Sunday, September 07, 2008

ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು

ಬೆಂಗಳೂರು ಸೆಪ್ಟೆಂಬರ್ ೦೭:
ಒಂದು ದಿನ ಭಾನುವಾರ ಹೀಗೆ...ಒಂದು ಸಣ್ಣ ಯಾತ್ರೆ ಹೊರಟಿದ್ದೆವು. ಆಗ ನನ್ನ ಮೊಬೈಲ್ ಕ್ಯಾಮೆರಾದ ಕಣ್ಣಿಗೆ ಬಿದ್ದದ್ದು ಬೆಂಗಳೂರಿನ ಕೆಂಪಾಂಬುಧಿ ಕೆರೆಯ ಸನಿಹವಿರುವ ಈ ಡಾ.ರಾಜ್‌ಕುಮಾರ್ ಉದ್ಯ್ನಾನವನ. ಇಲ್ಲಿ ನೀವು ಬಂದು ಸ್ವಲ್ಪ ಹೊತ್ತು ವಿರಮಿಸಿದರೆ ಒಂದು ಥರಾ ಮಜಾ ಎನಿಸುತ್ತದೆ. ಆದರೆ ಇದು ಇನ್ನೂ ಪ್ರಾರಂಭವಾಗಿ ವರ್ಷವೂ ಕಳೆದಿಲ್ಲ. ಇಲ್ಲಿ ನಿಮಗೆ ಡೈನೋಸಾರ್ ಪ್ರತಿರೂಪ, ಮಮ್ಮಿಯ ಪ್ರತಿರೂಪ ಆಕರ್ಷಿಸುವ ಅಂಶಗಳು. ಅಲ್ಲದೆ ಇಲ್ಲಿ ಟ್ರೈನ್ ಕೂಡಾ ಇದೆ. ಅಲ್ಲದೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳು ಕವಿಗಳ ಪ್ರತಿಮೆಗಳು ಅವರ ವಿಅವರಗಳ ಸಹಿತ ನಿಮ್ಮ ಗಮನ ಸೆಳೆಯುತ್ತದೆ. ಅಲ್ಲದೆ ಸನಿಹದಲ್ಲಿಯೇ ಚಾಮರಾಜಪೇಟೆಯ ರುದ್ರಭೂಮಿ ಕೂಡಾ ಇರುವುದು ರಾತ್ರಿ ವೇಳೆಯಲ್ಲಿ ಕೆಲವರಿಗೆ ಇಲ್ಲಿ ಬರಲು ಭಯ ತರಿಸಬಹುದು. ಇದು ಶ್ರೀನಗರ ಹಾಗೂ ಹನುಮಂತನಗರದ ಮಧ್ಯಭಾಗದಲ್ಲಿ ಇದೆ. ಒಂದು ಸಲ ಭೇಟಿ ನೀಡಿ ಮಜಾ ಅನುಭವಿಸಿ.








1 comment:

Anonymous said...

ವಾಹ್!!!!!!!!!!!!!!! ಅದ್ಭುತ ಚಿತ್ರಗಳು....ಖಂಡಿತಾ ಒಮ್ಮೆ ನೋಡಲೇಬೇಕಾದ ಪಾರ್ಕ್........