Wednesday, December 31, 2008

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು

ಬೆಂಗಳೂರು ದಶಂಬರ ೩೧ : ಕಳೆದ ವರ್ಷವನ್ನು ಮುಸ್ಲಿಮ್ ಭಯೋತ್ಪಾದನೆಯ ವರ್ಷ ಎಂದು ಕಣ್ಣು ಮುಚ್ಚಿ ಹೇಳಬಹುದು. ಅನೇಕ ದೇಶಗಳಲ್ಲಿ ಮುಸ್ಲಿಮ್ ಆತ್ಮಹತ್ಯಾಧಾಳಿ, ಮುಂಬೈನಲ್ಲಿ ಬಾಂಬ್ ಸ್ಪೋಟ......ಇತರೆ ಇತರೆ...

ಹೇಗಾದರೂ ಇರಲಿ ಈ ಕ್ಯಾಲೆಂಡರ್ ವರ್ಷದಲ್ಲಾದರೂ....ಹಿಂದೂಗಳ ಹಿತ ರಕ್ಷಿಸುವ, ದೇಶದ ಹಿತ ರಕ್ಷಿಸುವ, ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರನ್ನು ಮಟ್ಟ ಹಾಕುವ ಘನ ಸರಕಾರ ಕೇಂದ್ರದಲ್ಲಿ ಬರಬೇಕಾದ ಅವಶ್ಯಕತೆಯಿದೆ. ಈ ವರ್ಷ ನಾವು ಹಿಂದೂಗಳ ವಿರುದ್ಧ ಸಂಚು, ಮುಸ್ಲಿಮ್ ಭಯೋತ್ಪಾದಕರಿಗೆ ಬೆಂಬಲ, ಪಾಕಿಸ್ತಾನದ ಮೇಲೆ ದಾಳಿ ಮಾಡಲು ಹೆದರಿದ ಪುಕ್ಕಲು ಕೇಂದ್ರ ಸರಕಾರವನ್ನು ಹಾಗೂ ಒಬ್ಬ ನಾಲಾಯಕ್ ಪ್ರಧಾನಿ, ರಾಷ್ಟ್ರಪತಿ ಸ್ಥಾನಕ್ಕೆ ಒಂದು ನಾಮ್‌ಕೇ ವಾಸ್ತೆ ಮಹಿಳೆ (ಯೋಗ್ಯತೆಯಿಲ್ಲದ) ಯನ್ನು, ಪುಕ್ಕಲು ಗೃಹ ಸಚಿವ, ದೇಶವಿರೋಧಿ ರೈಲ್ವೆ ಮಂತ್ರಿ ಮುಂತಾದವರನ್ನು ನೋಡಿದ್ದೇವೆ.

ಆದರೆ ಮುಂಬರುವ ವರ್ಷದಲ್ಲಿ ಕೇಂದ್ರದಲ್ಲಿ ಒಂದು ಘನ ಸರಕಾರ, ಹಿಂದೂಗಳ ಹಿತ ರಕ್ಷಿಸುವ ಸರಕಾರ,ಭಯೋತ್ಪಾದಕರನ್ನು (ಮುಸ್ಲಿಮ್ ಹಾಗೂ ಕ್ರಿಶ್ಚಿಯನ್)ಮಟ್ಟ ಹಾಕುವ ಸರಕಾರ ಬರಲಿ ಎಂದು ಹಾರೈಸುತ್ತಾ....ಎಲ್ಲರಿಗೂ ಹೊಸವರ್ಷದ ಶುಭಾಶಯಗಳನ್ನು ಈ ಮೂಲಕ ಕೋರುತ್ತಿದ್ದೇನೆ.

ಜೈ ಕರ್ನಾಟಕ....ಜೈ ಹಿಂದ್....ಜೈ ಹಿಂದೂ ರಾಷ್ಟ್ರ ( ಹಿಂದೂಸ್ಥಾನ)

Sunday, December 28, 2008

ಬೆಂಗಳೂರು ನಗರ ಪೊಲೀಸ್ ಅಪರಾಧ ತಡೆ ಮಾಸ ಡಿಸೆಂಬರ್ ೨೦೦೮



ಬೆಂಗಳೂರು ದಶಂಬರ ೨೮ : ನೀವು ನಗರದ ಯಾವುದೇ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದರೆ ನಿಮಗೆ "ಜಯ ಕರ್ನಾಟಕ" ಸಂಘಟನೆಯ ಈ ಪತಾಕೆಗಳು ಕಾಣಸಿಗುತ್ತವೆ. ಅಂದರೆ ಬೆಂಗಳೂರಿನ ನಾಗರಿಕರಿಗೆ ಸಮಾಜಘಾತುಕರ ಬಗ್ಗೆ ಎಚ್ಚರಿಕೆ ನೀಡುವಂತಹ ಒಂದು ಉತ್ತಮ ಕಾರ್ಯವನ್ನು ಈ ಸಂಘಟನೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಬೆಂಗಳೂರಿನಲ್ಲಿ ಇತ್ತೀಚೆಗೆ ಪರ ರಾಜ್ಯದಿಂದ ಬರುತ್ತಿರುವ ವಲಸಿಗರಿಂದ ಕೊಲೆ, ದರೋಡೆ, ಸುಲಿಗೆ, ಕಳ್ಳತನಗಳಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೆಂಗಳೂರಿನ ಶಾಂತಿಪ್ರಿಯ ವಾತಾವರಣಕ್ಕೆ ಒಂದು ಶಾಪವೇ ಸರಿ. ನಾನೇ ಕಣ್ಣಾರೆ ನೋಡಿದ ಹಾಗೆ ಕಾರ್ಡ್ ರಸ್ತೆಯಲ್ಲಿ ಹಾಡುಹಗಲೇ ತಮಿಳಿನ ಚಿಂದಿ ಆಯುವವರು ರಸ್ತೆ ವಿಭಜಕಕ್ಕೆ ಹಾಕಿದ ಕಬ್ಬಿಣದ ಬೇಲಿಯನ್ನು ಎಬ್ಬಿಸಿ ತೂಕಕ್ಕೆ ಮಾರಿ ದುಡ್ಡು ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಹಾರಾಷ್ಟ್ರದಿಂದ ವಲಸೆ ಬಂದಿರುವ "ಮರಾಠಿ" ಮಾತಾಡುವ ಹತ್ತಾರು ಮಹಿಳೆಯರು ಕಂಕುಳಲ್ಲಿ ಮಗುವನ್ನು ಹಿಡಿದುಕೊಂಡು ಸುತ್ತಾಡುತ್ತಿರುತ್ತಾರೆ. ಯಾವುದೇ ಮನೆಗೆ ಬೀಗ ಹಾಕಿದೆ ಎಂದ ಕೂಡಲೇ ನುಗ್ಗಿ ಬಿಡುತ್ತಾರೆ, ಹಾಗೂ ಮನೆಯ ಹೊರಗಿರುವ ವಸ್ತುಗಳನ್ನು ಸರಾಗವಾಗಿ ಎತ್ತಿಕೊಂಡು ಹೋಗುತ್ತಾರೆ. ಅಲ್ಲದೆ ಚಿನ್ನ ಬೆಳ್ಳಿ ಪಾಲಿಶ್ ಮಾಡುವ ನೆಪದಲ್ಲಿ ಮಹಿಳೆಯರು ಮನೆಗೆ ಬಂದು ಚಿನ್ನ ಬೆಳ್ಳಿ ಎತ್ತ್ತಿಕೊಂಡು ಹೋಗುತ್ತಾರೆ. ಅಲ್ಲದೆ ವಿಳಾಸ ಕೇಳುವ ನೆಪದಲ್ಲಿ, ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಯಾರೂ ಇಲ್ಲದಿದ್ದಲ್ಲಿ ಹಲ್ಲೆ ನಡೆಸಿ ಮನೆ ದೋಚುವ ಕಳ್ಳರು ಆಂಧ್ರ, ತಮಿಳುನಾಡಿನಿಂದ ನೇರವಾಗಿ ಬಂದು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ.

ಪರ ಊರಿನಿಂದ ಬಂದರೂ ಸರಾಗವಾಗಿ ಕನ್ನಡ ಮಾತಾಡುವ ಈ ಮಂದಿ, ಸುತ್ತ ಮುತ್ತಲಿನ ಮನೆಯವರ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಬೆಂಗಳೂರು ಈಗ ವಲಸಿಗರ ತಾಣವಾಗಿದೆ. ಎಲ್ಲ ರೀತಿಯ ಮಂದಿ ಇಲ್ಲಿ ಬಂದು ಸೇರುತ್ತಿದ್ದಾರೆ. ಇಲ್ಲಿ ಜೀವನ ಮಾಡುತ್ತಿರುವವರು ಹೆಚ್ಚಾಗಿ ಸಿರಿವಂತರು ಎಂಬ ಭಾವನೆ ಈ ಮಂದಿಯಲ್ಲಿ ಬೇರೂರಿಬಿಟ್ಟಿದೆ. ಅದಕ್ಕಾಗಿಯೇ ಈ ಮಂದಿ ದೂರದ ತಮಿಳುನಾಡು, ಆಂಧ್ರದಿಂದ ಬಂದು ಕೊಲೆ, ದರೋಡೆ, ಸುಲಿಗೆ ಮಾಡಿ ಮತ್ತೆ ತಮ್ಮ ಊರು ಸೇರಿಕೊಂಡು ಬಿಡುತ್ತಾರೆ. ಮತ್ತೆ ಸ್ವಲ್ಪ ಸಮಯ ಕಳೆದ ಮೇಲೆ ಪುನಃ ಹಳೇ ಚಾಳಿ ಶುರು.

ಕರ್ನಾಟಕ ಸರಕಾರ ಈಗ ಈ ವಲಸಿಗರಿಗಾಗಿ ಕಠಿಣ ಕಾನೂನು ತರುವಂತಹ ಅಗತ್ಯವಿದೆ. ಹೆಚ್ಚಾಗಿ ಈ ಕೊಲೆ, ದರೋಡೆ ಮಾಡುವವರು ಆಂದ್ರ, ತಮಿಳುನಾಡು, ಬಿಹಾರದಿಂದ ವಲಸೆ ಬಂದಿರುವವರು. ಕೂಲಿ ಕೆಲಸಕ್ಕಾಗಿ ಇಲ್ಲಿ ಬಂದು, ಹಗಲೆಲ್ಲ ದುಡಿದು, ರಾತ್ರಿಯಾಗುತ್ತಲೇ ತಮ್ಮ ಎರಡನೇ ವೃತ್ತಿ ಶುರು ಮಾಡಿಕೊಳ್ಳುತ್ತಾರೆ. ಬೆಂಗಳೂರಿನ ಪೋಲಿಸರು ಈ ಮಂದಿಯ ಮೇಲೆ ಸದಾ ಒಂದು ಕಣ್ಣು ಇಟ್ಟರೆ ವಾಸಿ.

ಇಂದು ಪಾಕಿಸ್ತಾನ, ಬಾಂಗ್ಲಾ ದೇಶದ ನುಸುಳುಕೋರರು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಹಾಗೆ ಈ ಪರರಾಜ್ಯದ ನುಸುಳುಕೋರರು ಬೆಂಗಳೂರಿನಲ್ಲಿ ಅರಾಜಕತೆ, ಭೀತಿ ಸೃಷ್ಟಿಸುತ್ತಿದ್ದಾರೆ. ಇಂತಹ ಸಮಾಜಘಾತುಕರನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಿ ಸೂಕ್ತ ಶಿಕ್ಷೆ ವಿಧಿಸಬೇಕು. ಅಲ್ಲದೆ ಕರ್ನಾಟಕ ಸರಕಾರ ಈ ಬಗ್ಗೆ ಗಮನ ಹರಿಸಿ, ಈ ವಲಸಿಗರಿಗೆ ಪರಿಚಯ ಪತ್ರ ಕೊಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ವಲಸಿಗರೂ ಅಲ್ಲದೆ ಬೇರೆ ರಾಜ್ಯದಿಂದ ಇಲ್ಲಿಗೆ ಕಲಿಯಲು ಬರುವಂತಹ ವಿದ್ಯಾರ್ಥಿಗಳ ಬಗ್ಗೆಯೂ ಸೂಕ್ತ ಕ್ರಮ ತೆಗೆದುಕೊಂಡು ಅವರ ಮೇಲೆಯೂ ಒಂದು ಕಣ್ಣಿಟ್ಟಿರಬೇಕು. ಏಕೆಂದರೆ ಹೆಚ್ಚಾಗಿ ಸರಗಳ್ಳತನ ಮಾಡುತ್ತಿರುವುದು ಈ ಉತ್ತರಭಾರತದಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳೆ ಆಗಿರುವುದು ಕಳವಳಕಾರಿಯಾಗಿದೆ.

"ಕನ್ನಡಿಗರೇ...ಎಚ್ಚರ ನಾಳೆ ನಿಮ್ಮ ಮನೆಗೂ ಈ ಕಳ್ಳ ಕಾಕರು ನುಗ್ಗಬಹುದು. ಜಾಗ್ರತೆಯಾಗಿರಿ....ನಿಮ್ಮ ಸುತ್ತ ಮುತ್ತಲ ಜನರ ಬಗ್ಗೆ ಒಂದು ಕಣ್ಣು ಸದಾ ಇಟ್ಟಿರಿ..ಯಾವುದೇ ಅನುಮನಾಸ್ಪದ ವ್ಯಕ್ತಿ ಕಂಡರೂ ಕೂಡಲೇ ಪೋಲಿಸರಿಗೆ ತಿಳಿಸಿ..."

Monday, December 22, 2008

ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮ








ಬೆಂಗಳೂರು ದಶಂಬರ ೨೨ ದಶಂಬರ ಇಪ್ಪತ್ತೊಂದನೇ ದಿನಾಂಕದಂದು ಬೆಂಗಳೂರಿನ ಜಯನಗರದಲ್ಲಿರುವ, ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಪಕ್ಕದಲ್ಲೇ ಇರುವ ಮಂಗಳಾ ಸಭಾಂಗಣದಲ್ಲಿ ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಸಾವಿರದ ಒಂಭೈನೂರ ಐವತ್ತೊಂಭತ್ತನೇ ಇಸವಿಯಲ್ಲಿ ಪ್ರಾರಂಭವಾದ ಈ ಸಂಘ ಯಶಸ್ವಿಯಾಗಿ ತನ್ನ ಐವತ್ತು ವಸಂತಗಳನ್ನು ಪೂರೈಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಾರಂಭವಾದ ಈ ಸಮಾರಂಭ,ನಂತರ ದಕ್ಷಿಣ ಕನ್ನಡದ ಐವರು ಸಾಧಕರಿಗೆ "ಕರಾವಳಿ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
೧. ಪ್ರೊ. ಯು.ಆರ್. ರಾವ್ ವಿಜ್ಞಾನ ಕ್ಶೇತ್ರ
೨. ಶ್ರೀ ಅನಂತ ಕೃಷ್ಣ ಬ್ಯಾಂಕಿಂಗ್ ಕ್ಷೇತ್ರ
೩. ಶ್ರೀ ಕೈಯಾರ ಕಿಂಞ್‌ಣ್ಣ ರೈ ಗಡಿನಾಡ ಕನ್ನಡಿಗ
೪. ಶ್ರೀ ವಿ.ಮನೋಹರ್ ಸಂಗೀತ ಕ್ಷೇತ್ರ
೫. ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್ ಸಾಹಿತ್ಯ ಕ್ಷೇತ್ರ

ರಾಘವೇದ್ರ ಕಾಂಚನ್‌ರ ನಿರೂಪಣೆಯೊಂದಿಗೆ ಪ್ರಾರಂಭವಾದ ಈ ಸಮಾರಂಭ, ನಂತರ ಶ್ರೀ ಕೆ. ಎನ್.ಅಡಿಗರು ಸಂಘದ ಸಿಂಹಾವಲೋಕನ ಮಾಡಿ ಸಂಘದ ಪ್ರಾರಂಭದಿಂದ ಹಿಡಿದು ಈ ವರೆಗಿನ ನಡೆದು ಬಂದ ದಾರಿಯನ್ನು ವಿವರಿಸಿದರು. ಈ ಸಮಾರಂಭದ ರಂಗಸ್ಥಳದಲ್ಲಿನ ಮನೋರಂಜನಾ ಕಾರ್ಯಕ್ರಮಗಳನ್ನು ಶ್ರೀ ವಿ. ಮನೋಹರ್ ಅವರು ಬಹಳ ದಕ್ಷತೆಯಿಂದ ಮಾಡಿದರು. ಪ್ರಾರಂಭದಲ್ಲಿ ಭರತನಾಟ್ಯ ಮತ್ತು ಶ್ರೀಮತಿ ಸುಪ್ರಿಯಾ ಆಚಾರ್ ಅವರು "ಯಾವ ಮೋಹನ ಮುರಳಿ ಕರೆಯಿತೋ" ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಅಲ್ಲದೆ ಶ್ರೀ ಗುರುಕಿರಣ್‌ ಅವರು ಕೂಡಾ ಒಂದು ಘಳಿಗೆ ಬಂದು ರಂಘದಲ್ಲಿ ಎರಡು ಹಾಡು ಹಾಡಿ ರಂಜಿಸಿದರು. ವಿ.ಮನೋಹರ್ ಅವರೂ ಕೂಡಾ ತಾವೇನು ಕಡಿಮೆಯಿಲ್ಲ ಎಂಬಂತೆ ಒಂದು ಹಾಡೂ ಹಾಡಿದರು. ಅಲ್ಲದೆ "ಡೆನ್ನ ಡೆನ್ನ ಡೆನ್ನಾನ" ತುಳು ಹಾಡು ಹಾಗೂ "ಕನ್ನಡವೇ ನಿತ್ಯ...ಕನ್ನಡವೇ ಸತ್ಯ" ಹಾಡಿಗೆ ಮಾಡಿದ ನೃತ್ಯ ಮನಮೋಹಕವಾಗಿತ್ತು.
ಆದರೆ ಇಡೀ ಸಮಾರಂಭದಲ್ಲಿನ ಕಪ್ಪು ಚುಕ್ಕೆ ಎಂದರೆ....ದಕ್ಷಿಣ ಕನ್ನಡದ ತೆಂಕು ತಿಟ್ಟಿನ ಯಕ್ಷಗಾನ ವೇಷಕ್ಕೆ ಬದಲಾಗಿ ಉತ್ತರ ಕನ್ನಡದ ಯಕ್ಷಗಾನ ವೇಷಧಾರಿಗಳನ್ನು ಕುಣಿಸಿ, ಯಕ್ಷಗಾನದ ಬಗ್ಗೆ ಇಲ್ಲಿನ ದಕ್ಷಿಣ ಕನ್ನಡಿಗರಿಗಿರುವ ಅಜ್ಞಾನವನ್ನು ತೋರ್ಪಡಿಸಲಾಯಿತು.

Saturday, December 20, 2008

ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ


ಬೆಂಗಳೂರು ದಶಂಬರ ೨೦: ಈ ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ಸಿನ ಒಬ್ಬೊಬ್ಬರೇ ತಮ್ಮ ದೇಶದ್ರೋಹಿತನವನ್ನು ಪ್ರಚುರಪಡಿಸುತ್ತಿರುವುದು ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನಿಜ ಬಣ್ಣ ಬಯಲಾಗುತ್ತಿದೆ. ಎಲ್ಲಾ ಸಂಸದರು ಈ ದಾಳಿಯನ್ನು ಖಂಡಿಸಿದರೆ ಈ ಅಬ್ದುಲ್ ರೆಹಮಾನ್ ಅಂತುಳೆ ಎಂಬ ಒಬ್ಬ ಮುಸ್ಲಿಂ ರಾಜಕಾರಣಿ ಪಾಕಿಸ್ತಾನದ ಪರ ಹೇಳಿಕೆಗಳನ್ನು ಕೊಡುತ್ತಿರುವುದು, ಒಬ್ಬ ಮುಸ್ಲಿಂ ಯಾವತ್ತೂ ಈ ದೇಶಕ್ಕೆ ನಿಷ್ಠನಾಗಿರಲು ಸಾಧ್ಯವಿಲ್ಲ ಎಂಬುದನ್ನು ನಿಜ ಮಾಡಲು ಹೊರಟಿರುವಂತಿದೆ.

ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಹೇಮಂತ್ ಕರ್ಕರೆ ಮೊದಲಾದವರ ಬಲಿದಾನವನ್ನು ನಿಕೃಷ್ಟವಾಗಿಸಲು ಹೊರಟಿರುವುದು ಈ ಅಂತುಳೆ ಎಂಬ ಮತಾಂಧನ ಹುಂಬತನವನ್ನು ತೋರಿಸುತ್ತದೆ. ವೀರ ಮರಣ ಹೊಂದಿದ ಮೂವರು ಅಧಿಕಾರ್‍ಇಗಳನ್ನು ಹಿಂದೂ ಭಯೋತ್ಪಾದಕರು ಮುಸ್ಲಿಂ ವೇಷದಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂಬ ಬಾಲಿಶ ಹಾಗೂ ದೇಶದ್ರೋಹಿ ಹೇಳಿಕೆಗಳನ್ನು ಕೊಟ್ಟು ಸಮಸ್ತ ಹಿಂದೂಗಳನ್ನು ಭಯೋತ್ಪಾದಕರೆಂದು ಬೊಟ್ಟು ಮಾಡಿ ತೋರಿಸುತ್ತಿದ್ದಾನೆ. ಈ ಮತಾಂಧನ ಹಿನ್ನೆಲೆಗಳನ್ನು ಗಮನಿಸಿದರೆ ಇವನಿಗೆ ಪಾಕಿಸ್ತಾನದ ಐ.ಎಸ್.ಐ. ಹಾಗೂ ದಾವೂದ್ ಇಬ್ರಾಹಿಂ ನಂಟು ಇರುವುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಇವ ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿಯ ಮೇಲೆ ಕೂತಿದ್ದವ ಹಾಗೂ ಅವನ ಕಾಲದಲ್ಲಿ ಮುಂಬೈನಲ್ಲಿ ಸಾಕಷ್ಟು ಅವಾಂತರಗಳು ನಡೆದಿದ್ದವು. ಇಂತಹ ಒಬ್ಬ ರಾಜಕಾರಣಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರೆ ಪ್ರಧಾನಿ ಪಟ್ಟದಲ್ಲಿ ಕೂತ ಇನ್ನೊಬ್ಬ ರಾಜಕಾರಣಿ ತುಟಿ ಪಿಟಿಕ್ ಎನ್ನದೆ ಸುಮ್ಮನಿರುವುದು ಪ್ರಧಾನಿಯ ಮೇಲೆಯೇ ಸಂಶಯ ಬರುವಂತೆ ಮಾಡಿದೆ.

ಈಗ ಕಾಂಗ್ರೆಸ್ ಪಕ್ಷದ ದೇಶನಿಷ್ಠೆಯನ್ನು ಒರೆಗೆ ಹಚ್ಚುವ ಸಮಯ ಬಂದಿದೆ. ಈಗ ಎಲ್ಲರೂ ತಮ್ಮ ನಿಜವಾದ ಬಣ್ಣ ತೋರಿಸಲಾರಂಭಿಸಿರುವುದು ಒಂದು ಗಂಭೀರ ವಿಷಯವಾಗಿದೆ.ಅಲ್ಲದೆ ಈ ಭಯೋತ್ಪಾದಕರ ಧಾಳಿಯಾದ ಮೇಲೆ ನಮ್ಮೆ ದೇಶದಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವವರು ಜಾಸ್ತಿಯಾಗಿದ್ದಾರೆ. ಅರುಂಧತಿ ರಾಯ್, ಅಂತುಳೆ, ಆರ್.ಆರ್.ಪಾಟೀಲ್, ಅಚ್ಯುತಾನಂದ್, ವಿಲಾಸ್ ರಾವ್ ದೇಶ್‌ಮುಖ್ ಮೊದಲಾದವರು ಈಗ ಹಿಂದೂವಿರೋಧಿ, ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವುದು ಆತಂಕದ ವಿಷಯವಾಗಿದೆ. ಇವರನ್ನು ಇನ್ನೂ ಬಂಧಿಸದೆ ಹಾಗೆಯೇ ಬಿಟ್ಟಿರುವುದು ಕೇಂದ್ರ ಸರಕಾರದ ಹಿಂದೂ ಹಾಗೂ ದೇಶವಿರೋಧಿ ನೀತಿಯ ಸಮರ್ಥನೆಯೇ?.

ಇಪ್ಪತ್ತು ಭಯೋತ್ಪಾದಕರ ಪಟ್ಟಿ ನೀಡಿ, ಅವರ ಹಸ್ತಾಂತರದ ಬಗ್ಗೆ ಇನ್ನೂ ಮೀನ ಮೇಷ ಎಣಿಸುತ್ತಿರುವ ಈ ಕಾಂಗ್ರೆಸ್ ಸರಕಾರ, ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿನ ವಿಷಯವಾಗಿರುವುದಕ್ಕೆ ಯಾವ ಉತ್ತರ ನೀಡುತ್ತದೆ?. ಪಾಕ್ ಮೇಲೆ ದಾಳಿ ಮಾಡಿದರೆ ಎಲ್ಲಿ ಮುಸ್ಲಿಂ ಮತಗಳು ತಮಗೆ ತೊಡಕಾಗುವುದೋ ಎಂಬ ತುಚ್ಛ ಯೋಚನೆಯಲ್ಲಿಯೇ ಈ ಕಾಂಗ್ರೆಸ್ ಸರಕಾರ ಕಾಲ ತಳ್ಳುತ್ತಿದೆ. ಹೇಗಿದ್ದರೂ ಹಿಂದೂಗಳ ಮತ ತಮಗೇ ಗ್ಯಾರಂಟಿ, ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಂಡರೂ ಅವರು ಮತ ಮಾತ್ರ ಕಾಂಗ್ರೆಸ್ಸಿಗೇ ಹಾಕುತ್ತಾರೆ ಎಂಬ ಭಂಡ ನಂಬಿಕೆ ಈ ಸರಕಾರದ್ದು. ಈ ಕಾಂಗ್ರೆಸ್ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತ ನೀಡುವವ ನಿಜವಾಗಲೂ ಈ ದೇಶವನ್ನು ಪ್ರೀತಿಸುವವನಾಗಲು ಸಾಧ್ಯವೇ ಇಲ್ಲ. ಅವ ಖಂಡಿತಾ ದೇಶದ್ರೋಹಿಯೇ ಸರಿ.

Friday, December 19, 2008

ಮಾರ್ವಾಡಿಗಳ ಹೊಸ ವ್ಯಾಪಾರ ತಂತ್ರ



ಬೆಂಗಳೂರು ದಶಂಬರ ೧೯: ಮಾರ್ವಾಡಿ ವ್ಯಾಪಾರಿಗಳು ಇತ್ತೀಚೆಗೆ ಹೊಸ ವ್ಯಾಪಾರ ತಂತ್ರವನ್ನು ಶುರುಮಾಡಿಕೊಂಡಿದ್ದಾರೆ. ಅದು ಈ ಮುಗ್ದ ಜನರನ್ನು ಮರುಳು ಮಾಡುವ ಹೊಸ ವ್ಯಾಪಾರ ತಂತ್ರ.

ಈ ವ್ಯಾಪಾರ ತಂತ್ರಕ್ಕೆ ಜನ ಮುಗಿಬಿದ್ದು ಮರುಳಾಗುತ್ತಿರುವುದು ನಮ್ಮ ಜನರ ಕೊಳ್ಳುವಿಕೆ ಬಗೆಗಿನ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಅದು ಮಿಕ್ಸಿ (Mixer Grider) ನ ವ್ಯಾಪಾರ. ನಿಮ್ಮ ಹಳೆಯ ಮಿಕ್ಸಿ ಕೊಟ್ಟು ಹೊಚ್ಚ ಹೊಸ ಮಿಕ್ಸಿ ಕೊಳ್ಳುವ ವ್ಯಾಪಾರ, ಅಲ್ಲದೆ ಹಳೆಯ ಮಿಕ್ಸಿಗೆ ರೂ.600 ರಿಂದ ಸಾವಿರ ರೂಪಾಯಿವರೆಗೆ ಕೊಡುತ್ತಾರೆ. ಆದರೆ ಹೊಸ ಮಿಕ್ಸಿ ಕೊಂಡರೆ ಮಾತ್ರ.

ಇಲ್ಲಿದೆ ಅದಕ್ಕೆ ಪೂರಕವಾದ ಲೆಕ್ಕ.

ಹೊಸ ಮಿಕ್ಸಿಯ ಬೆಲೆ MRP Rs.2880 ಎಂದಿಟ್ಟುಕೊಳ್ಳಿ
ಹಳೆಯ ಮಿಕ್ಸಿಯ ಬೆಲೆ Rs. 600
ನೀವು ಕೊಡುವ ಬೆಲೆ Rs.2280

ಇಲ್ಲಿ ಅವರು ಮಿಕ್ಸಿಯ ಮುಖಬೆಲೆಯ ಮೇಲೆ ನಿಮ್ಮ ಹಳೆಯ ಮಿಕ್ಸಿಯ ಬೆಲೆಯನ್ನು ಕಳೆಯುತ್ತಾರೆ. ಆದರೆ ಮುಖಬೆಲೆಯೇ ನಿಜವದ ಬೆಲೆ ಅಲ್ಲ ಎಂಬುದು ನಮ್ಮ ಮುಗ್ದ ಜನರಿಗೆ ಹೇಗೆ ತಿಳಿಯುತ್ತದೆ?. ಮೊದಲು ಬಿಗ್ ಬಜಾರ್ ಶುರುವಾದ ಸಮಯ ಒಂದು ಕಂಪೆನಿಯ ಮಿಕ್ಸಿಯನ್ನು MRPಗಿಂತ ಕಡಿಮೆಗೆ ಅಂದರೆ ಅದರ MRP Rs.1900 ಇತ್ತು, ಅದನ್ನು ಕೇವಲ Rs.600ಕ್ಕೆ ಕೊಡುತ್ತಿದ್ದರು. ಅಂದರೆ ಮುಖಬೆಲೆಯ ಮೂರನೇ ಒಂದು ಬೆಲೆಗೆ...?. ಹಾಗಾದರೆ ಆ ಮಿಕ್ಸಿಯ ನಿಜವಾದ ಬೆಲೆ ಎಷ್ಟು?.

ಹಾಗೆಯೇ ನಮ್ಮ ಪಕ್ಕದ ಮನೆಯವರೊಬ್ಬರು ಇದೇ ಥರಾ ಹಳೆಯ ಮಿಕ್ಸಿ ಕೊಟ್ಟು ಹೊಸ ಮಿಕ್ಸಿ ಕೊಂಡ ಸಂಭ್ರಮದಲ್ಲಿ ನಮ್ಮೆದುರು ಹೇಳಿ ಹೆಮ್ಮೆ ಪಡುತ್ತಿದ್ದರು. ನಾನು ಅವರಿಗೆ ತಿಳಿಹೇಳಿದೆ.ಅವರು Rs.3480 ಮುಖಬೆಲೆಯ ಮಿಕ್ಸಿಯನ್ನು ಹಳೆಯ ಮಿಕ್ಸಿ ಕೊಟ್ಟು Rs.2880 ಕ್ಕೆ ಕೊಂಡಿದ್ದರು. ಆದರೆ ಅದೇ ಮಿಕ್ಸಿಯ ಬೆಲೆ ಬಿಗ್ ಬಜಾರ್‌ನಲ್ಲಿ ವಿಚಾರಿಸಿದಾಗ ಅದರ ಬೆಲೆ Rs.2880 ಎಂದು ತಿಳಿಯಿತು. ಆಗಲೇ ನನಗೆ ಗೊತ್ತಾಗಿದ್ದು ಈ ಮಾರ್ವಾಡಿಗಳ ಮೋಸದ ವ್ಯಾಪಾರ. ಅಂದರೆ ನೀವು ಕೊಡುವ ಹಳೆಯ ಮಿಕ್ಸಿಯ ಬೆಲೆ ಇಲ್ಲಿ ಶೂನ್ಯ. ಆದರೆ ನಾವು ವ್ಯತ್ಯಾಸದ ಮೌಲ್ಯ ಶೂನ್ಯ ಎಂದು ತಿಳಿಯದೆ ಟೋಪಿ ಹಾಕಿಸಿಕೊಳ್ಳುತ್ತಿದ್ದೇವೆ.

"ನಿಮ್ಮಲ್ಲಿ ಯಾರಾದರೂ ಟೋಪಿ ಹಾಕಿಸಿಕೊಂಡಿದ್ದೀರಾ?" ಇದ್ದರೆ ತಿಳಿಸಿ...ಇಲ್ಲದಿದ್ದರೆ ಹುಶಾರಾಗಿರಿ.

Wednesday, December 17, 2008

ಚೈನಾದ ಗುಪ್ತಚಾರರು ಬೆಂಗಳೂರಿನಲ್ಲಿ



ಬೆಂಗಳೂರು ದಶಂಬರ ೧೭ :ಇತ್ತೀಚಿನ ಮುಂಬೈ ಭಯೋತ್ಪಾದಕ ದಾಳಿಯ ನೆನಪು ಮಾಸುವ ಮುನ್ನವೇ ಇನ್ನೊಂದು ಭಯೋತ್ಪಾದಕ ರಾಷ್ಟ್ರವಾದ ಚೈನಾ ಭಾರತದಲ್ಲಿ ಸದ್ದಿಲ್ಲದೆ ತನ್ನ ಭಯೋತ್ಪಾದನೆಯ ಕಬಂಧ ಬಾಹು ಚಾಚುತ್ತಿದೆ.

