Showing posts with label ಸಂಸ್ಕೃತಿ ಉಳಿಸಿ. Show all posts
Showing posts with label ಸಂಸ್ಕೃತಿ ಉಳಿಸಿ. Show all posts

Tuesday, January 24, 2012

ಚಂಪಾ ಎಂಬ ’ಬುದ್ದಿಜೀವಿ

ಇತ್ತೀಚೆಗೆ ವಿ.ಕ.ದಲ್ಲಿ ಪ್ರಕಟವಾದ ಚಂಪಾ ಅವರ ಲೇಖನ ಓದಿ ಖೇದವಾಯಿತು. ಕೇವಲ ಬ್ರಾಹ್ಮಣರನ್ನು ದ್ವೇಷಿಸುವುದನ್ನೇ ಕಾಯಕವಾಗಿಸಿಕೊಂಡಿರುವ ಈ ಚಂಪಾ ಎಂಬ ’ಬುದ್ದಿಜೀವಿ’ಯ ಬಗ್ಗೆ ಅಸಹ್ಯದ ಜೊತೆಗೆ ಅನುಕಂಪವೂ ಉಂಟಾಯಿತು.

ಅಸಹ್ಯ ಏಕೆಂದರೆ ಕಾಂಗ್ರೆಸ್ ರಾಜಕಾರಣಿಗಳ ಹಿಂದೂ ವಿರೋಧಿ ಧೋರಣೆಯ ಥರ ಇಲ್ಲಿ ಬ್ರಾಹ್ಮಣ ವಿರೋಧವನ್ನೇ ತನ್ನ ಕಾಯಕವಾಗಿಸಿಕೊಂಡು ತಾನು ರಾಜಕೀಯ ನೆಲೆ ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ ಚಂಪಾ. ಅನುಕಂಪ ಏಕೆಂದರೆ ಊರು ಹೋಗು, ಕಾಡು ಬಾ ಅನ್ನುವ ಪರಿಸ್ಥಿತಿಯಲ್ಲಿರುವ ಚಂಪಾ ಬ್ರಾಹ್ಮಣರ ವಿರೋಧ ಕಟ್ಟಿಕೊಳ್ಳಲು ಹೊರಟಿರುವುದು. ಕೇವಲ ಬ್ರಾಹ್ಮಣ ಎನ್ನುವ ಕಾರಣಕ್ಕೆ ಮಾತ್ರ ಶ್ರೀ ಅನಂತಮೂರ್ತಿಯವರನ್ನು ವಿರೋಧಿಸುವ ಇಂತಹ ಜಾತಿವಾದಿಗಳಿಂದ ನಮ್ಮ ಸಮಾಜಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಅಲ್ಲದೆ ಈ ಚಂಪಾ ತಾನು ಕನ್ನಡದ ಮೇರು ಸಾಹಿತಿ, ಕರ್ನಾಟಕ ರತ್ನ, ಜ್ಞಾನಪೀಠ ಪ್ರಶಸ್ತಿ ತನಗೆ ಬಂದಿಲ್ಲ, ಕೇವಲ ಬ್ರಾಹ್ಮಣ ಸಾಹಿತಿಗಳಿಗೆ ಮಾತ್ರ ಸಿಗುತ್ತಿದೆ ಎಂಬ ವಿತಂಡ ವಾದವನ್ನು ಮಾಡುತ್ತಿರುವುದನ್ನು ನೋಡುತ್ತಿದ್ದರೆ ಇವರ ಮಾನಸಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬ ಸಂಶಯ ಮೂಡುವುದು ಸಹಜ. ಅದೂ ಅಲ್ಲದೆ ಈ ಸಾಹಿತಿಗೆ ಸಂಸ್ಕೃತ ವ್ಯಾಕರಣ ಜ್ಞಾನ ಕೂಡ ಇಲ್ಲದಿರುವುದು ಖೇದನೀಯ. "ಬ್ರಾಹ್ಮಣೋ ಬಹುಜನ ಪ್ರಿಯಃ" ಎಂಬುದನ್ನು ಚಂಪಾರಂಥ ಕೆಲ ಬ್ರಾಹ್ಮಣ ವಿರೋಧಿಗಳು "ಬ್ರಾಹ್ಮಣೋ ಭೋಜನ ಪ್ರಿಯಃ" ಎಂದು ತಿದ್ದಿ ಬ್ರಾಹ್ಮಣರನ್ನು ಕೇವಲ ಭೋಜನ ಪ್ರಿಯರೆಂದು ಟೀಕಿಸಿರುವುದು, ಜಾತಿವಾದ ಇನ್ನೂ ಜೀವಂತ ಇದೆ ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ. ಬ್ರಾಹ್ಮಣರು ಭೋಜನ ಪ್ರಿಯರಾದರೆ, ಉಳಿದ ಜಾತಿಯವರು ಯಾವುದರ ಪ್ರಿಯರು?. ಅಲ್ಲದೆ ಬ್ರಾಹ್ಮಣರು ಊಟ ಮಾಡಿದ ಎಲೆಯನ್ನೂ ತಿನ್ನುತ್ತಾರೆ ಎಂದು ಹೇಳಿ ತಾನೊಬ್ಬ ಎಂತಹ ನೀಚ ಸಾಹಿತಿ, ಬ್ರಾಹ್ಮಣರನ್ನು ತಾನು ಎಷ್ಟು ದ್ವೇಷಿಸುತ್ತೇನೆ ಎಂಬುದನ್ನು ಪ್ರಪಂಚಕ್ಕೆ ತಿಳಿಸಿದ್ದಾರೆ.

ಮಡೆಸ್ನಾನ ಎಂದರೆ ಬ್ರಾಹ್ಮಣರು ಉಂಡು ಬಿಟ್ಟ ಎಲೆಯಲ್ಲಿ ಹೊರಳಾಡುವುದು ಎಂಬುದಾಗಿ ತಿಳಿದುಕೊಂಡಿರುವ ಈ ಚಂಪಾರಂತಹ ಬ್ರಾಹ್ಮಣ ವಿರೋಧಿಗಳು, ಯಾವುದೋ ಊರಿನಲ್ಲಿ ಇತ್ತೀಚೆಗೆ ಕೆಳಜಾತಿಯವರು ಉಂಡ ಎಲೆಯಲ್ಲಿ ಬ್ರಾಹ್ಮಣರು ಮಡೆಸ್ನಾನ ಮಾಡಿದ್ದಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಮಡೆಸ್ನಾನ ಎನ್ನುವುದು ಒಂದು ನಂಬಿಕೆ, ಸಂಪ್ರದಾಯ ಅಷ್ಟೆ. ಅದು ಅವರವರ ನಂಬಿಕೆಗೆ ಬಿಟ್ಟ ವಿಷಯ. ಜನರ ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಇವರಿಗೆ ಇದೆಯಾ?. ಮುಂದೆ ಇವರು ದೇವಸ್ಥಾನಕ್ಕೆ ಹೋಗುವುದನ್ನೂ ಮಡೆಸ್ನಾನದಂತೆ ಅಸಹ್ಯ, ಮೂಢನಂಬಿಕೆ ಎಂದು ಹೇಳುವ ಕಾಲವೂ ಬರಬಹುದು. ಇಂತಹ ವಿತಂಡ ವಾದವನ್ನು ಮಂಡಿಸಿ ತಾನೊಬ್ಬ ಕರ್ನಾಟಕದ ಬುದ್ದಿಜೀವಿ ಸಂಘದ ಅಧ್ಯಕ್ಷ ಪಟ್ಟ ಅಲಂಕರಿಸಲು ಯೋಗ್ಯ ವ್ಯಕ್ತಿ ಎಂಬುದನ್ನು ಬಿಂಬಿಸಲು ಹೊರಟಂತಿದೆ ಈ ಚಂಪಾ. ಕೇವಲ ಹಿಂದೂ ಸಮಾಜದಲ್ಲಿ ನಡೆಯುವ ಕೆಲವು ಸಂಪ್ರದಾಯಗಳನ್ನೇ ಕೆದಕಿ ಅದರ ವಿರುದ್ದವಾಗಿ ದನಿಯೆತ್ತುವ ಇಂಥಹ ರಾಜಕಾರಣಿ ಸಾಹಿತಿಗಳು ಮುಸಲ್ಮಾನರಲ್ಲಿ ನಡೆಯುವ ಕೆಲ ಸಂಪ್ರದಾಯಗಳ ಬಗ್ಗೆ ದನಿಯೆತ್ತುವ ತಾಕತ್ತಿದೆಯೇ?. ಬರೆದಲ್ಲಿ ಮರುದಿನವೇ ಇವರಿಗೆ ಕಲ್ಲುಹೊಡೆಯುವುದರಲ್ಲಿ ಸಂಶಯವಿಲ್ಲ.

ಚಂಪಾರವರೇ ನಿಮಗೆ ಮಾಡಲು ಕೆಲಸವಿಲ್ಲದಿದ್ದರೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆಂದೋಲನದಲ್ಲಿ ಭಾಗವಹಿಸಿ. ದೇಶದಲ್ಲಿ ಅನೇಕ ಸಮಸ್ಯೆಗಳಿವೆ ಬೆಲೆ ಏರಿಕೆ, ಕಪ್ಪುಹಣ, ಭ್ರಷ್ಟಾಚಾರ, ನಕ್ಸಲ್ ಸಮಸ್ಯೆ....ಇದರ ವಿರುದ್ದವಾಗಿ ನೀವೇಕೆ ದನಿ ಎತ್ತುತ್ತಿಲ್ಲ?. ಕೇವಲ ಬ್ರಾಹ್ಮಣ ವಿರೋಧೀ ನಿಲುವು ತಳೆದು, ಬ್ರಾಹ್ಮಣರ ಏಳಿಗೆ ಸಹಿಸದೆ, ಬ್ರಾಹ್ಮಣರು ಸುಮ್ಮನಿದ್ದರೂ ಅವರ ಸಂಪ್ರದಾಯಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಕೆಣಕುವ ಇಂತಹ ಸಾಹಿತಿಗಳಿಗೆ ಕಾಲವೇ ಬುದ್ದಿ ಕಲಿಸಬೇಕು.

Saturday, October 31, 2009

ಬೆಂಗಳೂರಿನಲ್ಲಿ ತಮಿಳರ ತಿಕ್ಕಲುತನ

ಎಲ್ಲ ಕನ್ನಡಿಗರಿಗೆ ಇದು ಎಚ್ಚರಿಕೆ ಗಂಟೆ. ಈ ಬೆಂಗಳೂರಿನ ತಮಿಳುಸಂಘ ಎನ್ನುವ ಕರ್ನಾಟಕ ವಿರೋಧಿ ಸಂಘಟನೆ, ಈ ದೇಶದ ಸಂವಿಧಾನಕ್ಕೇ ಮಸಿ ಬಳಿಯುವ ಹುನ್ನಾರ ನಡೆಸಿದೆ. ಇಲ್ಲಿ ಕರ್ನಾಟಕವನ್ನು ತಮಿಳುನಾಡು ಮಾಡಲು ಹೊರಟಿದೆ. ಎಚ್ಚರಿಕೆ ಕನ್ನಡಿಗರೇ!!!!! ಮುಸಲ್ಮಾನರು ಜಿಹಾದ್ ಎಂಬ ಅಸ್ತ್ರದಿಂದ ಪ್ರಪಂಚ ನಾಶ ಮಾಡಲು ಹೊರಟರೆ ಈ ತಮಿಳರು, ತಮಿಳು ಅಸ್ತ್ರ ಹಿಡಿದು ಹೋದಲ್ಲೆಲ್ಲಾ ತಮ್ಮ ದೇಶವಿರೋಧಿ ನೀತಿಯನ್ನು ಪ್ರಚುರಪಡಿಸುತ್ತಿದ್ದಾರೆ. ರಾಷ್ಟ್ರ ಭಾಷೆಯನ್ನು ತಮಿಳುನಾಡಿನಲ್ಲಿ ನಿಷೇಧಿಸಿ ತಮ್ಮ ದೇಶಪ್ರೇಮವನ್ನು ಇವರು ಪ್ರಪಂಚಕ್ಕೇ ತೋರಿಸಿಕೊಟ್ಟಿದ್ದಾರೆ.
ಈ ಲಿಂಕ್ ನಲ್ಲಿರುವ ಕೆಲ ಅಂಶಗಳನ್ನು ನೋಡಿ:
http://www.tamilnation.org/diaspora/karnataka.htm

ಇದರ ಪ್ರಕಾರ:
೧. ಬೆಂಗಳೂರಿನಲ್ಲಿ ಶೇಕಡಾ ೪೦ರಷ್ಟು ತಮಿಳರಿದ್ದಾರೆ
೨. ರಾಜ್‌ಕುಮಾರ್ ಕನ್ನಡಿಗನೇ ಅಲ್ಲ.
ಮತ್ತಿನ್ನೆಷ್ಟೋ....

ಕನ್ನಡಿಗರೇ...ನೀವು ಕೂಡಾ ಸ್ವಾಭಿಮಾನಿಗಳಾಗಿ...ಆದರೆ ತಮಿಳರಂತೆ ದುರಭಿಮಾನಿಗಳಾಗಬೇಡಿ.

Sunday, August 16, 2009

ಆಧುನಿಕ ಯುಗದ ಹೊಸ ತರಹದ ಭಿಕ್ಷಾಟನೆ

"ಸರ್ ನಮ್ಮ ಬಡಾವಣೆಯಲ್ಲಿ ಈ ಸಾರಿ ಗಣೇಶ ಕೂರಿಸುತ್ತಿದ್ದೇವೆ. ದಯವಿಟ್ಟು ಹಣ ಸಹಾಯ ಮಾಡಿ ಸಾರ್"
"ರೀ...ಕಳೆದ ಸಾರಿ ಕೇಳಿದಾಗ ಮುಂದಿನ ಸಲ ಕೊಡ್ತೀನಿ ಅಂದ್ರಲ್ಲಾ...ಈಗ ಬಂದಿದ್ದೀವಿ...ಚಂದಾ ಕೊಡಿ"
ಈ ಥರಾ ಹೊಸ ಶೈಲಿಯ ಡೈಲಾಗ್‍ಗಳನ್ನು ನೀವು ಈಗಾಗಲೇ ಕೇಳಲು ಶುರುಮಾಡಿರಬಹುದು. ಅದೇರೀ.....ಗೌರಿ ಗಣೇಶ ಹಬ್ಬ ಬರುತ್ತಿದೆಯಲ್ಲಾ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಅಪಾಪೋಲಿಗಳು, ಪುಡಿರೌಡಿಗಳು, ಪೋಕರಿಗಳು ಈಗಾಗಲೇ ಚಂದಾ ವಸೂಲಿಗೆ ಶುರು ಮಾಡಿದ್ದಾರೆ. ಮನೆ ಮನೆಗೆ ಭೇಟಿ ನೀಡುವ ಈ ನೀಚರು ಬಲವಂತವಾಗಿ, ಜೋರು ಮಾಡಿ, ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ. ಗಣೇಶನ ಹೆಸರಿನಲ್ಲಿ ಹಣ ವಸೂಲಿ ಮಾಡಿ, ಗಣೇಶನನ್ನು ನೀರಿಗೆ ಹಾಕಿದ ಮೇಲೆ, ಅನೇಕ ಮಂದಿ ಕುಡಿದು, ಅಮಲೇರಿ ಚರಂಡಿಯಲ್ಲಿ ಬಿದ್ದು ಹೊರಳಾಡಿ, ಅದರಲ್ಲೇ ಸಾರ್ಥಕತೆಯನ್ನು ಪಡೆಯುತ್ತಾರೆ. ತಮ್ಮ ಜೀವನ ಈ ಒಂದು ವರ್ಷದ ಮಟ್ಟಿಗೆ ಸಾರ್ಥಕವಾಯಿತು ಎಂದು ಭಾವಿಸಿ, ಮರುದಿನ ಏನೂ ನಡೆದೇ ಇಲ್ಲವೆಂಬಂತೆ ಮಾಮೂಲಿಯಾಗಿದ್ದುಬಿಡುತ್ತಾರೆ.

ಎಲ್ಲರೂ ಈ ಥರಾ ಮಾಡುತ್ತಾರೆಂದಲ್ಲ. ಇದರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಚಂದಾ ವಸೂಲು ಮಾಡಿದರೂ ಒಳ್ಳೆ ಕೆಲಸ ಕಾರ್ಯ ಹಮ್ಮಿಕೊಳ್ಳುತ್ತಾರೆ. ಶ್ರೀ. ಬಾಲಗಂಗಾಧರ ತಿಲಕರು ಈಗ ಬದುಕಿದ್ದಿದ್ದರೆ ಖಂಡಿತಾ ಈ ಜನ ಜನರ ಒಗ್ಗಟ್ಟಿಗೆ ಹುಟ್ಟು ಹಾಕಿದ ಈ ಗಣೇಶೋತ್ಸವವನ್ನು ನಿಷೇಧ ಮಾಡಿ ಎಂದು ಸರಕಾರವನ್ನು ಕೋರಿಕೊಳ್ಳುತ್ತಿದ್ದರೋ ಏನೋ.

ಬಡ ಮಕ್ಕಳಿಗೆ ಸಹಾಯ, ಬಡಾವಣೆಯಲ್ಲಿ ಹೊಸ ಶಾಲೆ ಪ್ರಾರಂಭ, ಅನಾಥಾಲಯಗಳಿಗೆ ಸಹಾಯ, ಹೊಸ ಆಸ್ಪತ್ರೆಗಳ ಪ್ರಾರಂಭಕ್ಕೆ ಸಹಾಯ....ಮುಂತಾದ ಒಳ್ಳೆಯ ಕಾರ್ಯಕ್ರಮಗಳನ್ನು ಈ ಸಂಘಟನೆಗಳು ಹಮ್ಮಿಕೊಂಡಲ್ಲಿ, ಈ ಸಾರ್ವಜನಿಕ ಗಣೇಶೋತ್ಸವಕ್ಕೆ ಒಂದು ಹೊಸ ಅರ್ಥ ಬರುತ್ತದೆ.

ಎಲ್ಲ ಸಂಘಟನೆಗಳಲ್ಲಿ ಮನವಿ ಎಂದರೆ..."ದಯವಿಟ್ಟು ಈ ಸಾರ್ವಜನಿಕ ಗಣೇಶೋತ್ಸವವನ್ನು ಒಳ್ಳೆಯ ಕಾರ್ಯಗಳಿಗೆ ಸಹಾಯವಾಗುವ ಹಾಗೆ ಮಾಡಿ. ಅನ್ಯಧರ್ಮೀಯರು ಕೇವಲವಾಗಿ ಮಾತಾಡುವ ಹಾಗೆ ಮಾಡಬೇಡಿ."
"ನಿಮ್ಮ ಕೈಯಲ್ಲಿ ಸಾಧ್ಯವಾದರೆ ನೀವೇ ಮಾಡಿ, ಅದಕ್ಕೆ ಬಲವಂತದ ಚಂದಾ ವಸೂಲಿ ಮಾಡಿ, ದ್ವೇಷದ ವಾತಾವರಣ ಸೃಷ್ಟಿಯಾಗುವ ಹಾಗೆ ದಯವಿಟ್ಟು ಮಾಡಬೇಡಿ."

"ಶ್ರೀ. ಬಾಲಗಂಗಾಧರ ತಿಲಕರ ಕನಸು ನನಸು ಮಾಡಿ"

Sunday, March 01, 2009

ಸತ್ಯ ಹೇಳಿದ್ದಕ್ಕೆ ಈ ಶಿಕ್ಷೆ?...ಇದು ಕಾಂಗ್ರೆಸ್ ನೀತಿ...

