ಬೆಂಗಳೂರು ಜನವರಿ ೨೭:ಮಂಗಳೂರಿನಲ್ಲಿ ಪಬ್ನಲ್ಲಿ ಕುಳಿತು ಬಿಯರ್ ಹೀರುತ್ತಿದ್ದ ಹುಡುಗಿಯರ ಮೇಲೆ ಕೆಲವರು ಹಲ್ಲೆ ಮಾಡಿರುವುದು ಖಂಡನೀಯವೇ ಆದರೂ ಕೆಲ ಮಹಿಳಾ ಸಂಘಟನೆಗಳು ಪರೋಕ್ಷವಾಗಿ ಹಾಗೂ ಧೈರ್ಯವಾಗಿ ಆ ಹುಡುಗಿಯರ ಪರವಾಗಿ ವಾದಿಸುತ್ತಿರುವುದು ನಮ್ಮ ದೇಶ ಯಾವ ಪಥದತ್ತ ಸಾಗುತ್ತಿದೆ ಎಂಬುದನ್ನು ಊಹಿಸಲೂ ಕಷ್ಟ ಸಾಧ್ಯವಾಗುತ್ತಿದೆ.
ಮಹಿಳೆಯರಿಗೆ ಸ್ವಾತಂತ್ರ್ಯ ಅತಿಯಾಯಿತೆ?
ಈ ಪ್ರಶ್ನೆಯನ್ನು ಭಾರತದ ಪ್ರತೀ ಮಹಿಳೆಯೂ ತನ್ನ ಅಂತರಾತ್ಮವನ್ನು ಕೇಳಿಕೊಳ್ಳಬೇಕಾಗಿದೆ. ಏಕೆಂದರೆ ಮಹಿಳೆಗೆ ದುಡಿಯುವ ಹಕ್ಕು, ಸಮಾಜದ ಎಲ್ಲ ಸ್ತರಗಳಲ್ಲಿಯೂ ಪುರುಷನ ಸಮಾನವಾಗಿ ಅವರನ್ನು ನೋಡುತ್ತಿರುವುದು ಇಂದು ಸಮಾಜದ ವಿಘಟನೆಗೆ ಕಾರಣವಾಗುತ್ತಿರುವುದು ಸುಳ್ಳಲ್ಲ. ಏಕೆಂದರೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಸಹಜವಾಗಿ ಮನಸ್ತಾಪಗಳು ಬರುತ್ತವೆ. ಇವು "ಅಹಂ" ರೂಪವಾಗಿ ಪರಿವರ್ತನೆಯಾದಾಗ ಸಹಜವಾಗಿ ಮನೆಯಲ್ಲಿ ಕಿರಿಕಿರಿ, ಜಗಳ ಶುರುವಾಗುತ್ತದೆ. ಅಂದರೆ ಮಹಿಳೆ ಇವತ್ತು ದುಡಿಯುತ್ತಿರುವುದರಿಂದ ಸಹಜವಾಗಿ ತಾನು ಗಂಡಸಿನ ಅವಲಂಬನೆಯಿಲ್ಲದೆ ಬದುಕಬಲ್ಲೆನೆಂಬ ಒಂಥರಾ ಭಂಡ ಧೈರ್ಯ (ಒಂಥರಾ ಒಳ್ಳೆಯದೇ..ಕಷ್ಟಕಾಲದಲ್ಲಿ ಕೆಲ ಹೆಂಗಸರಿಗೆ ಇದು ಅನಿವಾರ್ಯ) ಮುಂದೆ ಅಹಂ ರೂಪ ತಳೆದಾಗ ಗಂಡ ಹೆಂಡಿರ ಮಧ್ಯೆ ಜಗಳ, ತಕರಾರುಗಳು ಕೋರ್ಟ್ ಮೆಟ್ಟಲು ಹತ್ತಿ ಮುಂದೆ ಡೈವೋರ್ಸ್ ಎಂಬುದರಲ್ಲಿ ಪರ್ಯವಸಾನವಾಗುತ್ತದೆ.
