Monday, December 22, 2008

ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮ








ಬೆಂಗಳೂರು ದಶಂಬರ ೨೨ ದಶಂಬರ ಇಪ್ಪತ್ತೊಂದನೇ ದಿನಾಂಕದಂದು ಬೆಂಗಳೂರಿನ ಜಯನಗರದಲ್ಲಿರುವ, ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಪಕ್ಕದಲ್ಲೇ ಇರುವ ಮಂಗಳಾ ಸಭಾಂಗಣದಲ್ಲಿ ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಸಾವಿರದ ಒಂಭೈನೂರ ಐವತ್ತೊಂಭತ್ತನೇ ಇಸವಿಯಲ್ಲಿ ಪ್ರಾರಂಭವಾದ ಈ ಸಂಘ ಯಶಸ್ವಿಯಾಗಿ ತನ್ನ ಐವತ್ತು ವಸಂತಗಳನ್ನು ಪೂರೈಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಾರಂಭವಾದ ಈ ಸಮಾರಂಭ,ನಂತರ ದಕ್ಷಿಣ ಕನ್ನಡದ ಐವರು ಸಾಧಕರಿಗೆ "ಕರಾವಳಿ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
೧. ಪ್ರೊ. ಯು.ಆರ್. ರಾವ್ ವಿಜ್ಞಾನ ಕ್ಶೇತ್ರ
೨. ಶ್ರೀ ಅನಂತ ಕೃಷ್ಣ ಬ್ಯಾಂಕಿಂಗ್ ಕ್ಷೇತ್ರ
೩. ಶ್ರೀ ಕೈಯಾರ ಕಿಂಞ್‌ಣ್ಣ ರೈ ಗಡಿನಾಡ ಕನ್ನಡಿಗ
೪. ಶ್ರೀ ವಿ.ಮನೋಹರ್ ಸಂಗೀತ ಕ್ಷೇತ್ರ
೫. ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್ ಸಾಹಿತ್ಯ ಕ್ಷೇತ್ರ

ರಾಘವೇದ್ರ ಕಾಂಚನ್‌ರ ನಿರೂಪಣೆಯೊಂದಿಗೆ ಪ್ರಾರಂಭವಾದ ಈ ಸಮಾರಂಭ, ನಂತರ ಶ್ರೀ ಕೆ. ಎನ್.ಅಡಿಗರು ಸಂಘದ ಸಿಂಹಾವಲೋಕನ ಮಾಡಿ ಸಂಘದ ಪ್ರಾರಂಭದಿಂದ ಹಿಡಿದು ಈ ವರೆಗಿನ ನಡೆದು ಬಂದ ದಾರಿಯನ್ನು ವಿವರಿಸಿದರು. ಈ ಸಮಾರಂಭದ ರಂಗಸ್ಥಳದಲ್ಲಿನ ಮನೋರಂಜನಾ ಕಾರ್ಯಕ್ರಮಗಳನ್ನು ಶ್ರೀ ವಿ. ಮನೋಹರ್ ಅವರು ಬಹಳ ದಕ್ಷತೆಯಿಂದ ಮಾಡಿದರು. ಪ್ರಾರಂಭದಲ್ಲಿ ಭರತನಾಟ್ಯ ಮತ್ತು ಶ್ರೀಮತಿ ಸುಪ್ರಿಯಾ ಆಚಾರ್ ಅವರು "ಯಾವ ಮೋಹನ ಮುರಳಿ ಕರೆಯಿತೋ" ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಅಲ್ಲದೆ ಶ್ರೀ ಗುರುಕಿರಣ್‌ ಅವರು ಕೂಡಾ ಒಂದು ಘಳಿಗೆ ಬಂದು ರಂಘದಲ್ಲಿ ಎರಡು ಹಾಡು ಹಾಡಿ ರಂಜಿಸಿದರು. ವಿ.ಮನೋಹರ್ ಅವರೂ ಕೂಡಾ ತಾವೇನು ಕಡಿಮೆಯಿಲ್ಲ ಎಂಬಂತೆ ಒಂದು ಹಾಡೂ ಹಾಡಿದರು. ಅಲ್ಲದೆ "ಡೆನ್ನ ಡೆನ್ನ ಡೆನ್ನಾನ" ತುಳು ಹಾಡು ಹಾಗೂ "ಕನ್ನಡವೇ ನಿತ್ಯ...ಕನ್ನಡವೇ ಸತ್ಯ" ಹಾಡಿಗೆ ಮಾಡಿದ ನೃತ್ಯ ಮನಮೋಹಕವಾಗಿತ್ತು.
ಆದರೆ ಇಡೀ ಸಮಾರಂಭದಲ್ಲಿನ ಕಪ್ಪು ಚುಕ್ಕೆ ಎಂದರೆ....ದಕ್ಷಿಣ ಕನ್ನಡದ ತೆಂಕು ತಿಟ್ಟಿನ ಯಕ್ಷಗಾನ ವೇಷಕ್ಕೆ ಬದಲಾಗಿ ಉತ್ತರ ಕನ್ನಡದ ಯಕ್ಷಗಾನ ವೇಷಧಾರಿಗಳನ್ನು ಕುಣಿಸಿ, ಯಕ್ಷಗಾನದ ಬಗ್ಗೆ ಇಲ್ಲಿನ ದಕ್ಷಿಣ ಕನ್ನಡಿಗರಿಗಿರುವ ಅಜ್ಞಾನವನ್ನು ತೋರ್ಪಡಿಸಲಾಯಿತು.

1 comment:

ಗುರು [Guru] said...

ಇಂತಹ ಸಮಾರಂಭಗಳ ಬಗ್ಗೆ ಮುಂಚಿತವಾಗಿ ಅರಿವಿರುವವರು ದಯವಿಟ್ಟು ನನಗೆ ಮಿಂಚಿಸಿದಲ್ಲಿ ನಾನು ಅಭಾರಿ