ಬೆಂಗಳೂರು ದಿನಾಂಕ ೦೧-೦೩-೨೦೦೯: ಮಂಗಳೂರಿನ ಪಬ್ ಧಾಳಿಯ ತನಿಖೆಯ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ರೀಮತಿ ನಿರ್ಮಲಾ ವೆಂಕಟೇಶ್ ಅವರನ್ನು ಸತ್ಯ ಹೇಳಿದ್ದಕ್ಕಾಗಿ ಸದಸ್ಯ ಸ್ಥಾನದಿಂದ ಕಿತ್ತೊಗೆಯಲಾಗಿದೆ. ಇಷ್ಟಾದರೂ ಅವರು ತಮ್ಮ ತನಿಖಾ ವರದಿಯಲ್ಲಿ ಹೇಳಿದ್ದಾದರೂ ಏನು?. "ಪಬ್‍ನಲ್ಲಿ ಸೂಕ್ತ ಭದ್ರತೆ ಇರಲಿಲ್ಲ ಹಾಗೂ ಪಬ್ ನಡೆಸಲು ಸೂಕ್ತ ಅನುಮತಿ ಪತ್ರ ಇರಲಿಲ್ಲ " ಎನ್ನುವುದು.
ಅದು ಈಗಾಗಲೇ ಎಲ್ಲರಿಗೂ ಬಹಿರಂಗವಾಗಿ ತಿಳಿದಿದ್ದರೂ, ರೇಣುಕಾ ಚೌಧರಿ ಎಂಬ ಭ್ರಷ್ಟ ಮಹಿಳೆ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಶ್ರೀಮತಿ ನಿರ್ಮಲಾ ಅವರನ್ನು ಕಿತ್ತೊಗೆದಿದ್ದಾಳೆ. ಅವಳು ತನ್ನ ಸ್ಥಾನದ ದುರುಪಯೋಗ ಪಡಿಸಿಕೊಂಡು ಅಧಿಕಾರದ ಅಮಲಿನಿಂದ ನಿರ್ಮಲಾ ಅವರ ವಿರುದ್ದ ಸೇಡು ತೀರಿಸಿಕೊಂಡಿದ್ದಾಳೆ.ಇವರಂಥಹ ಜನರ ಮನಸ್ಸು ಯಾವ ರೀತಿ ಇರುತ್ತದೆ ಎಂದರೆ, ತಾನೂ ಹಾಳಾಗಿರುವುದಲ್ಲದೆ-ಜಗತ್ತನ್ನೂ ಹಾಳು ಮಾಡಬೇಕು ಎನ್ನುವುದು. ಅದೂ ಅಲ್ಲದೆ ಮಂಗಳೂರಿನಲ್ಲಿ ನಡೆದ ಒಂದು ಸಣ್ಣ ಘಟನೆಯನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್‍ನ ಎಲ್ಲ ನಾಯಕರೂ ಬಿ.ಜೆ.ಪಿ.ಯನ್ನು ತುಳಿಯಲು ಒಂದು ಅಸ್ತ್ರ ಸಿಕ್ಕಿತು ಎಂದು ಕೂಗಾಡಿದ್ದೇ ಕೂಗಾಡಿದ್ದು.
ಆದರೆ ಈ ಚೌಧರಿ ಎನ್ನುವ ಮಹಿಳೆ ಇನ್ನೂ ಸ್ವಲ್ಪ ಮುಂದೆ ಹೋಗಿ- ಮಂಗಳೂರಿಗರನ್ನು ತಾಲಿಬಾನಿಗರೆಂದು ಕರೆದು ತನ್ನ ದೇಶಕ್ಕೇ ಅವಮಾನ ಮಾಡಿದ್ದಾಳೆ. ಅಂದರೆ ಯಾವುದೇ ಸುಸಂಸ್ಕೃತ ಹಾಗೂ ಸಭ್ಯ ಮನೆತನದ ಮಹಿಳೆಯೂ ಪಬ್‍ಗೆ ಹೋಗಿ ಕುಡಿಯುವ ಅಭ್ಯಾಸ ನಮ್ಮ ದೇಶದಲ್ಲಿ ರೂಢಿಸಿಕೊಂಡಿಲ್ಲ. ಪಬ್‍ಗೆ ಹೋದರೆ, ಅದೂ ಪರ ಪುರುಷನ ಜೊತೆ ಹೋದರೆ ಆ ಮಹಿಳೆಯ ಸಂಸ್ಕೃತಿ ಪ್ರಶ್ನಾರ್ಹವಾದದ್ದೇ. ಈ ರೇಣುಕಾ ಚೌಧರಿಯಂತಹ ಮಹಿಳೆಯರು ಹಿಂದೆ ಮುಂದೆ ನೋಡದೆ ಎಲ್ಲರೂ ತಮ್ಮಂತೇ ಇರುತ್ತಾರೆಂದು ತಾವೇ ನಿರ್ಧರಿಸಿ ಬಾಯಿಗೆ ಬಂದಂತೆ ಮಾತಾಡುತ್ತಾರೆ.

Friday, February 06, 2009

ಸಚಿವೆ ರೇಣುಕಾ ಚೌಧರಿ ಮತ್ತು ’ವ್ಯಾ’ಲೆಂಟೈನ್ಸ್ ಡೇ

ಇವತ್ತಿನ DNA ದಿನಪತ್ರಿಕೆಯ ತಲೆಬರಹದಲ್ಲಿ ರೇಣುಕಾ ಚೌಧರಿ ಎನ್ನುವ ಒಬ್ಬ ಮಹಿಳೆಯ ಹೇಳಿಕೆಯನ್ನು ಈ ರೀತಿ ಪ್ರಕಟಿಸಲಾಗಿತ್ತು.
ಈ ಹೇಳಿಕೆಯನ್ನು ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರಿಗೆ ಹೇಳಿದ್ದು.
"He is not married. He doesn't know what to do. That's his problem. I might land where he is on Feb 14...and give him more than just roses".
ಇದರ ಒಳಾರ್ಥ ಏನು?. And give him more than just roses ಅಂದರೆ ಏನು?. ಅವಳು ಕ್ರಿಶ್ಚಿಯನ್ ಆಗಿ ಪರಿವರ್ತನೆ ಆದರೆ ಎಲ್ಲರೂ ಅದೇ ರೀತಿ ಆಗಬೇಕಿಲ್ಲವಲ್ಲ?. ಇಂತಹ ಹೇಳಿಕೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಎಂಥಹ ಭಾವನೆಗಳನ್ನು ಹುಟ್ಟು ಹಾಕುತ್ತವೆ ಎಂಬುದು ಈ ಮಹಿಳೆಗೆ ತಿಳಿದಿದೆಯೇ?. ಅಂದರೆ ವೇಶ್ಯಾವಾಟಿಕೆಯನ್ನು ಅವಳು ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ. ಒಬ್ಬ ಮಹಿಳೆ ಬಹಿರಂಗವಾಗಿ ಇಂತಹ ಹೇಳಿಕೆಯನ್ನು ಕೊಡುತ್ತಿದ್ದರೆ ವ್ಯಾಲೆಂಟೈನ್ಸ್ ಡೇ ಎಂಬ ವೇಶ್ಯಾವಾಟಿಕೆಯನ್ನು ಪ್ರೋತ್ಸಾಹಿಸುವ ಆಚರಣೆಗಳು ನಮ್ಮ ದೇಶದಲ್ಲಿ ಹೆಚ್ಚಾಗುತ್ತವೆ.

ವ್ಯಾಲೆಂಟೈನ್ಸ್ ಡೇ ಬೇಕೇ?

ಈ ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ವನ್ನು ನಮ್ಮ ದೇಶದಲ್ಲಿ ಆಚರಿಸುವ ಪ್ರಮೇಯವಿದೆಯೇ?. ಪಾಶ್ಚಾತ್ಯ ದೇಶಗಳಲ್ಲಿ ಪ್ರೀತಿ ಮಾಡಲೂ ಪುರುಸೊತ್ತು ಸಿಗದ ಕಾರಣ ಅವರು Father's Day, Mother's Day, Grand Father's Day, Grand mother's Day, Valentain's Day ಮುಂತಾದ ದಿನಗಳನ್ನು ಆಚರಿಸುತ್ತಾರೆ. ಅವರು ವರ್ಷಕ್ಕೆ ಒಂದೇ ದಿನ ಪ್ರೀತಿಸುವುದು. ಆದರೆ ವರ್ಷವಿಡೀ ಪ್ರೀತಿಸುವ ನಮಗೆ ಈ ಅಸಭ್ಯ ಸಂಸ್ಕೃತಿ ಬೇಕೆ?. ಇದು ನಮ್ಮ ದೇಶದಲ್ಲಿ ಕೇವಲ ಶೋಕಿಯ, ವೇಶ್ಯಾವಾಟಿಕೆಯನ್ನು ಪ್ರಚೋದಿಸುವ, ವ್ಯಭಿಚಾರವನ್ನು ಪ್ರಚೋದಿಸುವ, ಕಾಮುಕತೆಯನ್ನು ತೋರ್ಪಡಿಸುವ ಒಂದು ದಿನವಾಗಿದೆ.

ಈಗ ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಇದರಲ್ಲಿ ಎಲ್ಲಾ ಮಹಿಳೆಯರೂ, ಪುರುಷರೂ ಕೈಜೋಡಿಸಬೇಕಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗದಿದ್ದರೂ ಕನಿಷ್ಠ ಪಕ್ಷ ಗರಿಷ್ಠ ಮಟ್ಟದಲ್ಲಿ ಭಾಗಿಯಾಗಬೇಕಾಗಿದೆ. ಆದರೆ ಇದರಲ್ಲಿ ಯಾರನ್ನೂ ನಾವು ಬಲವಂತ ಮಾಡಲಾಗುವುದಿಲ್ಲ, ಏಕೆಂದರೆ ಇದು ಭಾರತ ಸ್ವಾಮೀ....ಎಲ್ಲರಿಗೂ ಇಲ್ಲಿ ಎನು ಮಾಡಲೂ ಸ್ವಾತಂತ್ರ್ಯವಿದೆ.

Tuesday, January 27, 2009

ಮಹಿಳಾ ಸಂಘಟನೆಗಳ ಸಮರ್ಥನೆ ಕಳವಳಕಾರಿ

ಬೆಂಗಳೂರು ಜನವರಿ ೨೭:ಮಂಗಳೂರಿನಲ್ಲಿ ಪಬ್‌ನಲ್ಲಿ ಕುಳಿತು ಬಿಯರ್ ಹೀರುತ್ತಿದ್ದ ಹುಡುಗಿಯರ ಮೇಲೆ ಕೆಲವರು ಹಲ್ಲೆ ಮಾಡಿರುವುದು ಖಂಡನೀಯವೇ ಆದರೂ ಕೆಲ ಮಹಿಳಾ ಸಂಘಟನೆಗಳು ಪರೋಕ್ಷವಾಗಿ ಹಾಗೂ ಧೈರ್ಯವಾಗಿ ಆ ಹುಡುಗಿಯರ ಪರವಾಗಿ ವಾದಿಸುತ್ತಿರುವುದು ನಮ್ಮ ದೇಶ ಯಾವ ಪಥದತ್ತ ಸಾಗುತ್ತಿದೆ ಎಂಬುದನ್ನು ಊಹಿಸಲೂ ಕಷ್ಟ ಸಾಧ್ಯವಾಗುತ್ತಿದೆ.

