Tuesday, April 08, 2008

ಕನ್ನಡಿಗರೇ ಯೋಚಿಸಿ ಮತದಾನ ಮಾಡಿ

  1. ಬೆಂಗಳೂರು ಎಪ್ರಿಲ್ ೧೧:
    ಮತದಾನದ ದಿನಾಂಕ ಹತ್ತಿರ ಬರುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ನಡುಕ ಶುರುವಾಗಿದೆ. ಮತದಾರರೇ ಎಚ್ಚರ, ಕಳ್ಳರಿದ್ದಾರೆ, ದರೋಡೆಕೋರರಿದ್ದಾರೆ, ರೌಡಿಗಳಿದ್ದಾರೆ, ರಿಯಲ್ ಎಸ್ಟೇಟ್ ಉದ್ಯಮಿಗಳಿದ್ದಾರೆ, ಅನಕ್ಷರಸ್ಥರಿದ್ದಾರೆ...ಇವರನ್ನೆಲ್ಲಾ ತಿರಸ್ಕರಿಸಿ.
    ಅಭ್ಯರ್ಥಿಯ ಕನಿಷ್ಠ ವಿದ್ಯಾಭ್ಯಾಸ ಪದವಿ ಆಗಿರಬೇಕು.
    ಕನ್ನಡಿಗನಾಗಿರಬೇಕು, ಕನ್ನಡ ಸ್ಪಷ್ಠವಾಗಿ ಮಾತಾಡುವವನಾಗಿರಬೇಕು.
    ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಅಭಿಮಾನ ಹೊಂದಿರಬೇಕು.
    ರೌಡಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿರಬಾರದು.
    ಅವನ ಅಸ್ತಿ ಒಬ್ಬ ಸಾಮನ್ಯ ಮಧ್ಯಮ ಪ್ರಜೆಯ ಅಸ್ತಿಗೆ ಸಮನಾಗಿರಬೇಕು.
    ಕನ್ನಡದ ಪ್ರಶ್ನೆ, ನಾಡಿನ ಉಳಿವಿನ ಪ್ರಶ್ನೆ ಬಂದಾಗ ಕರ್ನಾಟಕದ ಪರ ದನಿ ಎತ್ತುವವನಾಗಿರಬೇಕು.
    ಹಿಂದೆ ಯಾವುದೇ ಸರಕಾರಿ ಹುದ್ದೆಯಲ್ಲಿದ್ದು, ಈಗ ರಾಜಕೀಯ ಪಕ್ಷ ಸೇರಿ ಸ್ಪರ್ಧಿಸುವವರನ್ನು ಮೊದಲು ಸೋಲಿಸಿ, ಏಕೆಂದರೆ ಅವರೇ ಮುಂದಿನ ದೊಡ್ಡ ಭ್ರಷ್ಟಾಚಾರಿಗಳು.
    ಕಾವೇರಿ, ಹೊಗೆನಕಲ್, ಬೆಳಗಾವಿ ವಿಷಯ ಬಂದಾಗ ತನ್ನ ಸ್ಥಾನ ಹೋದರೂ ನಾಡಿನ ಜನತೆ ಪರ ಇರಬೇಕು.
    ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾವುದೇ ಪಕ್ಷಕ್ಕೆ ಸೇರಿರಲಿ, ಅವನು ಈ ಮೇಲೆ ಹೇಳಿದ ಗುಣ ಹೊಂದಿಲ್ಲವಾದಲ್ಲಿ, ನಿಮ್ಮ ಮತವನ್ನು ಪಕ್ಷೇತರ ಅಭ್ಯರ್ಥಿಗೆ ನೀಡಿ.
    ವಿಧಾನ ಸಭೆಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯನ್ನು ಚುನಾಯಿಸಬೇಡಿ. ಅವರಿಂದ ನಮ್ಮ ನಾಡಿನ ಹಿತ ಕಾಯಲು ಸಾಧ್ಯವಿಲ್ಲ.
    ಹೊಗೇನಕಲ್,ಕಾವೇರಿ, ಬೆಳಗಾವಿ ವಿಷಯದಲ್ಲಿ ಈ ಹಿಂದೆ ತಟಸ್ಥವಾಗಿದ್ದವರನ್ನು ಈ ಬಾರಿ ದಯವಿಟ್ಟು ಚುನಾಯಿಸಬೇಡಿ.
    "ಕನ್ನಡಿಗರೇ ಎದ್ದೇಳಿ..ನಿಮ್ಮ ಸ್ವಾಭಿಮಾನದ ನಾಡು ಕಟ್ಟಲು ತಯಾರಾಗಿ"
    "ಜೈ ಭುವನೇಶ್ವರಿ.....ಜೈ ಕರ್ನಾಟಕ ಮಾತೆ"

No comments: