನ ಮಾಡದ ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅವರ ರೇಷನ್ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ಕಠಿನ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಕತ್ತೆಯ ಮೆದುಳಿನ ಮಂದಿಗೆ ಇದರ ಮಹತ್ವ ತಿಳಿಯುವುದು ಕಷ್ಟ.

Tuesday, March 16, 2010

ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಕನ್ನಡಿಗರನ್ನು ಗೆಲ್ಲಿಸಿ

ಸದ್ಯದಲ್ಲೇ ಬಿ.ಬಿ.ಎಂ.ಪಿ ಚುನಾವಣೆ ಹತ್ತಿರ ಬರುತ್ತಿದೆ. ನಮ್ಮ ಕನ್ನಡಿಗರೆಲ್ಲಾ ಈಗ ಒಗ್ಗಟ್ಟಾಗಿ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ, ಕೇವಲ ಕನ್ನಡಿಗ ಅಭ್ಯರ್ಥಿಗಳನ್ನು ಚುನಾಯಿಸಬೇಕಾಗಿದೆ. ಏಕೆಂದರೆ ತಮಿಳುನಾಡಿನ ಕೆಲ ರಾಜ್ಯವಿರೋಧಿ ಶಕ್ತಿಗಳು (ಎ.ಐ.ಡಿ.ಎಂ.ಕೆ ಮತ್ತು ಡಿ.ಎಂ.ಕೆ) ಕೂಡಾ ಈ ಚುನಾವಣೆಯಲ್ಲಿ ಭಾಗವಹಿಸುತ್ತಿರುವುದು ಕಳವಳಕಾರಿಯಾಗಿದೆ. ತಮಿಳರು ಈಗ ನಗರಪಾಲಿಕೆಯಲ್ಲಿ ತಮ್ಮ ಇರವನ್ನು ತೋರ್ಪಡಿಸಿ, ಕನ್ನಡಿಗರನ್ನು ತುಳಿಯಲು ಹುನ್ನಾರ ನಡೆಸಿದ್ದಾರೆ.

ಕನ್ನಡಿಗರೇ ಎದ್ದೇಳಿ, ಕೇವಲ ಕನ್ನಡಿಗರನ್ನೇ ಆರಿಸಿ, ಅವರು ಯಾವ ಪಕ್ಷದ ಅಭ್ಯರ್ಥಿಯಾಗಿದ್ದರೂ ಸರಿ....ಆದರೆ ಯಾವುದೇ ಒಬ್ಬ ತಮಿಳ ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ದರೆ ಅವನು ಎಷ್ಟೇ ಒಳ್ಳೆಯವನಾದರೂ ದಯವಿಟ್ಟು ಅವನನ್ನು ಚುನಾಯಿಸಬೇಡಿ. ಇದು ನಮ್ಮ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಏಕೆಂದರೆ ಈ ತಮಿಳರು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ. ಬೆಂಗಳೂರಿನಲ್ಲಿ ಕನ್ನಡಿಗರ ಇರುವಿಕೆಯನ್ನೇ ಪ್ರಶ್ನಿಸಿ ಬೆಂಗಳೂರಿನ ಕೆಲ ತಮಿಳು ಉಗ್ರವಾದಿ ಸಂಘಟನೆಗಳು ತಮ್ಮ ಅಂತರ್ಜಾಲ ಪುಟದಲ್ಲಿ ಲೇಖನಗಳನ್ನು ಬರೆದಿರುವುದು ಆತಂಕಕಾರಿಯಾಗಿದೆ. ಇದರ ವಿರುದ್ದ ನಮ್ಮ ಘನ ಸರಕಾರ ಕೂಡಾ ಚಕಾರ ಎತ್ತದಿರುವುದು ಕಳವಳಕಾರಿಯಾಗಿದೆ.
ಕೇವಲ ಪುಟಗೋಸಿ ತಮಿಳರ ಓಟಿಗೆ ಆಸೆಪಟ್ಟು ಇವತ್ತು ಭಾರತೀಯ ಜನತಾ ಪಕ್ಷದ ಕೆಲ ಮುಖಂಡರು ಅವರನ್ನು ಓಲೈಸುವ ಮಟ್ಟಕ್ಕೆ ಇಳಿದಿರುವುದು ಕನ್ನಡಿಗರಾದ ನಮಗೆ ಆತಂಕಕಾರಿ ವಿಷಯ.

ದಯವಿಟ್ಟು ಕನ್ನಡಿಗ ಅಭ್ಯರ್ಥಿಗಳನ್ನು ಗೆಲ್ಲಿಸಿ.....ಬೆಂಗಳೂರು ಉಳಿಸಿ....

Friday, February 12, 2010

ಮುತಾಲಿಕ್ ಮೇಲಿನ ಹಲ್ಲೆ- ಹಿಂದೂ ವಿರೋಧಿಗಳ ಅಟ್ಟಹಾಸ

ಕೆಲ ದಿನಗಳ ಹಿಂದೆ ಮಾನ್ಯ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಕೆಲ ಹಿಂದೂ ವಿರೋಧಿಗಳು ಮಸಿ ಬಳಿದು ಕೆಲ ಹಿಂದೂವಿರೋಧಿ ಕುನ್ನಿಗಳು ಭಾರತದ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ.

ಕಸ್ತೂರಿ ಚಾನಲ್‌ನಲ್ಲಿ ನಡೆಯುತ್ತಿದ್ದ ಈ ವ್ಯಾ(ಕ್)ಲೈಂಟೈನ್ಸ್ ಡೇ ವಿರುದ್ದ ಹಾಗೂ ಪರ ವಾಕ್ಸಮರದ ಅಂತಿಮ ಘಳಿಗೆಯಲ್ಲಿ ವೇದಿಕೆ ಏರಿ ಬಂದ ಕೆಲ ದುಷ್ಕರ್ಮಿಗಳು (ಇವರ ವಿಚಾರಣೆ ನಡೆಸುವುದೊಳಿತು, ಏಕೆಂದರೆ ಐ.ಎಸ್.ಐಗೆ ಇವರ ಸಂಬಂಧ ಇರಲೂ ಸಾಕು) ಮಾನ್ಯ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದು ಎಲ್ಲ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ.

ಅಲ್ಲರೀ...ಮುತಾಲಿಕ್ ಹೇಳುವುದರಲ್ಲಿ ಏನಿದೆ ತಪ್ಪು?. ಮದುವೆಯಾಗದ ಇಬ್ಬರು ಜೋಡಿಗಳು ಪರಸ್ಪರ ಕೈ ಹಿಡಿದುಕೊಂಡು, ಪಾರ್ಕ್‌ನಲ್ಲಿ ಕತ್ತಲಲ್ಲಿ ಪ್ರೀತಿ ಮಾಡುವುದನ್ನು ಈ ದುಷ್ಕರ್ಮಿಗಳು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?. ಇದು ಖಂಡಿತಾ ಸೂಳೆಗಾರಿಕೆಯ ಇನ್ನೊಂದು ಮುಖ. ಒಬ್ಬ ಹೆಣ್ಣು ಒಬ್ಬ ಗಂಡಸಿಗಿಂತ ಹೆಚ್ಚಿನ ಸಂಬಂಧ ಇಟ್ಟುಕೊಡರೆ ಸಮಾಜದಲ್ಲಿ ಏನು ಹೇಳುತ್ತಾರೆ ಎಂಬುದನ್ನು ಒಬ್ಬ ಸಾಮಾನ್ಯ ಪ್ರಜೆ ಕೂಡಾ ಹೇಳಬಲ್ಲ. ಈಗ ನೀವು ಪ್ರತೀ ಪಾರ್ಕ್‌ನಲ್ಲಿ ಹೋಗಿ ನೋಡಿ, ಪ್ರೀತಿಯ ಹೆಸರಿನಲ್ಲಿ ಲೈಂಗಿಕ ತೀಟೆ ತೀರಿಸಿಕೊಳ್ಳುವುದನ್ನು. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ. ಜಯನಗರದ ಪಾರ್ಕ್, ಹೆಬ್ಬಾಳದ ಪಾರ್ಕ್, ಬಸವನಗುಡಿಯ ಪಾರ್ಕ್, ಕಬ್ಬನ್ ಪಾರ್ಕ ಮುಂತಾದ ಕಡೆ ಮರ್ಯಾದಸ್ಥರು ಓಡಾದುವುದಕ್ಕೆ ಆಗುತ್ತಾ?. ಈಗ ನಿಜವಾಗಿ ಪ್ರೀತಿಸುವವರು ಎಷ್ಟು ಜನ ಇದ್ದಾರೆ?. ಈ ಪ್ರೀತಿ ಎನ್ನುವುದು ಗಂಡಸಿನ ಕೈಯಲ್ಲಿ ಹಣ ಇರುವ ತನಕ ಮಾತ್ರ, ನಿಮ್ಮ ಕೈಯಲ್ಲಿ ಹಣ, ಕಾರು ಇದ್ದರೆ ಎಂಥಹ ಹೆಣ್ಣು ಕೂಡಾ ಬಾಯಿ ಬಿಡುವ ಕಾಲ. ಅಂದರೆ ಹಣಕ್ಕೆ ಬೆಲೆ ಕೊಡುವ ಕಾಲ.

ಯಾವ ಒಬ್ಬ ಹೆಣ್ಣು ಹೆತ್ತ ತಂದೆ, ತಾಯಿಗಳು ತಮ್ಮ ಮಗಳು ಈ ಥರಾ ಅನ್ಯ ಹುಡುಗನ ಜೊತೆ ಶಾಲೆ-ಕಾಲೆಜ್‌ಗೆ ಚಕ್ಕರ್ ಹೊಡೆದು ಪಾರ್ಕ್‌ನಲ್ಲಿ ಮೋಜು ಮಾಡುವುದನ್ನು ಸಮರ್ಥಿಸಿಕೊಳ್ಳುತ್ತಾರೆ?. ಆದರೆ ಇದನ್ನೆಲ್ಲ ಕಾಮನ್ ಎನ್ನುವ ರೀತಿಯಲ್ಲಿ ನೋಡುವ ಹೆತ್ತವರೂ ಇದ್ದಾರೆ. ಆದರೆ ಅದೇ ಮೋಜು-ಮಸ್ತಿ ತಮ್ಮ ಮಗಳ ಬಾಳನ್ನು ಹಾಳು ಮಾಡಿದಾಗ ಇವರು ಎಚ್ಚೆತ್ತುಕೊಳ್ಳುತ್ತಾರೆ. ಹಾಗಂತ ನಾನು ಈ ಪಡ್ಡೆ ಹುಡುಗರಿಗೆ ಬೆಂಬಲ ನೀಡುತ್ತಿಲ್ಲ. ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ-ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ. ಆದ್ದರಿಂದ ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ನಿಜವಾಗಿ ಜಾಗರೂಕರಾಗಿರಬೇಕು.

ಈಗಿನ ಕಾಲೆಜ್ ಜೀವನದಲ್ಲಿ ಈ ಪ್ರೀತಿ ಎನ್ನುವುದು ಫ್ಯಾಶನ್ ಆಗಿಬಿಟ್ಟಿದೆ. ಒಬ್ಬ ಹುಡುಗಿಗೆ-ಒಬ್ಬ ಹುಡುಗ ಜೋಡಿ ಇರಲೇ ಬೇಕು. ಆದರೆ ಇದು ಸಮರ್ಥನೀಯವೇ?. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಎನ್ನುವ ಮುತಾಲಿಕ್ ವಾದ ತಪ್ಪೇ?.

Sunday, February 07, 2010

ಕರ್ನಾಟಕದ ಭಯೋತ್ಪಾದಕರು

ಕರ್ನಾಟಕದ ನೆಲದಲ್ಲಿ ಭಯೋತ್ಪಾದಕರ ಹಾವಳಿ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದಕ್ಕೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕ ಸಂಘಟನೆಯಾದ ಎಂ.ಇ.ಎಸ್. ಎಂಬ ತಿಕ್ಕಲು ಸಂಘಟನೆ ನಡೆಸಿದ ಸೀಮಾ ಪರಿಷತ್ ಎನ್ನುವ ಕಾರ್ಯಕ್ರಮವೇ ಸಾಕ್ಷಿ.
ಮುಂಬೈನಲ್ಲಿ ರೌಡಿಯಿಸಂ ಹುಟ್ಟಲು ಕಾರಣವಾದ ಶಿವಸೇನಾ ಎಂಬ ಸಂಘಟನೆಯೇ ಇದಕ್ಕೆ ಕಾರಣ. ಪ್ರಾದೇಶಿಕತೆಯ ಹೆಸರಿನಲ್ಲಿ ದೇಶದೆಲ್ಲೆಡೆ ಭಯೋತ್ಪಾದಕತೆಯನ್ನು ಹಬ್ಬಿಸುತ್ತಿರುವ ಈ ಸಂಘಟನೆಯನ್ನು ಅಲ್ಲಿನ ಕಾಂಗ್ರೆಸ್ ಸರಕಾರ ಯಾಕೆ ನಿಷೇಧಿಸುತ್ತಿಲ್ಲ?. ಮುಂಬೈ ಕೇವಲ ಮಹಾರಾಷ್ಟ್ರಿಗರಿಗೆ ಮಾತ್ರ ಎಂಬ ತಿಕ್ಕಲು ವಾದವನ್ನು ಸಮರ್ಥಿಸಿಕೊಳ್ಳುತ್ತಿರುವ ಈ ಸಂಘಟನೆ ಶಿವಾಜಿಯ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಉತ್ತರಭಾರತೀಯರನ್ನು ಮುಂಬೈನಿಂದ ಹೊರಗಟ್ಟುವಂತೆ ಕರೆ ನೀಡಿದ ಈ ಭಯೋತ್ಪಾದಕ ಸಂಘಟನೆಗೂ ಕಾಶ್ಮೀರದಲ್ಲಿ ಭಯೋತ್ಪಾದಕತೆಯನ್ನು ಸೃಷ್ಟಿಸುತ್ತಿರುವ ಮುಸ್ಲಿಂ ಭಯೋತ್ಪಾದಕರಿಗೂ ಯಾವ ವ್ಯತ್ಯಾಸವೂ ಇಲ್ಲ. ಏಕೆಂದರೆ ಈ ಎರಡೂ ಸಂಘಟನೆಗಳು ದೇಶವನ್ನು ಛಿದ್ರಮಾಡುವತ್ತ ತಮ್ಮ ಗುರಿ ಹೊಂದಿವೆ.
ಅದರಲ್ಲೂ ಬೆಳಗಾವಿಯ ಎಂ.ಇ.ಎಸ್. ಎಂಬ ಭಯೋತ್ಪಾದಕ ಸಂಘಟನೆಯಂತೂ ಕರ್ನಾಟಕದ ಅನ್ನ ತಿಂದು, ಇಲ್ಲಿನ ನೀರು ಕುಡಿದು, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹುಂಬ ವಾದವನ್ನು ಮಂಡಿಸಿ ತನ್ನ ದೇಶದ್ರೋಹಿತನವನ್ನು ತೋರಿಸಿದೆ. ಈ ಸೀಮಾ ಪರಿಷತ್ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು ನಮ್ಮ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತನ್ನ ಕನ್ನಡದ್ರೋಹಿತನವನ್ನು, ಕರ್ನಾಟಕ ವಿರೋಧಿ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕರ್ನಾಟಕ ದ್ರೋಹಿ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅಲ್ಲಿನ ಮರಾಠಿ ಪುಂಡರು ಥಳಿಸಿದಾಗಲೂ ತುಟಿ ಪಿಟಿಕ್ ಎನ್ನದ ಈ ಮುಖ್ಯಮಂತ್ರಿಗಳು ಮರಾಠಿ ಪುಂಡರಿಗೆ ಹೆದರಿ ಬಚ್ಚಿಟ್ಟುಕೊಂಡದ್ದು ನಮ್ಮ ದುರ್ದೈವ.
ಇದನ್ನು ಹೀಗೆಯೇ ಬಿಟ್ಟರೆ ಮುಂದೆ ಅಖಂಡ ಕರ್ನಾಟಕವು ಛಿದ್ರ ಛಿದ್ರವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಕರ್ನಾಟಕದ ಅತ್ಯಂತ ಬಲಹೀನ, ದುರ್ಬಲ ಮುಖ್ಯಮಂತ್ರಿಗೆ ಈ ಬಗ್ಗೆ ಕಾಳಜಿಯಿಲ್ಲದಿರುವುದು ಕರ್ನಾಟಕದ ದುರ್ದೈವ. ಕೇವಲ ಗಣಿಧಣಿಗಳ ಪಾದ ಪೂಜೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿರುವ ಯಡಿಯೂರಪ್ಪನವರಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲದೆ ಕೇವಲ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲೇ ಕಾಲ ಹರಣಮಾಡುತ್ತಿರುವುದು ಸೋಜಿಗ.
ಈ ಮರಾಠಿ ಭಯೋತ್ಪಾದಕರನ್ನ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕದಿದ್ದಲ್ಲಿ, ಈವರೆಗೆ ದಕ್ಷಿಣದಲ್ಲಿ ಇರದ ಭಯೋತ್ಪಾದಕತೆ ತಲೆ ಎತ್ತುವುದರಲ್ಲಿ ಸಂಶಯವಿಲ್ಲ.