Thursday, June 10, 2010

ನಗರ ಪಾಲಿಕೆ ಮತ್ತು ಕಾರ್ಯ ದಕ್ಷತೆ




ನೀವು ಮೇಲೆ ನೋಡುತ್ತಿರುವುದು ಬೆಂಗಳೂರಿನ ಬಿನ್ನಿ ಮಿಲ್ ರಸ್ತೆಯಲ್ಲಿ ದಿನಾಂಕ ೦೮-೦೬-೨೦೧೦ರಂದು ಬೆಳಿಗ್ಗೆ ನಾನು ಕಂಡ ಹೃದಯ ವಿದ್ರಾವಕ ದೃಶ್ಯ. ದನವೊಂದು ಅಪಘಾತಕ್ಕೆ ಈಡಾಗಿ ಸತ್ತು ಬಿದ್ದಿದೆ. ಅದನ್ನು ಎರಡು ದಿನವಾದರೂ ಸಂಬಂಧ ಪಟ್ಟವರು ತೆಗೆದಿಲ್ಲ. ಅದೇ ದಾರಿಯಲ್ಲಿ ಓಡಾಡುವ ಸರಕಾರಿ ವಾಹನಗಳು, ಪೋಲೀಸರು ಕೂಡಾ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಆ ದನ ಕೊಳೆತು ನಾರುತ್ತಿದೆ. ನಾಯಿ, ಕಾಗೆಗಳು ಅದರ ಮಾಂಸವನ್ನು ಕಚ್ಚಿ ಕಚ್ಚಿ ಎಳೆದು ತಿನ್ನುತ್ತಿವೆ. ಕೆಲ ಸಮಯದ ನಂತರ ಆ ನಾಯಿಗಳಿಗೆ ಹುಚ್ಚು ಹಿಡಿಯುವ ಸಾಧ್ಯತೆಯೂ ಇಲ್ಲದಿಲ್ಲ. ಆ ನಾಯಿಗಳು ದಾರಿಹೋಕರಿಗೆ ಕಚ್ಚದೇ ಇಅರಲು ಸಾಧ್ಯವೇ ಇಲ್ಲ. ಈ ದನ ಸತ್ತು ಇವತ್ತಿಗೆ ಮೂರು ದಿನ ಆದರೂ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂದರೆ ನಮ್ಮ ದರಿದ್ರ ಕರ್ನಾಟಕ ಸರಕಾರ, ದರಿದ್ರ ಬಿ.ಬಿ.ಎಂ.ಪಿ.ಗಳು ನಿದ್ದೆ ಮಾಡುತ್ತಿವೆಯೇ?. ಇದನ್ನು ನಾನು ಸಮೀಪದಲ್ಲೇ ಇದ್ದ ಪೋಲೀಸರಿಗೆ ತಿಳಿಸಿದರೂ ಅವರು ಅಸಡ್ಡೆ ಮಾಡಿರುತ್ತಾರೆ.
"ರೀ...ಅದು ನಮ್ಮೆ ಕೆಲಸ ಅಲ್ಲ. ಕಾರ್ಪೋರೇಶನ್ ಅಫೀಸಿಗೆ ಫೋನ್ ಮಾಡಿ ಹೇಳಿ. ಆ ಬೋಳೀ ಮಕ್ಳೇ ಇಲ್ಲಿ ತಂದು ಹಾಕಿರುತ್ತಾರೆ." ಎಂಬ ಮಾತು ಹೇಳಿದರು. ಅವರ ನಂಬರ್ ಕೊಡಿ ಎಂದರೆ...."ನಮಗೆ ಗೊತ್ತಿಲ್ಲ" ಎಂಬ ಹಾರಿಕೆಯ ಉತ್ತರ ಬೇರೆ.

ಇವತ್ತು ಸರಕಾರದ ಕಾರ್ಯ ದಕ್ಷತೆ ಸತ್ತು ಹೋಗಿದೆ. ದುಡ್ಡು ಕೊಡದೆ ಯಾವ ಕೆಲಸವೂ ಆಗುವುದಿಲ್ಲ. ಆದರೆ ಇಂತಹ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಕ್ಕೂ ಇದು ಅನ್ವಯವಾದರೆ, ಈ ಸರಕಾರ ಇದ್ದೂ ಸತ್ತಂತೆ. ಒಬ್ಬ ಅಪ್ರಯೋಜಕ ಮುಖ್ಯಮಂತ್ರಿ, ಭ್ರಷ್ಟ ಮಂತ್ರಿಗಳನ್ನು ಒಳಗೊಂಡಿರುವ ಈ ಸರಕಾರ ಸಾರ್ವಜನಿಕರ ಬಗ್ಗೆ ಇನ್ನೆಷ್ಟು ಕಾಳಜಿ ತೋರಿಸಬಹುದು?.

1 comment:

Rajesh Iyyer said...

This BJP Govt. is useless. These people are making money for the future elections. Those 3 Rowdy MLA's of Bellary are fooling this foolish CM. BJP is going to die soon. People are against them. Nothing is going on...everything without money is not moving. This govt. is one of the worst..worst..worst govt. we have seen ever. Kick them with left boot...