ಅದೂ "ಐ.ಟಿ.ಸಿಟಿ" ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ನಗರದಲ್ಲಿ ಚೈನಾದ ಕೆಲವು ಗುಪ್ತಚಾರರು ತಮ್ಮ ಕೈಚಳಕ ತೋರಿರುವುದು ಗಂಭೀರ ವಿಷಯವಾಗಿದೆ. ಇದು ಬಹಿರಂಗವಾದದ್ದು ಇನ್ಫೋಸಿಸ್ ಸಂಸ್ಥೆಯ ಕಾಂಟ್ರಾಕ್ಟ್ ಚೈನಾದ ಒಂದು ಸಂಸ್ಥೆಯ ಪಾಲಾಗಿರುವುದು ಹೇಗೆ ಎಂಬುದನ್ನು ತನಿಖೆಪಡಿಸಿದಾಗಲೇ. ಅಂದರೆ ಇನ್ಫೋಸಿಸ್ ಸಂಸ್ಥೆಯ ಟೆಂಡರ್ ಬೆಲೆ ಬಹಿರಂಗವಾಗಲು ಹೇಗೆ ಸಾಧ್ಯ?. ಇದನ್ನು ಅಂತರ್ಜಾಲದ ಮೂಲಕ ಹ್ಯಾಕ್ ಮಾಡಿ, ಕಡತ ಜಾಲಾಡಿ ಇನ್ಫೋಸಿಸ್ ಸಂಸ್ಥೆಯ ಟೆಂಡರ್ ಬೆಲೆಗಿಂತ ಕಡಿಮೆ ಬೆಲೆ ನಮೂದಿಸಿ ಈ ಕಾಂಟ್ರಾಕ್ಟ್ ಪಡೆಯಲಾಗಿದೆ.
ಇದನ್ನು ಮಾಡಿದವರಾರು?
ಇದರ ಹಿಂದೆ ದೊಡ್ಡ ಜಾಲವೇ ಇದೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಚೈನಾ ರಾಷ್ಟ್ರೀಯರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿತ್ತಿರುವ ಚೈನಾ ವಿದ್ಯಾರ್ಥಿಗಳು, ಚೈನಾದ ಹ್ಯಾಕರ್‌ಗಳು....ಮುಂತಾದವರು ಈ ಒಂದು ದೊಡ್ಡ ರಾಷ್ಟ್ರ ದ್ರೋಹದ ಕೆಲಸದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ. ಚೈನಾ ಸರಕಾರ ಈ ವಿದ್ಯಾರ್ಥಿಗಳು ಹಾಗೂ ನೌಕರರನ್ನೇ ಗುಪ್ತಚಾರರನ್ನಾಗಿ ಮಾಡಿ, ಅವರಿಂದ ಎಲ್ಲ ರೀತಿಯ ಗುಪ್ತ ವಿಷಯಗಳನ್ನು ಪಡೆಯುತ್ತಿದೆ. ಅಂದರೆ ಬೆಂಗಳೂರು ತಂತ್ರಾಶದಲ್ಲಿ ಮುಂದುವರಿಯಲು ಕಾರಣವೇನು, ಅದರ ಹಿನ್ನೆಲೆ,ಕಾರಣಗಳು ಮುಂತಾದ ಮಾಹಿತಿಯನ್ನು ಗುಪ್ತವಾಗಿ ಪಡೆಯುತ್ತಿದೆ. ಬೆಂಗಳೂರಿನ ಅನೇಕ ತಂತ್ರಾಂಶ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಚೀನೀಯರು ಈ ದೇಶಕ್ಕೆ ಮುಳ್ಳಾಗಿ, ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ.
ಚೈನೀಯರು ಈಗ ತಂತ್ರಜ್ಞಾನವನ್ನು ಕದಿಯಲು ಶುರು ಮಾಡತೊಡಗಿರುವುದು ಅವರ ಮೆದುಳು ಖಾಲಿಯಾಗಿರುವುದರ ಸೂಚನೆಯೇ?. ಇದೇ ಚೈನಾದ ವ್ಯಕ್ತಿಯೊಬ್ಬ ಬಲ್ಜಿಯಂನಲ್ಲಿ ಕೂಡಾ ತಂತ್ರಜ್ಞಾನ ಕದಿಯಲು ಹೋಗಿ ಸಿಕ್ಕಿ ಬಿದ್ದು, ಈ ಚೈನೀಯರ ದೇಶದ್ರೋಹಿತನ ಅಲ್ಲಿಯೂ ಬಯಲಾಯಿತು. ಅವನಿಂದ ಪ್ರಪಂಚದ ಎಲ್ಲೆಡೆ ಈ ಚೈನಾದ ಗುಪ್ತಚಾರರು ತಂತ್ರಜ್ಞಾನ ಕದಿಯುವಲ್ಲಿ ಕಾರ್ಯಮಗ್ನರಾಗಿದ್ದಾರೆ ಎಂಬ ವಿಷಯ ಬಹಿರಂಗವಾಯಿತು.
ಎಚ್ಚರಿಕೆ ಅಗತ್ಯ
ಈಗಲಾದರೂ ಕರ್ನಾಟಕ ಸರಕಾರ ಹಾಗೂ ಭಾರತ ಸರಕಾರಗಳು ಎಚ್ಚೆತ್ತು ಈ ಚೈನಾದ ವಿದ್ಯಾರ್ಥಿಗಳು, ನೌಕರರ ಬಗ್ಗೆ ನಿಗಾ ಇಟ್ಟು, ಅವರನ್ನು ಪ್ರತಿಬಂಧಿಸುವ ಬಗ್ಗೆ ವಿಚಾರ ಮಾಡಬೇಕು.


ಕೃಪೆ-ಡಿ.ಎನ್.ಎ ದಿನಪತ್ರಿಕೆ

Sunday, December 14, 2008

ನಮ್ಮ ಸಂಸದರ ಬಯಲಾದ ಬಣ್ಣ

ಬೆಂಗಳೂರು ದಶಂಬರ ೧೪: ಇತ್ತೀಚೆಗೆ ಮುಂಬೈನಲ್ಲಿ ನಡೆದ ದಾಳಿಯ ವೇಳೆ ಕೆಲವು ದೇಶದ್ರೋಹಿ ಸಂಸದರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದರೂ, ಒಗ್ಗಟ್ಟಾಗಿ ಇದನ್ನು ಖಂಡಿಸಿದ್ದು ಎಲ್ಲಾ ದೇಶಪ್ರೇಮಿಗಳಿಗೆ ಸ್ವಲ್ಪ ನೆಮ್ಮದಿ ತಂದಿತ್ತು. ಆದರೆ ಇದೇ ದಶಂಬರ ತಿಂಗಳ ೧೩ನೇ ದಿನಾಂಕದಂದು ಏಳು ವರ್ಷದ ಹಿಂದೆ ಇದೇ ದಿನ ಸಂಸತ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಕೇವಲ ೧೨ ಮಂದಿ ಹಾಜರಿದ್ದುದು ನಮ್ಮ ಸಂಸದರ ದೇಶಪ್ರೇಮವನ್ನು ಪ್ರಶ್ನಿಸುವಂತಾಗಿದೆ.
ಕೇವಲ ಮತಗಳಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡು, ಜುಜುಬಿ ಮತಕ್ಕಾಗಿ ದೇಶದ್ರೋಹದ ಕೆಲಸ ಮಾಡಲೂ ಹಿಂಜರಿಯದ ಈ ಸಂಸದರ ನಿಜ ಬಣ್ಣ ನೋಡಿ ಎಲ್ಲರೂ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಶ್ರೀಲಂಕಾದಲ್ಲಿ ತಮಿಳು ಉಗ್ರಗಾಮಿಗಳು ಅಲ್ಲಿನ ಜನರನ್ನು ಕೊಂದು, ಅಲ್ಲಿ ತಮ್ಮ ಆಳ್ವಿಕೆ ಸ್ಥಾಪಿಸಲು ಪ್ರಯತ್ನಪಡುತ್ತಿರುವ ಸಂದರ್ಭದಲ್ಲಿ ನಮ್ಮ ತಮಿಳುನಾಡಿನಲ್ಲಿ ಕರುಣಾನಿಧಿ ಎಂಬ ದೇಶದ್ರೋಹಿಯ ಮುಂದಾಳುತ್ವದಲ್ಲಿ ತಮಿಳು ಚಲನಚಿತ್ರ ನಟರು ಒಂದು ದಿನದ ಉಪವಾಸ ಕೈಗೊಂಡಾಗ ಯಾರೂ ಖಂಡಿಸಲಿಲ್ಲ. ಇವರೆಲ್ಲ ಬಹಿರಂಗವಾಗಿಯೇ ಭಯೋತ್ಪಾದಕರಿಗೆ ಬೆಂಬಲ ಸಾರಿದರೂ ತುಟಿ ಪಿಟಿಕ್ ಎನ್ನದ ಕೇಂದ್ರ ಸರಕಾರದ ದೇಶನಿಷ್ಠೆ ಬಗ್ಗೆ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತವೆ. ಆದರೆ ಅನ್ಯದೇಶದ ತಮಿಳು ಉಗ್ರಗಾಮಿಗಳಿಗೆ ಮರುಗುವ ಈ ಮಂದಿ, ಮುಂಬೈ ದಾಳಿಯಲ್ಲಿ ಮಡಿದವರಿಗೆ ಅದೇ ರೀತಿಯ ಮರುಕ ತೋರಿಸಲಿಲ್ಲ. ಏಕೆಂದರೆ ಅವರು ತಮಿಳರಲ್ಲವಲ್ಲ?. ಇಂತಹ ದೇಶದ್ರೋಹಿಗಳನ್ನು ಮೊದಲು ಬಂಧಿಸಿ ನೇಣಿಗೆ ಹಾಕಬೇಕು.
ಅದೇ ಅಲ್ಲದೆ, ಕರ್ನಾಟಕದಲ್ಲಿ ಇದೇ ದಿನ ಮಾನ್ಯ ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರು ನಡೆಸಿದ "ತರಬೇತಿ ಕಾರ್ಯಾಗಾರ" ದಲ್ಲಿ ೨೧೭ ಮಂದಿಯಲ್ಲಿ ಕೇವಲ ೮೩ ಮಂದಿ ಭಾಗವಹಿಸಿದ್ದರು ಎಂದರೆ ನಮ್ಮ ಜನರ,ರಾಜ್ಯದ, ದೇಶದ ಅಭಿವೃದ್ದಿ ಕಡೆಗೆ ಅವರುಗಳಿಗೆ ಎಂತಹ ಕಾಳಜಿ ಇದೆ ಎಂಬುದನ್ನು ಅರಿಯಬಹುದು. ಅಂದರೆ ಇಲ್ಲಿ ಜನಪರ ಕಾಳಜಿ ಮಾಯವಾಗಿದೆ. ಕೇವಲ ಸ್ವಹಿತ, ಸ್ವಜನ ಪಕ್ಷಪಾತ, ಮುಸ್ಲಿಂ ವೋಟ್ ಬ್ಯಾಂಕ್, ಚರ್ಚು ದಾಳಿಗೆ ವಿರೋಧ ಮೊದಲಾದುವುಗಳಲ್ಲಿ ಮುಳುಗಿರುವ ಈ ನಿಯತ್ತಿಲ್ಲದ ಮಂದಿಗೆ ವೋಟು ಕೊಡುವ ನಾವು ಮುಂದಿನ ಮತದಾನದಲ್ಲಿ ವೋಟ್ ಮಾಡುವ ಮುನ್ನ ಸಾವಿರ ಸಲ ಯೋಚನೆ ಮಾಡಬೇಕಾಗಿದೆ.
ನಮ್ಮ ದೇಶ ಇಂದು ಎಲ್ಲಾ ಕಡೆಗಳಿಂದ ನಗೆಪಾಟಾಲಿಗೆ ಒಳಗಾಗಿದೆ. ಮುಂಬೈ ದಾಳಿಯ ನಂತರ ಪಾಕಿಸ್ತಾನಕ್ಕೆ ೨೦ ಉಗ್ರರ ಪಟ್ಟಿ ಮಾಡಿ ಅವರ ಹಸ್ತಾಂತರಕ್ಕೆ ಗಡುವು ನೀಡಿ ವಾರಗಳೇ ಕಳೆದವು. ನಮ್ಮ ಕಡೆಯಿಂದ ಯಾವುದೇ ರೀತಿಯ ಒತ್ತಡ ಇಲ್ಲ. ಪಾಕಿಸ್ತಾನಕ್ಕೂ ಅದು ಮನದಟ್ಟಾಗಿದೆ. ಅವರಿಗೆ ಗೊತ್ತು, ಭಾರತದ ರಾಜಕಾರಣಿಗಳ ಹಣೆಬರಹ, ಅವರು ಖಂಡಿತಾ ಯುದ್ಧಕ್ಕೆ ಮುಂದಾಗುವುದಿಲ್ಲ, ಏಕೆಂದರೆ ಯುದ್ಧ ಘೋಷಣೆ ಮಾಡಿ ಭಾರತದ ಮುಸ್ಲಿಮರ ವಿರೋಧ ಕಟ್ಟಿಕೊಂಡರೆ ಮುಂದಿನ ಚುನಾವಣೆಯಲ್ಲಿ ಜಯಗಳಿಸುವುದು ಹೇಗೆ?.
ಈಗ ಇಲ್ಲೊಂದು ಪ್ರಸ್ತುತ ಸಂದೇಶವೆಂದರೆ " ರಾಜಕಾರಣಿಗಳಿಗಿಂತ ಭಯೋತ್ಪಾದಕರೇ ವಾಸಿ.....ಏಕೆಂದರೆ ರಾಜಕಾರಣಿಗಳು ಜನರನ್ನು ಒಡೆಯುತ್ತಾರೆ...ಆದರೆ ಭಯೋತ್ಪಾದಕರು ಜನರನ್ನು ಒಗ್ಗೂಡಿಸುತ್ತಾರೆ."

Tuesday, December 02, 2008

ತುಳುವೆರೆಂಕುಲು




ಡಿಸೆಂಬರ್ ೧: ನಿನ್ನೆ ಭಾನುವಾರ ಅಂದರೆ ನವೆಂಬರ್ ಮಾಸದ ಕೊನೆಯ ದಿನ ಅರ್.ವಿ.ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಒಂದು ವಿನೂತನ ಪ್ರಯೋಗ ತುಳುವೆರೆಂಕುಲು ಬೆಂಗಳೂರು (ರಿ) ಅವರಿಂದ ನಡೆಯಿತು. ಇಲ್ಲಿ ನಡೆದ ವಿಶೇಷವೆಂದರೆ ನಾವು ಆಚರಿಸುವ ಬಲೀಂದ್ರ ಹಬ್ಬದ ಆಚರಣೆಯ ಒಂದು ರೀತಿಯನ್ನು ರಂಗದಲ್ಲಿ ತೋರಿಸಲಾಯಿತು ಮತ್ತು ಸಮಾಜಕ್ಕೆ ನಾನಾ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ತುಳುನಾಡಿನ ಮೂವರನ್ನು ಬಲಿಂದ್ರ ಪುರಸ್ಕಾರ ಕೊಟ್ಟು ಸನ್ಮಾನಿಸಲಾಯಿತು.
ಶರತ್ ಪಿ. ಕಾಳಿಂಗ ರಾವ್‌ರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮ ಕೆ.ಎನ್. ಅಡಿಗರ ವೇದಿಕೆ ನಿರ್ವಹಣೆಯಲ್ಲಿ ಉತ್ತಮವಾಗಿ ಮೂಡಿ ಬಂತು. ಖ್ಯಾತ ಸಮಾಜಸೇವಕರಾದ ಪ್ರೊ. ಕೆ. ಪಿ. ಪುತ್ತೂರಾಯರು, ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹಾಗೂ ತುಳು ಸಾಹಿತಿ ಹಾಗೂ ಸಮಾಜ ಸೇವಕರಾದ ಎಂ.ಬಿ ಅಬ್ದುಲ್ ರೆಹಮಾನ್‌ರನ್ನು ಈ ವೇದಿಕೆಯಲ್ಲಿ ಪ್ರತೀ ವರ್ಷದ ಸಂಪ್ರದಾಯದಂತೆ ಸನ್ಮಾನಿಸಲಾಯಿತು.
ಅಲ್ಲದೆ ನಾನಾ ರೀತಿಯ ಮನರಂಜನೆ, ನೃತ್ಯ ಮೊದಲಾದುವುಗಳಿಂದ ಪ್ರೇಕ್ಷಕರ ಮನ ರಂಜನೆಯಾಯಿತು. ಇದರಲ್ಲಿ ಗಮನ ಸೆಳೆದದ್ದು ರಮೇಶ್ ಭಟ್ ತಂಡದ ಮೂಕಾಭಿನಯ….ನಕ್ಕು ನಕ್ಕು ಸಾಕಾಯಿತು.
ಇಂತಹ ಕಾರ್ಯಕ್ರಮಗಳಿಂದ ವಾರವೆಲ್ಲ ಕತ್ತೆ ಥರಾ ದುಡಿದ ಮನಸ್ಸಿಗೆ ಒಂಥರಾ ನೆಮ್ಮದಿ ಸಿಗುವುದಂತೂ ನಿಜ. ಈ ರೀತಿಯ ಕಾರ್ಯಕ್ರಮಗಳು ಆಗಾಗ ನಡೆಯಬೇಕಾಗಿದೆ. ಅದೂ ಬೆಂಗಳೂರಿನಲ್ಲಿರುವ ತುಳುಜನರು ಒಗ್ಗಟ್ಟಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ, ಹೊಸ ಮಿತ್ರರು, ಹಳೆ ಮಿತ್ರರುಗಳನ್ನು ಭೇಟಿ ಮಾಡುವ ಸುಯೋಗ ನಮಗಾಗುತ್ತದೆ.
ತುಳುನಾಡಿನ ಮಹನೀಯರು ಯಾರಾದರೂ ಈ ಸಂಘದ ಸದಸ್ಯರಾಗಬಯಸಿದಲ್ಲಿ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸುವುದು.

ತುಳುವೆರೆಂಕುಲು ಬೆಂಗಳೂರು (ರಿ).
ನಂ.೩೪/೨,ಶ್ರೀ ಹರಿರಾಮ ಕಾಂಪ್ಲೆಕ್ಸ್, ಕೆ.ಜಿ. ರಸ್ತೆ
ಗಾಂಧಿನಗರ, ಬೆಂಗಳೂರು-೫೬೦೦೦೯. ದೂರವಾಣಿ:೦೮೦-೨೨೨೬೭೯೯೦-೯೩

Sunday, November 30, 2008

ಇಂದು ನಿರ್ಧಾರ ತೆಗೆದುಕೊಳ್ಳದಿದ್ದರೆ…ಮುಂದಿಲ್ಲ



ಬೆಂಗಳೂರು ನವೆಂಬರ್ ೩೦: ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸ ಖಂಡನಾರ್ಹ ಮಾತ್ರವಲ್ಲ ಶಿಕ್ಷಾರ್ಹ ಕೂಡಾ. ಇದು ಭಾರದಲ್ಲಿನ ರಕ್ಷಣಾ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಉತ್ತಮ ನಿದರ್ಶನ. ಈ ರೀತಿಯ ಘಟನೆಗಳು ಪುನರಾವರ್ತಿಸುತ್ತಿದ್ದರೂ ಭಾರತ ಸರಕಾರ(ಕಾಂಗ್ರೆಸ್) ಪದೇ ಪದೇ ಹಳೇ ಹೇಳಿಕೆಗಳನ್ನು ಬಾಯಿಪಾಠ ಮಾಡಿದಂತೆ ಕೊಡುತ್ತಿರುವುದು ಭಾರತೀಯರ ಪಾಲಿನ ದುರ್ದೈವ. ಒಬ್ಬ ಅಯೋಗ್ಯ ಪ್ರಧಾನಿ (ದುರ್ಬಲ) ಹಾಗೂ ನಾಲಾಯಕ್ ಗೃಹಸಚಿವ ಈ ಹುದ್ದೆಯಲ್ಲಿ ಮುಂದುವರಿಯಲು ತಮ್ಮ ಅರ್ಹತೆಗಳನ್ನು ಕಳೆದುಕೊಂಡಿದ್ದಾರೆ ಎನ್ನಬಹುದು.

ಕೆಲವು ತಿಂಗಳುಗಳ ಹಿಂದೆಯೇ ಈ ಘಟನೆ ನಡೆಯುವ ಬಗ್ಗೆ ನಾರಾಯಣ್‌ರವರು ಎಚ್ಚರಿಸಿದ್ದರೂ, ಕೇಂದ್ರವಾಗಲೀ, ರಾಜ್ಯ ಸರಕಾರವಾಗಲೀ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಸಂಶಯಕ್ಕೆಡೆಮಾಡುತ್ತಿದೆ. ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿತೋ ಎನ್ನುವ ಸಂಶಯ ಬರುವುದು ಸಹಜ. ಏಕೆಂದರೆ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದೂ ಸಂಘಟನೆಗಳ ಕೆಲವರನ್ನು ಭಯೋತ್ಪಾದಕರೆಂದು ಬಿಂಬಿಸಿ ಅವರನ್ನು ಚಿತ್ರಹಿಂಸೆ ಕೊಟ್ಟು ತಪ್ಪನ್ನು ಒಪ್ಪಿಕೊಳ್ಳುವಂತೆ ಎ.ಟಿ.ಎಸ್. (ಭಯೋತ್ಪಾದನಾ ನಿಗ್ರಹ ದಳ) ಮೇಲೆ ಒತ್ತಡ ಹಾಕಿದ ಕೇಂದ್ರ ಸರಕಾರ, ಇವತ್ತು ಷಂಡನಂತೆ ಹೇಳಿಕೆಗಳನ್ನು ಕೊಡುತ್ತಿರುವುದು ಭಾರತ ತನ್ನ ಜಾತ್ಯಾತೀತತೆಯ ಉಚ್ಛ್ರಾಯ ಸ್ಥಿತಿಯಲ್ಲಿದೆ ಎನ್ನಲಡ್ಡಿಯಿಲ್ಲ. ಏಕೆಂದರೆ ಕಾಂಗ್ರೆಸ್‌ನ ರಾಜಕೀಯಕ್ಕೆ ನಾವು ಇಂದು ಹತ್ತಾರು ದಕ್ಷ ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ.

ಅಮೆರಿಕಾ, ಇಸ್ರೇಲ್, ರಶ್ಯಾ ಅಥವಾ ಬ್ರಿಟನ್‌ನಲ್ಲಿ ಈ ಥರದ ಘಟನೆಗಳೇನಾದರೂ ನಡೆದಿದ್ದರೆ ಇವತ್ತು ಪಾಕಿಸ್ತಾನದಂತಹ ಭಯೋತ್ಪಾದಕ ರಾಷ್ಟ್ರ ನಮ್ಮ ಭೂಪಟದಲ್ಲಿ ಕಾಣಸಿಗುತ್ತಿರಲಿಲ್ಲ. ಭಾರತದಲ್ಲಿ ಮಾತ್ರ ಏಕೆ ಹೀಗೆ?. ನಾವು ದೇಶದ ರಕ್ಷಣೆಗಾಗಿ, ಇಂತಹ ಭಯೋತ್ಪಾದಕ ಘಟನೆಗಳನ್ನು ನಿಭಾಯಿಸುವುದಕ್ಕಾಗಿ ಪ್ರತೀ ಸಲ ಹಣ ವ್ಯಯಿಸುವ ಬದಲು, ಭಯೋತ್ಪಾದನೆಯ ಮೂಲವಾದ ಪಾಕಿಸ್ತಾನದ ಮೇಲೆ ದಾಳಿ ಮಾಡಿ, ಅಲ್ಲಿನ ಎಲ್ಲ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿ ಒಂದೇ ಸಲ ಹಣ ವ್ಯಯಿಸುವುದು ಸೂಕ್ತವೆನಿಸುತ್ತದೆ. ಈ ಥರದ ಭಯೋತ್ಪಾದನೆಗಳನ್ನು ತಡೆಯಲು, ನಿಲ್ಲಿಸಲು ಭಾರತ ಇನ್ನೆಷ್ಟು ಬಲಿ ನೀಡಬೇಕಾಗುವುದೋ?.

ಕೇಂದ್ರ ಸರಕಾರ ಇವತ್ತು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಮತಾಂಧರ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವುದು ಈ ಎಲ್ಲಾ ಘಟನೆಗಳಿಗೆ ಕಾರಣ. ಮುಂಬೈ ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡ ತಳ್ಳಿಹಾಕುವಂತಿಲ್ಲ. ಏಕೆಂದರೆ ದಾವೂದ್ ಇಬ್ರಾಹಿಂ ಎಂಬ ಭಯೋತ್ಪಾದಕ ಕರಾಚಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಇದ್ದರೂ, ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳು ಇರುವ ಮಾಹಿತಿ ಇದ್ದರೂ, ಭಾರತದ ಪೋಲಿಸ್, ಸಾಫ್ಟ್‌ವೇರ್ ಕಂಪೆನಿ, ಪೋಲಿಸ್ ಇಲಾಖೆ, ಮಿಲಿಟರಿಯಲ್ಲಿ ಭಯೋತ್ಪಾದಕರು ಕೆಲಸ ಮಾಡುತ್ತಿದ್ದರೂ, ಅವರು ಮುಸಲ್ಮಾನರೆಂಬ ಒಂದೇ ಕಾರಣಕ್ಕೆ ಕ್ರಮ ತೆಗೆದುಕೊಳ್ಳದಿರುವುದು ಈ ಕಾಂಗ್ರೆಸ್ ಸರಕಾರದ ದೇಶದ್ರೋಹಿತನವನ್ನು ಸೂಚಿಸುತ್ತದೆ. ನಾನು ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಮಾತ್ರ ದೂರುತ್ತಿಲ್ಲ, ಈ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಕಮ್ಯೂನಿಷ್ಟರು, ಬುದ್ದಿಜೀವಿಗಳು ಹಾಗೂ ಜಾತ್ಯಾತೀತ ಸೋಗಿನ ರಾಜಕಾರಣಿಗಳನ್ನು ಕೂಡಾ ಇದೇ ಸಾಲಿನಲ್ಲಿ ಸೇರಿಸಬಹುದು.

ಈಗ ನಾವು ಕಠಿನ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದೆ ಇಂತಹ ಅನೇಕ ಘಟನೆಗಳು ನಡೆಯುವುದರಲ್ಲಿ ಸಂಶಯವಿಲ್ಲ. ಈಗ ಭಯೋತ್ಪಾದಕ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶಗಳ ಮೇಲೆ ಧಾಳಿ ಮಾಡಿ, ಎಲ್ಲಾ ಭಯೋತ್ಪಾದಕ ಶಿಬಿರಗಳನ್ನು ಮಟ್ಟ ಹಾಕಿ, ಅಲ್ಲಿ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಕೆಲಸ ಆಗಬೇಕು. ಈ ಎರಡೂ ರಾಷ್ಟ್ರಗಳ ಪ್ರಧಾನಿಗಳಿಗೆ, ಅಧ್ಯಕ್ಷರಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಬೇಕು. “ನೀವು ಮಾಡಿ…..ಇಲ್ಲಾ ನಾವು ಮಾಡುತ್ತೇವೆ”. ಇದು ನಮ್ಮ ಅತೀ ಬಲಹೀನ ಪ್ರಧಾನಿಗೆ ಸಾಧ್ಯವೇ?.

ಸಾಕು……ಇವತ್ತಿಗೆ…..ಇಂದೇ ನಿರ್ಧಾರ ತೆಗೆದುಕೊಳ್ಳಿ…ಇಂದಿಲ್ಲದಿದ್ದರೆ ಮುಂದಿಲ್ಲ……..ಇದು ಭಾರತ ಸರಕಾರಕ್ಕೆ ಎಚ್ಚರಿಕೆ, ಸಕಲ ಭಾರತೀಯರಿಗೆ ಎಚ್ಚರಿಕೆ….ಮುಂದಿನ ಮತದಾನದಲ್ಲಿ ಭಯೋತ್ಪಾದಕರನ್ನು ಚುನಾಯಿಸಬೇಡಿ. ದೇಶದ್ರೋಹಿ ರಾಜಕಾರಣಿಗಳನ್ನು ಚುನಾಯಿಸದಿರಿ. ಮತ್ತೆ ನೀವು ಈ ಮಿಥ್ಯ ಜಾತ್ಯಾತೀತರನ್ನು ಚುನಾಯಿಸಿದರೆ, ಇವತ್ತು ಮುಂಬೈನಲ್ಲಿ ನಡೆದದ್ದು ನಾಳೆ ದೇಶದ ಎಲ್ಲ ನಗರಗಳಲ್ಲಿ ನಡೆಯುವುದರಲ್ಲಿ ಯಾವ ಸಂಶಯವಿಲ್ಲ.
ಧಿಕ್ಕಾರವಿರಲಿ ಈ ರಾಜಕಾರಣಿಗಳಿಗೆ…..ದೇಶದ್ರೋಹಿಗಳಿಗೆ…..ಭಯೋತ್ಪಾದಕರಿಗೆ…….

Monday, November 24, 2008

"ಅಭಿನಂದನ...ಹೀಗೊಂದು ಪುರಸ್ಕಾರ ವೇದಿಕೆ"





ಬೆಂಗಳೂರು ನವೆಂಬರ್ ೨೪:ನವೆಂಬರ್ ೨೩ನೇ ತಾರೀಖು ಸಾಯಂಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ ಇತ್ತ NMKRV ಸಭಾಂಗಣದಲ್ಲಿ ರಾಘವೇಂದ್ರ ಕಾಂಚನ್‌ರ ನಿರೂಪಣೆಯಲ್ಲಿ ಸಂಗೀತ ಸುಧೆಯೇ ಹರಿಯುತ್ತಿತ್ತು. ಅತ್ತ ಭಾರತ ತಂಡದಿಂದ ರನ್‌ಗಳ ಸುರಿಮಳೆಯಾಗುತ್ತಿದ್ದರೆ ಇತ್ತಾ ಸಭಾಂಗಣದಲ್ಲಿ ಅಭಿನಂದನ ತಂಡದಿಂದ ಜಿಟಿಜಿಟಿ ಮಳೆಯ ನಡುವೆ ಸಂಗೀತದ ಸುಧೆಯ ಸುರಿಮಳೆ.
ಹೌದು...ಅಂದು ಅಭಿನಂದನ ಬಳಗದ "ರಂಗೋಲಿ" (ಸುಶ್ರಾವ್ಯ ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ), ರಂಗು ರಂಗಾಗಿ ಮೂಡಿಬಂದಿದ್ದು ಸೇರಿದ ಸಕಲ ಕನ್ನಡ ಕಲಾ ರಸಿಕರ ಕಣ್ಮನ ತಣಿಸುವಲ್ಲಿ ಸಫಲವಾಯಿತು. ಈ ಕಾರ್ಯಕ್ರಮದ ಹೆಸರೇ "ಅಭಿನಂದನ...ಹೀಗೊಂದು ಪುರಸ್ಕಾರ ವೇದಿಕೆ" ಹೇಳುವಂತೆ ಇದೊಂದು ಉದಯೋನ್ಮುಖ ಗಾಯಕರು, ಕಲಾವಿದರುಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಜನಮನಕ್ಕೆ ಪರಿಚಯಿಸುವ ಒಂದು ಯುವ ವೇದಿಕೆ. ಶ್ರೀ ವಾಸುದೇವ ಅಡಿಗರಿಂದ ಉದ್ಘಾಟನೆಗೊಂಡು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ರಾಘವೇಂದ ಕಾಂಚನ್‌ರ ನಿರೂಪಣೆ. ಚಿತ್ರ ನಿರ್ಮಾಪಕರಾದ ಬಾ.ಮ.ಹರೀಶ್, ಶ್ರೀನಿವಾಸ ರಾಯರು, ಕಬಡ್ಡಿ ವೆಂಕಟೇಶ್, ಚಿತ್ರ ನಿರ್ದೇಶಕರಾದ ನರೇಂದ್ರಬಾಬು, ಉದಯೋನ್ಮುಖ ಚಿತ್ರ ನಿರ್ದೇಶಕ ಅನೂಪ್, ಖ್ಯಾತ ಸಂಗೀತ ನಿರ್ದೇಶಕ ರಾಜನ್ ಹಾಗೂ ಉದಯ ಶೆಟ್ಟಿಯವರನ್ನು ಆತ್ಮೀಯವಾಗಿ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಎಲ್ಲ ಗಣ್ಯರನ್ನೂ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಗಾಯಕರಾದ ಸರ್ವಶ್ರೀ ಬದರಿಪ್ರಸಾದ್, ಅರವಿಂದ್, ದೀಕ್ಷಿತ್, ಮಾಸ್ಟರ್ ಧನುಷ್, ಶ್ರೀಮತಿ ಕುಶಲ ಮೊದಲಾದವರ ಸಿರಿಕಂಠದಲ್ಲಿ ಹಳೆಯ ಶ್ರೀಮಂತ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿಬಂದಿತ್ತು. ಹಳೆಯ ಕನ್ನಡ ಗೀತೆಗಳಾದ "ಮಾಮರವೆಲ್ಲೋ, ಕೋಗಿಲೆಯೆಲ್ಲೋ", "ಎಲ್ಲಿರುವೇ...ಮನವ ಕಾಡುವ ರೂಪಸಿಯೇ" ಮುಂತಾದ ಕನ್ನಡ ಗೀತೆಗಳು, "ಜಾನೇ ಕಹಾಂ ಗಯೇ ವೊ ದಿನ್", "ಜವಾನೀ ದಿವಾನಿ" ಮುಂತಾದ ಹಿಂದಿ ಹಾಡುಗಳು ನೆರೆದ ಎಲ್ಲರ ಮನಸೂರೆಗೊಂಡು ಮನತಣಿಸಿತು.
ಅಂದ ಹಾಗೆ ನಾನು ಈ ರಸಸಂಜೆಗೆ ಅಹ್ವಾನಿತನಾದದ್ದು ಒಂದು ಆಕಸ್ಮಿಕ. ಅಂದು ಭಾನುವಾರ ನಮ್ಮ ಸಂಬಂಧಿಕರ ನಿಶ್ಚಿತಾರ್ಥಕ್ಕೆ ಹೋಗಿದ್ದೆ, ಅಲ್ಲಿ ಆಕಸ್ಮಿಕವಾಗಿ ಸಿಕ್ಕಿದವರು ಶ್ರೀ ಕೆ.ಎನ್.ಅಡಿಗರು, ಹೀಗೆ ಮಾತನಾಡುತ್ತಾ ಅವರು "ಇವತ್ತು ಸಂಜೆ ಫ್ರೀ ಆಗಿದ್ದರೆ ಒಂದು ಕಾರ್ಯಕ್ರಮಕ್ಕೆ ಬನ್ನಿ" ಎಂದು ಅದರ ವಿವರ ನೀಡಿದರು. ನಾನೂ ನೋಡೋಣ ಎಂದು ಜಿಟಿಜಿಟಿ ಮಳೆಯನಡುವೆ, ಕ್ರಿಕೆಟ್ ಹುಚ್ಚನ್ನು ಮರೆತು ಆ ಒಂದು ಕಾರ್ಯಕ್ರಮದ ಒಬ್ಬ ಪ್ರೇಕ್ಷಕನಾಗಿ ಹೋಗಿದ್ದೆ. ಅಲ್ಲಿ ಹೋದ ಮೇಲೆ ಇನ್ನೂ ಇಂತಹ ರಸಸಂಜೆಗಳಲ್ಲಿ ಭಾಗವಹಿಸುವ ಒಂದು ಅವಕಾಶ ಮಾತ್ರ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ನನಗೆ ನಾನೇ ಪ್ರತಿಜ್ಞೆ ಮಾಡಿಕೊಂಡಿದ್ದೇನೆ......ಅಡಿಗರೇ...ಮತ್ತೊಮ್ಮೆ ಥ್ಯಾಂಕ್ಸ್...ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ.

