Saturday, May 10, 2008

ಮಂದ ಬುದ್ದಿಯ ಕರ್ನಾಟಕದ ಮತದಾರ!!!!!!!!!!

ಬೆಂಗಳೂರು ಮೇ ೧೦: ಅರೆರೇ...ನಮ್ಮ ಕರ್ನಾಟಕದ ಮಂದ ಬುದ್ದಿಯ ಮತದಾರರಿಗೆ ಬಹುಪರಾಕ್ ....ಮೊದಲ ಹಂತದ ಮತದಾನ ಮುಗಿದಿದೆ. ಆದರೆ ಕೇವಲ ಶೇಕಡಾ ೫೯ರಷ್ಟು ಮಾತ್ರ ಮತದಾನವಾಗಿದೆ. ಇದು ಖಂಡಿತಾ ತುಂಬಾ ಗಂಭೀರ ವಿಷಯ.
ಪಕ್ಕದ ತಮಿಳುನಾಡು, ಕೇರಳದ ಮಂದಿಗೆ ಇರುವ ಕನಿಷ್ಟ ಜ್ನಾನವೂ ನಮ್ಮ ಕನ್ನಡಿಗರಿಗಿಲ್ಲದಿರುವುದು ನಮ್ಮ ನಾಡಿನ ದೌರ್ಭಾಗ್ಯ. ಇದರಿಂದಲೇ ನಾವು ಕರ್ನಾಟಕದಲ್ಲಿ ಇರುವ ವಿದ್ಯಾವಂತರನ್ನು, ಅಂದರೆ ಕರ್ನಾಟಕದಲ್ಲಿ ವಿದ್ಯಾವಂತರ ಕೊರತೆ ಕಾಣಬಹುದು. ಖಂಡಿತಾ ನಮ್ಮ ರಾಜ್ಯ ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದೆ. ದಕ್ಷಿಣ ಭಾರತದಲ್ಲೇ ಶಿಕ್ಷಣದಲ್ಲಿ ಅತೀ ಹಿಂದುಳಿದಿರುವ ರಾಜ್ಯವಾಗಿದೆ. ಭಾರತ ಸರಕಾರ ಖಂಡಿತಾ ಸರ್ವಶಿಕ್ಷಣ ಅಭಿಯಾನವನ್ನು ಕರ್ನಾಟಕದಲ್ಲಿ ತುಂಬಾ ಕಟ್ಟುನಿಟ್ಟಿನಿಂದ ಜಾರಿಗೊಳಿಸಿ, ಎಲ್ಲರಿಗೂ ಶಿಕ್ಷಣ ಕಡ್ಡಾಯ ಮಾಡಬೇಕಾಗಿದೆ( For mentally metured and Educated who does'nt vote).
ಈ ಬಾರಿ ಕೂಡಾ ಕಿಚಡಿ ಸರಕಾರವೇ ಗತಿ. ಏಕೆಂದರೆ ಕೇವಲ ಶೇಕಡಾ ೮೦ ಮತದಾನವಾದರೆ ಮಾತ್ರ ನಾವು ಒಂದು ಪಕ್ಷದ ಸರಕಾರವನ್ನು ನಿರೀಕ್ಷಿಸಬಹುದು. ಆದರೆ ಈಗ ಮೊದಲ ಹಂತದ ಚುನಾವಣೆ ಮುಗಿದಿರುವುದರಿಂದ ಇನ್ನು ಮತ್ತೆ ರಾಷ್ಟ್ರಪತಿ ಆಡಳಿತದ ಕರಿನೆರಳು ಮತ್ತೆ ನಮ್ಮ ಮೇಲೆ ತೂಗುತ್ತಿದೆ. ಖಂಡಿತಾ ಈ ಬಾರಿ ಕೂಡಾ ಕಿಚಡಿ ಸರಕಾರ ಬರಲಿದೆ. ಇದು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರ...ಮತ್ತೆ ಕಿಚಡಿ...ಮತ್ತೆ ಜಗಳ...ಮತ್ತೆ ಸರಕಾರ ರದ್ದು..ಮತ್ತೆ ಮೈತ್ರಿ...ಮತ್ತೆ ಜಗಳ...ಮತ್ತೆ ರಾಷ್ಟ್ರಪತಿ ಆಡಳಿತ...ಮತ್ತೆ ಮರು ಮೈತ್ರಿ.......ಇದು ನಮ್ಮ ಕರ್ನಾಟಕದ ಗೋಳಾಗಲಿದೆ. ಈ ಬಾರಿ ಮತ್ತೆ ಕಿಚಡಿ ಸರಕಾರ ಬಂದರೆ....ಮತ್ತೆ ಐದು ವರ್ಷ ರಾಷ್ಟ್ರಪತಿ ಆಡಳಿತ ಜಾರಿಗೆ ಬರಬೇಕು. ಇಲ್ಲದಿದ್ದಲ್ಲಿ ಮಿಲಿಟರಿ ಆಡಳಿತವಾದರೂ ಪರವಾಗಿಲ್ಲ. ನಮ್ಮ ಮಂದಬುದ್ದಿಯ ಜನಕ್ಕೆ ಯಾವುದಾದರೆ ಏನಂತೆ?. ಈಗ ಕರ್ನಾಟಕದ ಭವಿಷ್ಯ ಕೇವಲ ಎರಡನೇ ಹಾಗೂ ಮೂರನೇ ಹಂತದ ಚುನಾವಣೆಯ ಮತದಾರನನ್ನು ಅವಲಂಬಿಸಿದೆ. ಅವರೂ ಕೈಕೊಟ್ಟಲ್ಲಿ ಕರ್ನಾಟಕದ ಭವಿಷ್ಯ ಅಧೋಗತಿ......

No comments: