Sunday, January 18, 2009

ಕರ್ನಾಟಕ ರಕ್ಷಣಾ ವೇದಿಕೆಯ ವಿಶ್ವ ಕನ್ನಡ ಜಾಗೃತಿ ಸಮ್ಮೇಳನ


ಸಮ್ಮೇಳನದ ದ್ವಾರದಲ್ಲಿ ನೆರೆದ ಬೃಹತ್ ಜನಸ್ತೋಮ

ಸಮ್ಮೇಳನದ ಅದ್ದೂರೀ ವೇದಿಕೆ

ಕನ್ನಡಿಗರ ಉತ್ಸಾಹ

ಬ್ಯಾಂಡ್ ಬಾಜಾ

ಸಮ್ಮೇಳನದಲ್ಲಿ ಕಿಕ್ಕಿರಿದ ಜನಸ್ತೋಮ

ಕನ್ನಡಿಗರಿಗೆ ಎಚ್ಚರ ಹೇಳುವ ಫಲಕಗಳು

ಮತ್ತೊಂದು ಎಚ್ಚರ

ಊಟದ ಸಮಯ

ಅದ್ದೂರಿ ದ್ವಾರ

ದ್ವಾರದ ಮುಂದೆ ಜನಸ್ತೋಮ

ಊಟದ ತಯಾರಿ

ಬೆಂಗಳೂರು ಜನವರಿ ೧೮: ಕಣ್ತುಂಬಾ ಕನ್ನಡ ಬಾವುಟಗಳು, ಎಲ್ಲಾ ಮಂದಿಯ ಹೆಗಲ ಮೇಲೆ ಕನ್ನಡದ ಶಾಲುಗಳು, ಕಿವಿ ತುಂಬಾ ಕನ್ನಡ ಡಿಂಡಿಮ, ಉಸಿರೆಲ್ಲಾ ಕನ್ನಡತನ, ಬಾಯ್ತುಂಬಾ ಆತಿಥ್ಯದ ಸವಿ...ಎಲ್ಲೆಲ್ಲೂ ಹಬ್ಬದ ಸಡಗರ..ಇದು ಕನ್ನಡ ರಕ್ಷಣಾ ವೇದಿಕೆಯವರು ಆಯೋಜಿಸಿದ್ದ ವಿಶ್ವ ಕನ್ನಡ ಜಾಗೃತಿ ಸಮ್ಮೇಳನದ ವೈಶಿಷ್ಟ್ಯ ಎಂದರೆ ತಪ್ಪಾಗಲಾರದು. ಭೇಷ್...ನಾರಾಯಣ ಗೌಡ್ರೇ...

ಈ ಬಹುರಾಷ್ಟ್ರೀಯ ದಾಳಿಯಿಂದ ಇಂದು ಕನ್ನಡತನವನ್ನು ಜನ ಮರೆಯುತ್ತಿರುವ ಒಂದು ದಾರಿದ್ರ್ಯದ ಕಾಲದಲ್ಲಿ ಕನ್ನಡಿಗರ ಪಾಲಿಗೆ ಅಮೃತ ಸಿಂಚನದಂತೆ ಈ ಸಮ್ಮೇಳನ ಮೂಡಿ ಬಂದಿತು. ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ಈ ಸಮ್ಮೇಳನದ ಮುಖ್ಯ ದ್ವಾರವನ್ನು ಹಬ್ಬದ ಸಂಭ್ರಮವನ್ನು ಆಚರಿಸುವಂತೆ ಸಿಂಗರಿಸಲಾಗಿತ್ತು. ಮುಖ್ಯ ದ್ವಾರ ದಾಟುತ್ತಿದ್ದಂತೆ ದೂರದೂರಿನಿಂದ ಬಂದಿದ್ದ ಹಾಗೂ ಸಮ್ಮೇಳನಕ್ಕೆ ಬಂದಿದ್ದ ಎಲ್ಲರಿಗೂ ಬಿಸಿಬಿಸಿ ಊಟದ ತಯಾರಿ ನಡೆದಿತ್ತು.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಸರ್ವ ಧರ್ಮ ಸಮನ್ವಯ ನೀತಿಯನ್ನು ತನ್ನ ಸಂಘಟನೆಯ ಮೂಲಕ ಜಗತ್ತಿಗೆ ಸಾರಿ ಸಾರಿ ಹೇಳಿದೆ."ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" ಎಂಬ ಘೋಷವಾಕ್ಯದೊಂದಿಗೆ ಕಳೆದ ಬಾರಿ ಭರ್ಜರಿಯಾಗಿ ಹಬ್ಬ ಆಚರಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ, ಈ ಬಾರಿ "ಕರ್ನಾಟಕದಿಂದ ಭಾರತ" ಎಂಬ ಘೋಷವಾಕ್ಯ ತನ್ನದಾಗಿಸಿದೆ. ಅಲ್ಲಲ್ಲಿ ಕನ್ನಡದ ಬಗ್ಗೆ ಘೋಷವಾಕ್ಯಗಳನ್ನು ಪ್ರದರ್ಶಿಸಲಾಗಿತ್ತು. ಹಸಿದ ಹೊಟ್ಟೆಗೆ ಭರ್ಜರಿ ಊಟ, ಬವಳಿದ ಕನ್ನಡಿಗನಿಗೆ ಅಮೃತ ಸಿಂಚನವನ್ನು ಈ ಸಮ್ಮೇಳನ ನೀಡಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಉದ್ಯಮಿ ಮೋಹನ್ ಆಳ್ವ ಹಾಗೂ ಪತ್ರಿಕಾ ರಂಗದ ಶ್ರೀ ಸತ್ಯನಾರಾಯಣ ಮೊದಲಾದವರು ಈ ಸಮ್ಮೇಳನದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಅವುಗಳಿಂದ ರಾಜ್ಯಕ್ಕಾಗುವ ನಷ್ಟ ಲಾಭಗಳ ಬಗ್ಗೆ ಮಾತುಗಳನ್ನಾಡಿದರು.

ಒಬ್ಬ ಕನ್ನಡಿಗನಾಗಿ ನನ್ನ ಅನಿಸಿಕೆ ಎಂದರೆ ನಮ್ಮ ಭಾಷಾಭಿಮಾನ ಕಡಿಮೆಯಾಯಿತು, ಅನ್ಯಭಾಷೀಯರಿಗೆ ತೋರುವ ಆದರ ಅತಿಯಾಯಿತು. ಈಗಲಾದರೂ ಎಚ್ಚೆತ್ತುಕೊಳ್ಳಿ ಕನ್ನಡಿಗರೇ...ಇಲ್ಲದಿದ್ದಲ್ಲಿ ನಾವು ಮಾದುವ ತಪ್ಪಿಗೆ ನಾಳೆ ನಮ್ಮ ಮಕ್ಕಳು, ಮೊಮ್ಮಕ್ಕಳು ಫಲ ಅನುಭವಿಸಬೇಕಾದೀತು.

1 comment:

ಗುರು [Guru] said...

ನಾರಾಯಣ ಗೌಡ್ರ ಈ ಸಾಧನೆ ಮೆಚ್ಚಬೇಕಾದ್ದೆ.