Tuesday, November 18, 2008

ಅಮರ್ ಸಿಂಗ್ ಎಂಬ ಭಯೋತ್ಪಾದಕ

ಬೆಂಗಳೂರು ನವೆಂಬರ್ ೧೮: ಮತ್ತೊಬ್ಬ ರಾಜಕಾರಣಿ ಬಹಿರಂಗವಾಗಿಯೇ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಒಂದು ಆತಂಕಕಾರಿ ಸುದ್ದಿ ನೈಜ ಭಾರತೀಯರಿಗೆ ಬರಸಿಡಿಲು ಎರಗುವಂತೆ ಬಂದೆರಗಿದೆ. ತಮಿಳುನಾಡಿನ, ಆಂಧ್ರದ ರಾಜಕಾರಣಿಗಳ ನಂತರ ಈಗ ಉತ್ತರಪ್ರದೇಶದ ರಾಜಕಾರಣಿಗಳು ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ಸಾರಿದ್ದಾರೆ.
ಜಾಮಿಯಾ ಹತ್ಯಾಕಾಂಡದ ಇಬ್ಬರು ಸಿಮಿ ಎಂಬ ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದಾಗ ಅಮರ್ ಸಿಂಗ್ ಎಂಬ ರಾಜಕಾರಣಿಯ ಕಣ್ಣು ಕೆಂಪಾಯಿತು. ಈ ಇಬ್ಬರು ಉಗ್ರರು ಸಮಾಜವಾದಿ ಪಾರ್ಟಿಯ ಬೆಂಬಲಿಗರು. ಈಗ ಇವರ ಬಂಧನದಿಂದ ತನ್ನ ದೇಶದ್ರೋಹಿತನ ಬಯಲಾಗಬಹುದೆಂಬ ಭೀತಿಯಿಂದ ಅಮರ್ ಸಿಂಗ್ ಕೂಡಲೇ ಪತ್ರಿಕಾ ಪ್ರಕಟಣೆ ಹೊರಡಿಸಿ, ಈಗ ಬಂಧನದಲ್ಲಿರುವವರು ಭಯೋತ್ಪಾದಕರಲ್ಲ- ಅವರು ಸಾಮಾನ್ಯ ವಿದ್ಯಾರ್ಥಿಗಳು ಎಂಬುದಾಗಿ ಹೇಳಿ ಅವರಿಗೆ ಹಣ ಸಹಾಯ ಹಾಗೂ ನ್ಯಾಯಾಲಯದಲ್ಲಿ ಅವರ ಪರ ವಾದಿಸಲು ವಕೀಲರನ್ನು ಏರ್ಪಾಡು ಮಾಡಿದ. ಇದು ಕೇವಲ ಮುಸ್ಲಿಮರ ಮತ ಸೆಳೆಯುವ ತಂತ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ತನ್ನ ಪಕ್ಷದ ವರ್ಚಸ್ಸು ಹೆಚ್ಚಿಸಲು ಇದು ಸಹಾಯಮಾಡಬಹುದೆಂಬ ಭಂಡತನ. ಅಲ್ಲದೆ ರಾಜಕೀಯದಲ್ಲಿ ದೇಶ ಮಾರಿಯಾದರೂ ಪಕ್ಷದ ಗೆಲುವಿಗೆ ಶ್ರಮವಹಿಸುವ ಇಂಥಹಾ ದೇಶದ್ರೋಹಿ ರಾಜಕಾರಣಿಗಳಿರುವವರೆಗೂ ನಮ್ಮ ದೇಶದಲ್ಲಿ ಭಯೋತ್ಪಾದನೆ, ಮತಾಂತರಗಳು ಹೆಚ್ಚಾಗುತ್ತಲೇ ಇರುತ್ತದೆ.
ಕೇವಲ ಅಲ್ಪಸಂಖ್ಯಾತ ಎಂಬ ಒಂದೇ ಒಂದು ಕಾರಣಕ್ಕಾಗಿ ಅವರು ಭಯೋತ್ಪಾದಕರೆಂದು ಸಾಬೀತಾದರೂ ಕೂಡಾ ಅವರಿಗೆ ಬೆಂಬಲ ನೀಡಿದ ಈ ದೇಶದ್ರೋಹಿಯ ಮುಂದಿನ ನಡೆ ಹೇಗಿರಬಹುದು?. ಮಾಲೆಗಾಂವ್ ಸ್ಪೋಟದ ಪ್ರಕರಣದಲ್ಲಿ ಅನ್ಯಾಯವಾಗಿ ಬಂಧನಕ್ಕೊಳಗಾದ ಹಿಂದೂ ಸಂತರ ಪರವಾಗಿ ಒಂದೂ ಹೇಳಿಕೆ ಕೊಡದ ಈ ದೇಶದ್ರೋಹಿ ಈಗ ಕೇವಲ ಜುಜುಬಿ, ಪುಟಗೋಸಿ ಮುಸ್ಲಿಮ್ ಮತಗಳಿಗಾಗಿ ಅವರ ಕಾಲು ನೆಕ್ಕಿ, ಅವರ ಉಚ್ಚೆ ಕುಡಿಯಲೂ ಹೇಸದ ಕಾಂಗ್ರೆಸ್ ಸಂಸ್ಕೃತಿ ಇನ್ನೂ ತನ್ನ ರಕ್ತದಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಅಯೊಧ್ಯೆಯಲ್ಲಿ ಕರಸೇವಕರಿಂದ ರಾಮಜನ್ಮಭೂಮಿ ಯಜ್ಞ್ನ ನಡೆಯುತ್ತಿರುವಾಗ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸಾವಿರಾರು ದೇವಳಗಳು ನೆಲಸಮವಾದಾಗ ತುಟಿ ಪಿಟಿಕ್ ಎನ್ನದ ಈ ಷಂಡ ರಾಜಕಾರಣಿಗಳು, ಭಾರತದಲ್ಲಿ ಒಬ್ಬ ಮುಸ್ಲಿಮನ ಮೇಲೆ ಹಲ್ಲೆಯಾದರೂ ಅದನ್ನು ಒಂದು Breaking News ಎಂಬಂತೆ ಬಿಂಬಿಸುತ್ತಿರುವುದು ನಮ್ಮ ದೇಶದ ದುರಂತ.
ಮಾಜಿಪ್ರಧಾನಿಯಾದ ದೇವೇಗೌಡ ತಾನು ಪ್ರಧಾನಿಯಾಗಿದ್ದಿದ್ದರೆ ವಿ.ಎಚ್.ಪಿ, ಭಜರಂಗ ದಳ, ಆರ್.ಎಸ್.ಎಸ್ ನಿಷೇಧ ಮಾಡುತ್ತಿದ್ದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಇವನಿಗೆ ಸಿಮಿ, ಲಷ್ಕರ್ ಎ ತೋಯ್ಬಾ, ಎಲ್.ಟಿ.ಟಿ.ಇ, ನಕ್ಸಲೈಟ್ ಸಂಘಟನೆಗಳು, ಮುಸ್ಲಿಮ್ ಲೀಗ್, ಇಂಡಿಯನ್ ಮುಜಾಹಿದ್, ಕ್ರಿಶ್ಚಿಯನ್ ಸಂಘಟನೆಗಳು, ನ್ಯೂ ಲೈಫ್ ಮುಂತಾದವು ದೇಶಪ್ರೇಮಿ ಸಂಘಟನೆಗಳ ತರ ಕಾಣುತ್ತಿವೆ. ಇವರ ವಿರುದ್ಧ ಮಾತನಾಡುವ ಗಂಡಸುತನವನ್ನು ಪೂರ್ತಿ ಕಳೆದುಕೊಂಡಿರುವ ಇಂಥಹಾ ನಾಮರ್ದ ರಾಜಕಾರಣಿಗಳನ್ನು ಚುನಾಯಿಸುವ ಮುಠ್ಠಾಳ ಜನ ಇವತ್ತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ನೀಡುತ್ತಿರುವ ಈ ರಾಜಕಾರಣಿಗಳನ್ನು ದೇಶದ್ರೋಹದ ಆರೋಪದ ಮೇಲೆ ಯಾಕೆ ಬಂಧಿಸುವುದಿಲ್ಲ?. ಇದಕ್ಕೆ ಕಾರಣ ಕೇಂದ್ರದಲ್ಲಿರುವ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕೇಂದ್ರ ಸರಕಾರವೇ ಹೊರತು ಇನ್ನಾರೂ ಅಲ್ಲ. ಒಬ್ಬ ನಾಲಯಕ್ ಪ್ರಧಾನಿ, ಮತಿಹೀನ ರಕ್ಷಾಮಂತ್ರಿ, ಗೃಹಮಂತ್ರಿ ಹಾಗೂ Waste Body (Useless) ರಾಷ್ಟ್ರಾಧ್ಯಕ್ಷ.....ಇವು ನಮ್ಮ ದೇಶದ ಮಹಾ ದುರಂತ. ಇವರಲ್ಲಿ ಯಾರಿಗೂ ಸ್ವಂತ ನಿರ್ಧಾರ, ಭಾರತದ ಪರ ನಿರ್ಧಾರ ತೆಗೆದುಕೊಳ್ಳುವ ಒಂದು ಅಧಿಕಾರವೇ ಇಲ್ಲವೆಂದಾದಲ್ಲಿ, ಇವರು ಆ ಸ್ಥಾನದಲ್ಲಿ ಇದ್ದೂ ಏನು ಪ್ರಯೋಜನ?. ಈ ಹುದ್ದೆಗಳು ಕೇವಲ ಸುಮ್ಮನೆ ಕುಳಿತು ಸಂಬಳ ಎಣಿಸುವ ಒಬ್ಬ ನೌಕರನಂತೆ ಆಗಿರುವುದು ಒಂದು ಹಾಸ್ಯಾಸ್ಪದ.
"ಧಿಕ್ಕಾರವಿರಲಿ ಈ ದೇಶದ್ರೋಹಿ ರಾಜಕಾರಣಿಗಳಿಗೆ....ಧಿಕ್ಕಾರವಿರಲಿ ಈ ಹುದ್ದೆಗಳಿಗೆ....ಕಿತ್ತೊಗೆಯಿರಿ ಈ ದೇಶದ್ರೋಹಿ ಸರಕಾರವನ್ನು...ಹಿಂದೂ ವಿರೋಧಿ ಸರಕಾರವನ್ನು....ನಿರ್ಧಾರ ಇವತ್ತು ಸ್ವಾಭಿಮಾನಿ ಹಿಂದೂಗಳ ಕೈಯಲ್ಲಿದೆ...ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ..."

Sunday, November 16, 2008

ಅಡಿಗನ ಬಿಳಿ ಹುಲಿ

ಬೆಂಗಳೂರು ನವೆಂಬರ್ ೧೬: ಇತ್ತೀಚೆಗೆ ೨೦೦೮ರ ಬೂಕರ್ ಪ್ರಶಸ್ತಿ ಪಡೆದ "ಕನ್ನ"ಡಿಗ ಅರವಿಂದ ಅಡಿಗ ಎಂಬ ಭಾರತ ವಿರೋಧಿಗೆ ಧಿಕ್ಕಾರ ಹೇಳುತ್ತಾ ಮುಂದುವರಿಯೋಣ. ಈ ಬೂಕರ್ ಪ್ರಶಸ್ತಿ ಎಂದರೆ Commonwealth Nation ಹಾಗೂ Ireland ವಾಸಿಯ ಆಂಗ್ಲ ಪ್ರಬಂಧಕ್ಕೆ ಸಿಗುವ ಪ್ರಶಸ್ತಿ. ಆದರೆ ಇದರ ಮಾನದಂಡದ ಬಗ್ಗೆ ಅನೇಕ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತದೆ.
ಅಂದರೆ ಇತ್ತೀಚೆಗೆ ಭಾರತಕ್ಕೆ ಬಂದಿರುವ ಬೂಕರ್ ಪ್ರಶಸ್ತಿಗಳ ಪ್ರಬಂಧಗಳನ್ನು ಗಮನಿಸಿದಾಗ ಅದರ ಅಂತರಾಳ ಭಾರತ ವಿರೋಧಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಅಂದ ಮೇಲೆ ಈ ಅರವಿಂದ ಅಡಿಗ ಎಂಬ ತರ್ಲೆ ಭಾರತ ವಿರೋಧಿ ಲೇಖನ ಬರೆದು ಪ್ರಶಸ್ತಿ ಗಿಟ್ಟಿಸಿರುವುದು ಆಶ್ಚರ್ಯದ ವಿಷಯವೇನಲ್ಲ. ನಾಳೆ ಯಾವ ತಿರುಕನೂ ಪ್ರಬಲ ಭಾರತ ವಿರೋಧಿ ಲೇಖನ ಬರೆದು ಈ ಪ್ರಶಸ್ತಿ ತನ್ನದಾಗಿಸಿಕೊಳ್ಳಬಹುದು. ಆದರೆ ಪ್ರಶಸ್ತಿ ಸಿಕ್ಕಿದಾಗ ಎಲ್ಲರೂ ಬಹಳ ಖುಶಿಯಿಂದ ಕುಣಿದಿದ್ದರು...ಒಬ್ಬ ಕನ್ನಡಿಗನಿಗೆ ಈ ಪ್ರಶಸ್ತಿ ಬಂದಿದೆ ಎಂದು. ಆದರೆ ಈಗ ಎಲ್ಲ ಕನ್ನಡಿಗರೂ ತಲೆತಗ್ಗಿಸುವಂತಾಗಿರುವುದು ನಮ್ಮ ದುರ್ದೈವ. ಒಬ್ಬ ಮಂಗಳೂರಿನ ಬ್ರಾಹ್ಮಣನಾಗಿ ಈ ಥರಾ ಭಾರತದ ವಿರುದ್ಧ ಲೇಖನ ಬರೆದಿರುವ ಇವನ ದೇಶಭಕ್ತಿ(????)ಯನ್ನು ಮೆಚ್ಚಬೇಕಾದ್ದೇ. ಅರುಂಧತಿರಾಯ್ ಅವರ The God of small Things ಇರಬಹುದು, ಈ ಅಡಿಗನ The White Tiger ಇರಬಹುದು ಇವುಗಳ ಜೀವಾಳವೇ ಭಾರತ ವಿರೋಧದಿಂದ ತುಂಬಿ ತುಳುಕಾಡುತ್ತಿದೆ. ಇಂತಹ ಪ್ರಬಂಧಗಳಿಗೆ ಪ್ರಶಸ್ತಿ ಕೊಡುವವರು ಭಾರತ ವಿರೋಧಿಗಳೇ ಅಗಿದ್ದಾರೆ. ಅಂದರೆ ಅದರ ಮೂಲ ಬ್ರಿಟನ್ (ಒಂದು ಕಾಲದ ನಮ್ಮನ್ನು ಆಳಿದವರು).
ಅದೂ ಅಲ್ಲದೆ ಈ ಅಡಿಗ ತನಗೆ ಸಿಕ್ಕಿದ ಪ್ರಶಸ್ತಿಯ ಹಣವನ್ನು ತಾನು ಕಲಿತ ಶಾಲೆಗೆ ದಾನ ಮಾಡಿದ್ದು ಮತ್ತೊಂದು ತಪ್ಪು ಹೆಜ್ಜೆ. ಅಂದರೆ ಮತಾಂತರಕ್ಕೆ ಕುಮ್ಮಕ್ಕು ನೀಡುವ ಕ್ರಿಶ್ಚಿಯನ್ ಶಾಲೆಗೆ ಈ ಹಣವನ್ನು ದಾನ ಮಾಡಿ ತಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾನೆ. ಇದೇ ಹಣವನ್ನು ತಾನು ತೆಗಳಿದ ಭಾರತದ ಭಿಕ್ಷುಕರಿರಬಹುದು ಅಥವಾ ಬಡವ ಬಲ್ಲಿದರಿರಬಹುದು, ಅವರಿಗೆ ದಾನ ಮಾಡಬಹುದಿತ್ತಲ್ಲ?.

Sunday, November 09, 2008

ಬುದ್ಧಿಜೀವಿಗಳಾಗಲು ಹತ್ತು ಸೂತ್ರಗಳು


ಬೆಂಗಳೂರು ನವೆಂಬರ್ ೦೯ : ಇತ್ತೀಚೆಗೆ ಬುದ್ಧಿ ಜೀವಿಗಳ ಸಂಖ್ಯೆ ನಮ್ಮ ಭಾರತದಲ್ಲಿ ಹೆಚ್ಚಳವಾಗುತ್ತಿರುವುದು ಒಂಥರಾ ಭಯೋತ್ಪಾದಕತೆ ಹೆಚ್ಚಾಗುತ್ತಿರುವಂತೆ ಭಾಸವಾಗುತ್ತಿದೆ. ಏಕೆಂದರೆ ಅಲ್ಪಸಂಖ್ಯಾತರು ಹಿಂದೂಗಳ ವಿರುದ್ಧ ನಡೆಸುತ್ತಿರುವ ಭಯೋತ್ಪಾದಕತೆಯನ್ನು ಈ ಗೋಮುಖ ವ್ಯಾಘ್ರರಾದ ಬುದ್ಧಿಜೀವಿಗಳು ಬೆಂಬಲಿಸುತ್ತಿರುವುದು ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಅಲ್ಲದೆ ಬುದ್ಧಿ ಜೀವಿಗಳಾಗುವುದಕ್ಕೆ ಯಾವುದೇ ಅರ್ಹತೆ ಬೇಕಾಗಿಲ್ಲ. ಒಬ್ಬ ತಿರುಪೆ ಎತ್ತುವವನು ಕೂಡಾ ಭಾರತದಂತಹ ದೇಶದಲ್ಲಿ ಬುದ್ಧಿ ಜೀವಿಯಾಗಬಲ್ಲ ಎಂಬುದಕ್ಕೆ ಜೀವಂತ ಉದಾಹರಣೆಗಳು ಪ್ರತೀ ದಿನಾ ವೃತ್ತಪತ್ರಿಕೆಗಳಲ್ಲಿ ಬರುತ್ತಿರುವ ಅವರ ಹೇಳಿಕೆಗಳೇ ಸಾಕ್ಷಿ. ಅಂದರೆ ಇಲ್ಲಿ ಕೆಲವು ಸ್ಯಾಂಪಲ್, ಅಂದರೆ ಬುದ್ಧಿಜೀವಿಗಳಾಗಲು ಕೆಲವು ಅರ್ಹತೆಗಳು ಈ ರೀತಿ ಇದೆ.

೧. ಪ್ರತೀದಿನ ಹಿಂದೂ ವಿರೋಧಿ ಹೇಳಿಕೆಗಳನ್ನು ಕೊಡುತ್ತಿರಬೇಕು.ಹಿಂದೂ ದೇವತೆಗಳು, ಮಠಾಧೀಶರುಗಳನ್ನು ದಿನಾಲೂ, ಹೋದಲ್ಲೆಲ್ಲಾ
ತೆಗಳುತ್ತಿರಬೇಕು.
೨. ಎಲ್ಲಾದರೂ ಬಾಂಬ್ ಸ್ಫೋಟ ಸಂಭವಿಸಿದಲ್ಲಿ ಕೂಡಲೇ ಅಲ್ಲಿಗೆ ಧಾವಿಸಿ, ಅಪರಾಧಿ ಮುಸ್ಲಿಮನಾದಲ್ಲಿ ಅಥವಾ ಯಾವುದೇ ಅಲ್ಪಸಂಖ್ಯಾತ ವರ್ಗಕ್ಕೆ
ಸೇರಿದವನಾದಲ್ಲಿ ಅವನಿಗೆ ಬೆಂಬಲ ಸೂಚಿಸಿ ಅವನನ್ನು ಬಂಧಿಸದಂತೆ ಪೋಲೀಸರಿಗೆ ಅಡ್ಡಿ ಉಂಟುಮಾಡಬೇಕು.
೩. ಆದಷ್ಟೂ ಹಿಂದೂಗಳಿಗೆ ಎರಡು ಮದುವೆ ನಿಷೇಧ, ಒಬ್ಬರಿಗಿಂತ ಹೆಚ್ಚಿನ ಮಕ್ಕಳಾಗುವುದನ್ನು ವಿರೋಧಿಸಬೇಕು. ಹೀಗೆ ಮಾಡಿ ಅಲ್ಪಸಂಖ್ಯಾತರ
ಸಂಖ್ಯೆ ಜಾಸ್ತಿ ಆಗುವಂತೆ ಪರೋಕ್ಷವಾಗಿ ಸಹಕರಿಸಬೇಕು.
೪. ಯಾವುದೇ ಚರ್ಚ್ ಅಥವಾ ಮಸೀದಿಗಳಲ್ಲಿ ಅಕಸ್ಮಾತ್ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ನಷ್ಟ ಉಂಟಾದರೆ, ಅದಕ್ಕೆ ಹಿಂದೂ ಸಂಘಟನೆಗಳನ್ನು
ಹೊಣೆಮಾಡಬೇಕು.
೫. ಯಾವುದೇ ನಗರಗಳಲ್ಲಿ ಅಶ್ಲೀಲ ನೃತ್ಯ, ಪಬ್ ಡ್ಯಾನ್ಸ್ ಮುಂತಾದುವು ಮಧ್ಯರಾತ್ರಿಯಲ್ಲಿ ಮುಂದುವರೆದಾಗ ಪೋಲಿಸರು ಬಂಧಿಸಲು ಬಂದಾಗ ಅವರ
ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಬ್ ಅಥವಾ ಬಾರ್ ಮುಚ್ಚುವ ಪ್ರಯತ್ನವನ್ನು ನಿಷ್ಕ್ರಿಯಗೊಳಿಸಬೇಕು.
೬. ಪ್ರತೀ ದಿನ ತಾನು ಭಾಗವಹಿಸುವ ಸಾರ್ವಜನಿಕ ಸಮಾರಂಭಗಳಲ್ಲಿ ಹಿಂದೂ ಸಂಘಟನೆಗಳನ್ನು ನಿಂದಿಸಬೇಕು.
೭. ಹಿಂದೂಗಳ ಭಾವನೆಗಳನ್ನು ಕೆರಳಿಸುವಂತಹ ಲೇಖನಗಳು, ಗ್ರಂಥಗಳು, ಕವನಗಳನ್ನು ಬರೆದು, ಹೀನವಾಗಿ ನಿಂದಿಸಬೇಕು.
೮. ನಕ್ಸಲ್ ಸಂಘಟನೆ, ಎಲ್.ಟಿ.ಟಿ.ಇ. ಮುಂತಾದ ದೇಶವಿರೋಧಿ ಸಂಘಟನೆಗಳನ್ನು ಬಹಿರಂಗವಾಗಿ ಬೆಂಬಲಿಸಬೇಕು.
೯. ಯಾವುದೇ ದೇವಸ್ಥಾನಗಳಿಗೆ ಭೇಟಿಕೊಡದೆ, ಕೇವಲ ಮಸೀದಿ, ಚರ್ಚ್‌ಗಳಿಗೆ ಮಾತ್ರ ಭೇಟಿ ನೀಡಬೇಕು.
೧೦.ಆದಷ್ಟೂ ಮತಾಂತರಕ್ಕೆ ಪ್ರೋತ್ಸಾಹ ನೀಡಿ, ಮತಾಂತರಕ್ಕೆ ಬೆಂಬಲ ನೀಡಬೇಕು.

Wednesday, November 05, 2008

ಈ ತಮಿಳರಿಗೇನಾಗಿದೆ?

ಬೆಂಗಳೂರು ನವೆಂಬರ್ ೫ : ತಮಿಳುನಾಡಿನಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ, ಅಲ್ಲಿನ ಜನ ಪರೋಕ್ಷವಾಗಿ ಭಾರತದ ಸಂವಿಧಾನದ ಇರವನ್ನೇ ಪ್ರಶ್ನಿಸುವಂತಿದೆ. ಏಕೆಂದರೆ ಅವರು ಭಾರತದ ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ. ಭಾರತದ ಕಾನೂನಿಗೆ ಬೆಲೆ ಕೊಡುವುದಿಲ್ಲ. ಅಲ್ಲದೆ ಈ ದೇಶವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸರಕಾರವನ್ನೇ Blackmail ಮಾಡುವಷ್ಟು ಕೊಬ್ಬು, ದುರಹಂಕಾರ. ತನ್ನ ಬೇಳೆ ಬೇಯಿಸಿಕೊಳ್ಳಲು ಈ ದೇಶದ ಹಿತವನ್ನೇ ಬೇಕಾದರೂ ಬಲಿಕೊಡಲೂ ಹಿಂಜರಿಯದ ಸಂಕುಚಿತ ಮನಸ್ಥಿತಿ.
ಇತ್ತೀಚೆಗೆ ಮಲೇಶ್ಯಾದಲ್ಲಿ ಅಲ್ಲಿನ ಸರಕಾರ ಅನಧಿಕೃತವಾಗಿ ನಿರ್ಮಿಸಿದ ಕೆಲ ಹಿಂದೂ ದೇವಾಲಯಗಳನ್ನು ಕೆಡವಿದಾಗ, ಅಲ್ಲಿನ ಎಲ್ಲಾ ಜನಾಂಗದ (ಕನ್ನಡಿಗರು, ತೆಲುಗು, ಮರಾಠಿ ಎಂಬ ಬೇಧಭಾವವಿಲ್ಲದೆ) ಮಂದಿ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಆದರೆ ಇಲ್ಲಿ ಕರುಣಾನಿಧಿ ಎಂಬ ಅಧಮ ಮತ್ತು ಇಲ್ಲಿನ ತಮಿಳು ಜನ ಮಾತ್ರ, ಮಲೇಶ್ಯಾದಲ್ಲಿ ತಮಿಳರ ಮೇಲೆ ಹಲ್ಲೆ, ತಮಿಳರ ದೇವಳ ಕೆಡವಿದರು ಎಂಬುದಾಗಿ ಬೊಬ್ಬಿರಿದರು. ನೋಡಿ...ಇವರು ಹಿಂದೂಗಳು, ಭಾರತೀಯರೆಂದು ಒಪ್ಪಿಕೊಳ್ಳಲು ತಯಾರಿಲ್ಲ.
ಶ್ರೀಲಂಕಾದಲ್ಲಿ ಭಯೋತ್ಪಾದನೆ ಉಂಟುಮಾಡುತ್ತಿರುವ ಅಲ್ಲಿನ ದೇಶದ್ರೋಹಿ ತಮಿಳು ಸಂಘಟನೆಯಾದ ಎಲ್.ಟಿ.ಟಿ.ಇ. ವಿರುದ್ಧ ಅಲ್ಲಿನ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಾಗ ಇಲ್ಲಿನ ಕೆಲವು (ಬಹುತೇಕ) ತಮಿಳರು ಅದನ್ನು ಪ್ರಬಲವಾಗಿ ವಿರೋಧಿಸಿ, ತಮಿಳರ ವಿರುದ್ಧ ಹಲ್ಲೆ ಎಂಬುದಾಗಿ ಬೊಬ್ಬಿರಿದರು. ಅದೂ ಸಾಲದೆಂಬಂತೆ ಜನರಿಂದ ಆರಿಸಲ್ಪಟ್ಟ ಜನಪ್ರತಿನಿಧಿಗಳೇ ಬಹಿರಂಗವಾಗಿ ಭಯೋತ್ಪಾದಕರ ಪರ ದನಿಯೆತ್ತಿದಾಗ ಯಾರೂ ಅದನ್ನು ವಿರೋಧಿಸದಿದ್ದುದು ನಮ್ಮ ದೇಶದ ದೊಡ್ಡ ದುರಂತ. ಅದೂ ಸಾಲದೆಂಬಂತೆ ಅಲ್ಲಿನ ಚಿತ್ರರಂಗದ ಮಂದಿ ಕೂಡಾ ಈ ಭಯೋತ್ಪಾದಕ ಸಂಘಟನೆಗೆ ಬೆಂಬಲ ಸಾರಿ ಒಂದು ದಿನದ ಉಪವಾಸ ಮುಷ್ಕರ ನಡೆಸಿದ್ದು ಅವರ ದೇಶದ್ರೋಹಿತನವನ್ನು ತೋರಿಸುತ್ತದೆ. ಶ್ರೀಲಂಕಾದ ಜನರ ನೆಮ್ಮದಿಯನ್ನು ಕೆಡಿಸಿರುವ ಈ ಎಲ್.ಟಿ.ಟಿ.ಇ. ಸಂಘಟನೆಗೆ ಬೆಂಬಲ ನೀಡಿದ ಈ ಮಂದಿಗೆ ಸ್ವಲ್ಪವಾದರೂ ಪರಿಜ್ಞಾನ ಇಲ್ಲದಿರುವುದು ಖೇದಕರ.
ಭಾರತದಲ್ಲಿ ಬಾಂಬ್ ಸ್ಪೋಟ ಮಾಡಿ ಸಾವಿರಾರು ಜನರ ಬಲಿತೆಗೆದುಕೊಂಡಿರುವ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೋಯ್ಬಾ ಮುಂತಾದ ಉಗ್ರವಾದಿಗಳಿಗೆ ಪಾಕಿಸ್ತಾನದ ಜನ ಬೆಂಬಲ ನೀಡಿದರೆ ನಮ್ಮ ಮನಸ್ಸಿಗೆ ಎಷ್ಟು ಘಾಸಿಯಾಗುತ್ತದೋ, ಅದೇ ರೀತಿ ಇಲ್ಲಿನ ಈ ತಮಿಳು ಜನ ಅಲ್ಲಿನ ಭಯೋತ್ಪಾದಕರಿಗೆ ಬೆಂಬಲನೀಡಿದರೆ, ಶ್ರೀಲಂಕಾದ ಜನತೆ ಭಾರತೀಯರನ್ನು ಕ್ಷಮಿಸಿಯಾರೇ?.

Friday, October 31, 2008

ಕನ್ನಡಿಗರಿಗೆ ಪುಳಕ...ದೇಶದ್ರೋಹಿಗಳಿಗೆ ಮತ್ಸರ

ಬೆಂಗಳೂರು ಅಕ್ಟೋಬರ್ ೩೧: ಇಂದು ನಿಜಕ್ಕೂ ಕನ್ನಡಿಗರಿಗೆ ಅತ್ಯಂತ ಖುಷಿಯ ದಿನ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ ದಿನ. ಏಕೆಂದರೆ ಕನ್ನಡಿಗರ ಬಹಳ ದಿನಗಳ ಕನಸು ನನಸಾಗಿದೆ. ಆದರೆ ಅದಕ್ಕಾಗಿ ಇಷ್ಟೊಂದು ಹೋರಾಟ ಮಾಡಬೇಕಾಗಿ ಬಂದದ್ದು ನೋವಿನ ಸಂಗತಿ.
ಕನ್ನಡ ಏನೆ ಕುಣಿದಾಡುವುದೆನ್ನೆದೆ....ಕನ್ನಡ ಎನೆ ಕಿವಿ ನಿಮಿರುವುದು.....ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ----ಈ ತರಹದ ಕವಿ ವಾಣಿಗಳು ಇಂದು ನಿಜವಾಗಿಯೂ ಹೃದಯದ ಒಳಗೆ ಹೊಕ್ಕು, ಒಂದು ತರಹದ ಅವ್ಯಕ್ತ ಆನಂದವನ್ನು ಉಂಟುಮಾಡುತ್ತಿವೆ. ನಿಜವಾಗಿಯೂ ಪ್ರತೀ ಕನ್ನಡಿಗನೂ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಬೇಕಾಗಿದೆ.
ಆದರೆ ಅದೇ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಕೊಡುವುದರ ವಿರುದ್ಧ ಕೆಲ ದೇಶದ್ರೋಹಿಗಳು ಮದರಾಸು ಹೈಕೋರ್ಟಿನಲ್ಲಿ ದಾವೆ ಹೂಡಿರುವುದು ಖಂಡನೀಯ. ಇಂತಹ ದೇಶದ್ರೋಹಿಗಳನ್ನು ಖಂಡಿತಾ ನಮ್ಮ ದೇಶದಿಂದ ಹೊರಗಟ್ಟಬೇಕು. ಈ ದೇಶದ್ರೋಹಿಗಳ ಹಿನ್ನೆಲೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಅವರಿಗೂ ಪಾಕಿಸ್ತಾನೀ ಭಯೋತ್ಪಾದಕರಿಗೂ ಸಂಬಂಧ ಇರುವ ಬಗ್ಗೆ ತನಿಖೆ ಮಾಡಬೇಕು.

