Sunday, February 07, 2010

ಕರ್ನಾಟಕದ ಭಯೋತ್ಪಾದಕರು

ಕರ್ನಾಟಕದ ನೆಲದಲ್ಲಿ ಭಯೋತ್ಪಾದಕರ ಹಾವಳಿ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದಕ್ಕೆ ಬೆಳಗಾವಿಯಲ್ಲಿ ನಡೆದ ಭಯೋತ್ಪಾದಕ ಸಂಘಟನೆಯಾದ ಎಂ.ಇ.ಎಸ್. ಎಂಬ ತಿಕ್ಕಲು ಸಂಘಟನೆ ನಡೆಸಿದ ಸೀಮಾ ಪರಿಷತ್ ಎನ್ನುವ ಕಾರ್ಯಕ್ರಮವೇ ಸಾಕ್ಷಿ.
ಮುಂಬೈನಲ್ಲಿ ರೌಡಿಯಿಸಂ ಹುಟ್ಟಲು ಕಾರಣವಾದ ಶಿವಸೇನಾ ಎಂಬ ಸಂಘಟನೆಯೇ ಇದಕ್ಕೆ ಕಾರಣ. ಪ್ರಾದೇಶಿಕತೆಯ ಹೆಸರಿನಲ್ಲಿ ದೇಶದೆಲ್ಲೆಡೆ ಭಯೋತ್ಪಾದಕತೆಯನ್ನು ಹಬ್ಬಿಸುತ್ತಿರುವ ಈ ಸಂಘಟನೆಯನ್ನು ಅಲ್ಲಿನ ಕಾಂಗ್ರೆಸ್ ಸರಕಾರ ಯಾಕೆ ನಿಷೇಧಿಸುತ್ತಿಲ್ಲ?. ಮುಂಬೈ ಕೇವಲ ಮಹಾರಾಷ್ಟ್ರಿಗರಿಗೆ ಮಾತ್ರ ಎಂಬ ತಿಕ್ಕಲು ವಾದವನ್ನು ಸಮರ್ಥಿಸಿಕೊಳ್ಳುತ್ತಿರುವ ಈ ಸಂಘಟನೆ ಶಿವಾಜಿಯ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಉತ್ತರಭಾರತೀಯರನ್ನು ಮುಂಬೈನಿಂದ ಹೊರಗಟ್ಟುವಂತೆ ಕರೆ ನೀಡಿದ ಈ ಭಯೋತ್ಪಾದಕ ಸಂಘಟನೆಗೂ ಕಾಶ್ಮೀರದಲ್ಲಿ ಭಯೋತ್ಪಾದಕತೆಯನ್ನು ಸೃಷ್ಟಿಸುತ್ತಿರುವ ಮುಸ್ಲಿಂ ಭಯೋತ್ಪಾದಕರಿಗೂ ಯಾವ ವ್ಯತ್ಯಾಸವೂ ಇಲ್ಲ. ಏಕೆಂದರೆ ಈ ಎರಡೂ ಸಂಘಟನೆಗಳು ದೇಶವನ್ನು ಛಿದ್ರಮಾಡುವತ್ತ ತಮ್ಮ ಗುರಿ ಹೊಂದಿವೆ.
ಅದರಲ್ಲೂ ಬೆಳಗಾವಿಯ ಎಂ.ಇ.ಎಸ್. ಎಂಬ ಭಯೋತ್ಪಾದಕ ಸಂಘಟನೆಯಂತೂ ಕರ್ನಾಟಕದ ಅನ್ನ ತಿಂದು, ಇಲ್ಲಿನ ನೀರು ಕುಡಿದು, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹುಂಬ ವಾದವನ್ನು ಮಂಡಿಸಿ ತನ್ನ ದೇಶದ್ರೋಹಿತನವನ್ನು ತೋರಿಸಿದೆ. ಈ ಸೀಮಾ ಪರಿಷತ್ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು ನಮ್ಮ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತನ್ನ ಕನ್ನಡದ್ರೋಹಿತನವನ್ನು, ಕರ್ನಾಟಕ ವಿರೋಧಿ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕರ್ನಾಟಕ ದ್ರೋಹಿ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅಲ್ಲಿನ ಮರಾಠಿ ಪುಂಡರು ಥಳಿಸಿದಾಗಲೂ ತುಟಿ ಪಿಟಿಕ್ ಎನ್ನದ ಈ ಮುಖ್ಯಮಂತ್ರಿಗಳು ಮರಾಠಿ ಪುಂಡರಿಗೆ ಹೆದರಿ ಬಚ್ಚಿಟ್ಟುಕೊಂಡದ್ದು ನಮ್ಮ ದುರ್ದೈವ.
ಇದನ್ನು ಹೀಗೆಯೇ ಬಿಟ್ಟರೆ ಮುಂದೆ ಅಖಂಡ ಕರ್ನಾಟಕವು ಛಿದ್ರ ಛಿದ್ರವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಕರ್ನಾಟಕದ ಅತ್ಯಂತ ಬಲಹೀನ, ದುರ್ಬಲ ಮುಖ್ಯಮಂತ್ರಿಗೆ ಈ ಬಗ್ಗೆ ಕಾಳಜಿಯಿಲ್ಲದಿರುವುದು ಕರ್ನಾಟಕದ ದುರ್ದೈವ. ಕೇವಲ ಗಣಿಧಣಿಗಳ ಪಾದ ಪೂಜೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿರುವ ಯಡಿಯೂರಪ್ಪನವರಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲದೆ ಕೇವಲ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲೇ ಕಾಲ ಹರಣಮಾಡುತ್ತಿರುವುದು ಸೋಜಿಗ.
ಈ ಮರಾಠಿ ಭಯೋತ್ಪಾದಕರನ್ನ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕದಿದ್ದಲ್ಲಿ, ಈವರೆಗೆ ದಕ್ಷಿಣದಲ್ಲಿ ಇರದ ಭಯೋತ್ಪಾದಕತೆ ತಲೆ ಎತ್ತುವುದರಲ್ಲಿ ಸಂಶಯವಿಲ್ಲ.

2 comments:

prasca said...

ಕನ್ನಡದ ಹೇಸರಿನಲ್ಲಿ ನಾವು ಪುಂಡಾಟಿಕೆ ನಡೆಸುವುದು ಸರಿಯೆಂದಾದರೆ ಅವರು ಮಾಡುವುದು ತಪ್ಪೆ? ನಮಗೊಂದು ನ್ಯಾಯ ಅವರಿಗೊಂದು ಹೇಗೆ ಸರಿ?

ಗುರು [Guru] said...

ನಾನು ಕನ್ನಡದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವುದನ್ನು ವಿರೋಧಿಸುತ್ತೇನೆ. ಹಾಗೆಯೇ ನಾಮರ್ದರ ತರಹ ಈ ಹೇಳಿಕೆ ಕೊಡುವುದನ್ನೂ ವಿರೋಧಿಸುತ್ತೇನೆ. ಯಾಕೆಂದರೆ ಕನ್ನಡಿಗರು ಪುಂಡಾಟಿಕೆ ನಡೆಸಿದರೂ ಅದು ಕರ್ನಾಟಕದಲ್ಲಿ ಮಾತ್ರ. ಆದರೆ ಅವರು ಮಹಾರಾಷ್ಟ್ರದಿಂದ ಬಂದು ಇಲ್ಲಿ ಪುಂಡಾಟಿಕೆ ನಡೆಸುತ್ತಿದ್ದಾರೆ. ಅದನ್ನು ನಾನು ವಿರೋಧಿಸಿದೆ ಅಷ್ಟೆ. ಈ ಮರಾಠಿ ಪುಂಡಾಟಿಕೆಯನ್ನು ಸಮರ್ಥಿಸುವವರು ಶಿಖಂಡಿಗಳೇ ಸರಿ. ಯಾಕೆಂದರೆ ಇಲ್ಲಿಯ ಅನ್ನ ತಿಂದು ಇಲ್ಲಿಗೇ ದ್ರೋಹ ಬಗೆವ ಅನೇಕರಿಂದ ಇಂದು ಕರ್ನಾಟಕ ಛಿದ್ರವಾಗುವ ಪರಿಸ್ಥಿತಿಯಲ್ಲಿದೆ. ಇದನ್ನು ತಡೆಯದಿದ್ದಲ್ಲಿ ಕರ್ನಾಟಕ ಇನ್ನೊಂದು ಕಾಶ್ಮೀರವಗುವುದರಲ್ಲಿ ಸಂಶಯವಿಲ್ಲ. ಕಾಶ್ಮೀರದ ಪಂಡಿತರಂತೆ ಕನ್ನಡಿಗರು ಕರ್ನಾಟಕದಲ್ಲಿ ಅನಾಥರಾಗುವ ದಿನ ದೂರವಿಲ್ಲ.