ಮಹಿಳೆಯರಿಗೆ ಸ್ವಾತಂತ್ರ್ಯ ಅತಿಯಾಯಿತೆ?

ಈ ಪ್ರಶ್ನೆಯನ್ನು ಭಾರತದ ಪ್ರತೀ ಮಹಿಳೆಯೂ ತನ್ನ ಅಂತರಾತ್ಮವನ್ನು ಕೇಳಿಕೊಳ್ಳಬೇಕಾಗಿದೆ. ಏಕೆಂದರೆ ಮಹಿಳೆಗೆ ದುಡಿಯುವ ಹಕ್ಕು, ಸಮಾಜದ ಎಲ್ಲ ಸ್ತರಗಳಲ್ಲಿಯೂ ಪುರುಷನ ಸಮಾನವಾಗಿ ಅವರನ್ನು ನೋಡುತ್ತಿರುವುದು ಇಂದು ಸಮಾಜದ ವಿಘಟನೆಗೆ ಕಾರಣವಾಗುತ್ತಿರುವುದು ಸುಳ್ಳಲ್ಲ. ಏಕೆಂದರೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಸಹಜವಾಗಿ ಮನಸ್ತಾಪಗಳು ಬರುತ್ತವೆ. ಇವು "ಅಹಂ" ರೂಪವಾಗಿ ಪರಿವರ್ತನೆಯಾದಾಗ ಸಹಜವಾಗಿ ಮನೆಯಲ್ಲಿ ಕಿರಿಕಿರಿ, ಜಗಳ ಶುರುವಾಗುತ್ತದೆ. ಅಂದರೆ ಮಹಿಳೆ ಇವತ್ತು ದುಡಿಯುತ್ತಿರುವುದರಿಂದ ಸಹಜವಾಗಿ ತಾನು ಗಂಡಸಿನ ಅವಲಂಬನೆಯಿಲ್ಲದೆ ಬದುಕಬಲ್ಲೆನೆಂಬ ಒಂಥರಾ ಭಂಡ ಧೈರ್ಯ (ಒಂಥರಾ ಒಳ್ಳೆಯದೇ..ಕಷ್ಟಕಾಲದಲ್ಲಿ ಕೆಲ ಹೆಂಗಸರಿಗೆ ಇದು ಅನಿವಾರ್ಯ) ಮುಂದೆ ಅಹಂ ರೂಪ ತಳೆದಾಗ ಗಂಡ ಹೆಂಡಿರ ಮಧ್ಯೆ ಜಗಳ, ತಕರಾರುಗಳು ಕೋರ್ಟ್ ಮೆಟ್ಟಲು ಹತ್ತಿ ಮುಂದೆ ಡೈವೋರ್ಸ್ ಎಂಬುದರಲ್ಲಿ ಪರ್ಯವಸಾನವಾಗುತ್ತದೆ.

ಮಹಿಳಾ ಸಂಘಟನೆಗಳು ಮತ್ತು ಸ್ವಾತಂತ್ರ್ಯ

ಮಂಗಳೂರಿನಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡಾಗ, ಈಗಿನ ಕಾಲದಲ್ಲಿ ಮಹಿಳೆಯರು ಸಿಗರೇಟ್ ಸೇದುವುದು, ಪಬ್‍ನಲ್ಲಿ ಕುಳಿತು ಬಿಯರ್, ವಿಸ್ಕಿ ಹೀರುವುದು, ಬಾರ್‍ಗಳಲ್ಲಿ ಅರೆನಗ್ನವಾಗಿ ನೃತ್ಯ ಮಾಡುವುದು ಸಾಮಾನ್ಯ ವಿಷಯವಾಗಿದೆ ಹಾಗೂ ಸಮಾಜದಲ್ಲಿ ಇಂದು ನಡೆಯುತ್ತಿರುವ ಕ್ರೌರ್ಯ, ಅತ್ಯಾಚಾರ, ಕೊಲೆ, ಸುಲಿಗೆಗಳು ಮುಂತಾದ ಕೃತ್ಯಗಳಿಗೆ ಇದೂ ಒಂದು ಪರೋಕ್ಷ ಕಾರಣ. ಹಲ್ಲೆಯಿಂದ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ, ಅಂದರೆ ಜಾಗತೀಕರಣ ಹಾಗೂ ಆಧುನಿಕ (ಪಾಶ್ಚಾತ್ಯ)ಸಂಸ್ಕೃತಿ ಮಹಿಳೆಯರ ಮೇಲೆ ಬೀರುತ್ತಿರುವ ಪರಿಣಾಮ ಕಳವಳಕಾರಿಯಾಗಿದೆ.