ಇದೆಲ್ಲ ಇರಲಿ .....ಈ ಬಾರಿಯ ಕನ್ನಡ ರಾಜ್ಯೊತ್ಸವಕ್ಕೆ ಹೊಸ ಕಳೆ ಬಂದಿದೆ. ಅದನ್ನು ಹೆಮ್ಮೆಯಿಂದ ಆಚರಿಸೋಣ

Wednesday, October 29, 2008

ರಾಜ್ಯೋತ್ಸವ ಪ್ರಶಸ್ತಿ ಬಿಕರಿ..ಕನ್ನಡಿಗರ ಮಾನ ಉಳಿಸಿ

ಬೆಂಗಳೂರು ಅಕ್ಟೋಬರ್ ೨೯: ನವೆಂಬರ್ ಹತ್ತಿರ ಬರುತ್ತಿದ್ದಂತೆ ನಮಗೆ ನೆನಪಾಗುವುದು ಕರ್ನಾಟಕ ರಾಜ್ಯೋತ್ಸವ. ಕರ್ನಾಟಕದಲ್ಲಿ ಪ್ರತೀ ವರ್ಷ ಕೆಲವು (ನ)ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಸನ್ಮಾನಿಸುವುದು ವಾಡಿಕೆ. ಆದರೆ ಇದರಲ್ಲಿ ಕೂಡಾ ಲಾಬಿ, ಮೀಸಲಿನ ಹೊಗೆಯಾಡುತ್ತಿರುವುದು ಕನ್ನಡಾಂಬೆಗೆ ಆಗುತ್ತಿರುವ ಅವಮಾನ.
ನಿಜವಾಗಿಯೂ ಪ್ರಶಸ್ತಿ ಪಡೆಯುವ ಅರ್ಹತೆಯಿರುವವರಿಗೆ ಪ್ರಶಸ್ತಿ ಸಿಗದೆ ಕೇವಲ ರಾಜಕಾರಣಿಗಳ ಬೆಂಬಲ ಇರುವ ಹಾಗೂ ಹಣಬಲ ಇರುವ ಹಾಗೂ ಮೀಸಲು ವರ್ಗದ ಜರಿಗೆ ಮಾತ್ರ ಈ ಪ್ರಶಸ್ತಿ ಸಿಗುತ್ತಿರುವುದು ಕನ್ನಡಾಂಬೆಯ ಮುಖಕ್ಕೆ ರಾಡಿ ಎರಚಿದಂತೆ ಆಗಿದೆ. ಇಂದು ಪ್ರಶಸ್ತಿಗಳು ರಾಜಕೀಯ ಪ್ರತಿಷ್ಠೆ, ಧನಬಲ ಹಾಗೂ ಮೀಸಲಾತಿಯ ಗೊಂದಲದ ಗೂಡಾಗಿದೆ. ಈ ಪ್ರಶಸ್ತಿ ಸಿಗಲು ಒಬ್ಬ ವ್ಯಕ್ತಿ ಸಾವಿರಾರು ರೂಪಾಯಿ ಖರ್ಚು ಮಾಡಿ ಅರ್ಜಿ ಹಾಕುವಂತಹ ಕೀಳು ಮಟ್ಟಕ್ಕೆ ತಲುಪಿದೆ. ಭ್ರಷ್ಟರೇ ತುಂಬಿರುವ ರಾಜಕೀಯದ ವ್ಯಕ್ತಿಗಳಿಗೆ, ಹಿಂದೂಗಳ ವಿರುದ್ಧ ಕತ್ತಿ ಮೆಸೆಯುವ ದೇಶದ್ರೋಹಿಗಳಿಗೆ, ನಕ್ಸಲರ ಪರ ವಾದಿಗಳಿಗೆ, ಕನ್ನಡ ವಿರೋಧಿಗಳಿಗೆ,ಕರ್ನಾಟಕದ ಸಮಗ್ರತೆಗೆ ಭಂಗ ತರುವವರಿಗೆ ಇಂದು ಪ್ರಶಸ್ತಿಗಳು ಬಿಕರಿಯಾಗುತ್ತಿವೆ ಎಂದರೆ ಆ ಪ್ರಶಸ್ತಿಯ ಮೌಲ್ಯ ಎಂತಹ ಕೀಳು ಮಟ್ಟದಲ್ಲಿದೆ ಎಂದು ಎಲ್ಲರಿಗೂ ಮನದಟ್ಟಾಗಿದೆ.
ಈ ಪ್ರಶಸ್ತಿಯ ಆಯ್ಕೆಯೇ ಗೊಂದಲದ ಗೂಡಾಗಿದೆ. ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದವ ಶ್ರೇಷ್ಠ ಬರಹಗಾರನನ್ನು ಚುನಾಯಿಸುತ್ತಾನೆ. ಒಬ್ಬ ಪರರಾಜ್ಯದವ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ ಗಣ್ಯನನ್ನು ಈ ಪ್ರಶಸ್ತಿಗೆ ಆರಿಸುತ್ತಾನೆ. ಮಾನ್ಯ ಮುಖ್ಯಮಂತ್ರಿಗಳಲ್ಲಿ ಎಲ್ಲ ಕನ್ನಡಿಗರ ಒಕ್ಕೊರಲ ಮನವಿ ಎಂದರೆ ದಯವಿಟ್ಟು ಈ ಪ್ರಶಸ್ತಿ ಬಿಕರಿಯನ್ನು ನಿಲ್ಲಿಸಿ. ಈ ಪ್ರಶಸ್ತಿಗೆ ಮೂರುಕಾಸಿನ ಬೆಲೆ ಇಲ್ಲದಾಗಿದೆ. ಇದೇ ಹಣವನ್ನು ಬಡವರ ಉದ್ಧಾರಕ್ಕಾಗಿ ಖರ್ಚು ಮಾಡಿ, ಕನ್ನಡ ಪುಸ್ತಕಗಳ ಪ್ರಕಟಣೆಗಾಗಿ ಖರ್ಚು ಮಾಡಿ. ಈ ತರಹ ಪೋಲು ಮಾತ್ರ ಮಾಡಬೇಡಿ.ನಮ್ಮ ರಾಜ್ಯದಲ್ಲೇ ಇರುವ,ಅನೇಕ ವರ್ಶಗಳಿಂದ ನಮ್ಮ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ, ಸಾಹಿತ್ಯ, ಜಾನಪದ, ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಇಂದು ಎಲೆ ಮರೆಯ ಕಾಯಿಯಾಗಿಯೇ ಇದ್ದಾರೆ. ನೆನ್ನೆ ಮೊನ್ನೆ ಈ ಕ್ಷೇತ್ರಕ್ಕೆ ಬಂದವರು ಲಾಬಿ ಮಾಡಿ ಪ್ರಶಸ್ತಿಯನ್ನು ಗಿಟ್ಟಿಸುತ್ತಾನೆ. ಈ ಪ್ರಶಸ್ತಿಗೆ ಆಯ್ಕೆ ಮಾಡುವ ವಿಧಾನವನ್ನು ಬದಲಾಯಿಸಬೇಕಾಗಿದೆ. ಇದಕ್ಕೆ ಅರ್ಜಿ ಹಾಕುವ ಸಂಪ್ರದಾಯವನ್ನು ಕೈಬಿಡಬೇಕು.
ಕರ್ನಾಟಕ್ದಲ್ಲಿ ಬಿ.ಜೆ.ಪಿ ಸರಕಾರ ಈಗ ಇದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಿಂದಿನ ಜನವಿರೋಧಿ ಸರಕಾರಗಳ ದಾರಿಯೇ ತುಳಿದರೆ ಅವರಿಗೂ ಹೊಸ ಸರಕಾರಕ್ಕೂ ಏನು ವ್ಯತ್ಯಾಸ?. ಈ ಪ್ರಶಸ್ತಿ ಬಿಕರಿ ನಿಲ್ಲಿಸಿ.....ನಿಜವಾದ ಅರ್ಹರಿಗೆ ಪ್ರಶಸ್ತಿ ಕೊಡಿ....ಈವರೆಗೆ ಪ್ರಶಸ್ತಿ ಪಡೆದ ಎಲ್ಲರ ಬಗ್ಗೆ ಕೂಲಂಕುಶ ತನಿಖೆ ನಡೆಸಿ.....ಲಾಬಿ ಮಾಡಿರುವುದು ಸಾಬೀತಾದಲ್ಲಿ ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳಿ...ಪ್ರಶಸ್ತಿಯ ಮಾನ ಉಳಿಸಿ..ಕರ್ನಾಟಕದ ಮಾನ ಉಳಿಸಿ...ಕನ್ನಡಿಗರ ಮಾನ ಉಳಿಸಿ....

Sunday, October 26, 2008

ಪುಕ್ಕಟೆ ಪ್ರಚಾರಪ್ರಿಯರು

ಬೆಂಗಳೂರು ಅಕ್ಟೋಬರ್ ೨೬ : ನೀವು ಇತ್ತೀಚಿನ ಕೆಲವು ಪತ್ರಿಕೆಗಳನ್ನು ತಿರುವಿ ಹಾಕಿದಾಗ ನಿಮ್ಮ ಕಣ್ಣಿಗೆ "ಪ್ರಶಸ್ತಿ ಪ್ರದಾನ ಸಮಾರಂಭ" ಎಂಬ ಅಂಕಣ ಕಣ್ಣಿಗೆ ಬಿದ್ದಿರಬಹುದು. ನೀವು ಸೂಕ್ಷ್ಮವಾಗಿ ಪ್ರತೀ ದಿನ ಪತ್ರಿಕೆ ಓದುವವರಾಗಿದ್ದರೆ ಪ್ರಶಸ್ತಿ ಪಡೆದವರೇ ಮತ್ತೆ ಮತ್ತೆ ಪ್ರಶಸ್ತಿ ಪಡೆಯುತ್ತಿರುವುದು ನಿಮ್ಮ ಗಮನಕ್ಕೆ ಬರಬಹುದು. ನಿಮಗೆ ಗೊತ್ತೇ?...ಈ ಪ್ರಶಸ್ತಿ ಪ್ರದಾನ ಸಮಾರಂಭಗಳು ನಿಜವಾಗಿ ಪ್ರಶಸ್ತಿ ಪಡೆಯುವವರೇ ಕೆಲ ಖಾಸಗಿ ಸಂಸ್ಥೆಗಳಿಗೆ ಹಣ ಕೊಟ್ಟು ಆಯೋಜಿತವಾದವೆಂದು?.
ಕೆಲವರಿಗೆ ಪ್ರಶಸ್ತಿಯ ಹಸಿವು ಎಷ್ಟಿರುತ್ತದೆಯೆಂದರೆ ಪುಟಗೋಸಿ ಬೆಲೆಯ (ಅಂದರೆ ಒಣಗಿದ ಹಣ್ಣುಗಳು, ಹಳೇ ಹಾರ) ಪ್ರಶಸ್ತಿ ಪಡೆಯಲು ಹತ್ತುಸಾವಿರದವರೆಗೆ ತಮ್ಮ ಕೈಯಿಂದಲೇ ಖರ್ಚು ಮಾಡಿ ಎಲ್ಲರ ಸಮ್ಮುಖದಲ್ಲಿ ಬೀಗುವುದು ಇಲ್ಲಿ ಸಾಮಾನ್ಯವಾಗಿದೆ. ಅದೂ ಕೆಲವು ಖಾಸಗಿ ಸಂಸ್ಥೆಗಳು ಈ ಸಮಾರಂಭಕ್ಕೆ ಚಿತ್ರನಟ ಹಾಗೂ ನಟಿಯರು, ಬುದ್ದಿ (ಇಲ್ಲದ) ಜೀವಿಗಳನ್ನು ಕರೆಸಿ ಅವರಿಗೂ ಒಣಹಾರ ಹಾಕಿ ಒಂಥರಾ ಪುಕ್ಕಟೆ ಪ್ರಚಾರ ಪಡೆಯುದನ್ನು ಆಗಾಗ ಮಾಡುತ್ತಿರುತ್ತವೆ.
ಪ್ರಶಸ್ತಿ ಪ್ರದಾನ ವಿಧಾನ
ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಪ್ರಶಸ್ತಿ ಪಡೆಯಬಹುದು.ಸಮಾಜದಲ್ಲಿ ಉತ್ತಮ ಹೆಸರು ಹೊಂದಿರಲೇಬೇಕೆಂಬ ನಿಯಮವಿಲ್ಲ. ಒಂದು ಪ್ರಶಸ್ತಿಗೆ ಕನಿಷ್ಠ ೨೫ ಸಾವಿರ ರೂಪಾಯಿ ನೀಡಬೇಕು. ಅದರಲ್ಲಿ ಕೇವಲ ೫ ಸಾವಿರ ರೂಪಾಯಿ ನಿಮ್ಮ ಪ್ರಶಸ್ತಿಗೆ ಬಳಕೆಯಾಗುತ್ತದೆ. ಮಿಕ್ಕ ಹಣ ಸಂಸ್ಥೆಗೆ ಸೇರುತ್ತದೆ.ಹೆಚ್ಚು ಲಾಭ ಬೇಕೆಂದರೆ ಹೆಚ್ಚು ಹೆಚ್ಚು ಜನರಿಗೆ ಪ್ರಶಸ್ತಿ ನೀಡುವುದು ಅನಿವಾರ್ಯ.

ಈ ಪ್ರಶಸ್ತಿ ಪ್ರದಾನ ಸಮಾರಂಭಗಳು ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ನಿಜವಾದ ಸಾಧನೆಗೈದವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಸಂಪ್ರದಾಯ ಮರೆಯಾಗಿ, ಏನೂ ಸಾಧನೆಮಾಡದಿದ್ದವರೂ ತಮ್ಮ ಹಣಬಲದಿಂದ ಎಂತಹಾ ದೊಡ್ಡ ಪ್ರಶಸ್ತಿಯನ್ನು ಪಡೆಯುವುದೂ ಈಗಿನ ಕಾಲದಲ್ಲಿ ಸಾಧ್ಯ. ಈ ಖಾಸಗಿ ಆಯೋಜಕರು ಕೆಲವೊಮ್ಮೆ ನೇರವಾಗಿ ಸಾಧಕರಿಗೆ ಕರೆಮಾಡಿ ನಿಮಗೆ ಪ್ರಶಸ್ತಿ ಬಂದಿದೆ, ನೀವು ಇಂತಿಷ್ಟು ಹಣ ನೀಡಬೇಕೆಂದು ನೇರವಾಗಿ ಕೇಳುತ್ತಾರೆ. ನೀವು ಒಪ್ಪಿದರೆ ನಿಮಗೆ ಪ್ರಶಸ್ತಿ ಗ್ಯಾರಂಟಿ. ಈಗ ಸಿಗುವ ಕೇಂದ್ರ ಸರಕಾರದ "ಭಾರತ ರತ್ನ", ಪದ್ಮಶ್ರೀ ಮೊದಲಾದ ಪ್ರಶಸ್ತಿಗಳನ್ನೂ ಸಂಶಯದಿಂದ ನೋಡುವಂತಾಗಿದೆ.
ಫ್ಲೆಕ್ಸ್ ಸಂಸ್ಕೃತಿ
ಇನ್ನೂ ಕೆಲವರು ಸಾಧನೆ ಮಾಡದಿದ್ದರೂ ಸಮಾಜದಲ್ಲಿ ಹೆಸರು ಪಡೆಯಬೇಕೆಂಬ ಹುಚ್ಚು ಆಸೆಯಿಂದ ಫ್ಲೆಕ್ಸ್ ಬ್ಯಾನರ್‌ಗಳನ್ನು ಗಲ್ಲಿ ಗಲ್ಲಿಯಲ್ಲಿ ಹಾಕಿ ಅದರಲ್ಲಿ ತಮ್ಮ ಫೋಟೋ ಬರುವಂತೆ ನೋಡಿಕೊಳ್ಳುತ್ತಾರೆ. ಇದು ಸಾಮನ್ಯವಾಗಿ "ಹುಟ್ಟು ಹಬ್ಬದ ಶುಭಾಶಯ", "ಅಣ್ಣಮ್ಮ ದೇವಿಯ ಉತ್ಸವ", ಕನ್ನಡ ರಾಜ್ಯೋತ್ಸವ, "ಗಣೇಶೋತ್ಸವ" ದ ಬ್ಯಾನರ್‌ಗಳಲ್ಲಿ ಸಾಮಾನ್ಯವಾಗಿದೆ. ಹುಟ್ಟಾ ಲಫಂಗರು, ಬೀದಿ ರೌಡಿಗಳು, ಸಮಾಜ ಘಾತುಕರು ಈ ಫ್ಲೆಕ್ಸ್ ಬ್ಯಾನರ್‌ಗಳಲ್ಲಿ ರಾರಾಜಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಈ ತರಹ ಅತೀ ಕಡಿಮೆ ಖರ್ಚಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುವುದು ಕೆಲವು ಸಮಾಜಘಾತುಕ ಶಕ್ತಿಗಳ ಒಂದು ತಂತ್ರವಾಗಿದೆ.

ರಾಜ್ಯದ ರಾಜಧಾನಿಯಲ್ಲಿ ಈ ಥರ ಹಣ ಮಾಡುವ ಸಂಸ್ಥೆಗಳು ತುಂಬಾ ಹುಟ್ಟಿಕೊಂಡಿವೆ. ಆದರೆ ಇದರ ನಿಯಂತ್ರಣಕ್ಕೆ ಸರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ, ಏಕೆಂದರೆ ಈ ಸಂಸ್ಥೆಗಳ ವಿರುದ್ದ ಒಂದೇ ಒಂದು ದೂರು ದಾಖಲಾಗದಿರುವುದು ಸರಕಾರಕ್ಕೆ ಮತ್ತೊಂದು ಹಿನ್ನಡೆ. ಆದ್ದರಿಂದ ನೀವು ಮುಂದೆ ವೃತ್ತಪತ್ರಿಕೆ ಓದುವಾಗ ಈ ಥರಹದ ಕೆಲವು ಸುದ್ದಿಗಳನ್ನು ಓದೀರಾ, ಓದಿ ನಕ್ಕೀರ ಜೋಕೆ....ನಾಳೆ ನಿಮಗೂ ಕರೆ ಬರಬಹುದು..."ಸಾರ್ ನಿಮ್ಮ ಸಾಧನೆಯನ್ನು ಪರಿಗಣಿಸಿ, ನಿಮಗೆ ಪ್ರಶಸ್ತಿ ಕೊಡಬೇಕೆಂದಿದ್ದೇವೆ...." ಎಂದು. ಜಾಗ್ರತೆ....

Wednesday, October 22, 2008

ಲಾಲೂ ಎಂಬ ಮತಿಗೇಡಿ ಹಾಗೂ ಧೀರ ರಾಜ್ ಠಾಕ್ರೆ

ಬೆಂಗಳೂರು ಅಕ್ಟೋಬರ್ ೨೨ :ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಬಂಧನದ ಸುದ್ದಿ ಎಲ್ಲರಿಗೂ ತಿಳಿದ ವಿಷಯ. ಆದರೆ ಇದೊಂದು ಖಂಡಿತವಾಗಿ ಖಂಡಿಸಬೇಕಾದ ವಿಷಯ. ರಾಜ್ ಠಾಕ್ರೆ ಮಾಡಿದ್ದರಲ್ಲಿ ಖಂಡಿತಾ ತಪ್ಪಿಲ್ಲ.
ಈ ಲಾಲೂಪ್ರಸಾದ್ ಎಂಬ ಅಧಮ ರೈಲ್ವೇ ಮಂತ್ರಿಯಾದ ಮೇಲೆ ಆ ಇಲಾಖೆಯ ನೇಮಕಾತಿಯಲ್ಲಿ ಸದಾ ಮೂಗು ತೂರಿಸುತ್ತಿದ್ದಾನೆ. ರೈಲ್ವೇ ಇಲಾಖೆಯೇನು ಇವನಪ್ಪನ ಸ್ವತ್ತೇ?. ಪ್ರತೀ ರಾಜ್ಯದಲ್ಲಿಯೂ ನೇಮಕಾತಿ ನಡೆಯುವ ಬಗ್ಗೆ ಯಾವುದೇ ಸೂಚನೆ ನೀಡದೆ, ಕೇವಲ ಬಿಹಾರದ ದಿನಪತ್ರಿಕೆಗಳಲ್ಲಿ ಮಾತ್ರ ನೇಮಕಾತಿಯ ಬಗ್ಗೆ ಜಾಹೀರಾತು ಪ್ರಕಟಿಸಲಾಗುತ್ತದೆ. ಅಂದರೆ ಈ ನೇಮಕಾತಿ ಆಗಲೇ "ಡೀಲ್" ಆಗಿರುತ್ತದೆ. ಬಿಹಾರದಿಂದ ನೇಮಕಾತಿ ಸ್ಥಳಕ್ಕೆ ಆ ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಬೇರೆ. ಈ ಥರದ ಒಂದು ಪ್ರಾದೇಶಿಕ ಅಸಮಾನತೆ ಕೇವಲ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯ. ಭಿಕ್ಷೆ ಬೇಡುವ ವೃತ್ತಿಗೂ ನಾಲಾಯಕ್ಕಾದ ಒಬ್ಬ ವ್ಯಕ್ತಿ ರೈಲ್ವೇ ಮಂತ್ರಿಯಾದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ. ಕರ್ನಾಟಕದಲ್ಲಿ ಆಗಿದ್ದೂ ಇದೇ. ಕನ್ನಡಿಗರನ್ನು ಸಂಪೂರ್ಣ ನಿರ್ಲಕ್ಷಿಸಿ, ಕೇವಲ ಬಿಹಾರಿಗಳಿಗೆ ನೇಮಕಾತಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆದೇಶ ನೀಡಿದ ಈ ಭಿಕಾರಿ ಮಂತ್ರಿ. ಆದರೆ ಕನ್ನಡಿಗರು ಎಚ್ಚೆತ್ತು ಪ್ರತಿಭಟಿಸಿದಾಗ, ಹುಚ್ಚರ ತರಹ ಸದನದಲ್ಲಿ ಬಡಬಡಾಯಿಸಿದ ಈ ಲಾಲೂ. ಕನ್ನಡಿಗರು ಶಾಂತ ರೀತಿಯಲ್ಲಿ ಪ್ರತಿಭಟಿಸಿದರೂ ಅವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲಾಯಿತು.
ಮಹಾರಾಷ್ಟ್ರದಲ್ಲಿ ನಡೆದಿದ್ದೂ ಅದೇ. ರೈಲ್ವೇ ನೇಮಕಾತಿಯಲ್ಲಿ ಮರಾಠಿಗರನ್ನು ಕಡೆಗಣಿಸಿ, ಬಿಹಾರಿಗಳಿಗೆ ಮಣೆ ಹಾಕಿದ ಇಲಾಖೆ, ಮತ್ತೆ ಅದೇ ತಪ್ಪು ಮಾಡಿತು. ರಾಜ್ ಠಾಕ್ರೆ ತನ್ನ ಕಾರ್ಯಕರ್ತರ ಜೊತೆ ಇದನ್ನು ಪ್ರತಿಭಟಿಸಿದ್ದರಿಂದ ಬಿಹಾರಿಗಳು ಪಲಾಯನ ಗೈದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ, ರಾಜ್ಯಸರಕಾರದ ಮೇಲೆ ಒತ್ತಡ ತಂದು ರಾಜ್ ಠಾಕ್ರೆಯನ್ನು ಬಂಧಿಸಲಾಯಿತು. ಆದರೆ ಇದು ಖಂಡಿತಾ ಸ್ವಾತಂತ್ರ್ಯದ ಹರಣವಷ್ಟೇ.ಪ್ರಾದೇಶಿಕವಾಗಿ ಅಸಮಾನತೆ ಉಂಟಾದಾಗ ಪ್ರತಿಭಟಿಸುವ ಹಕ್ಕನ್ನೂ ಕಸಿದುಕೊಂಡ ಕೇಂದ್ರ ಸರಕಾರ ಏನನ್ನು ಸಾಧಿಸಲು ಹೊರಟಿದೆ?. ಇದು ಕೇವಲ ಸೋನಿಯಾಳ ಷಡ್ಯಂತ್ರವೇ ಸರಿ. ಮತಾಂತರದ ವಿರುದ್ದ ಹಿಂದೂಗಳು ಒಗ್ಗಟ್ಟಾಗಿರುವುದು, ಕೇಂದ್ರ ಸರಕಾರಕ್ಕೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಹಿಂದೂಗಳ ಒಗ್ಗಟ್ಟನ್ನು ಮುರಿದು, ಮತ್ತೆ ಮತಾಂತರವನ್ನು ಹಿಂದೂಗಳ ಮೇಲೆ ಹೇರಿ, ಸೋನಿಯಾ ಯಾವ ಒಂದು ಉದ್ಧೇಶದಿಂದ ಈ ದೇಶಕ್ಕೆ ಬಂದಳೋ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅವಳ ಜೊತೆ ಕೈಜೋಡಿಸಿದೆ. ಇದಕ್ಕಾಗಿಯೇ ಸೋನಿಯಾ ತನ್ನ ಆಪ್ತರನ್ನಾಗಿ ಆಸ್ಕರ್, ಆಂಟೋನಿ, ರಾಜಶೇಖರ ರೆಡ್ಡಿ ಮೊದಲಾದ ಕ್ರಿಶ್ಚಿಯನ್ನರನ್ನು ಆಯ್ಕೆ ಮಾಡಿದ್ದು. ಅಲ್ಲದೆ ಹಿಂದೂ ವಿರೋಧಿಗಳಾದ ಲಾಲೂ, ಅರ್ಜುನ್ ಸಿಂಗ್, ಅಂಬಿಕಾ ಸೋನಿ, ಶಿವರಾಜ್ ಪಾಟಿಲ್ ಮೊದಲಾದವರಿಗೆ ಆಯಕಟ್ಟಿನ ಸ್ಥಾನ ಕೊಟ್ಟಿದ್ದು.
ಖಂಡಿತಾ ರಾಜ್ ಠಾಕ್ರೆಗೆ ಅಭಿನಂದನೆ ಹೇಳಲೇಬೇಕು. ಇಂತಹ ಒಬ್ಬ ನಾಯಕ ಪ್ರತೀ ರಾಜ್ಯದಲ್ಲೂ ಪ್ರಾದೇಶಿಕ ಅಸಮಾನತೆಯ ವಿರುದ್ದ ಹೋರಾಡಬೇಕು. ಆಗಲೇ ಈ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲು ಸಾಧ್ಯ.
ಈ ಬಿಹಾರಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕರ್ನಾಟಕದಲ್ಲಿ ನಡೆವ ದರೋಡೆ, ಹತ್ಯೆ, ಮಾನಭಂಗ, ಕಳ್ಳತನ, ಸುಲಿಗೆ ಹೆಚ್ಚಾಗಲು ಇವರ ಕೊಡುಗೆ ಕಮ್ಮಿಯೇನಿಲ್ಲ. ಒಬ್ಬರ ಬದುಕನ್ನು ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದು ಯಾವ ನ್ಯಾಯ?. ಇಂತಹ ಒಂದು ನಾಮರ್ದ ಕೆಲಸ ಕೇವಲ ಈ ಲಾಲೂ ಎಂಬ ಅನಕ್ಷರಸ್ಥ, ಲಜ್ಜಾಹೀನ, ಮತಿಗೇಡಿ, ಅಸಂಸ್ಕೃತ ವ್ಯಕ್ತಿ ಮಾತ್ರ ಮಾಡಲು ಸಾಧ್ಯ. ಮೊದಲು ಇಂತಹವರನ್ನು ನಡುಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಬೇಕು. ರಾಜ್ಯ-ರಾಜ್ಯಗಳ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಕೆಡಿಸುತ್ತಿರುವ ಈ ದುರುಳರನ್ನು ಮೊದಲು ಗಡೀಪಾರು ಮಾಡಬೇಕು.
ಎಲ್ಲರೂ ರಾಜ್ ಠಾಕ್ರೆಗೆ ಬೆಂಬಲ ನೀಡಿ....ಈ ಬೆಂಬಲ ಕೇವಲ ರಾಜ್ ಠಾಕ್ರೆಗಲ್ಲ...ಪ್ರಾದೇಶಿಕ ಅಸಮಾನತೆಯ ವಿರುದ್ಧ....ದೇಶದ್ರೋಹಿ ರಾಜಕಾರಣಿಗಳ ವಿರುದ್ಧ...

Friday, October 10, 2008

ಭಜರಂಗ ದಳ ಮಾತ್ರ ನಿಷೇಧ ಏಕೆ? ಸಿಮಿ ಏಕಿಲ್ಲ?

ಬೆಂಗಳೂರು ಅಕ್ಟೋಬರ್ ೧೦: ಕೇಂದ್ರ ಸರಕಾರದ ಕೆಲವು ಅಲ್ಪಸಂಖ್ಯಾತರ ಏಜೆಂಟ್‌ಗಳು ಹಿಂದೂ ಸಂಘಟನೆಗಳಾದ , ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ತುಗಳನ್ನು ನಿಷೇಧ ಮಾಡುವ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರುತ್ತಿರುವುದು ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಕಳವಳಕಾರಿಯಾಗಿದೆ.
ಇದು ನಿಜಕ್ಕೂ ಹಿಂದೂಗಳ ಏಕತೆಯನ್ನು, ಸಮಗ್ರತೆಯನ್ನು ಪ್ರಶ್ನಿಸುವ ಒಂದು ಸವಾಲಾಗಿದೆ. ಕೇವಲ ಜುಜುಬಿ, ಪುಡಿ ಮತಗಳ ಆಸೆಗೆ ಸಮಗ್ರ ಹಿಂದೂಗಳ ಏಕತೆಯನ್ನೇ ಒಡೆಯುವ ಈ ಹುನ್ನಾರವನ್ನು ಎಲ್ಲರೂ ಖಂಡಿಸಲೇಬೇಕು. ಲಾಲೂಪ್ರಸಾದ್ ಯಾದವ್,ದೇವೇಗೌಡ, ಅರ್ಜುನ್ ಸಿಂಗ್, ಅಮರ್ ಸಿಂಗ್‌ರಂತಹ ಕೆಲ ಕುಟಿಲ ನೀತಿಯ ರಾಜಕಾರಣಿಗಳು ಇಂದು ದೇಶದ ಸಮಗ್ರತೆಗೆ ಸವಾಲಾಗಿದ್ದಾರೆ.
ದೇಶದೆಲ್ಲೆಡೆ ಬಾಂಬ್ ಸ್ಪೋಟವಾಗಿ ನೂರಾರು ಜನ ಪ್ರಾಣ ತೆತ್ತಾಗ, ಅದರ ಬಗ್ಗೆ ಕವಡೆ ಕಿಮ್ಮತ್ತು ಪ್ರದರ್ಶಿಸದ ಈ ರಾಜಕಾರಣಿಗಳು ಚರ್ಚ್ ಮೇಲೆ ಧಾಳಿಯಾದಾಗ ಬಾಯಿ ಬಡಿದುಕೊಳ್ಳಲು ಶುರುಮಾಡುತ್ತವೆ. ಆದರೆ ದೇವಾಲಯಗಳ ಮೇಲೆ ಧಾಳಿಯಾದಾಗ ಈ ತಿಪ್ಪೆ ರಾಜಕಾರಣಿಗಳು ಬಾಯಿಗೆ ಬೀಗ ಹಾಕಿಕೊಂಡಿರುತ್ತವೆ. ಬಾಂಬ್ ಸ್ಪೋಟಕ್ಕೆ ಕಾರಣವಾದ ಸಿಮಿ, ಲಷ್ಕರ್ ಎ ತೋಯ್ಬಾ ಮುಂತಾದ ಮುಸ್ಲಿಮ್ ಸಂಘಟನೆಗಳೇ ಕಾರಣವೆಂದು ಎಲ್ಲರಿಗೂ ತಿಳಿದಿದ್ದರೂ ಕೂಡಾ ಅವರ ವಿರುದ್ದ ದನಿಯೆತ್ತುವ ತಾಕತ್ತು ಈ ರಾಜಕಾರಣಿಗಳಿಗಿಲ್ಲ. ಎಕೆಂದರೆ ಅದನ್ನು ಮಾಡಿದ್ದು ಅಲ್ಪ ಸಂಖ್ಯಾತರು. ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನು ಕ್ರಿಶ್ಚಿಯನ್ ಭಯೋತ್ಪಾದಕರು ಹತ್ಯೆ ಮಾಡಿರುವುದು ಸಾಬೀತಾದರೂ ಕೂಡಾ ಅಲ್ಲಿ ನಡೆಯುವ ಗಲಭೆಗೆ ಕೇವಲ ಭಜರಂಗದಳ ಹಾಗೂ ವಿ.ಎಚ್.ಪಿ.ಯನ್ನು ಹೊಣೆಮಾಡುವುದು ಎಷ್ಟು ಸಮಂಜಸ?. ನಮ್ಮ ದೇಶದ ಎಲ್ಲ್ಲ ರಾಜ್ಯಗಳನ್ನು ಒಂದೊಂದಾಗಿ ಕ್ರಿಶ್ಚಿಯನ್ ರಾಜ್ಯವನ್ನಾಗಿ ಮಾಡಲು ಪಣತೊಟ್ಟಿರುವ ಈ ಕ್ರಿಶ್ಚಿಯನ್ ಮತಾಂಧರು ಈಗ ಇದುವರೆಗೂ ಶಾಂತವಾಗಿದ್ದ ದಕ್ಷಿಣ ಭಾರತದತ್ತ ಕಣ್ಣು ಹಾಯಿಸಿರುವುದು ಕಳವಳಕಾರಿ. ಇದಕ್ಕೆ ಕೇಂದ್ರದ ಕೆಲವು ರಾಜಕಾರಣಿಗಳ ಕುಮ್ಮಕ್ಕು ಇರುವುದು ಎಲ್ಲರಿಗೂ ತಿಳಿದ ವಿಷಯ.
ಹಿಂದೂಗಳೇ ಒಗ್ಗಟ್ಟಾಗಿ.....ನಿಮ್ಮ ಧರ್ಮವನ್ನು ನೀವೇ ರಕ್ಷಿಸಬೇಕು.....

Sunday, October 05, 2008

ಮಂಗಳೂರಿನ ಲಜ್ಜೆಗೇಡಿ ರಾಜಕಾರಣಿಗಳು ಮತ್ತು ಭಯೋತ್ಪಾದಕರು

ಬೆಂಗಳೂರು ಅಕ್ಟೋಬರ್ ೦೫ : ಇತ್ತೀಚೆಗೆ ಮಂಗಳೂರಿನಲ್ಲಿ ಭಯೋತ್ಪಾದಕರು ಸಿಕ್ಕಿಬಿದ್ದಿರುವುದು ಕರ್ನಾಟಕಕ್ಕೆ ಒಂದು ಕಪ್ಪುಚುಕ್ಕೆಯಾಗಿದೆ. ಇದರ ಹಿಂದೆ ಒಂದು ಭಯಂಕರ ಷಡ್ಯಂತ್ರವೇ ಇರುವ ಸಂಭವವಿದೆ.
ಈ ವಿಷಯದಲ್ಲಿ ಸರಕಾರವು ಖಡಕ್ ನಿರ್ಧಾರ ತೆಗೆದುಕೊಂಡು, ಇದರ ಹಿಂದೆ ಇರುವ ರಾಜಕೀಯ ಶಕ್ತಿಗಳನ್ನು ಪತ್ತೆ ಹಚ್ಚಿ, ಅವರನ್ನು ಗಲ್ಲಿಗೇರಿಸಲು ಪಣತೊಡಬೇಕಾಗಿದೆ. ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಈ ಭಯೋತ್ಪಾದಕರು ಮಂಗಳೂರಿನಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ತಾವು ಅಲ್ಪಸಂಖ್ಯಾತರ ಪ್ರತಿನಿಧಿಗಳು, ಅವರ ರಕ್ಷಕರು ಎಂದು ಬಹಿರಂಗವಾಗಿ ಫೋಸು ಕೊಡುವ ರಾಜಕಾರಣಿಗಳ ಮೇಲೆ ರಾಜ್ಯದ ಗುಪ್ತದಳ ಖಂಡಿತಾ ಒಂದು ಕಣ್ಣಿಡಬೇಕಾಗಿದೆ. ಏಕೆಂದರೆ ಭಯೋತ್ಪಾದಕರಿಗಿಂತ ಈ ದೇಶದ್ರೋಹಿಗಳೇ ನಮ್ಮ ದೇಶದ ಅಖಂಡತೆಗೆ ಸವಾಲಾಗಿ ಪರಿಣಮಿಸಿದ್ದಾರೆ.
ಇನ್ನೊಂದು ಘಟನೆ ಕಣ್ಣಮುಂದೆ ನಡೆದರೂ ಪೋಲೀಸರು ಏನೂ ಗೊತ್ತಿಲ್ಲದವರಂತೆ ಇದ್ದದ್ದು ಅಪಾಯದ ಮುನ್ಸೂಚನೆಯಾಗಿದೆ. ಏಕೆಂದರೆ ಪೋಲಿಸರು ಭಯೋತ್ಪಾದಕರನ್ನು ಬಂಧಿಸಿ ಕರೆತಂದಾಗ ಅವರಿಗೆ ಪ್ರತಿರೋಧವಾಗಿ ರಸ್ತೆಯಲ್ಲಿ ಟೈರ್ ಸುಟ್ಟು, ಅವರನ್ನು ಅಡ್ಡಹಾಕಿ ಬಂಧನಕ್ಕೆ ತಡೆಯೊಡ್ಡಿದ ಕೆಲವು ಮತಾಂಧ ದೇಶದ್ರೋಹಿಗಳನ್ನು ಬಂಧಿಸದೆ ಬಿಟ್ಟಿದ್ದು ಘೋರ ಅಪರಾಧವಾಗಿದೆ. ಇದೇ ಕಿಡಿಗೇಡಿಗಳನ್ನು ಹಾಗೆಯೇ ಬಿಟ್ಟಿದ್ದು ಈ ಭಯೋತ್ಪಾದಕತೆಯನ್ನು ಅವರು ಮತ್ತೆ ಮುಂದುವರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವರು ಮುಸ್ಲಿಮರು ಎಂಬ ಒಂದು ಕಾರಣಕ್ಕಾಗಿ ಅವರನ್ನು ಬಂಧಿಸದೆ ಬಿಟ್ಟದ್ದು ಈ ಪೋಲಿಸರ ಷಂಡತನವನ್ನು ತೋರಿಸುತ್ತದೆ. ಇದು ರಾಜಕೀಯ ಪಕ್ಷಗಳ ಒತ್ತಡದಿಂದ ನಡೆದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಮಂಗಳೂರಿನಲ್ಲಿ ಕಾಂಗ್ರೆಸ್‌ನ ರಾಜಕಾರಣಿಗಳು ಹಿಂದಿನಿಂದಲೂ ಮುಸ್ಲಿಮರಿಗೆ ಹಾಗೂ ಕ್ರಿಸ್ಚಿಯನ್ನರಿಗೆ ಮೊದಲ ಮಣೆ ಹಾಕಿ ಅವರನ್ನು ತಮ್ಮ ದೇವರೆಂದು ತಿಳಿದು ಅವರ ಕಾಲು ನೆಕ್ಕುವ ಒಂದು ಹೀನ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ಕೇವಲ ಬಿ.ಜೆ.ಪಿ.ಯ ಪ್ರಬಲತೆಯನ್ನು ಸಹಿಸದೆ ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡುವಷ್ಟರ ಮಟ್ಟಿಗೆ ಈ ಕಾಂಗ್ರೆಸ್‍ನ ಕೆಲವು ರಾಜಕಾರಣಿಗಳು ಮುಂದುವರಿದಿದ್ದಾರೆ ಎಂದರೆ ನಮ್ಮ ದೇಶದ ಬಗ್ಗೆ ಇವರಿಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದನ್ನು ತಿಳಿಯಬಹುದು.
ಇಂದು ಹಿಂದುಗಳು ಎಷ್ಟರ ಮಟ್ಟಿಗೆ ಮಂಗಳೂರಿನಲ್ಲಿ ಅಭದ್ರತೆಯನ್ನು ಹೊಂದಿದ್ದಾರೆ ಎಂದರೆ, ಈ ಲಜ್ಜೆಗೇಡಿ ರಾಜಕಾರಣಿಗಳು ಬಹಿರಂಗವಾಗಿಯೇ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುತ್ತಿರುವುದನ್ನು ನೋಡಿಯೂ ಏನೂ ಹೇಳದ ಸ್ಥಿತಿಯಲ್ಲಿದ್ದಾರೆ. ಟೆಂಪೋದಲ್ಲಿ ದನಕರುಗಳನ್ನು ಕಸಾಯಿಖಾನೆಗೆ ಸಾಗಿಸುವುದು ಅಪರಾಧವಲ್ಲ, ಅದನ್ನು ತಡೆಯುವುದು ಅಪರಾಧವಾಗಿದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಮೆರವಣಿಗೆಯನ್ನು ಅಬ್ಬರದಿಂದ ಮಾಡುವಂತಿಲ್ಲ, ಆದರೆ ಮದರಸಾಗಳಲ್ಲಿ ದಿನಾಲೂ ಗಟ್ಟಿಯಾಗಿ ಮೈಕ್ ಹಾಕಿ ಜನಗಳಿಗೆ ತೊಂದರೆ ಕೊಡುವುದು ಅಪರಾಧವಲ್ಲ. ಬಲವಂತದ, ಆಮಿಷದ ಮತಾಂತರ ಮಾಡುವುದು ತಪ್ಪಲ್ಲ, ಅದನ್ನು ವಿರೋಧಿಸುವುದು ತಪ್ಪು. ಮಠಾಧೀಶರುಗಳು ಹಿಂದೂಗಳ ರಕ್ಷಣೆಗೆ ಮೆರವಣಿಗೆ ಮಾಡಿದರೆ ತಪ್ಪು, ಆದರೆ ಮುಸ್ಲಿಮರ, ಕ್ರಿಶ್ಚಿಯನ್ನರು ಬೀದಿಗಿಳಿದು ಹಿಂಸಾಚಾರದ ಮೂಲಕ ಪ್ರತಿಭಟಿಸಿದರೆ ತಪ್ಪಿಲ್ಲ. ಹಿಂದೂಗಳು ಪ್ರತಿಭಟಿಸಿದರೆ ಕೋಮುವಾದ, ಅಲ್ಪಸಂಖ್ಯಾತರು ಪ್ರತಿಭಟಿಸಿದರೆ ದೇಶಪ್ರೇಮ. ಹೇಗಿದೆ ನೋಡಿ ನಮ್ಮ ದೇಶದ ಸಂವಿಧಾನ, ನಮ್ಮ ದೇಶದ ರಾಜಕಾರಣಿಗಳ ರೌದ್ರ, ಕರಾಳ, ಹೀನ ಮುಖ?. ಹಿಂದೂಗಳ ಪವಿತ್ರ ಕ್ಷೇತ್ರಗಳಿಂದ ಸಂಗ್ರಹಿಸಿದ ಹಣ ಇಂದು ಚರ್ಚ್ ನಿರ್ಮಾಣಕ್ಕೆ, ಮಸೀದಿ, ಮದರಸಾಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ಆದರೆ ಶಿಥಿಲಾವಸ್ಥೆಯಲ್ಲಿರುವ ಯಾವುದೇ ಹಿಂದೂ ದೇವಳಗಳನ್ನು ಜೀರ್ಣೋದ್ದಾರ ಮಾಡಲು ಯಾವುದೇ ಸಹಾಯವಿಲ್ಲ.
ಹಿಂದೂಗಳು ಇಂದು ಭಾರತದಲ್ಲಿ ಅಭದ್ರತೆಯ ನೆರಳಲ್ಲಿ ಬದುಕುತ್ತಿದ್ದಾರೆ. ಈಗ ಅಲ್ಲಲ್ಲಿ ಇಂತಹ ಅಭದ್ರತೆಯ ಭಯದಿಂದ ಹೊರಬರಲು ಹಿಂದೂಗಳು ಬಹಿರಂಗವಾಗಿಯೇ ಪ್ರತಿಭಟನೆ ಮಾಡುತ್ತಿರುವುದು, ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಅಲ್ಲಾಡಲು ಶುರುವಾಗಿದೆ. ಇದೇ ರೀತಿ ಈ ಕಾಂಗ್ರೆಸ್‌ನ ಕೆಲ ರಾಜಕಾರಣಿಗಳ ಬೆಂಬಲ ಈ ಭಯೋತ್ಪಾದಕರಿಗೆ ಮುಂದುವರಿದರೆ, ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಧರ್ಮಯುದ್ಧದ ಘೋಷಣೆ ಮಾಡಿದರೆ ಈ ದೇಶದಲ್ಲಿ ಅರಾಜಕತೆ ಉಂಟಾಗಿ ಅಲ್ಪಸಂಖ್ಯಾತರ ರಕ್ಷಣೆ ಕಷ್ಟವಾಗಲಿದೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಹಿಂದೂಗಳ ಮನೋಭಾವನೆಯನ್ನು ಅರ್ಥಮಾಡಿಕೊಂಡು , ಅಲ್ಪಸಂಖ್ಯಾತರಿಗೆ ಮನ್ನಣೆ ಕೊಡುವುದನ್ನು ನಿಲ್ಲಿಸಿ, ಎಲ್ಲರೂ ಸಮಬಾಳ್ವೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಈಗಿನ ಸದ್ಯದ ಅವಶ್ಯಕತೆಯಾಗಿದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ " ಧರ್ಮೋ ರಕ್ಷತಿ ರಕ್ಷಿತಃ" - ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ.
"ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್!!"- ಅಂದರೆ ಧರ್ಮವು ನಷ್ಟವಾಗಿ ಅಧರ್ಮವು ಅಭಿವೃದ್ದಿಯಾದಾಗ ನಾನು ಜನ್ಮವನ್ನು ಎತ್ತುತ್ತೇನೆ.
"ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್! ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ!!"- ಅಂದರೆ ಸಾಧುಗಳ ಸಂರಕ್ಷಣೆಗಾಗಿ-ದುಷ್ಟರ ಸಂಹಾರಕ್ಕಾಗಿ-ಧರ್ಮ ಸಂಸ್ಥಾಪನೆಗೋಸ್ಕರ ನಾನು ಯುಗಯುಗಗಳಲ್ಲಿಯೂ ಹುಟ್ಟುತ್ತೇನೆ.

ಆದರೆ ಕಲಿಯುಗದಲ್ಲಿ ಭಗವಂತ ಕಲ್ಕಿ ಅವತಾರ ತಾಳುತ್ತಾನೆ ಹಾಗೂ ದುಷ್ಟರನ್ನು ಸಂಹರಿಸುತ್ತಾನೆ. ಅಂದರೆ ಅವನು ಧರ್ಮ ಸಂರಕ್ಷಕ ಯೋಧರ ದೇಹದಲ್ಲಿ ಹೊಕ್ಕು ದುಷ್ಟರ ಸಂಹಾರ ಮಾಡುತ್ತಾನೆ. ಇದನ್ನು ಈ ದುಷ್ಟ ರಾಜಕಾರಣಿಗಳು ಅರ್ಥ ಮಾಡಿಕೊಂಡರೆ ಸಾಕು.

Saturday, September 27, 2008

ಬನ್ನಿ ಸ್ವಾಭಿಮಾನಿ ಕರ್ನಾಟಕ ಕಟ್ಟೋಣ (ಮೋದಿಗೆ ಸಲಾಂ)



ಬೆಂಗಳೂರು ಸೆಪ್ಟೆಂಬರ್ ೨೭: ಮಂಗಳೂರಿನಲ್ಲಿ ನಡೆದ ಗಲಭೆಗೆ ಹಿಂದೂಗಳ ವಿರುದ್ಧ ಕ್ರಿಶ್ಚಿಯನ್ನರ ಪರ ಏಕಪಕ್ಷೀಯವಾಗಿ ಕೇಂದ್ರದ ತಂಡ ತನ್ನ ಬೆಂಬಲ ಸಾರಿ ಕೇಂದ್ರ ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಆದರೆ ಕೇವಲ ಮತಾಂತರ ಕೇಂದ್ರಗಳ ಮೇಲೆ ಆಕ್ರಮಣವಾಯಿತೇ ಹೊರತು ಯಾವುದೇ ಪ್ರಾಣಹಾನಿಯಾಗಲೀ,ಹಲ್ಲೆಯಾಗಲೀ ಮಾಡದೆ ತನ್ನ ಪ್ರತಿಭಟನೆಯನ್ನು ಸಲ್ಲಿಸಿದ ಹಿಂದುಗಳ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕೇಂದ್ರಸರಕಾರ ಉದ್ದೇಶಪೂರ್ವಕವಾಗಿಯೇ ಮಾಡಿದೆ.
ಬೆಂಗಳೂರಿನ ಆರ್ಚ್ ಬಿಷಪ್ ಆದ ಮೊರಾಸ್ ಎಂಬ ವ್ಯಕ್ತಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಗೌರವ ತೋರಿಸಿದ್ದು ಅವನ ನಿಜವಾದ ಬಣ್ಣವನ್ನು ತೋರಿಸುತ್ತದೆ. ಒಬ್ಬ ಮುಖ್ಯಮಂತ್ರಿಗೆ ಅಗೌರವ ಸೂಚಿಸುವ ಇಂತಹ ರಾಜ್ಯದ್ರೋಹಿಗಳನ್ನು ಕರ್ನಾಟಕದಿಂದ ಹೊರಗಟ್ಟಬೇಕು. ಇದೇ ಘಟನೆ ಗುಜರಾತಿನಲ್ಲಿ ನಡೆದಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಮಾನವೀಯ ದೃಷ್ಟಿಯಿಂದ ನಮ್ಮ ಮಾನ್ಯ ಮುಖ್ಯಮಂತ್ರಿಗಳು ಅವನನ್ನು ಭೇಟಿ ಮಾಡಲು ಹೋಗಿದ್ದರೇ ವಿನಹ ರಾಜಕೀಯ ಫೋಸ್ ಕೊಡಲು ಅಲ್ಲ ಎಂಬುದನ್ನು ಅವನು ಮನಗಣಬೇಕಾಗಿದೆ. ಅಲ್ಲದೆ ಸಾಂಗ್ಲಿಯಾನ ಎಂಬ ಬಾಯ್ಬಡುಕ ಈಗ ಮತಾಂತರದ ಪರವಾಗಿ ಮಾತನಾಡುತ್ತಿರುವುದು ಅವನ ಬಗ್ಗೆ ಅಸಹ್ಯ ಹುಟ್ಟಿಸಿದೆ.
ಬನ್ನಿ....ಗುಜರಾತ್ ಎಂಬ ಸ್ವಾಭಿಮಾನೀ ರಾಜ್ಯದ ಬಗ್ಗೆ ನಾವು ಹೆಮ್ಮೆ ಪಡಬೇಕಾದ್ದು ನಿಜ. ಏಕೆಂದರೆ ಕೆಲವು ದಶಕಗಳ ಕಾಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಸರಕಾರವನ್ನು ಕಂಡಿದ್ದ ಜನತೆ ಕೊನೆಗೂ ಎಚ್ಚೆತ್ತು ಒಬ್ಬ ರಾಷ್ಟ್ರೀಯ ಹರಿಕಾರ, ಹಿಂದೂ ರಕ್ಷಕ, ಜನಪ್ರೇಮಿ ಸರಕಾರದ ಹುಟ್ಟಿಗೆ ಕಾರಣರಾದರು. ಈಗ ಎಲ್ಲಿ ಹೋದರೂ ಗುಜರಾತ್ ಜನತೆ ತಮ್ಮ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಬಗ್ಗೆ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಾರೆ. ಅಲ್ಲದೆ ತಮ್ಮ ರಾಜ್ಯವನ್ನು ಸ್ವಾಭಿಮಾನೀ ರಾಜ್ಯವನ್ನಾಗಿ ಮಾಡಿದ ಈ ಹರಿಕಾರನನ್ನು ಕೊಂಡಾಡುತ್ತಾರೆ. ಕೇಂದ್ರದ ಯವುದೇ ಸಹಾಯವಿಲ್ಲದೆಯೂ ತಾನು ಸರಕಾರ ನಡೆಸಬಲ್ಲೆ, ತನ್ನ ರಾಜ್ಯದ ಜನರನ್ನು ಸ್ವಾಭಿಮಾನಿಯಾಗಿ ಮಾಡಬಲ್ಲೆ ಎಂಬುದನ್ನು ಬಹಿರಂಗವಾಗಿಯೇ ಸಾರಿ ಅದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವೇ?. ಸದಾ ಕಾಲೆಳೆಯುವ ಪಕ್ಷವಾದ ಕಾಂಗ್ರೆಸ್ ತನ್ನ ಸ್ವಹಿತಕ್ಕಾಗಿ ಕರ್ನಾಟಕದ ಜನರನ್ನು ಬಲಿಗೊಡಲೂ ಸಿದ್ಧ ಎಂಬ ಸಿದ್ಧಾಂತಕ್ಕೆ ಕಟ್ಟುಬಿದ್ದಿದೆ.
ನರೇಂದ್ರ ಮೋದಿಯಂತಹ ಒಬ್ಬ ಸ್ವಾಭಿಮಾನೀ ಮುಖ್ಯಮಂತ್ರಿ ನಮ್ಮ ಕರ್ನಾಟಕಕ್ಕೆ ಇನ್ನೂ ಸಿಗದಿರುವುದು ನಮ್ಮ ದುರ್ದೈವ. ಆದರೆ ಯೆಡಿಯೂರಪ್ಪ ಈ ನಿಟ್ಟಿನಲ್ಲಿ ತುಂಬಾ ಹಿಂದುಳಿದಿದ್ದಾರೆ. ಏಕೆಂದರೆ ಅವರಿಗೆ ತಮ್ಮದೇ ಪಕ್ಷದಲ್ಲಿ ಹಿಡಿತವಿಲ್ಲದ ಕಾರಣ ಹಾಗೂ ಬಹುಮತವಿಲ್ಲದ ಕಾರಣ ಈಗ ಹೊರಗಿನಿಂದ ಪಕ್ಷಕ್ಕೆ ಬಂದಿರುವ ಅವಕಾಶವಾದೀ ರಾಜಕಾರಣಿಗಳ ವಿರುದ್ಧ ಏಗಬೇಕಾಗಿರುವುದರಿಂದ ಅವರ ಪರಿಸ್ಥಿತಿಯನ್ನು ನರೇಂದ್ರ ಮೋದಿಯವರಿಗೆ ಹೋಲಿಸಲಾಗದು.
"ಬನ್ನಿ ಸ್ವಾಭಿಮಾನೀ ಕರ್ನಾಟಕ ಕಟ್ಟೋಣ.....ಕೇಂದ್ರ ಸರಕಾರ ಮತಾಂತರಕ್ಕೆ ಕುಮ್ಮಕ್ಕು ಕೊಟ್ಟರೂ ನಾವು ಸ್ವಾಭಿಮಾನಿಯಾಗಿ ಅದನ್ನು ಹಿಮ್ಮೆಟ್ಟಿಸಬೇಕು."

ಸಂಸ್ಕೃತದ ನಂತರದ ಅತೀ ಪುರಾತನ ಭಾಷೆಯಾದ ನಮ್ಮ ಕನ್ನಡ ಭಾಷೆಯ ಏಳಿಗೆಗಾಗಿ ಹೋರಾಡೋಣ. ಗುಜರಾತ್ ಮಾದರಿಯಲ್ಲಿ ನಮ್ಮ ಕರ್ನಾಟಕ ರಾಜ್ಯವನ್ನು ಸ್ವಾಭಿಮಾನೀ ರಾಜ್ಯವಾಗಿ ಕಟ್ಟೋಣ.

Friday, September 19, 2008

ನ್ಯೂ ಲೈಫ್ ಮತ್ತು ಕ್ರಿಶ್ಚಿಯನ್ ಭಯೋತ್ಪಾದಕರು

ಬೆಂಗಳೂರು ಸೆಪ್ಟೆಂಬರ್ ೧೯ : ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ಧಾಳಿ..ಇದು ಇತ್ತೀಚಿನ ಕೆಲವು ಪತ್ರಿಕೆಗಳ ಮುಖಪುಟ ವರದಿ. ಆದರೆ ಇದೆಲ್ಲಾ ಬೊಗಳೆ. ಈ ಮಾಧ್ಯಮದ ಮಂದಿಗೆ ಚರ್ಚ್ ಯಾವುದು, ಮತಾಂತರ ಕೇಂದ್ರ ಯಾವುದು ಎಂಬುದು ಇನ್ನೂ ತಿಳಿಯದಿರುವುದು ಅವರ ಜರ್ನಲಿಸಂ ವೃತ್ತಿಯ ಜ್ಞಾನವನ್ನು ಎತ್ತಿ ತೋರಿಸುತ್ತದೆ. ಆದರೆ ಧಾಳಿಯಾದದ್ದು ಚರ್ಚ್ ಮೇಲಲ್ಲ...ನ್ಯೂ ಲೈಫ್ ಎಂಬ ಕ್ರಿಶ್ಚಿಯನ್ ಭಯೋತ್ಪಾದಕ ಕೇಂದ್ರಗಳ ಮೇಲೆ.
ನಾನು ಒಬ್ಬ ಹಿಂದುವಾಗಿ ಎದೆ ತಟ್ಟಿಕೊಂಡು ಹೇಳಬಲ್ಲೆ, ಇವತ್ತು ಮಂಗಳೂರಿನಲ್ಲಿ ಹಿಂದುಗಳು ನೆಮ್ಮದಿಯಿಂದ ಬಾಳುತ್ತಿದ್ದಾರೆ ಎಂದರೆ ಅದು ಹಿಂದೂ ಸಂಘಟನೆಗಳಾದ ಆರ್.ಎಸ್.ಎಸ್, ಭಜರಂಗದಳ, ವಿ.ಎಚ್.ಪಿ ಯಿಂದ. ಇಲ್ಲದಿದ್ದಲ್ಲಿ ಈ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರು ಅಲ್ಲಿ ಹಿಂದುಗಳನ್ನು ಅರೆದು ಕುಡಿದುಬಿಡುತ್ತಿದ್ದರು. ನಾನು ಆರು ತಿಂಗಳು ಆರ್.ಎಸ್.ಎಸ್‌ನಲ್ಲಿ ಪೂರ್ಣಾವಧಿಯಲ್ಲಿ ಕೆಲಸ ಮಾಡಿದ ಅನುಭವದಿಂದ ಹೇಳುತ್ತಿದ್ದೇನೆ. ಈ ಜನಾರ್ಧನ ಫೂಜಾರಿ, ವೀರಪ್ಪ ಮೊಯಿಲಿ ಮುಂತಾದ ಕಾಂಗ್ರೆಸ್ ಮುಖಂಡರಿಂದಲೇ ಇವತ್ತು ಮಂಗಳೂರು ಹೊತ್ತಿ ಉರಿಯುತ್ತಿದೆ. ಕೇವಲ ಓಟಿಗಾಗಿ ಅಲ್ಪಸಂಖ್ಯಾತರ ಕಾಲು ನೆಕ್ಕಲೂ ಹೇಸದ ಈ ಮಂದಿ ಇವತ್ತು ಚರ್ಚ್‌ಗಳ ಮೇಲೆ ಧಾಳಿ ಎಂದು ಬೊಬ್ಬಿರಿಯುತ್ತಿದ್ದಾರೆ. ಆದರೆ ಹಿಂದೂ ದೇವಳವನ್ನು ಉಲ್ಲಾಳದಲ್ಲಿ ಜಖಂಗೊಳಿಸಿದಾಗ, ಉಲ್ಲಾಳದಲ್ಲಿ ಹಿಂದುಗಳ ಮಾರಣ ಹೋಮವಾದಾಗ ಈ ಮಂದಿ ತುಟಿ ಪಿಟಿಕ್ ಎನ್ನುವುದಿಲ್ಲ.
ನೆರೆಯ ಪಾಕಿಸ್ಥಾನದಲ್ಲಿ ಒಬ್ಬ ಹಿಂದುವನ್ನು ಮುಸ್ಲಿಮ್ ಧರ್ಮದ ಅವಹೇಳನ ಮಾಡಿದ್ದಕ್ಕಾಗಿ ಹಾಡುಹಗಲೇ ಕೊಲೆಗೈಯಲಾಯಿತು. ಆದರೆ ಇಂದು ಭಾರತದಲ್ಲಿ ಧರ್ಮದ ಅವಹೇಳನೆಯ ಅಧಿಕಾರವನ್ನು ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮುಂತಾದ ಹಿಂದೂ ವಿರೋಧಿ ಪಕ್ಷಗಳು ಚಿನ್ನದ ತಟ್ಟೆಯಲ್ಲಿ ದಾನ ಮಾಡಿವೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಕೂಡಾ ವಸ್ತು ಸ್ಥಿತಿ ಅರಿಯದೆ ಹಿಂದುಗಳ ವಿರುದ್ಧವೇ ಮಾತಾಡುತ್ತಿರುವುದು ಹಿಂದುಗಳೇ ಹಿಂದುಗಳಿಗೆ ವಿರೋಧವಾಗಿರುವುದನ್ನು ಸೂಚಿಸುತ್ತದೆ.
ಇಷ್ಟಕ್ಕೂ "ನ್ಯೂ ಲೈಫ್" ಎಂಬ ಭಯೊತ್ಪಾದಕ ಹಾಗೂ ಮತಾಂತರ ಕೇಂದ್ರಗಳ ಬಗ್ಗೆ ನಿಮಗೆ ಎಷ್ಟು ಗೊತ್ತು?.....ಈ ಕೇಂದ್ರಗಳು ಹಂಚುತ್ತಿರುವ "ಸತ್ಯದರ್ಶಿನಿ" ಎಂಬ ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಪುಸ್ತಕವೇ ಈ ಮಂಗಳೂರು ಘಟನೆಗೆ ಕಾರಣ. ಇದರ ಕರ್ನಾಟಕದ ರೂವಾರಿ ನಮ್ಮ ಹೆಮ್ಮೆಯ ಮಾಜಿ ಪೋಲಿಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ. ಕರ್ನಾಟಕದಲ್ಲಿ ಈ ನ್ಯೂ ಲೈಫ್ ಕೇಂದ್ರಗಳ ಉಸ್ತುವಾರಿ ಹಾಗೂ ಮತಾಂತರಕ್ಕೆ ಪ್ರಚೋದನೆ ನೀಡುತ್ತಿರುವುದು ಎಲ್ಲ ಬಿ.ಜೆ.ಪಿ ನಾಯಕರಿಗೆ ತಿಳಿದಿದ್ದು, ಅವನನ್ನು ಅದೇ ವಿಷಯಕ್ಕಾಗಿ ಮೂಲೆಗುಂಪು ಮಾಡಲಾಯಿತು. ಇದಕ್ಕೆ ಪ್ರತೀಕಾರವಾಗಿ ಈ ನ್ಯೂ ಲೈಫ್ ಕೇಂದ್ರಗಳನ್ನು ಅತೀ ಶೀಘ್ರವಾಗಿ ಬೆಳೆಸಿ ಹಿಂದುಗಳ ವಿರುದ್ಧ ಸೇಡು ತೀರಿಸಿಕೊಂಡ.
ಈ "ಸತ್ಯ ದರ್ಶಿನಿ" ಪುಸ್ತಕದಲ್ಲಿ ಕೆಳಗೆ ಇರುವ ವಿಷಯಗಳು ಕ್ರಿಶ್ಚಿಯನ್ನರ ದೇಶದ್ರೋಹಿತನವನ್ನು ಸಾರುತ್ತವೆ. ಧರ್ಮ ನಿಂದನೆಗೆ ಯಾವ ಶಿಕ್ಷೆ ಕೊಡಬೇಕು?.

೧. ಇದರಲ್ಲಿ ಶ್ರೀ ರಾಮ, ಕೃಷ್ಣ, ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ಬ್ರಾಹ್ಮಣರನ್ನು ಹೀನಾಯವಾಗಿ ಚಿತ್ರಿಸಲಾಗಿದೆ.
೨. ತ್ರಿಮೂರ್ತಿಗಳು ಕಾಮ ಕ್ರೋಧಗಳಿಗೆ ಒಳಗಾಗಿ ಪಾಪವನ್ನು ಮಾಡಿದ್ದಾರೆ. ಹಾಗಾಗಿ ಅವರು ದೇವರಲ್ಲ.
೩. ತ್ರಿಮೂರ್ತಿಗಳು ಲೋಕವನ್ನು ಪ್ರೀತಿಸಿ, ಸ್ತ್ರೀಯರನ್ನು ಮೋಹಿಸಿದ್ದಾರೆ, ಹಾಗಾಗಿ ಅವರಿಗೆ ಮನುಷ್ಯರಿಗೆ ಬುದ್ದಿ ಹೇಳುವ ಹಕ್ಕಿಲ್ಲ.
೪. ಬ್ರಾಹ್ಮಣರಿಗೆ ಮೂಲಪುರುಷನಾದ ವಸಿಷ್ಠ ಮಹರ್ಷಿ ವೇಶ್ಯೆಯ ಗರ್ಭದಲ್ಲಿ ಹುಟ್ಟಿದವನು ಎಂದಿದೆ.
೫. ಬ್ರಾಹ್ಮನರು ಆಕಳ ಕೊಬ್ಬನ್ನು ತಿನ್ನುತ್ತಾರೆ, ಇದು ಮಾಂಸವನ್ನು ತಿಂದಂತೆ ಎಂದಿದೆ.
೬. ಹಿಂದೂಗಳ ಎಲ್ಲ ದೇವರುಗಳನ್ನು ಅಸಹ್ಯವಾಗಿ ಚಿತ್ರಿಸಲಾಗಿದೆ.ಇನ್ನೂ ಅನೇಕ ವಿಷಯಗಳಿವೆ.

ಇಂತಹ ಹಿಂದೂ ವಿರೋಧಿ ಹೇಳಿಕೆಗಳು ಈ ಪುಸ್ತಕದಲ್ಲಿದ್ದರೂ ನಮ್ಮ ತಿಪ್ಪೆ ರಾಜಕಾರಣಿಗಳು ಯಾಕೆ ಇನ್ನೂ ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ?. ಮಂಗಳೂರು ಜಿಲ್ಲೆಯೊಂದರಲ್ಲೇ ೧೫ ನ್ಯೂಲೈಫ್(ಮತಾಂತರ) ಕೇಂದ್ರಗಳಿವೆ. ಈ ಕೇಂದ್ರಗಳು ಆಮಿಷದ, ಬಲವಂತದ ಮತಾಂತರ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಇದರ ಬಗ್ಗೆ ಮಂಗಳೂರಿನ ಭಜರಂಗ ದಳ, ವಿ.ಎಚ್.ಪಿ ಮೊದಲಾದ ಸಂಘಟನೆಗಳು ಅನೇಕ ಬಾರಿ ದೂರು ನೀಡಿದ್ದರೂ ಕ್ರಮ ಯಾಕೆ ಕೈಗೊಂಡಿಲ್ಲ?. ಇದಕ್ಕೆ ನೇರಹೊಣೆ ಹಿಂದಿನ ಸರಕಾರಗಳು, ಅಲ್ಪಸಂಖ್ಯಾತರನ್ನು ಪೋಷಿಸುತ್ತಿರುವ ಜೆ.ಡಿ.ಎಸ್. ಹಾಗೂ ಅಲ್ಪ ಸಂಖ್ಯಾತರ ಪ್ರತಿನಿಧಿಯಾದ ಕೇಂದ್ರ ಸರಕಾರಗಳು.
ಒಬ್ಬ ರಾಜಕಾರಣಿಗಾದರೂ ಈ ಭಯೋತ್ಪಾದಕರ ವಿರುದ್ಧ, ಈ ಮತಾಂತರಿಗಳ ವಿರುದ್ಧ ಮಾತನಾಡಲು ಗಂಡಸ್ತನವಿದೆಯೇ?. ಇಂದು ಹಿಂದುಗಳ ರಕ್ಷಣೆಯನ್ನು ಹಿಂದು ಸಂಘಟನೆಗಳೇ ಮಾಡಬೇಕಾಗಿದೆ. ಯಾವ ಪೋಲಿಸ್, ಕಾನೂನು, ಸರಕಾರಗಳೂ ಹಿಂದುಗಳ ರಕ್ಷಣೆಗೆ ಬರಲಾರದು.

ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಇದಕ್ಕೆ ಪರಿಹಾರ ಇದೆ. ಇದ್ದರೆ ಅದು ಕೇವಲ ಏಕರೂಪ ನಾಗರಿಕ ಸಂಹಿತೆಯಿಂದ ಮಾತ್ರ ಸಾಧ್ಯ. ಅಲ್ಪಸಂಖ್ಯಾತರ ತುಷ್ಟೀಕರಣವೇ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳಿಗೆ ಕಾರಣ. ಮಂಗಳೂರಿನಲ್ಲಿ ಹಿಂದುಗಳು ಈ ನ್ಯೂಲೈಫ್ ಕೇಂದ್ರಗಳ ಮೇಲೆ ಹಲ್ಲೆ ಮಾಡಿರಬಹುದು ಆದರೆ ಈ ಕ್ರಿಶ್ಚಿಯನ್ನರು ಸಮಸ್ತ ಹಿಂದುಗಳ ಹೃದಯವನ್ನು ಒಡೆದಿದ್ದಾರೆ, ಹಿಂದೂ ಕ್ರಿಷ್ಚಿಯನ್ನರ ಮಧ್ಯೆ ಸೇರಿಸಲಾಗದ ಕಂದಕ ಸೃಷ್ಟಿಸಿದ್ದಾರೆ. ಇದಕ್ಕೆ ಯಾರು ಹೊಣೆ?

ಹೊಣೆಗೇಡಿಗಳಾದ ಕಾಂಗ್ರೆಸ್ ಹಾಗೂ ಜೆ.ಡಿ.ಏಸ್.ಗಳೆ ಈ ಪರಿಸ್ಥಿತಿಗೆ ಮೂಲ ಕಾರಣ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಎರಡೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಹಿಂದೂಗಳೇ ಒಗ್ಗಟ್ಟಾಗಿ, ಈ ಹಿಂದೂ ವಿರೋಧಿಗಳನ್ನು ಸೋಲಿಸೋಣ.

Sunday, September 14, 2008

ಹೇಸಿಗೆ ರಾಜಕಾರಣಿಗಳು ಮತ್ತು ಅಕ್ಕ ಸಮ್ಮೇಳನ

ಬೆಂಗಳೂರು ಸೆಪ್ಟೆಂಬರ್ ೧೪: ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ "ಅಕ್ಕ" ಸಮ್ಮೇಳನ ಎಲ್ಲ ಕನ್ನಡಿಗರಿಗೆ ಒಂದು ಸಂತೋಷದಾಯಕ ವಿಚಾರ. ಅಮೆರಿಕಾದಲ್ಲಿ ನೆಲೆಸಿದ್ದರೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಈ ಮಂದಿಗೆ ನನ್ನ ಸಲಾಂ.
ಆದರೆ ಇನ್ನೊಂದು ತಲೆತಗ್ಗಿಸುವ ವಿಚಾರ ಇಲ್ಲಿ ನಮ್ಮ ಗ್ರೇಟ್ ರಾಜಕಾರಣಿಗಳು ಮಾಡಿದ್ದಾರೆ. "ಜನಾರ್ಧನ ರೆಡ್ಡಿ ಕೃಪಾಪೋಷಿತ ನಾಟಕ ಮಂಡಳಿ"ಯ ಕೆಲ ರಾಜಕಾರಣಿಗಳು ಈ ಅಕ್ಕ ಸಮ್ಮೇಳನ ನೆಪದಲ್ಲಿ ಸರಕಾರೀ ಖರ್ಚಿನಲ್ಲಿ ಒಂದು ವಾರ ಮಜಾ ಮಾಡಿ ಬಂದಿದ್ದು, ಇವರಿಗೆ ತಮ್ಮ ತಾಯಿನಾಡಿನ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಇದೂ ಅಲ್ಲದೆ "ಕನ್ನಡ"ದ ವಿಚಾರದಲ್ಲಿ ಗೋಮುಖ ವ್ಯಾಘ್ರನಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಕೂಡಾ ಏನೂ ಮಾಡದ ಅಸಹಾಯ ಪರಿಸ್ಥಿತಿಯಲ್ಲಿರುವುದು ಅತ್ಯಂತ ಹೀನ ಸ್ಥಿತಿಯಾಗಿದೆ. ಪ್ರಧಾನಿ ಮನಮೋಹನ ಸಿಂಗ್ ಯಾವ ರೀತಿ ರಿಮೋಟ್ ಕಂಟ್ರೋಲ್‌ನಿಂದ (ಸೋನಿಯಾ) ಕೆಲಸ ಮಾಡುತ್ತಿರುವರೋ ಅದೇರೀತಿ ಇಲ್ಲಿ ಯೆಡಿಯೂರಪ್ಪ ಕೂಡಾ ಕನ್ನಡ ವಿರೋಧಿಗಳಾದ, ಗಣಿ ಲೂಟಿಕೋರರಾದ ರೆಡ್ಡಿ ಸಹೋದರರಿಂದ ರಿಮೋಟ್ ಕಂಟ್ರೋಲ್‍ನಿಂದ ಆಡಿಸಲ್ಪಡುತ್ತಿದ್ದಾರೆ. ಅಯ್ಯೋ ಪಾಪ ನಮ್ಮ ಕರ್ನಾಟಕಕ್ಕೆ ಇಂಥಹ ದೈನೇಸಿ ಪರಿಸ್ಥಿತಿ ಬರಬಾರದಿತ್ತು.
ಅನೇಕ ಮಂದಿ ಕನ್ನಡದ್ರೋಹಿ, ಕನ್ನಡವಿರೋಧಿ ಐ.ಎ.ಎಸ್ ಅಧಿಕಾರಿಗಳು, ರಾಜಕಾರಣಿಗಳು ಕನ್ನಡ ಸಮ್ಮೆಳನದ ನೆಪದಲ್ಲಿ ಭರ್ಜರಿಯಾಗಿಯೇ ಖಜಾನೆ ಲೂಟಿ ಮಾಡಿದ್ದಾರೆ. ಅಲ್ಲಾರೀ...ಕನ್ನಡ ಬರೆಯಲು, ಓದಲು, ಮಾತನಾಡಲು ಬಾರದ ಈ ಮಂದಿಗೆ ಕನ್ನಡ ಸಮ್ಮೇಳನದಲ್ಲಿ ಏನು ಕೆಲಸ?. ಕರ್ನಾಟಕದಲ್ಲಿ ನೆಲೆಸದ, ಇಲ್ಲಿನ ಭಾಷೆ, ಸಂಸ್ಕೃತಿಯ ಗಂಧ ಗಾಳಿಯಿಲ್ಲದ ಕೆಲ ಮಂದಿ ಈ ರೆಡ್ಡಿ ಸಹೋದರರ ಮಸಲತ್ತಿನಿಂದ ಭರ್ಜರಿಯಾಗಿಯೇ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಒಂದು ಲೆಕ್ಕದಲ್ಲಿ ಮಜಾ ಮಾಡಿ ಬಂದಿದ್ದಾರೆ. ಇಂಥ ಮಂದಿಗೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದರೂ ಕಮ್ಮಿಯೇ.
ಆದರೆ ನಮ್ಮ ಮುಖ್ಯಮಂತ್ರಿಗೆ ಬುದ್ದಿ ಇಲ್ಲವೆ?. ಬುದ್ದಿ ಇದೆ ಆದರೆ ತನ್ನ ಕೈಯಲ್ಲಿ ಇಲ್ಲ ಅಂತ ಕಾಣುತ್ತದೆ. ಎಲ್ಲ ರೆಡ್ಡಿ ಸಹೋದರರಿಗೆ ಮಾರಿಕೊಂಡಿದ್ದಾರೆ. ಕನ್ನಡದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಮಂದಿ ಅಮೆರಿಕಾದಲ್ಲಿ ನಮ್ಮ ಸಹೋದರರು ಆಚರುತ್ತಿರುವ ಅಕ್ಕ ಸಮ್ಮೇಳನದಲ್ಲಿ ಹೇಸಿಗೆ ಚೆಲ್ಲಿ ಬಂದಿದ್ದಾರೆ. ಕೇವಲ ಮಜಾ ಮಾಡುವ ನೆಪದಲ್ಲಿ ನಮ್ಮ ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಅಸಹ್ಯ ಭಾವನೆ ಉಂಟುಮಾಡಿದ್ದಾರೆ.
ಅಕ್ಕ ಸಮ್ಮೇಳನದ ರೂವಾರಿಗಳಲ್ಲಿ ನನ್ನ ಕಳಕಳಿಯ ವಿನಂತಿ.....ದಯವಿಟ್ಟು ಇನ್ನು ಮುಂದೆ ನಮ್ಮ ರಾಜ್ಯದ ಯಾವುದೇ ರಾಜಕಾರಣಿಗಳನ್ನು ನಿಮ್ಮ ಸಮ್ಮೇಳನಕ್ಕೆ ಕರೆಯಬೇಡಿ. ಕನ್ನಡದ ಬಗ್ಗೆ ಕಾಳಜಿ ಇರುವ ಒಬ್ಬ ಸಾಮಾನ್ಯ ಮನುಷ್ಯನನ್ನು ಈ ಸಮ್ಮೆಳನಕ್ಕೆ ಕರೆಯಿರಿ. ಪ್ರತೀ ಬಾರಿ ಈ ಹೇಸಿಗೆ ರಾಜಕಾರಣಿಗಳಿಂದ ಸಮ್ಮೇಳನ ಮಲಿನ ಮಾಡುವುದಕ್ಕಿಂತ ಕನ್ನಡದ ಬಗ್ಗೆ ನಿಜವಾದ ಕಾಳಜಿ ಹೊಂದಿರುವ ಮಂದಿಗೆ ಸನ್ಮಾನ ಮಾಡಿ. ಈ ರಾಜಕಾರಣಿಗಳಿಂದ ದಯವಿಟ್ಟು ಚಂದಾ ಮಾತ್ರ ವಸೂಲು ಮಾಡಿ. ಈ ರಾಜಕಾರಣಿಗಳು ಬರದಿದ್ದಲ್ಲಿ ಸಮ್ಮೇಳನಕ್ಕೆ ಯಾವುದೇ ಚ್ಯುತಿ ಇರಲಾರದು.

"ಮಾನ್ಯ ಯೆಡಿಯೂರಪ್ಪನವರೇ ಎಲ್ಲಿ ಹೋಯಿತು ನಿಮ್ಮ ಕನ್ನಡದ ಕಾಳಜಿ?. ಅಧಿಕಾರ ಬಂದರೆ ಎಲ್ಲರೂ ಒಂದೇ ಎಂಬುದನ್ನು ಸಾಬೀತು ಮಾಡಿ ಬಿಟ್ಟಿರಿ" ಕನ್ನಡ ತಾಯಿಗೆ, ಕನ್ನಡಿಗರಿಗೆ ಅವಮಾನ ಮಾಡುವ ನಿಮ್ಮಂತಹ ಮುಖ್ಯಮಂತ್ರಿಗಳು ನಮಗೆ ಬೇಕಾಗಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡಿಸುವ ನಿಮ್ಮ ಜವಾಬ್ದಾರಿ ಏನಾಯಿತು?. ಹೊಗೇನಕಲ್ ವಿವಾದದ ಬಗ್ಗೆ ಯಾಕೆ ಮೌನ?. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಯಾಕೆ ಕಣ್ಣು ಮುಚ್ಚಿದ್ದೀರಿ?. ಐದು ವರ್ಷ ಶಿಖಂಡಿ ತರಹ ಅಧಿಕಾರ ಮಾಡುವುದಕ್ಕಿಂತ ಒಂದು ದಿನ ವೀರ ಪುರುಷನ ತರಹ ಅಧಿಕಾರ ನಡೆಸಿ. ನಿಮ್ಮ ಗೌರವ ಹೆಚ್ಚಾಗುತ್ತದೆ. ಇಲ್ಲಾ, ಮುಂದೆ ಧರಂ ಸಿಂಗ್‌ ಮೂಲೆಗುಂಪಾದ ಗತಿಯೇ ನಿಮಗೆ ಕಾದಿದೆ.

Sunday, September 07, 2008

ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು

ಬೆಂಗಳೂರು ಸೆಪ್ಟೆಂಬರ್ ೦೭:
ಒಂದು ದಿನ ಭಾನುವಾರ ಹೀಗೆ...ಒಂದು ಸಣ್ಣ ಯಾತ್ರೆ ಹೊರಟಿದ್ದೆವು. ಆಗ ನನ್ನ ಮೊಬೈಲ್ ಕ್ಯಾಮೆರಾದ ಕಣ್ಣಿಗೆ ಬಿದ್ದದ್ದು ಬೆಂಗಳೂರಿನ ಕೆಂಪಾಂಬುಧಿ ಕೆರೆಯ ಸನಿಹವಿರುವ ಈ ಡಾ.ರಾಜ್‌ಕುಮಾರ್ ಉದ್ಯ್ನಾನವನ. ಇಲ್ಲಿ ನೀವು ಬಂದು ಸ್ವಲ್ಪ ಹೊತ್ತು ವಿರಮಿಸಿದರೆ ಒಂದು ಥರಾ ಮಜಾ ಎನಿಸುತ್ತದೆ. ಆದರೆ ಇದು ಇನ್ನೂ ಪ್ರಾರಂಭವಾಗಿ ವರ್ಷವೂ ಕಳೆದಿಲ್ಲ. ಇಲ್ಲಿ ನಿಮಗೆ ಡೈನೋಸಾರ್ ಪ್ರತಿರೂಪ, ಮಮ್ಮಿಯ ಪ್ರತಿರೂಪ ಆಕರ್ಷಿಸುವ ಅಂಶಗಳು. ಅಲ್ಲದೆ ಇಲ್ಲಿ ಟ್ರೈನ್ ಕೂಡಾ ಇದೆ. ಅಲ್ಲದೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳು ಕವಿಗಳ ಪ್ರತಿಮೆಗಳು ಅವರ ವಿಅವರಗಳ ಸಹಿತ ನಿಮ್ಮ ಗಮನ ಸೆಳೆಯುತ್ತದೆ. ಅಲ್ಲದೆ ಸನಿಹದಲ್ಲಿಯೇ ಚಾಮರಾಜಪೇಟೆಯ ರುದ್ರಭೂಮಿ ಕೂಡಾ ಇರುವುದು ರಾತ್ರಿ ವೇಳೆಯಲ್ಲಿ ಕೆಲವರಿಗೆ ಇಲ್ಲಿ ಬರಲು ಭಯ ತರಿಸಬಹುದು. ಇದು ಶ್ರೀನಗರ ಹಾಗೂ ಹನುಮಂತನಗರದ ಮಧ್ಯಭಾಗದಲ್ಲಿ ಇದೆ. ಒಂದು ಸಲ ಭೇಟಿ ನೀಡಿ ಮಜಾ ಅನುಭವಿಸಿ.








Tuesday, September 02, 2008

"ಮಾಲ್‌ಗಳ-ಹಗಲು ದರೋಡೆ" ಹಾಗೂ ಐಟಿ-ಬಿಟಿಗಳ ಪರ್ಯಾಯ ಕರೆನ್ಸಿ





ಬೆಂಗಳೂರು ಸೆಪ್ಟೆಂಬರ್ ೨ : ಇಂದು ಎಲ್ಲಾ ಪ್ರಮುಖ ನಗರಗಳಲ್ಲಿ ಮಾಲ್ ಸಂಸ್ಕೃತಿ ತಲೆ ಎತ್ತಿರುವುದು ಒಂದು ದೊಡ್ಡ ಆತಂಕದ ಸಂಗತಿಯಾಗಿದೆ. ಏಕೆಂದರೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಮೂರ್ಖರಿಗೆ ಮಾತ್ರ ಇದು ಸಿಹಿಯಾದ ಸುದ್ದಿಯಾಗಿದೆ.

ನಾನು ಏಕೆ ಈ ವಿಷಯ ಹೇಳುತ್ತಿದ್ದೇನೆ ಎಂದರೆ, ಮೊನ್ನೆ ಖುದ್ದಾಗಿ ಬಿಗ್‌ಬಜಾರಿನಲ್ಲಿ ನನಗೆ ಅನುಭವವಾಯಿತು. ಎಲ್ಲ ಆಹಾರೋತ್ಪನ್ನಗಳಲ್ಲಿ ಈ ತರಹದ ಮಾಲ್‌ಗಳು ಯಾವತರಹ ಗ್ರಾಹಕರನ್ನು ಹಗಲುದರೋಡೆ ಮಾಡುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.


೧ ಕೆ.ಜಿ ಸಕ್ಕರೆ ೨೫ ರೂ.(ಬಿಗ್ ಬಜಾರ್ ಬೆಲೆ) ೨೨ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೨ ಕೆ.ಜಿ ಸಕ್ಕರೆ ೫೪ ರೂ.(ಬಿಗ್ ಬಜಾರ್ ಬೆಲೆ) ೪೪ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೫ ಕೆ.ಜಿ. ಸಕ್ಕರೆ ೧೧೩ ರೂ.ಬಿಗ್ ಬಜಾರ್ ಬೆಲೆ) ೧೦೫ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)
೫೦೦ ಮಿ.ಲೀ. ಎಳ್ಳೆಣ್ಣೆ ೮೦ ರೂ.(ಬಿಗ್ ಬಜಾರ್ ಬೆಲೆ) ೩೬ ರೂ (ದಿನಸಿ ಅಂಗಡಿ ಸಾಮಾನ್ಯ ಬೆಲೆ)

ಇದು ಕೇವಲ ಉದಾಹರಣೆಯಷ್ಟೇ....ಬಿಗ್‌ಬಜಾರ್, ರಿಲಯನ್ಸ್ ಫ್ರೆಶ್, ಫೇರ್ ಪ್ರೈಸ್, ಮೋರ್ ಮುಂತಾದ ಮಳಿಗೆಗಳಲ್ಲಿ ಸಾಮಾನ್ಯವಾಗಿ ಜನರನ್ನು ಹಾಡುಹಗಲೇ ದೋಚಲಾಗುತ್ತದೆ. ಆದರೆ ಮಧ್ಯಮವರ್ಗದ ಜನ ಲೆಕ್ಕಾಚಾರದಲ್ಲಿ ಬದುಕುವುದರಿಂದ ಅವರಿಗೆ ಬೆಲೆಗಳ ವ್ಯತ್ಯಾಸ ಗೊತ್ತಾಗುತ್ತದೆ. ನಾನೂ ಒಬ್ಬ ಲೆಕ್ಕಾಚಾರದ ಮನುಷ್ಯ, ಅಂದರೆ ಎಲ್ಲ ಕಡೆ ಬೆಲೆ ವಿಚಾರಿಸಿ ಎಲ್ಲಿ ಕಡಿಮೆ ಬೆಲೆಗೆ ಉತ್ತಮ ಪದಾರ್ಥಗಳು ದೊರೆಯುತ್ತವೆಯೋ ಅಲ್ಲೇ ನನ್ನ ಖರೀದಿ. ಆದರೆ ನಮ್ಮಂತಹ ಮಧ್ಯಮವರ್ಗದ ಜನರಿಗೆ ಟೋಪಿ ಹಾಕುವ ಇಂತಹ "ಟೋಪಿ ಮಳಿಗೆ"ಗಳ ಬಗ್ಗೆ ಎಲ್ಲರೂ ಎಚ್ಚರವಾಗಿರಬೇಕು.

ಇವುಗಳು ಕೇವಲ ಶೋಕಿ ಜನರ ಮಾಲ್‌ಗಳಾಗಿದ್ದು, ಐಟಿ-ಬಿಟಿಯಲ್ಲಿ ಕೆಲಸಮಾಡುತ್ತಿರುವ ಜನರಿಗೆ ಇಂತಹ ಮಾಲ್‌ಗಳಲ್ಲಿ ಖರೀದಿ ಮಾಡುವುದು ಒಂದು ಪ್ರತಿಷ್ಠೆಯ ವಿಷಯವಾಗಿರುವುದು ಖೇದಕರ. ಸಾಮಾನ್ಯವಾಗಿ ಇಂತಹ ಜನರೇ ಮೊದಲು ಬಕ್ರಾಗಳಾಗುತ್ತಾರೆ. ಅವರಿಗೆ ದುಡ್ಡಿನ ಬೆಲೆ ಗೊತ್ತಿರುವುದಿಲ್ಲ, ಐದು ದಿನ ಓತ್ಲ ಕೆಲಸ ಮಾಡಿ, ಎರಡು ದಿನ ಮಜಾ ಉಡಾಯಿಸುವ ಬಾಹ್ಯ ಸಂಸ್ಕೃತಿಗೆ ಒಗ್ಗಿಕೊಂಡಿರುವ ಈ ಮೊದ್ದು ಜನಗಳು ಆಹಾರ ಪದಾರ್ಥಗಳ ಬೆಲೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಎಷ್ಟು ಬೆಲೆ ತೆತ್ತಾದರೂ ಕೊಳ್ಳುವ ಅಧಮರಾಗಿರುವುದರಿಂದ, ನಮ್ಮಂತಹ ಮಧ್ಯಮವರ್ಗದ ಜನ ಯಾವ ಪದಾರ್ಥ ಕಡಿಮೆಬೆಲೆಗೆ ಇಂತಹ ಮಾಲ್‌ಗಳಲ್ಲಿ ಸಿಗುತ್ತದೋ ಅದನ್ನು ಮಾತ್ರ ಕೊಳ್ಳಬೇಕಾದ ಪರಿಸ್ಥಿತಿ, ಇಲ್ಲದಿದ್ದರೆ ಸುಮ್ಮನೇ ಎಲ್ಲವಸ್ತುಗಳನ್ನು ನೋಡಿ ಬರಿಗೈಲಿ ಬಂದು ದಿನಸಿ ಅಂಗಡಿಯಲ್ಲಿ ಕೊಳ್ಳಬೇಕಾದ ಪರಿಸ್ಥಿತಿ.

ಈ ಐಟಿ-ಬಿಟಿ ಜನಗಳಿಂದಾಗಿ ಸಾಮಾನ್ಯ ಜನರಿಗೆ ತುಂಬಾ ತೊಂದರೆಯಾಗಿದೆ ಈ ಬೆಂಗಳೂರಿನಲ್ಲಿ. ಇವರ ವೀಕೆಂಡ್ ಪಾರ್ಟಿಗಳಲ್ಲಿ ನಡೆಯುವ ಮಾದಕ ವಸ್ತುಗಳ ಬಳಕೆ, ವೇಶ್ಯಾವಾಟಿಕೆ ದಂಧೆ, ದರಿದ್ರ ಸಂಗೀತ ಹಾಕಿಕೊಂಡು ಶನಿವಾರದ ದಿನಗಳಲ್ಲಿ ಅಸಹ್ಯಕರ ನರ್ತನ. ಇವುಗಳಿಂದ ಆನಂದ ಪಡುವ ಈ ಮೂರ್ಖ ಜನ, ಬೇರೆ ದಿನಗಳಲ್ಲಿ ಸಾಚಾಗಳಂತೆ ಮಾಲ್‌ಗಳಲ್ಲಿ ಭಿಕಾರಿಗಳ ತರಹ ವೇಷ ಹಾಕಿಕೊಂಡು (ಒಂದು ದಿನ ನೀವೇ ಭೇಟಿ ನೀಡಿ, ಎಮ್.ಜಿ. ರಸ್ತೆ ಅಥವಾ ಬ್ರಿಗೇಡ್ ರಸ್ತೆಗಳಿಗೆ- ಅವರ ವೇಷ ಯಾವ ಭಿಕ್ಷುಕನಿಗೂ ಕಮ್ಮಿ ಇಲ್ಲ...ಹರಿದು ಹೋಗಿರುವ ಪ್ಯಾಂಟ್, ಹರಿದ ಬನಿಯನ್ ಅಥವಾ ಹರಿದ ಅರ್ಧ ಚಡ್ಡಿ) ಖರೀದಿಗೆ ಬರುವುದನ್ನು ನೋಡಲೇ ಒಂದು ಮಜಾ.....

ಪರ್ಯಾಯ ಕರೆನ್ಸಿ?:
ಬೆಂಗಳೂರಿನಲ್ಲಿ ಎಲ್ಲಾ ವಸ್ತುಗಳ ಬೆಲೆ ಜಾಸ್ತಿಯಾಗಲು ಇಂತಹ ಕೊಳ್ಳುಬಾಕರೇ ನೇರ ಕಾರಣ. ಯಾವುದೇ ವಸ್ತುವಾಗಲೀ ಅದರ ಬೆಲೆ ಎಷ್ಟೇ ಆಗಿರಲಿ ಯಾವುದೇ ಚರ್ಚೆ ಮಾಡದೆ, ಮುದ್ರಿತ ಬೆಲೆ ಕೂಡಾ ನೋಡದೆ ಕೊಳ್ಳುವ ಈ ಮಂದಿ ಇಂದು ಈ ಶಾಪಿಂಗ್ ಮಾಲ್‌ಗಳ ಮೊದಲ ಬಕ್ರಾಗಳು. ಅಲ್ಲದೆ ತಾವು ಕೆಲಸ ಮಾಡುವ ಸಂಸ್ಥೆ ಊಟಕ್ಕೆ ಕೊಡಮಾಡಿದ ಚೀಟಿಗಳನ್ನೇ ಈ ಮಾಲ್‌ಗಳಲ್ಲಿ ಕೊಟ್ಟು ,(ಭಿಕಾರಿಗಳ ತರಹ) ಪರ್ಯಾಯ ಕರೆನ್ಸಿಯಾಗಿ ಉಪಯೋಗಿಸುತ್ತಿರುವುದು ಇವರ ಕಾನೂನು ಉಲ್ಲಂಘನೆಗೆ ಸಾಕ್ಷಿ. ಈ ಊಟದ ಚೀಟಿಗಳನ್ನು ಪರ್ಯಾಯ ಕರೆನ್ಸಿಗಳಾಗಿ ಪಡೆಯುವ ಈ ಮಾಲ್‌ಗಳು ನಮ್ಮ ದೇಶದ ಕಾನೂನಿಗೇ ಸಡ್ಡು ಹೊಡೆದು ಇಂದು ತಮ್ಮ ದೇಶದ್ರೋಹಿತನವನ್ನು ಪ್ರದರ್ಶಿಸುತ್ತಿವೆ. ಇದು ನಮ್ಮ "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ"ಗೆ ನಮ್ಮ ಈ ಐಟಿ-ಬಿಟಿಯ ಜನ ಮಾಡುತ್ತಿರುವ ಒಂದು ಸವಾಲು.

ಸವಾಲ್:
ಬೆಂಗಳೂರಿನಲ್ಲಿ ಭಿಕ್ಷುಕರು ಜಾಸ್ತಿಯಾಗಿದ್ದಾರಂತೆ?

ಈ ಐಟಿ ಬಿಟಿ ಜನಗಳಿಂದಾಗಿ, ನಿಜವಾದ ಭಿಕ್ಷುಕರು ಪರ ರಾಜ್ಯಗಳಿಗೆ ಓಡಿಹೋಗಿದ್ದಾರಂತೆ.

ಬೆಂಗಳೂರಿನಲ್ಲಿ ಐಟಿ-ಬಿಟಿ ಜನಕ್ಕೂ ಭಿಕ್ಷುಕರಿಗೂ ವ್ಯತ್ಯಾಸವೇ ಗೊತ್ತಾಗುವುದೇ ಇಲ್ಲವಂತೆ???????????????

Saturday, August 30, 2008

ಕ್ರಿಶ್ಚಿಯನ್ ಮತಾಂಧತೆ ಮುಸ್ಲಿಂ ಭಯೋತ್ಪಾದನೆಗಿಂತ ಆತಂಕಕಾರಿ






ಬೆಂಗಳೂರು ಆಗಸ್ಟ್ ೩೦:ಒರಿಸ್ಸಾದಲ್ಲಿ ನಡೆಯುತ್ತಿರುವ ಘಟನೆಗಳು ನಮ್ಮ ದೇಶದಲ್ಲಿ ಹಿಂದೂಗಳ ಸಹನೆ ಕಟ್ಟೆಯೊಡದರೆ ಏನಾಗುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.ನಮ್ಮ ದೇಶದಲ್ಲಿ ಹಿಂದೂಗಳಿಗೆ ನೆಮ್ಮದಿಯ ಜೀವನ ನಡೆಸುವುದು ಈಗ ಸಾಧ್ಯವಿಲ್ಲದ ಮಾತಾಗಿದೆ. ಏಕೆಂದರೆ ಕಾಶ್ಮೀರದಲ್ಲಿ ಮುಸ್ಲಿಮ್ ಪ್ರತ್ಯೇಕತಾವದಿಗಳಾದ ಪಾಕಿಸ್ತಾನೀ ಭಯೋತ್ಪಾದಕರ ಅಟ್ಟಹಾಸ, ಮಣಿಪುರ,ಮಿಜೋರಾಂ ಮುಂತಾದ ಕಡೆ ಸೋನಿಯಾ ಪ್ರಾಯೋಜಿತ ಕ್ರಿಶ್ಚಿಯನ್ ಮತಾಂತರಿಗಳ ಅಟ್ಟಹಾಸ, ಈಗ ಒರಿಸ್ಸಾದಲ್ಲಿ ಮತಾಂತರದ ವಿರುದ್ಧ ದನಿಯೆತ್ತಿದ ಒಬ್ಬ ಹಿಂದೂನಾಯಕನ ಹತ್ಯೆ.

ಈಗ ನಾವು ಎಂತಹ ಒಂದು ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ ಎಂಬ ವಿಷಯ ಕಳವಳಕಾರಿಯಾಗಿದೆ. ಒರಿಸ್ಸಾದ ಕಂದಮಲ್ ಎಂಬ ಗ್ರಾಮದಲ್ಲಿ ಹಿಂದೂ ಸಮಾಜದ ನಾಯಕರಾದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನು ಕ್ರಿಶ್ಚಿಯನ್ ಭಯೋತ್ಪಾದಕರು ಹತ್ಯೆ ಮಾಡಿರುವುದು ನಮ್ಮ ದೇಶದಲ್ಲಿ ಮತ್ತೊಂದು ಕೋಮಿನ ಭಯೋತ್ಪಾದನೆ ಪ್ರಾರಂಭವಾಗುತ್ತಿರುವ ಕಳವಳಕಾರಿ ಮುನ್ಸೂಚನೆ. ಇಷ್ಟಕ್ಕೂ ಈ ಸ್ವಾಮಿಗಳು ಮಾಡಿದ ಪಾಪವಾದರೂ ಏನು?. ಒರಿಸ್ಸಾದಲ್ಲಿ ನಡೆಯುತ್ತಿದ್ದ ಕ್ರಿಶ್ಚಿಯನ್ ಮತಾಂತರವನ್ನು ತಡೆದಿದ್ದೇ ಅವರ ನಿಜವಾದ ಅಪರಾಧವಾಗಿದೆ. ಬಲಾತ್ಕಾರ ಹಾಗೂ ಆಮಿಷ ತೋರಿಸಿ ಒರಿಸ್ಸಾದ
ಬಡ ಹಾಗು ಮುಗ್ಧ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಕೇಂದ್ರದ ಕಾಂಗ್ರೆಸ್ ಮಹಾನಾಯಕಿ ಪ್ರಾಯೋಜಿತ ಈ ಕಾರ್ಯಕ್ರಮದ ವಿರುದ್ಧ ದನಿಯೆತ್ತಿ, ಜನರಿಗೆ ಹಿಂದೂ ಧರ್ಮದ ಮಹತ್ವವನ್ನು ಹಾಗೂ ಮತಾಂತರದ ಅವಾಂತರವನ್ನು ಜನರಿಗೆ ತಿಳಿ ಹೇಳುತ್ತಿದ್ದುದು ಅವರ ಮಹಾಪರಾಧವಾಯಿತು. ಅವರನ್ನು ಈ ದೇಶದ್ರೋಹಿ ಮತಾಂತರಿಗಳು ಅವರ ಐವರು ಸಹಚರರ ಜೊತೆ ಗುಂಡಿಕ್ಕಿ ಸಾಯಿಸಿದರು.

ಈ ಕಗ್ಗೊಲೆಗೆ ಒರಿಸ್ಸಾದ ಹಿಂದೂಗಳ ಪ್ರತಿಭಟನೆ ಸಹಜವಾಗಿಯೇ ಇತ್ತು. ಅದು ಆಗಬೇಕಾದ್ದೇ. ಇಲ್ಲದಿದ್ದಲ್ಲಿ ನಮ್ಮ ಹಿಂದೂಗಳಿಗೆ ಭಾರತದಲ್ಲಿ ವಾಸಮಾಡಲೂ ಕಷ್ಟವಾಗಲಿದೆ. ಒರಿಸ್ಸಾದಲ್ಲಿ ಈ ಮತಾಂತರ ಕಳೆದ ಕೆಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ದಂಧೆಯಾಗಿತ್ತು. ಇದಕ್ಕೆ ಅಮೆರಿಕ, ಇಂಗ್ಲೆಂಡ್, ಇಟಲಿ ಹಾಗೂ ಕೇಂದ್ರ ಸರಕಾರದಿಂದ ಕೋಟಿಗಟ್ಟಲೆ ನೆರವು ಹರಿದುಬರುತ್ತಿತ್ತು. ಹೇಗೂ ಶಿಕ್ಷಣವನ್ನು ತಮ್ಮ ಅಪ್ಪನ ಆಸ್ತಿ ಎಂಬಂತೆ ವರ್ತಿಸುತ್ತಿರುವ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಬಹಿರಂಗವಾಗಿ ಇದಕ್ಕೆ ಬೆಂಬಲ ಸಾರಿದ್ದವು. ಆದರೆ ಇದುವರೆಗೂ ಶಾಂತರೀತಿಯಿಂದ ಮರೆಯಲ್ಲಿ ನಡೆಯುತ್ತಿದ್ದ ಮತಾಂತರ ಐವರು ಹಿಂದೂ ಮುಖಂಡರ(ಧರ್ಮ ರಕ್ಷಕರ) ಬಲಿದಾನದಿಂದ ಬಯಲಿಗೆ ಬಂದಾಗ ಹಿಂದೂಗಳಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ಇರುವುದಕ್ಕೆ ಜಾಗ,ನೆಲೆ ಕೊಟ್ಟು ಸತ್ಕರಿಸಿದ ಹಿಂದುಗಳ ಮೇಲೆಯೇ ಹಲ್ಲೆ ನಡೆಸುವ ಇಂತಹ ದೇಶದ್ರೋಹಿ,ಕೀಳು ಮಟ್ಟದ ಜನರ ಬಗ್ಗೆ ಅವರಿಗಿದ್ದ ಗೌರವ ಸಹಜವಾಗಿಯೇ ಕಡಿಮೆಯಾಯಿತು. ನಮ್ಮ ಅನ್ನ ತಿಂದು ನಮಗೇ ಗುಂಡಿಕ್ಕುವ ಈ ಭಯೋತ್ಪಾದಕರ ವಿರುದ್ಧ ಹಿಂದುಗಳು ಸೆಟೆದು ನಿಂತರು. ಮುಸ್ಲಿಮರಿಗೆ ಮದರಸಾಗಳು ಹೇಗೆ ಭಯೋತ್ಪಾದನಾ ಕೇಂದ್ರಗಳಾಗಿವೆಯೋ ಹಾಗೆಯೇ ಕ್ರಿಶ್ಚಿಯನ್ನರಿಗೆ ಚರ್ಚುಗಳೇ ಭಯೋತ್ಪಾದನೆಯ ಕೇಂದ್ರಗಳಾಗಿವೆ. ಇದರಿಂದ ಹಿಂದುಗಳು ಈ ಭಯೋತ್ಪಾದನಾ ಕೇಂದ್ರಗಳನ್ನು ಒಡೆದು ಹಾಕಿದ್ದರಲ್ಲಿ ತಪ್ಪಿಲ್ಲ. ಪೋಲಿಸರು ಮಾಡಬೇಕಾದ ಕೆಲಸವನ್ನು ಜನರೇ ಮಾಡಿದ್ದಾರೆ.

ಈಗ ಪ್ರಶ್ನೆ ಅದಲ್ಲ. ಈ ಮತಾಂತರಿ ಭಯೋತ್ಪಾದಕರ ವಿರುದ್ಧ ನಡೆದ ಹಿಂದುಗಳ ಪ್ರತಿಭಟನೆಯನ್ನು ಸಹಿಸದ ಇಟಲಿ ಪ್ರಾಯೋಜಿತ ಕ್ರಿಶ್ಚಿಯನ್ ಮತಾಂತರಿ ಅಲ್ಲಲ್ಲ ಶಿಕ್ಷಣ ಸಂಸ್ಥೆಗಳು ದೇಶದಾದ್ಯಂತ ಬಂದ್ ಆಚರಿಸಿರುವುದು ಕಳವಳಕಾರಿ. ಈ ಶಿಕ್ಷಣ ಸಂಸ್ಥೆಗಳು ಇನ್ನೂ ಬುದ್ಧಿ ಬೆಳೆಯದ, ಪ್ರಪಂಚದ ಬಾಹ್ಯ ಪರಿಜ್ಞಾನವಿಲ್ಲದ ಮುಗ್ಧ ಮಕ್ಕಳಲ್ಲಿ ಕೋಮು ಪ್ರಚೋದನೆ ಉಂಟುಮಾಡಿವೆ. ಇಂತಹ ಶಿಕ್ಷಣ ಸಂಸ್ಥೆಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಚರ್ಚ್‌ಗಳಂತೆ ಈ ಶಿಕ್ಷಣ ಸಂಸ್ಥೆಗಳೂ ಭಯೋತ್ಪಾದನೆಯ ಹಾಗೂ ಮತಾಂತರದ ಕಾರ್ಖಾನೆಗಳಾಗುವುದರಲ್ಲಿ ಸಂಶಯವಿಲ್ಲ.

ಅಂದರೆ ಎದುರು ಬಂದು ಯುದ್ಧ ಮಾಡುವವನನ್ನು ನಂಬಬಹುದು ಆದರೆ ಹಿಂದುಗಡೆಯಿಂದ ಹೊಡೆಯುವವರನ್ನು ಯಾವತ್ತೂ ನಂಬಬಾರದು. ಕ್ರಿಶ್ಚಿಯನ್ನರು ಈ ಜಾತಿಗೆ ಸೇರಿದವರು.ಶಾಂತ ರೀತಿಯಿಂದ ಮತಾಂತರ ಮಾಡುತ್ತ ತಮ್ಮ ಪಾಡಿಗೆ ಇದ್ದ ಅವರು ಇದ್ದಕ್ಕಿದ್ದಂತೆ ಅದಕ್ಕೆ ಅಡ್ಡಿಯಾದಾಗ ಸಹಿಸದೆ ಭಯೋತ್ಪಾದನೆ ಶುರುಮಾಡಿದರು. ಇಂತಹ ದೇಶದ್ರೋಹಿಗಳನ್ನು ಬಂಧಿಸಿ ಈ ದೇಶದಿಂದಲೇ ಗಡೀಪಾರು ಮಾಡಬೇಕು.

Tuesday, August 26, 2008

"ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ




ಬೆಂಗಳೂರೂ ಆಗಸ್ಟ್ ೨೬:

ಭೂಮಿಯ ತಾಪಮಾನದ ಹೆಚ್ಚಳ ಈಗ ಎಲ್ಲರನ್ನೂ ಕಂಗೆಡಿಸುತ್ತಿರುವ ವಿಚಾರವಾಗಿದೆ. ಅಂದರೆ ಈ ಭೂಮಿಯ ತಾಪಮಾನದ ಕಾರಣದಿಂದ ಹವಾಮಾನದಲ್ಲಿ ಬದಲಾವಣೆಗಳು ಅಂದರೆ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವುದು, ಬೇಸಿಗೆಯಲ್ಲಿ ಅತೀ ಸೆಕೆ, ಚಳಿಗಾಲದಲ್ಲಿ ಅತೀ ಚಳಿ, ಮಳೆಗಾಲದಲ್ಲಿ ಅತೀ ಮಳೆ, ಭೂಕಂಪಗಳು, ಚಂಡಮಾರುತಗಳು, ಸಮುದ್ರ ಉಕ್ಕಿ ಹರಿಯುವುದು ಮುಂತಾದವುಗಳು ಸಂಭವಿಸುತ್ತವೆ.
ಅಂದರೆ ಇದಕ್ಕೆ ಕಾರಣ ಹೆಚ್ಚುತ್ತಿರುವ ಹೊಗೆಕಾರುವ ಕೈಗಾರಿಕೆಗಳು, ಹೆಚ್ಚುತ್ತಿರುವ ವಾಹನಗಳು, ಬರಿದಾಗುತ್ತಿರುವ ಅರಣ್ಯಪ್ರದೇಶಗಳು ಬಹಳ ಕಾರಣವಾಗಿವೆ. ಇದನ್ನು ತಡೆಗಟ್ಟುವ ಉಪಾಯಗಳನ್ನು ಆದಷ್ಟು ಬೇಗ ಹುಡುಕಬೇಕಾಗಿದೆ. ವಾಹನಗಳ ಇಂಧನಕ್ಕೆ ಪರ್ಯಾಯವಾದ ಇಂಧನವನ್ನು ನಾವು ಹುಡುಕಬೇಕಾಗಿದೆ. ಅರಣ್ಯಪ್ರದೇಶಗಳ ನಾಶವನ್ನು ನಾವು ತಡೆಯಬೇಕಾಗಿದೆ. ಹಾಗೂ ಮರಗಳನ್ನು ಬೆಳೆಸುವ ಬಗ್ಗೆ ಇಂದಿನ ಪೀಳಿಗೆಯ ಮಕ್ಕಳಿಗೆ, ಅದರ ಅನಿವಾರ್ಯತೆಯ ಬಗ್ಗೆ ತಿಳಿಹೇಳಬೇಕಾಗಿದೆ.

ನಾವು ಪ್ರಾಕೃತಿಕ ಇಂಧನದ ಮೂಲವನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಅಂದರೆ ನಾವು ಆದಷ್ಟೂ ಸೌರಶಕ್ತಿಯ ಬಳಕೆಯ ಬಗ್ಗೆ ಎಲ್ಲರಲ್ಲೂ ಒಂದು ಪರಿವರ್ತನೆ ಉಂಟುಮಾಡುವಲ್ಲಿ ಚಿಂತನೆ ಮಾಡಬೇಕಾಗಿದೆ. ಅಂದರೆ ವಿದ್ಯುತ್, ವಾಹನದ ಪರ್ಯಾಯ ಇಂಧನವಾಗಿ ಬಳಸಿ ಆದಷ್ಟೂ ಭೂತಾಪಮಾನಕ್ಕೆ ಕಾರಣವಾಗುವಂತಹ ವಸ್ತುಗಳನ್ನು ದೂರವಿಡಬೇಕು. ಅಂದರೆ ಇದರ ಪರಿಣಾಮವನ್ನು "The Day After Tomorrow" ಎಂಬ ಆಂಗ್ಲ ಚಲನಚಿತ್ರದಲ್ಲಿ ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲಿ ಸುನಾಮಿಯ ದೃಶ್ಯವಂತೂ ಬಹಳ ಸಹಜವಾಗಿ ಮೂಡಿಬಂದಿದೆ.

ಎಲ್ಲರಲ್ಲೂ ಈ ಮೂಲಕ ನಿವೇದನೆ ಎಂಡರೆ ಆದಷ್ಟು ಮರಗಳನ್ನು ಬೆಳೆಸಿ. ಆದಷ್ಟು ಹೊಗೆ ಉಗುಳುವ ವಾಹನಗಳನ್ನು ಉಪಯೋಗಿಸಬೇಡಿ.
ಎಲ್ಲರೂ GREEN EARTH ಹಸಿರು ಭೂಮಿಗಾಗಿ ಶ್ರಮಿಸಿ....ಭೂಮಿಯ ತಾಪಮಾನ ಕಡಿಮೆ ಮಾಡಿ.

Sunday, August 24, 2008

ನಮ್ಮ ಕಿಚ್ಚ ಸುದೀಪ್ ಹಿಂದಿ ಚಿತ್ರದಲ್ಲಿ




ಬೆಂಗಳೂರು ಆಗಸ್ಟ್ ೨೪: ಎಲ್ಲರೂ "ಫೂಂಕ್" ಎಂಬ ಹಿಂದಿ ಚಿತ್ರದ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದು, ಈಗ ಅದರ ಬಿಡುಗಡೆಯಾಗಿ ಎಲ್ಲರ ಮನಗೆದ್ದಿರುವುದು ನಮಗೆಲ್ಲ ಖುಷಿ ಕೊಡುವ ಸಂಗತಿ. ಅರೆ! ಹಿಂದಿ ಚಿತ್ರ ಬಿಡುಗಡೆಯಾದರೆ ಕನ್ನಡಿಗರೇಕೆ ಸಂಭ್ರಮಿಸಬೇಕು?..ಅದಕ್ಕೂ ಕಾರಣ ಇದೆ, ಈ ಚಿತ್ರದ ನಾಯಕ ನಮ್ಮೆಲ್ಲರ ಮೆಚ್ಚಿನ ಕನ್ನಡಿಗ "ಕಿಚ್ಚ" ಸುದೀಪ್. ಸುದೀಪ್ ಈಗ ತನ್ನ ಛಾಪನ್ನು ಹಿಂದಿ ಚಿತ್ರದಲ್ಲಿ ಮೂಡಿಸಿರುವುದು ಎಲ್ಲ ಕನ್ನಡಿಗರಿಗೂ ಖುಷಿ ಪಡುವ ವಿಚಾರ.

ಆದರೆ ಅದರಲ್ಲೂ ಈ ಚಿತ್ರದ ಪ್ರಚಾರಕ್ಕಾಗಿ ವಿಚಿತ್ರ ತರಹದ ಒಂದು ಬಾಜಿ ಶುರುವಾಗಿರುವುದು ಸ್ವಲ್ಪ ಅತಿರೇಕವೆನ್ನಿಸುತ್ತದೆ. ಈ ಚಿತ್ರವನ್ನು ಒಂಟಿಯಾಗಿ ಚಿತ್ರಮಂದಿರದಲ್ಲಿ ನೋಡಿದರೆ ೫ ಲಕ್ಷ ರೂಪಾಯಿಗಳ ಬಹುಮಾನವನ್ನು ಕೊಡುವುದಾಗಿ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ಘೋಷಿಸಿರುವುದು ಕೆಲ ಪಡ್ಡೆ ಹುಡುಗರಿಗೆ ಒಂದು ಸವಾಲಾಗಿದೆ. ಆದರೆ ಅದನ್ನೂ ಸ್ವಲ್ಪ ದುಬಾರಿ ಹಣ ತುಂಬಿ, ಅಂದರೆ ೫೫ ಸಾವಿರ ರೂಪಾಯಿ ತುಂಬಿ ಈ ಚಿತ್ರವನ್ನು ಒಂಟಿಯಾಗಿ ವೀಕ್ಷಿಸಿ(ಹೊರ ಬಂದರೆ)ದರೆ ೫ ಲಕ್ಷ ಬಹುಮಾನ...!!!. ಇದಕ್ಕೆ ಸಡ್ಡು ಹೊಡೆದವರಂತೆ ಬೆಂಗಳೂರಿನ ಒಬ್ಬ ಧೈರ್ಯವಂತ, ಪ್ರವೀಣ್ ಎಂಬ ಯುವಕ ಆಗಲೇ ೫೫ಸಾವಿರ ರೂಪಾಯಿಗಳನ್ನು ಪಾವತಿಸಿ ಏಕಾಂಗಿಯಾಗಿ ಈ ಚಿತ್ರವನ್ನು ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ಇವತ್ತು ವೀಕ್ಷಿಸಿದ್ದಾನೆ. ಆದರೆ ಅದರ ಫಲಿತಾಂಶ ಗೊತ್ತಾಗಿಲ್ಲ.

ದೆವ್ವದ ಕತೆ ಹೊಂದಿರುವ ಈ ಚಿತ್ರ ತುಂಬಾ ಭಯಾನಕವಾಗಿದೆ ಎಂದು ಸ್ವತಃ ಸುದೀಪ್‌ರವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಮಕ್ಕಳನ್ನು ಈ ಚಿತ್ರ ನೋಡಲು ಕರೆದುಕೊಂಡು ಹೋಗುವುದು ಕಷ್ಟ. ಏನೇ ಆಗಲಿ ನಮ್ಮ ಸುದೀಪ್ ಈ ಬಾರಿ ಹಿಂದಿ ಚಿತ್ರರಂಗದಲ್ಲಿ ಒಂದು ಪ್ರಯತ್ನ ನಡೆಸಿದ್ದಾರೆ. ಅದು ಯಶಸ್ವಿಯಾಗಲಿ ಎಂದು ಎಲ್ಲರೂ ಹಾರೈಸೋಣ.

Monday, August 18, 2008

ಜಂಟಿ ಬಸ್‌ಗಳ ಕಿರಿಕಿರಿ





ಬೆಂಗಳೂರು ಆಗಸ್ಟ್ ೧೮: ಬೆಂಗಳೂರಿನಲ್ಲಿ ಈಗ ಯಮದೂತ ಬಿ.ಟಿ.ಎಸ್. ಬಸ್ಸುಗಳ ಜೊತೆಗೆ ಜಂಟಿ ವಾಹನಗಳು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಮೊದಲೇ ಆಟೋರಿಕ್ಷಾಗಳದಿಂದ ಬೇಸತ್ತಿರುವ ಜನಸಾಮಾನ್ಯ ಈಗ ಈ ಜಂಟಿವಾಹನಗಳ ಕಾಟದಿಂದ ಪರದಾಡಬೇಕಾಗಿದೆ. ಅಷ್ಟಕ್ಕೂ ಈ ಜಂತಿವಾಹನಗಳಿಂದಾಗುವ ಉಪಯೋಗವಾದರೂ ಏನು?. ಈ ಜಂಟಿವಾಹನಗಳು ಯಾವುದೇ
ತೊಂದರೆಯಿಲ್ಲದೆ, ಜನಗಳಿಗೆ, ಟ್ರಾಫಿಕ್‌ಗೆ ತೊಂದರೆ ಮಾಡದೆ ಚಲಿಸಬಹುದಾದ ಉತ್ತಮ ರಸ್ತೆಗಳಿವೆಯೇ?.

ಖಂಡಿತಾ ಇಲ್ಲ. ಬೆಂಗಳೂರಿನ ಭಾಗಶಃ ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ಈ ಜಂಟಿ ಬಸ್‌ಗಳು ತಿರುವು ತೆಗೆದುಕೊಳ್ಳಲು ತುಂಬಾ ತ್ರಾಸಪಡಬೇಕಾಗುತ್ತದೆ. ಆದರೆ ಈ ಜಂಟಿ ಬಸ್‌ನಲ್ಲಿ ಪ್ರಯಾಣಿಕರೇನೂ ತುಂಬಿ-ತುಳುಕುವಂತಹ ಪರಿಸ್ಥಿತಿಯಂತೂ ಅಪರೂಪ. ಮೊದಲೇ ಆಟೋಗಳಿಂದ ಟ್ರಾಫಿಕ್ ಕಿರಿಕಿರಿ ಆಗುತ್ತಿರುವುದಲ್ಲದೆ ಈಗ ಈ ಜಂಟಿ ಬಸ್‌ಗಳು ಬೇರೆ ತೊಂದರೆಯಾಗಿದೆ. ಏಕೆಂದರೆ ಈ ಬಸ್‍ಗಳಿಗೆ ತಿರುವು ತೆಗೆದುಕೊಳ್ಳಲು ಜಾಸ್ತಿ ಜಾಗ ಬೇಕಾಗುವುದರಿಂದ ತಿರುವುಗಳಲ್ಲಿ ವಾಹನ ಓಡಿಸುವವರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸವಾರಿ ಮಾಡುವಂತಹ ಪರಿಸ್ಥಿತಿ. ಒಂಟಿ ಬಸ್‌ಗಳೇ ಖಾಲಿ ಹೋಗುತ್ತಿರುವ ಸಮಯದಲ್ಲಿ ಈ ಜಂಟಿ ಬಸ್‍ಗಳು ಬೇರೆ ಕೇಡು.

ಆದ್ದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು, ಈ ಜಂಟಿ ಬಸ್‌ಗಳನ್ನು ರಸ್ತೆಗಳು ಅಗಲವಾಗಿರುವ ಹಾಗೂ ಅಗತ್ಯವಿರುವ ಕಡೆ ಮಾತ್ರ ಹಾಕಿ, ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಬೇಕಾಗಿದೆ.

Saturday, August 16, 2008

ರಕ್ಷಾಬಂಧನವೋ....ಭಿಕ್ಷಾಬಂಧನವೋ?



ಬೆಂಗಳೂರು ಆಗಸ್ಟ್ ೧೬: ಅರೆ! ಇವತ್ತು ರಕ್ಷಾ ಬಂಧನವಲ್ಲವೇ?. ಮರೆತೇ ಹೋಗಿತ್ತು. ಆದರೆ ಮೊದಲೆಲ್ಲ ಅಂದರೆ ನಾನು ಸಣ್ಣವನಿರುವಾಗ ನನ್ನ ದೊಡ್ಡಪ್ಪ ಆರ್.ಎಸ್.ಎಸ್.ನಲ್ಲಿ ಇದ್ದವರು ರಕ್ಷಾಬಂಧನಕ್ಕೆ ಒಂದು ವಾರ ಮೊದಲೇ ರೇಷ್ಮೆ ದಾರ ತಂದು (ಕೇಸರಿ ಬಣ್ಣದ) ಮನೆಯಲ್ಲಿಯೇ ರಕ್ಷೆಯನ್ನು ತಯಾರಿಸುತ್ತಿದ್ದರು. ಅದರ ಕೇಸರಿ ಬಣ್ಣದ ಮಹತ್ವವನ್ನು ಅವರು ಹೇಳುತ್ತಿದ್ದರು. "ನೋಡಪ್ಪಾ ಇದು ತ್ಯಾಗದ ಹಾಗೂ ಪೌರುಷದ ಸಂಕೇತ, ಇದನ್ನು ಕಟ್ಟಿಕೊಂಡಲ್ಲಿ ನಮ್ಮಲ್ಲಿ ಏನೋ ಹೊಸ ಚೈತನ್ಯ ಹುಟ್ಟುತ್ತದೆ...." ಹಾಗೆ ಹೀಗೆ.....ಆಗ ನಮಗೆ ಅದರ ಮಹತ್ವ ಅಷ್ಟಾಗಿ ಗೊತ್ತಿರಲಿಲ್ಲ. ಎಲ್ಲರೂ ಕಟ್ಟುತ್ತಾರಲ್ಲಾ ಹಾಗೆ...ಒಂದು ಕೈಗೆ ಎರಡು ಮೂರು ಕಟ್ಟಿಕೊಂಡು ಸಂಭ್ರಮ ಪಡುತ್ತಿದ್ದೆವು. ಶಾಲೆಯಲ್ಲಿ ಎಲ್ಲರಿಗೂ ತೋರಿಸುತ್ತಾ ಹೆಮ್ಮೆ ಪಡುತ್ತಿದ್ದೆವು. ಅಧು ಜಾರಿದಾಗ ಮತ್ತೆ ಬಿಚ್ಚಿ....ಮತ್ತೆ ಕಟ್ಟಿಕೊಳ್ಳುತ್ತಿದ್ದೆವು. ಆಗ ಅದಕ್ಕೆ ಹಣ ಕೊಡುವುದು ಎಲ್ಲ ಇರುತ್ತಿರಲಿಲ್ಲ. ಅದು ಉಚಿತವಾಗಿಯೇ ಸಿಗುತ್ತಿತ್ತು.
ಆದರೆ ಇಂದು ರಕ್ಷಾ ಬಂಧನವೆನ್ನುವುದು ಹೇಸಿಗೆ ಉಂಟುಮಾಡುತ್ತಿದೆ. ಅದು commercial ಆಗಿಬಿಟ್ಟಿದೆ. ಅಂದರೆ ರಕ್ಷಾಬಂಧನ ಕಟ್ಟಿಸಿಕೊಂಡವನು ಕಡ್ಡಾಯವಾಗಿ ಏನಾದರೂ (ಪ್ರೀತಿ ಇಲ್ಲದಿದ್ದರೂ) ಕೊಡಲೇಬೇಕು. ಕನಿಷ್ಠ ಜೇಬಲ್ಲಿರುವ ಹತ್ತು, ಇಪ್ಪಾತ್ತಾದರೂ ಸರಿ ಅಡ್ಡಿ ಇಲ್ಲ. ಇಲ್ಲವೇ ಜೋಬಿಗೇ ಕೈ ಹಾಕಿ ಕಿತ್ತುಕೊಳ್ಳುವಂತಹ ಸಂಪ್ರದಾಯ. ಈಗ ಬರುತ್ತಿರುವ ಹೊಸ ತರಹದ, ನವ ನವೀನ ಶೈಲಿಯ ರಕ್ಷಾಬಂಧನಗಳು ಒಂದೇ ದಿನಕ್ಕೆ, ಒಂದೇ ಘಳಿಗೆಗೆ ಕಿತ್ತು ಹೋಗುವಂತಹವು.
ಅಲ್ಲದೆ ಅವುಗಳಿಗೆ ಹೆಚ್ಚು ಮಹತ್ವವೇ ಇಲ್ಲ, ಇದೆಲ್ಲ ಒಂದು ಗೊಡ್ಡು ಸಂಸ್ಕೃತಿಯಾಗಿ ಬಿಟ್ಟಿದೆ. ಇದು ಈಗಿನ ಜನರ style ಆಗಿಬಿಟ್ಟಿದೆ. ಇವತ್ತು ರಕ್ಷಾಬಂಧನ ಕಟ್ಟಿಕೊಳ್ಳುತ್ತಾರೆ ನಾಳೆ ಪ್ರೇಮಿಗಳ ಪಾರ್ಕ್‌ನಲ್ಲಿ ಸುತ್ತುತ್ತಿರುತ್ತಾರೆ. ಅಂದರೆ ರಕ್ಷಾಬಂಧನ ಇಂದು ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡಿದೆ. ಏನಿದ್ದರೂ ಭಿಕ್ಷೆ ಬೇಡುವ ಇನ್ನೊಂದು ವಿಧಾನವಾಗಿದೆ. ನಮ್ಮ ಜನಕ್ಕೆ ನಿಜವಾದ ಸಂಸ್ಕೃತಿ ಬೇಡ, ಈಗಿನ ಪ್ರೇಮಿಗಳ ದಿನ, ಗೆಳೆಯರ ದಿನ, ತಂದೆಗಳ ದಿನ, ತಾಯಂದಿರ ದಿನ...ಇವೆಲ್ಲಾಕ್ಕೂ ಪ್ರತ್ಯೇಕವಾದ ದಿನ ಬೇಕಾಗಿದೆ. ಅಂದರೆ ಅವರಿಗೆ ವರ್ಷಪೂರ್ತಿ ಬೇರೆ ಸಂಸ್ಕೃತಿರಹಿತ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಸಂಸ್ಕೃತರಾಗಿ...ಸುಸಂಸ್ಕೃತರಾಗುವುದಕ್ಕೆ ಇದೊಂದು ನೆಪ ಮಾತ್ರ. ಆದರೆ ಇದನ್ನು ಮನಃಪೂರ್ವಕವಾಗಿ ಅವರು ಮಾಡುತ್ತಿಲ್ಲ. ಕೇವಲ ಶೈಲಿಗಾಗಿ....Styleಗಾಗಿ......

Sunday, August 10, 2008

ಕೇಂದ್ರ ಸರಕಾರದ ಮುಸ್ಲಿಂ ಪರ ನೀತಿ..ಭಾರತದ ಏಕತೆಗೆ ಭೀತಿ

ಬೆಂಗಳೂರು ಆಗಸ್ಟ್ ೧೫ : ಭಾರತ ತನ್ನ ಸ್ವಾತಂತ್ರ್ಯೋತ್ಸವವನ್ನು ಪ್ರತೀ ವರ್ಷ ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದೆ. ಆದರೆ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಕಳೇದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಈ ದೇಶದ ಬಗ್ಗೆ ಕಾಳಜಿ ಇಲ್ಲದೆ, ಕೇವಲ ತನ್ನ ಹೊಟ್ಟೆಹೊರೆದುಕೊಳ್ಳುವುದರಲ್ಲೇ ಮಗ್ನವಾಗಿದೆ. "ಸಿಮಿ"ಯಂತಹ ದೇಶದ್ರೋಹಿ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡುವಷ್ಟರ ಮಟ್ಟಿಗೆ ಅಲ್ಪಸಂಖ್ಯಾತರನ್ನು ಓಲೈಸುವ ತನ್ನ ನೀಚ ಬುದ್ಧಿಯನ್ನು ಮತ್ತೆ ತೋರ್ಪಡಿಸಿದೆ. ಅಮರನಾಥ ದೇಗುಲಕ್ಕೆ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ದೇಶದ್ರೋಹಿಗಳಾದ ಕಾಶ್ಮೀರಿ ಮುಸ್ಲಿಮರಿಗೆ ಬಹಿರಂಗವಾಗಿ ಬೆಂಬಲ ನೀಡಿ ತನ್ನ ಹಿಂದೂವಿರೋಧಿ ನೀತಿಯನ್ನು ಬಲವಾಗಿ ಪ್ರತಿಪಾದಿಸಿದೆ. ಆದರೂ ಇಲ್ಲಿರುವ ಹಿಂದುಗಳು ಇನ್ನೂ ಕಾಂಗ್ರೆಸಿಗೆ ಬೆಂಬಲ ನೀಡುತ್ತಿರುವುದು ರಾಷ್ಟ್ರೀಯ ದುರಂತ.
ಕಾಶ್ಮೀರದ ವಿಷಯದಲ್ಲಿ, ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಸದಾ ಮೂಗು ತೂರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಿದರೆ ಎಲ್ಲಿ ಭಾರತದ ಮುಸ್ಲಿಮರಿಗೆ ನೋವಾಗುವುದೋ, ಎಲ್ಲಿ ತನ್ನ ಮತಬ್ಯಾಂಕ್ ಛಿದ್ರವಾಗುವುದೋ ಎಂಬ ದೇಶದ್ರೋಹಿ ಚಿಂತನೆ ಈ ಕಾಂಗ್ರೆಸಿನ ಬಂಡವಾಳವಾಗಿದೆ. ಕಾಶ್ಮೀರದಲ್ಲಿರುವ ಎಲ್ಲ ಪಾಕಿಸ್ತಾನಿ ಪರವಾದ ಮುಸಲ್ಮಾನರು ಇಂದು ಭಾರತದ ವಿರುದ್ಧ ಕತ್ತಿ ಮೆಸೆಯುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನಿರುವ ಕೇಂದ್ರ ಸರಕಾರ ತನ್ನ ನಿಜವಾದ ಜಾತ್ಯಾತೀತತೆಯನ್ನು ತೋರ್ಪಡಿಸಿದೆ.
ಕಾಶ್ಮೀರದ ಕಣಕಣವೂ ಹಿಂದುಗಳದ್ದು, ಇಂಚಿಂಚು ಭೂಭಾಗವೂ ಹಿಂದುಗಳದ್ದು, ಅಲ್ಲಿರುವ ಮುಸಲ್ಮಾನರೆಲ್ಲಾ ಪಾಕಿಸ್ತಾನೀಯರು, ಈಗ ಅದು ಪಾಕಿಸ್ತಾನೀ ಮುಸಲ್ಮಾನರ ಹಿಡಿತದಲ್ಲಿದೆ. ಅಲ್ಲೀಗ ನಡೆಯಬೇಕಾಗಿರುವುದು "ಜಿಹಾದ್" ಅಲ್ಲ...."ಧರ್ಮಯುದ್ಧ"...ಮಹಾಭಾರತದಲ್ಲಿ ಪಾಂಡವರ ಭೂಮಿಯನ್ನು ಅತಿಕ್ರಮಿಸಿದ ದುಷ್ಟ ದುರ್ಯೋಧನ ಎಂಬ ರಾಕ್ಷಸನ ಹಿಡಿತದಿಂದ ಬಿಡಿಸಲು ಶ್ರೀಕೃಷ್ಣನು ಭಾರತ ಯುದ್ಧವನ್ನು ಆಯೋಜಿಸಿ ಪಾಂಡವರಿಗೆ ಅವರ ಭೂಮಿಯನ್ನು ಕೊಡಿಸಿದ. ಈಗ ಹಿಂದೂಗಳ ಭೂಭಾಗವನ್ನು ಅತಿಕ್ರಮಿಸಿಕೊಂಡೀರುವ ದುಷ್ಟರ ಕೈಯಿಂದ ಆ ಭೂಭಾಗವನ್ನು ಪಡೆಯಲು "ಧರ್ಮ ಯುದ್ಧ" ನಡೆಸಬೇಕಾಗಿದೆ. ಅದಕ್ಕೆ ಕೃಷ್ಣ ಸಾರಥ್ಯದ ಅಗತ್ಯವಿದೆ. ಆದರೆ ಅಂಥ ಒಬ್ಬ ಸಮರ್ಥ, ವೀರ, ಶೂರ ಸೇನಾನಿಯ ಅಗತ್ಯ ಇಂದು ಭಾರತಕ್ಕಿದೆ. ನಿರ್ದಯೆಯಿಂದ ಅಲ್ಲಿನ ರಾಕ್ಷಸ ಸಮೂಹವನ್ನು ನಾಶಪಡಿಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾಗಿದೆ.
ಭಾರತದಲ್ಲಿ ನಿಜವಾದ ಜಾತ್ಯಾತೀತತೆ ಜಾರಿಯಾಗಲು ಖಂಡಿತಾ ಸಾಧ್ಯವಿಲ್ಲ, ಅದಾಗಲು ಈ ಕಾಂಗ್ರೆಸ್ ಬಿಡುವುದೂ ಇಲ್ಲ. ಅದಕ್ಕಿರುವ ಒಂದೇ ಮದ್ದೆಂದರೆ: ಅಲ್ಪಸಂಖ್ಯಾತರಿಗೆ ಮತ ನೀಡುವ ಹಕ್ಕನ್ನು ತಡೆ ಹಿಡಿಯುವುದು.ಆಗ ಮಾತ್ರ ನಿಜವಾದ ಜಾತ್ಯಾತೀತತೆ ಈ ಭಾರತದಲ್ಲಿ ನೆಲೆಯೂರಲು ಸಾಧ್ಯ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣವೇ ನಿಜವಾದ ಜಾತ್ಯಾತೀತತೆ ಎಂಬ ಭ್ರಮೆಯಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರದ ನೀತಿ ಎಲ್ಲ ಮುಸಲ್ಮಾನರ ಪರವಾಗಿರುವುದರಿಂದ ಇಂದು ಒಬ್ಬ ಮುಸಲ್ಮಾನ ಹಿಂದೂ ದೇವಳದಲ್ಲಿ ಪಾಕಿಸ್ತಾನೀ ಧ್ವಜ ಹಾರಿಸುತ್ತಾನೆ, ಹಂಪೆಯ ಅವಶೇಷಗಳನ್ನು ಭಗ್ನಗೊಳಿಸುತ್ತಾನೆ, ಸರಣಿ ಬಾಂಬ್ ಸ್ಫೋಟ ನಡೆಸುತ್ತಾನೆ.....ಅವರಿಗೆ ಗೊತ್ತು, ಏನೇ ಮಾಡಿದರೂ ಅವರು ಎರಡೇ ದಿನದಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂದು. ನಮ್ಮ ದೇಶದ ಕಾನೂನು ಹಾಗಿದೆ.
"ಕಾಶ್ಮೀರ ನಮ್ಮದು...ಇಂದಿಗೂ, ಎಂದಿಗೂ, ಮುಂದಿಗೂ...." ಎಂಬ ಕಲ್ಪನೆ ಪ್ರತೀ ಕಾಂಗ್ರೆಸಿಗನ ರಕ್ತದಲ್ಲಿ ಹರಿದರೆ ಮಾತ್ರ ಇದು ಸಾಧ್ಯ. ಓಟಿಗಾಗಿ ಮುಸ್ಲಿಮರ ಕಾಲು ಹಿಡಿಯಲೂ ಹೇಸದ ಕೆಲವು ದೇಶವಿರೋಧಿಗಳನ್ನು ದೂರವಿಟ್ಟಲ್ಲಿ ಮಾತ್ರ ಇದು ಸಾಧ್ಯ.
ಪ್ರತೀ ದಿನಾ ನಮ್ಮ ಗಡಿಯ ರಕ್ಷಣೆಗಾಗಿ ಸಾವಿರಾರು ಕೋಟಿ ಚೆಲ್ಲುವ ಕೇಂದ್ರ ಸರಕಾರ, ಅದನ್ನು ಸಾರ್ವಜನಿಕರಿಂದ ವಸೂಲು ಮಾಡುತ್ತಿದೆ. ಆದರೆ ಒಂದೇ ಸಾರಿ ಶತಕೋಟಿ ಖರ್ಚು ಮಾಡಿ, ಒಂದೇ ದಿನದಲ್ಲಿ ಪಾಕಿಸ್ತಾನವನ್ನು ಸದೆಬಡಿದರೆ ಈ ಕಾಶ್ಮೀರದ ವಿಷಯ ಒಂದೇ ದಿನದಲ್ಲಿ ಇತ್ಯರ್ಥವಾಗುವುದರಲ್ಲಿ ಸಂಶಯವಿಲ್ಲ. ಆಗ ಭಾರತದಲ್ಲಿರುವ ಮುಸ್ಲಿಮರೂ ಕೂಡಾ ಭಾರತದ ವಿರುದ್ಧ ದನಿಯೆತ್ತಲು ಹಿಂದೇಟು ಹಾಕುತ್ತಾರೆ.
ಇದು ಈಗಿನ ಕಾಂಗ್ರೆಸ್ ಸರಕಾರಕ್ಕೆ ಸವಾಲಿನ ವಿಷಯವಾಗಿದೆ, ಅವರಿಗೆ ಈ ಕ್ರಮ ತೆಗೆದುಕೊಳ್ಳುವ ಧೈರ್ಯವೆಲ್ಲಿದೆ?.....

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ರಾಕ್ಷಸರು

ಬೆಂಗಳೂರು ಆಗಸ್ಟ್ ೧೦ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಬೇಡಿಕೆಗಾಗಿ ಕರ್ನಾಟಕವು ಹೋರಾಡುತ್ತಿದೆ. ಆದರೆ ಸಂಸ್ಕೃತದ ನಂತರದ ಅತೀ ಪ್ರಾಚೀನ ಭಾಷೆಯಾದ ಕನ್ನಡಕ್ಕೆ ಪ್ರಾಶಸ್ತ್ಯ ನೀಡದೆ ಕರುಣಾನಿಧಿ ಎಂಬ ಖೂಳನ ರಾಜಕೀಯದ ಒತ್ತಡಕ್ಕೆ ಮಣಿದು ತಮಿಳು ಎಂಬ ಭಾಷೆ ಮೊದಲು ಶಾಸ್ತ್ರೀಯ ಭಾಷೆ ಎಂದು ಘೋಷಣೆಯಾಯಿತು. ಆಗ ಯಾವೊಬ್ಬ ಕನ್ನಡಿಗನೂ ಅದರ ವಿರುದ್ದವಾಗಿ ದನಿ ಎತ್ತಿರಲಿಲ್ಲ. ಆದರೆ ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇನ್ನೇನು ಘೋಷಣೆಯಾಗಬೇಕು ಎನ್ನುವಷ್ಟರಲ್ಲಿ ಯಾವನೋ ಒಬ್ಬ ದೇಶದ್ರೋಹಿ ತಮಿಳ ಇದರ ವಿರುದ್ದ ತಗಾದೆ ತೆಗೆದಿದ್ದಾನೆ.ನಿಜವಾಗಲೂ ಈ ದೇಶದ ಸಾರ್ವಭೌಮತೆಗೆ ಕೇವಲ ತಮಿಳರಿಂದ ಮಾತ್ರ ಧಕ್ಕೆ ಆಗುತ್ತಿದೆ. ಯಾವುದೇ ವಿಚಾರವಾಗಲೀ, ಕಾವೇರಿಯೇ ಇರಬಹುದು, ಹೊಗೇನಕಲ್ ವಿವಾದವೇ ಇರಬಹುದು ಅಥವಾ ಈಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಬಗ್ಗೆಯೇ ಇರಬಹುದು, ಈ ತಮಿಳರು ಕೊಚ್ಚೆ ಬುದ್ಧಿ ಮಾತ್ರ ಬಿಡುವುದಿಲ್ಲ ಎಂಬ ಹಠಕ್ಕೆ ಬಿದ್ದಿರುವಂತಿದೆ. ಭಾರತಕ್ಕೆ ಪಾಕಿಸ್ತಾನ ಹೇಗೆ ತೊಂದರೆ ಕೊಡುತ್ತಿದೆಯೋ ಅದೇ ರೀತಿ ಕರ್ನಾಟಕಕ್ಕೆ ತಮಿಳುನಾಡು ಎಂಬ ಹುಂಬ ರಾಜ್ಯ ಇಂದು ತೊಂದರೆ ಕೊಡುತ್ತಿದೆ. ಈ ತಮಿಳರಿಂದ ನಮ್ಮ ದೇಶದ ಏಕತೆಗೆ, ಸಮಗ್ರತೆಗೆ ಭಂಗವಾಗುತ್ತಿದೆ. ನೀವು ತಮಿಳುನಾಡಿಗೆ ಹೋದರೆ ತಮಿಳು ಬಿಟ್ಟು ಬೇರೆ ಪತ್ರಿಕೆ ಸಿಗುವುದಿಲ್ಲ, ಅದೇ ಕರ್ನಾಟಕದಲ್ಲಿ ತಮಿಳು ಪತ್ರಿಕೆ, ತಮಿಳು ಸಿನೆಮಾ, ತಮಿಳು ಕೋಜಾಗಳು, ತಮಿಳು ನಾಯಿಗಳು, ತಮಿಳು ಕತ್ತೆಗಳು.. ...ಎಲ್ಲ ಸಿಗುತ್ತವೆ. ಆದರೆ ಇದೆಲ್ಲ ತಮಿಳುನಾಡಿನಲ್ಲಿ ಏಕೆ ಸಿಗುವುದಿಲ್ಲ?. ತಮಿಳುನಾಡಿನಲ್ಲಿ ಯಾಕೆ ಕನ್ನಡ ಚಿತ್ರ ಬಿಡುಗಡೆಯಾಗುವುದಿಲ್ಲ?, ಯಾಕೆ ಕನ್ನಡ ದಿನಪತ್ರಿಕೆ ಸಿಗುವುದಿಲ್ಲ?. ಯಾಕೆ ಕನ್ನಡ ಕಥೆ, ಕಾದಂಬರಿಗಳು ಸಿಗುವುದಿಲ್ಲ?. ಇವರೇಕೆ ಬಾವಿಯೊಳಗಿನ ಕಪ್ಪೆಗಳಂತೆ ವರ್ತಿಸುತ್ತಾರೆ?. ಈ ತಮಿಳು ಜನ ತಮಿಳು ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ, ಬಂದರೂ ಕೂಡ...ತಮಿಳೇ ಮಾತಾಡುತ್ತವೆ. ನಾವೇ ಅರ್ಥ ಮಾಡಿಕೊಂಡು.....ತಮಿಳಲ್ಲೇ ಉತ್ತರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ, ಇವರ ಹುಂಬತನ, ಒಕ್ಕೂಟ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುವ ದೇಶದ್ರೋಹಿತನ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಎಲ್ಲರೂ ತಿಳಿಯಬಹುದು. ಈ ತಮಿಳುನಾಡು ಸದಾ ಕರ್ನಾಟಕದ ವಿರುದ್ಧ ಕಾಲುಕೆರೆದು (ಪಾಕಿಸ್ಥಾನದ ತರಹ) ಜಗಳಕ್ಕೆ ಯಾಕೆ ಬರುತ್ತಿದೆ?. ಕರ್ನಾಟಕದ ಜನ ಮೃದು ಮನಸ್ಸಿನವರು, ಶಾಂತಿ ಸಹಿಷ್ಣುಗಳು ಎಂಬ ಬಲಹೀನತೆಗಾಗಿಯೇ?. ಆದರೆ ಈ ಬಲಹೀನತೆ ಮುಂದೆ ತಮಿಳರಿಗೇ ಮಾರಕವಾಗಲಿದೆ. ನಮ್ಮ ತಾಳ್ಮೆಗೂ ಮಿತಿ ಇದೆ. ಮೊದಲು ನಮ್ಮ ಮೈಸೂರು ಪ್ರಾಂತ್ಯದಲ್ಲಿದ್ದ ಮದರಾಸು, ತಂಜಾವೂರು, ಕಾಂಚೀಪುರಮ್, ಉದಕಮಂಡಲ(ಊಟಿ) ಎಲ್ಲವನ್ನೂ ಈಗ ತಮ್ಮ ತೆಕ್ಕೆಗೆ ಸೆಳೆದುಕೊಂಡು ಈಗ ಬೆಂಗಳೂರೂ ನಮ್ಮದೇ ಎಂಬಂಥಹ ಹೇಳಿಕೆ ಕೊಡಲು ಇವರಿಗೆ ಧೈರ್ಯವಿದೆಯೆಂದರೆ ಇವರ ಗಾಂಚಲಿ ಎಷ್ಟಿರಬೇಡ?.

ಭಾಷಾವಾರು ಪ್ರಾಂತ್ಯದ ರಚನೆಯಾದಾಗ ಮೊದಲು ಇದಕ್ಕೆ ಅಡ್ಡಿಪಡಿಸಿದವರು ತಮಿಳರೇ, ಒಕ್ಕೂಟ ವ್ಯವಸ್ಥೆಯನ್ನು ವಿರೋಧಿಸಿದವರೂ ತಮಿಳರೇ.....ತಮಿಳರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಟ್ಟು ನಮ್ಮ ದೇಶದ ಸಾರ್ವಭೌಮತೆಗೆ ಅಡ್ಡಿಯಾದವರು ಈ ತಮಿಳರೇ.......ಇವರು ನಮ್ಮ ರಾಷ್ಟ್ರ ಧ್ವಜಕ್ಕೆ ಎಂತಹ ಬೆಲೆ ಕೊಡುತ್ತಾರೆ?. ನಮ್ಮ ಸಂವಿಧಾನಕ್ಕೆ ಎಷ್ಟು ಬೆಲೆ ಕೊಡುತ್ತಾರೆ?. ದೇಶದ ಕಾನೂನಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದು ರಾಷ್ಟ್ರದ ಎಲ್ಲ ಪ್ರಜೆಗಳಿಗೂ ತಿಳಿದಿರುವ ವಿಷಯ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಕರುಣಾನಿಧಿ ಎಂಬ ರಾಕ್ಷಸ ದೇಶದ ಕಾನೂನಿಗೇ ಸಡ್ಡು ಹೊಡೆದಿದ್ದು, ಅವನ ವಿರುದ್ಧ ಯಾವುದೇ ಮೊಕದ್ದಮೆ ಹಾಕಲು ಕೇಂದ್ರ ಸರಕಾರ / ಸುಪ್ರೀಂ ಕೋರ್ಟ್ ಮೀನ ಮೇಷ ಎಣಿಸುತ್ತಿರುವುದು ಅನುಮಾನದ ಬೀಜಗಳನ್ನು ಬಿತ್ತುತ್ತಿದೆ.

"ಈ ರಾಕ್ಷಸರನ್ನು ಮಟ್ಟಹಾಕಿದಲ್ಲಿ ಮಾತ್ರ ನಮ್ಮ ದೇಶ ಏಕತೆ, ಸಾರ್ವಭೌಮತೆ ಉಳಿಸಿಕೊಳ್ಳಲು ಸಾಧ್ಯ"

Sunday, August 03, 2008

ಇಂತಹವರಿಗೆ ಒದೆಯಬೇಕೋ ಬೇಡವೋ!!!!!!!!!


ಬೆಂಗಳೂರು ಆಗಸ್ಟ್ ೩:
ಕನ್ನಡಿಗನಾಗಿ ಹುಟ್ಟಿ, ಕನ್ನಡಿಗರಿಂದ ಸಹಾಯ ಪಡೆದು ತಮಿಳುನಾಡಿನಲ್ಲಿ ಸುಪರ್‌‌ಸ್ಟಾರ್ ಆಗಿ ಮೆರೆದು ಈಗ ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ದಾರ್ಷ್ಟ್ಯ ಇರುವಂತಹ ಒಂದು ಪ್ರಾಣಿ ಎಂದರೆ ಅದು ದುಡ್ಡಿಗಾಗಿ ತಾಯಿಯನ್ನೇ ಕಾಲಲ್ಲಿ ಒದೆಯಲೂ ಹಿಂಜರಿಯದ, ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಒಬ್ಬ ಖಳನಟ "ರಜನಿಕಾಂತ್ ಉರ್ಫ್ ಶಿವಾಜಿ".
ಇಂತಹ ಕನ್ನಡದ್ರೋಹಿಗಳಿಂದ ಇಂದು ಕನ್ನಡ ತಾಯಿ ಒಳಗೊಳಗೇ ಅಳುತ್ತಿದ್ದಾಳೆ. "ಎಂತಹ ಮಕ್ಕಳನ್ನು ಹೆತ್ತೆನಪ್ಪಾ? " ಎಂದು. ತಾನೊಬ್ಬ ಸೂಪರ್‌ಸ್ಟಾರ್ ಆಗಿರಬಹುದು, ಅದು ತಮಿಳರಿಗೆ ಮಾತ್ರ, ಆದರೆ ಕನ್ನಡಿಗರಿಗೆ, ಕನ್ನಡತಾಯಿಗೆ, ಕರ್ನಾಟಕಕ್ಕೆ ಇವನು ನೀಡಿದ ಕೊಡುಗೆ ಏನು?. ಇವನ ಕನ್ನಡದ್ರೋಹಿತನಕ್ಕೆ ಅವನ ಕೆಲ ನುಡಿಮುತ್ತುಗಳೇ ಸಾಕ್ಷಿ,
ಎಪ್ರಿಲ್ ೪: " ತಮಿಳಿನಾಡಿನಲ್ಲಿ ಹರಿಯುತ್ತಿರುವ ನೀರನ್ನು ಬಳಸಿಕೊಳ್ಳಲು ನಾವು ಯೋಜನೆ ಹಾಕಿಕೊಂಡರೆ ಅದನ್ನು ಬಳಸಿಕೊಳ್ಳಬೇಡಿ ಎಂದು ಹೇಳುವ ಕನ್ನಡಿಗರಿಗೆ ಒದೆಯಬೇಕೋ ಬೇಡವೋ....."
ಎಪ್ರಿಲ್ ೬: " ಕ್ಷಮೆ ಕೇಳುವವರೆಗೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕೆಲವರು ಬೆದರಿಕೆ ಹಾಕಿದ್ದಾರೆ. ಕರ್ನಾಟಕದಲ್ಲಿ ತಮಿಳರಿಗಿಂತ ಹೆಚ್ಚಾಗಿ ಕನ್ನಡಿಗರೇ ನನ್ನ ಚಿತ್ರವನ್ನು ನೋಡುತ್ತಾರೆ. ಇದರಿಂದ ಅವರಿಗೇ ನಷ್ಟ...."
ಜುಲೈ ೨೭: " ಹೊಗೇನಕಲ್ ಚರ್ಚೆಯ ಸಂದರ್ಭದಲ್ಲಿ ನಾನು ಮಾತನಾಡಿದ್ದು ಕರ್ನಾಟಕದಲ್ಲಿ ಕೆಲವರಿಗೆ ನೋವುಂಟುಮಾಡಿದೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಸ್ವಭಾವಕ್ಕೆ ವಿರುದ್ಧವಾದುದು. ಎಲ್ಲರೂ ನನ್ನ ಚಿತ್ರ ಬಿಡುಗಡೆಗೆ ಸಹಕರಿಸಿ..."
ಜುಲೈ ೩೧: " ನಾನು ದುರಹಂಕಾರಿ ಅಲ್ಲ. ಕನ್ನಡ ಹೋರಾಟಗಾರರ ಬಗ್ಗೆ ನನಗೆ ಗೌರವವಿದೆ. ನನ್ನಿಂದ ತಪ್ಪಾಗಿರುವುದು ನಿಜ.ಮುಂದೆ ಹೀಗೆ ಮಾಡುವುದಿಲ್ಲ. ಕನ್ನಡದ ಮಕ್ಕಳಿಂದ ಪಾಠ ಕಲಿತಿದ್ದೇನೆ. ಕುಚೇಲನ್ ಬಿಡುಗಡೆಗೆ ಸಹಕಾರ ನೀಡಿ..."
ಆಗಸ್ಟ್ ೨: " ಕುಚೇಲನ್ ಬಿಡುಗಡೆಗೆ ತಡೆಯೊಡ್ಡಬಾರದೆಂಬ ಕಾರಣಕ್ಕೆ ನಾನು ಕನ್ನಡಿಗರಿಗೆ ಮನವಿ ಮಾಡಿಕೊಂಡೆ ಅಷ್ಟೆ. ಆದರೆ ಇದನ್ನು ಕ್ಷಮೆ ಯಾಚನೆ ಎಂದು ತಪ್ಪಾಗಿ ಭಾವಿಸಬಾರದು....."

ಇಂತಹ ಹೇಳಿಕೆಗಳಿಂದ ರಜನೀಕಾಂತ್ ತನ್ನ ನಿಜವಾದ ಕನ್ನಡದ್ರೋಹಿತನವನ್ನು ತೋರ್ಪಡಿಸಿಕೊಂಡಿದ್ದಾನೆ. ಕನ್ನಡಿಗನಾಗಿ ಹುಟ್ಟಿ, ಕನ್ನಡಿಗರ ಸಹಕಾರ ಪಡೆದು, ತಮಿಳುನಾಡಿನಲ್ಲಿ ಸುಪರ್‌ಸ್ಟಾರ್ ಆದ ಈ ಹುಂಬ ಇಂದು ತಾನು ಹತ್ತಿದ ಏಣಿಯನ್ನೇ ಒದೆಯುವಷ್ಟು ದಾರ್ಷ್ಟ್ಯ ತೋರಿಸುತ್ತಿದ್ದಾನೆಂದರೆ ಅವನಿಗೆಷ್ಟು ಕೊಬ್ಬಿರಬೇಕು?. ಕೇವಲ ಕೈಕಾಲು ಆಡಿಸುವುದೇ ನಟನೆ, ತಾನು ಮಾಡಿದ್ದೇ ನಿಜವಾದ ನಟನೆ, ನನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ ಎಂಬ ಒಣಜಂಬ ಇವನ ತಲೆ ಹೊಕ್ಕಿದೆ. ಆದರೆ ಒಬ್ಬ ಕನ್ನಡಿಗನಾಗಿ ನಾನು ಹೇಳುವ ಮಾತೆಂದರೆ....ತಾಕತ್ತಿದ್ದರೆ ಧೈರ್ಯವಾಗಿ ಎದುರಿಸು...ಅದು ಬಿಟ್ಟು ಶಿಖಂಡಿ ತರಹ ಗಳಿಗೆಗೊಮ್ಮೆ ಗೋಸುಂಬೆ ತರಹ ಬಣ್ಣ ಬದಲಾಯಿಸುವ ಬುದ್ದಿ ಮಾತ್ರ ಬೇಡ. ಇದರಿಂದ ನಮ್ಮ ಕನ್ನಡಿಗರಿಗೇ ಅವಮಾನ. ಅಲ್ಲದೆ ನಿನ್ನ ಡಬ್ಬಾ ಚಿತ್ರವನ್ನು ನೋಡದಿದ್ದರೆ ಕನ್ನಡಿಗರಿಗೇನೂ ನಷ್ಟವಿಲ್ಲ. ಟಿಕೆಟ್‌ನ ದುಡ್ಡು ಉಳಿಯುತ್ತದೆ ಅಷ್ಟೆ.
ಒಬ್ಬ ಕನ್ನಡಿಗನಾಗಿ ಹುಟ್ಟಿ, ಕನಿಷ್ಟ ಮಾತೃಭಾಷೆಗೆ ಗೌರವ ಕೊಡದ ಈ ಮಂದಿ ತನ್ನ ಹೆತ್ತ ತಾಯಿಗೆ ಎಷ್ಟು ಗೌರವ ಕೊಡಬಲ್ಲರು?. ಕನ್ನಡಿಗರ ಶಾಂತಿಪ್ರಿಯತೆಯನ್ನೇ ಬಂಡವಾಳಮಾಡಿಕೊಂಡ ಕೆಲವು ಕನ್ನಡದ್ರೋಹಿಗಳು ಈಗ ಕರ್ನಾಟಕದ ವಿರುದ್ಧ, ಕನ್ನಡಿಗರ ವಿರುದ್ಧ, ಕನ್ನಡದ ವಿರುದ್ಧ ಕತ್ತಿ ಮೆಸೆಯುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳನ್ನು ಮಟ್ಟಹಾಕಬೇಕಾಗಿದೆ.
ಇಂತಹವರಿಗೆ ಒದೆಯಬೇಕೋ ಬೇಡವೋ!!!!!!!!!

Sunday, July 27, 2008

ದೇಶದ್ರೋಹಿ ಭಯೋತ್ಪಾದಕರು...ಕರ್ನಾಟಕ ದ್ರೋಹಿಗಳು

ಬೆಂಗಳೂರು ಜುಲೈ ೨೭:




ಶುಕ್ರವಾರ ಹಾಗೂ ಶನಿವಾರ ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲಿ ನಡೆದ ಬಾಂಬ್ ಸ್ಫೋಟ ಖಂಡನೀಯ ಹಾಗೂ ಒಂದು ರಾಕ್ಷಸೀ ಕೃತ್ಯವಾಗಿದೆ. ಅದೂ ಅಲ್ಲದೆ ಭಾರತದಲ್ಲಿ ನಡೆದ ಪ್ರತೀ ಸ್ಫೋಟಗಳೂ ಶುಕ್ರವಾರ, ಶನಿವಾರದಂದೇ ಆಗಿರುವುದು ವಿಶೇಷ. ಇದರ ಹಿಂದಿನ ಕಾಣದ ಕೈಗಳ ಕೈವಾಡವನ್ನು ಪತ್ತೆ ಹಚ್ಚಿ, ಇಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು.
ಇನ್ನೊಂದು ವಿಚಿತ್ರ ವಿಷಯವೆಂದರೆ ಬಾಂಬ್ ಸ್ಫೋಟ ನಡೆದಿರುವುದು ಕೇವಲ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ. ಇದು ಮೇಲ್ನೋಟಕ್ಕೆ ಈ ಸರಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರವೆಂದು ಯಾರು ಬೇಕಾದರೂ ಹೇಳಬಹುದು.ಇದನ್ನೂ ಕೂಡ ಕೇವಲ ರಾಜಕೀಯ ದೃಷ್ಟಿಯಿಂದ ನೋಡುತ್ತಿರುವುದು ಕೆಲವು ರಾಜಕಾರಣಿಗಳ ತಿಕ್ಕಲುತನವನ್ನು ತೋರಿಸುತ್ತದೆ. ಬೆಂಗಳೂರಿನಲ್ಲಿ ನಡೆದಿರುವ ಸ್ಫೋಟಕ್ಕೆ ಸ್ಥಳೀಯ ರಾಜಕಾರಣಿಗಳು ಹಾಗೂ ಸ್ಥಳೀಯ ಜನರ ಬೆಂಬಲ ಇರುವುದಂತೂ ಖಂಡಿತಾ ಸತ್ಯ. ಇದು ಯು.ಪಿ.ಎ. ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಭಾರತೀಯ ಜನತಾ ಪಕ್ಷ ಜಾರಿಗೆ ತಂದಿದ್ದ ಟಾಡಾ, ಪೋಟಾ ಮುಂತಾದ ಕಾಯಿದೆಗಳನ್ನು ರದ್ದು ಮಾಡಿರುವುದು ಭಯೋತ್ಪಾದಕರ ಪರ ತನ್ನ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಈಗ ಭಯೋತ್ಪಾದಕತೆಯನ್ನು ತನ್ನ ಕೀಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಯು.ಪಿ.ಎ ಹಾಗೂ ಎಡಪಕ್ಷಗಳ ಹೀನ, ಕೀಳು ಪ್ರವೃತ್ತಿಯನ್ನು ತೋರಿಸುತ್ತದೆ. ಓಟಿಗಾಗಿ ಈ ದೇಶವನ್ನು ಮಾರಲೂ ಹಿಂಜರಿಯದ ಈ ಕಾಂಗ್ರೆಸ್ಸ್, ಎಡಪಕ್ಷಗಳು ಇಂದು ಭಾರತ ದೇಶವನ್ನು ಅಸ್ಥಿರತೆ, ಭಯೋತ್ಪಾದಕತೆ, ಅರಾಜಕತೆಯಿಂದ ಬಳಲುವಂತೆ ಮಾಡಿವೆ.
ಈ ದೇಶದ ಜನ, ರಾಜಕಾರಣಿಗಳು, ಸರಕಾರ, ನ್ಯಾಯಾಲಯಗಳು ಇಂದು ಎಚ್ಚೆತ್ತುಕೊಳ್ಳಬೇಕಾಗಿದೆ, ಇಂತಹ ಸ್ಫೊಟಗಳ ಹಿಂದಿನ ದುಷ್ಟ ಶಕ್ತಿಗಳನ್ನು ಕಂಡುಹಿಡಿದು ಅವರನ್ನು ಗಲ್ಲಿಗೇರಿಸಿದರೆ ಮಾತ್ರ ಮುಂದೆ ಇಂತಹ ಕೃತ್ಯಗಳು ಮರುಕಳಿಸಲಾರದೇನೋ. ಆದರೆ ಬರೇ ಓಟಿಗಾಗಿ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ಜಾತ್ಯಾತೀತ(???) ಪಕ್ಷಗಳು ಇಂದು ಇದರ ಫಲವನ್ನು ಈ ರೀತಿಯಾಗಿ ಅನುಭವಿಸಬೇಕಾಗಿದೆ. ಒಂದು ನುಡಿಯೇ ಇದೆ. "All muslims are not terrorists......But All Terrorists are Muslims". (ಆದರೆ L.T.T.E ಮುಂತಾದ ಭಾರತೀಯ ಭಯೋತ್ಪಾದಕರು ಮಾತ್ರ ಇದಕ್ಕೆ ಅಪವಾದ).
ಈ ಸ್ಫೋಟಗಳು ಖಂಡಿತಾ ಬಿ.ಜೆ.ಪಿ. ಸರಕಾರವನ್ನು ಅಸ್ಥಿರಗೊಳಿಸಲು ನಡೆಸಿದ ಒಂದು ಕೃತ್ಯ ಹಾಗೂ ಇದರಲ್ಲಿ ಖಂಡಿತಾ ಕೆಲವು ದೇಶದ್ರೋಹಿ ಸಂಘಟನೆಗಳ ಕೈವಾಡ ಇರುವುದು ಸ್ಪಷ್ಟ. ಈಗ ಕರ್ನಾಟಕ ಸರಕಾರ ಎಚ್ಚೆತ್ತುಕೊಂಡು, ಕರ್ನಾಟಕದಲ್ಲಿ ಸಕ್ರಿಯವಾಗಿರುವ ಕೆಲವು ಜನದ್ರೋಹಿ, ದೇಶದ್ರೋಹಿ, ಕರ್ನಾಟಕ ದ್ರೋಹಿ ಸಂಘಟನೆಗಳ ನಾಯಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಕೆಲವು ಮಾಹಿತಿಗಳು ಸಿಗಬಹುದು. ಆದರೆ ಕರ್ನಾಟಕದಲ್ಲಿ ನಡೆದಿರುವ ಕೃತ್ಯಗಳ ಹಿಂದೆ ತಮಿಳು ಸಂಘಟನೆಗಳ ಕೈವಾಡವನ್ನು ಕೂಡಾ ತಳ್ಳಿಹಾಕುವಂತಿಲ್ಲ. ಏಕೆಂದರೆ ಈಗಾಗಲೇ ಹೊಗೆನಕಲ್ ವಿವಾದ ಹೊಗೆಯಾಡುತ್ತಿರುವುದರಿಂದ ಪೋಲಿಸರು ಇವರ ಬಗ್ಗೆಯೂ ಒಂದು ಕಣ್ಣು ಇಟ್ಟಿರುವುದು ಕ್ಷೇಮಕರ.
ಇದನ್ನು ತಡೆಗಟ್ಟಲು ಕೆಲವು ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.
೧. ಪರ ರಾಜ್ಯದಿಂದ (ಮುಖ್ಯವಾಗಿ ತಮಿಳುನಾಡಿನಿಂದ) ಬರುವ ಎಲ್ಲರಿಗೂ ಪರಿಚಯ ಪತ್ರ ಕಡ್ಡಾಯ ಮಾಡಬೇಕು.
೨. ಹೊರದೇಶದ ಯಾವುದೇ ಪ್ರಜೆ ಪೋಲಿಸ್ ಠಾಣೆಯಲ್ಲಿ ತನ್ನ ಎಲ್ಲ ದಾಖಲೆಗಳು, ಪರಿಚಯ ಪತ್ರ ನೀಡಬೇಕು.
೩. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಚೈನಾ, ಶ್ರೀಲಂಕಾ, ಅಫ್‌ಘನಿಸ್ತಾನ ದೇಶಗಳಿಂದ ಬರುವ ಎಲ್ಲ ಪ್ರಜೆಗಳನ್ನು ಕೂಲಂಕುಶವಾಗಿ ತನಿಖೆ ಮಾಡಿ, ಅವರ ಚಲನವಲನಗಳ ಬಗ್ಗೆ ನಿಗಾ ಇಡಬೇಕು.
೪. ಹಾಗೂ ಸ್ಥಳೀಯ ರಾಜಕಾರಣಿಗಳ, ಕೆಲ ಪಕ್ಷಗಳ ಕಾರ್ಯಕರ್ತರ ಚಲನವಲನದ ಬಗ್ಗೆ ನಿಗಾ ಇಡಬೇಕು.
೫. ಎಲ್ಲಾ ಅಲ್ಪ ಸಂಖ್ಯಾತ ಸಂಘಟನೆಗಳು, ಅನ್ಯ ಭಾಷಾ ಸಂಘಟನೆಗಳ ಕಾರ್ಯಕರ್ತರ ಚಲನವಲನಗಳ ಬಗ್ಗೆ ನಿಗಾ ಇಡಬೇಕು.
"ಕನ್ನಡಿಗರೇ...ನಮ್ಮ ರಾಜ್ಯವನ್ನು ನಾವೇ ರಕ್ಷಿಸಬೇಕಾಗಿದೆ....ನಮ್ಮ ದೇಶವನ್ನು ನಾವೇ ರಕ್ಷಿಸಬೇಕಾಗಿದೆ...."