ರಾಜಕೀಯ ಪಕ್ಷಗಳು ಮತ್ತು ಹಿಂದುತ್ವ

ಜೆ.ಡಿ.ಎಸ್. ಪಕ್ಷದ ಕುಮಾರಸ್ವಾಮಿಯವರು ನೆನ್ನೆ ನಡೆದ ಮಂಗಳೂರಿನ ಘಟನೆಯ ಬಗ್ಗೆ ಮಾತನಾಡುತ್ತಾ "ಬಿ.ಜೆ.ಪಿ.ಯವರು ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಆಡುತ್ತಾರೆ." ಎಂದು ಹೇಳಿದರು.
"ಸ್ವಾಮೀ...ತಾವು ಯಾವ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದೀರಾ ಎಂದು ಹೇಳುತ್ತೀರಾ?. ನಾವೇನು ತಮ್ಮನ್ನು ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಳ್ಳಲು ತಡೆದಿಲ್ಲವಲ್ಲಾ?".

ರಾಜಕೀಯ ಪಕ್ಷಗಳು ಮತ್ತು ಮಹಿಳೆ:
ರೇಣುಕಾ ಚೌಧರಿ ಎಂಬ ಕಾಂಗ್ರೆಸ್ ಸಂಸದೆ, ಮಂಗಳೂರಿನ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು, ಆಕೆಗೆ ಮಹಿಳೆಯರ ಬಗೆಗೆ ಇರುವ ಕಾಳಜಿಯನ್ನು ತೋರಿಸುತ್ತದೋ ಅಥವಾ ಮಹಿಳೆಯರನ್ನು ಪರೋಕ್ಷವಾಗಿ ಬಾರ್ ಹಾಗೂ ಪಬ್‍ಗಳಲ್ಲಿ ಬಿಯರ್ ಕುಡಿಯಿರೆಂದು ಹೇಳುತ್ತಿದ್ದಾಳೋ ಒಂದೂ ಅರ್ಥವಾಗುವುದಿಲ್ಲ. ಆದರೆ ಇಂಥಹಾ ಒಂದು ಘಟನೆಗಳು ಮರ್ಯಾದಸ್ತ ಮಹಿಳೆಯರ ಜೀವನದ ಮೇಲೆ ಕರಿಛಾಯೆಯನ್ನು ಬೀರುವುದಂತೂ ಸಹಜ. ಏಕೆಂದರೆ ಕೆಲ ಮಹಿಳೆಯರು ಇವತ್ತು ಸಿಗರೇಟ್, ಮದ್ಯ, ಮಾದಕ ಪದಾರ್ಥಗಳ ದಾಸರಾಗಿ, ಹೈಟೆಕ್ ವೇಶ್ಯಾವೃತ್ತಿಗೂ ಇಳಿಯುತ್ತಿರುವುದೂ ಕೂಡಾ ಎಲ್ಲಾ ಮಹಿಳೆಯರು ಅದೇ ಥರಾ ಇರುತ್ತಾರೆಂಬ ಶಂಕೆ ಕೆಲ ಸಮಾಜಘಾತುಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಹಾಯಕಾರಿಯಾಗಿದೆ.

ಆದರೆ ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಎಚ್ಚರದಿಂದಿದ್ದಷ್ಟು ಕ್ಷೇಮ. ಏಕೆಂದರೆ ತಮ್ಮ ಮಕ್ಕಳಿಗೆ ಶಾಲೆಗೆ ಹೋಗುವಾಗಲೇ ಕೈಯಲ್ಲೊಂದು ಮೊಬೈಲ್, ಪಾಕೆಟ್ ಮನಿ ಮುಂತಾದುವುಗಳನ್ನು ಕೊಟ್ಟು ಓದಿಗಿಂತ ಇತರ ಚಟುವಟಿಕೆಗಳಿಗೇ ಹೆಚ್ಚು ಮಹತ್ವ ಬರುವಂತೆ ಮಾಡುತ್ತಾರೆ. ಇಂದಿನ ಹೆಣ್ಮಕ್ಕಳು ತಂದೆ ತಾಯಂದಿರ ಹಿಡಿತದಿಂದ ಸಡಿಲವಾಗುತ್ತಿರುವುದು ನಮ್ಮ ದೇಶದಲ್ಲಿ ಪಾಶ್ಚಾತ್ಯ ದೇಶಗಳಂತೆ ಡೈವೋರ್ಸ್ ಜಾಸ್ತಿಯಾಗಲು ಪರೋಕ್ಷವಾಗಿ ಕಾರಣವಾಗುತ್ತಿದೆ.

ನಾನು ಮಂಗಳೂರಿನ ಘಟನೆಯನ್ನು ಸಮರ್ಥಿಸುತ್ತಿಲ್ಲ. ಆದರೆ ಸಮಾಜದ ವಿಘಟನೆಯನ್ನು ತಡೆಯಲು ನಾವೆಲ್ಲ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ.ಇದನ್ನು ಪ್ರತಿಯೊಬ್ಬ ತಂದೆ ತಾಯಿ ಅರ್ಥ ಮಾಡಿಕೊಂಡರೆ...ಬಹುಶಃ ಸುಧಾರಣೆಯಾದೀತೇನೋ...