ಮಹಿಳಾ ಸಂಘಟನೆಗಳು ಮತ್ತು ಸ್ವಾತಂತ್ರ್ಯ
ಮಂಗಳೂರಿನಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡಾಗ, ಈಗಿನ ಕಾಲದಲ್ಲಿ ಮಹಿಳೆಯರು ಸಿಗರೇಟ್ ಸೇದುವುದು, ಪಬ್ನಲ್ಲಿ ಕುಳಿತು ಬಿಯರ್, ವಿಸ್ಕಿ ಹೀರುವುದು, ಬಾರ್ಗಳಲ್ಲಿ ಅರೆನಗ್ನವಾಗಿ ನೃತ್ಯ ಮಾಡುವುದು ಸಾಮಾನ್ಯ ವಿಷಯವಾಗಿದೆ ಹಾಗೂ ಸಮಾಜದಲ್ಲಿ ಇಂದು ನಡೆಯುತ್ತಿರುವ ಕ್ರೌರ್ಯ, ಅತ್ಯಾಚಾರ, ಕೊಲೆ, ಸುಲಿಗೆಗಳು ಮುಂತಾದ ಕೃತ್ಯಗಳಿಗೆ ಇದೂ ಒಂದು ಪರೋಕ್ಷ ಕಾರಣ. ಹಲ್ಲೆಯಿಂದ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ, ಅಂದರೆ ಜಾಗತೀಕರಣ ಹಾಗೂ ಆಧುನಿಕ (ಪಾಶ್ಚಾತ್ಯ)ಸಂಸ್ಕೃತಿ ಮಹಿಳೆಯರ ಮೇಲೆ ಬೀರುತ್ತಿರುವ ಪರಿಣಾಮ ಕಳವಳಕಾರಿಯಾಗಿದೆ.
ರಾಜಕೀಯ ಪಕ್ಷಗಳು ಮತ್ತು ಹಿಂದುತ್ವ
ಜೆ.ಡಿ.ಎಸ್. ಪಕ್ಷದ ಕುಮಾರಸ್ವಾಮಿಯವರು ನೆನ್ನೆ ನಡೆದ ಮಂಗಳೂರಿನ ಘಟನೆಯ ಬಗ್ಗೆ ಮಾತನಾಡುತ್ತಾ "ಬಿ.ಜೆ.ಪಿ.ಯವರು ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಆಡುತ್ತಾರೆ." ಎಂದು ಹೇಳಿದರು.
"ಸ್ವಾಮೀ...ತಾವು ಯಾವ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದೀರಾ ಎಂದು ಹೇಳುತ್ತೀರಾ?. ನಾವೇನು ತಮ್ಮನ್ನು ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಳ್ಳಲು ತಡೆದಿಲ್ಲವಲ್ಲಾ?".
ರಾಜಕೀಯ ಪಕ್ಷಗಳು ಮತ್ತು ಮಹಿಳೆ:
ರೇಣುಕಾ ಚೌಧರಿ ಎಂಬ ಕಾಂಗ್ರೆಸ್ ಸಂಸದೆ, ಮಂಗಳೂರಿನ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು, ಆಕೆಗೆ ಮಹಿಳೆಯರ ಬಗೆಗೆ ಇರುವ ಕಾಳಜಿಯನ್ನು ತೋರಿಸುತ್ತದೋ ಅಥವಾ ಮಹಿಳೆಯರನ್ನು ಪರೋಕ್ಷವಾಗಿ ಬಾರ್ ಹಾಗೂ ಪಬ್ಗಳಲ್ಲಿ ಬಿಯರ್ ಕುಡಿಯಿರೆಂದು ಹೇಳುತ್ತಿದ್ದಾಳೋ ಒಂದೂ ಅರ್ಥವಾಗುವುದಿಲ್ಲ. ಆದರೆ ಇಂಥಹಾ ಒಂದು ಘಟನೆಗಳು ಮರ್ಯಾದಸ್ತ ಮಹಿಳೆಯರ ಜೀವನದ ಮೇಲೆ ಕರಿಛಾಯೆಯನ್ನು ಬೀರುವುದಂತೂ ಸಹಜ. ಏಕೆಂದರೆ ಕೆಲ ಮಹಿಳೆಯರು ಇವತ್ತು ಸಿಗರೇಟ್, ಮದ್ಯ, ಮಾದಕ ಪದಾರ್ಥಗಳ ದಾಸರಾಗಿ, ಹೈಟೆಕ್ ವೇಶ್ಯಾವೃತ್ತಿಗೂ ಇಳಿಯುತ್ತಿರುವುದೂ ಕೂಡಾ ಎಲ್ಲಾ ಮಹಿಳೆಯರು ಅದೇ ಥರಾ ಇರುತ್ತಾರೆಂಬ ಶಂಕೆ ಕೆಲ ಸಮಾಜಘಾತುಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಹಾಯಕಾರಿಯಾಗಿದೆ.
ಆದರೆ ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಎಚ್ಚರದಿಂದಿದ್ದಷ್ಟು ಕ್ಷೇಮ. ಏಕೆಂದರೆ ತಮ್ಮ ಮಕ್ಕಳಿಗೆ ಶಾಲೆಗೆ ಹೋಗುವಾಗಲೇ ಕೈಯಲ್ಲೊಂದು ಮೊಬೈಲ್, ಪಾಕೆಟ್ ಮನಿ ಮುಂತಾದುವುಗಳನ್ನು ಕೊಟ್ಟು ಓದಿಗಿಂತ ಇತರ ಚಟುವಟಿಕೆಗಳಿಗೇ ಹೆಚ್ಚು ಮಹತ್ವ ಬರುವಂತೆ ಮಾಡುತ್ತಾರೆ. ಇಂದಿನ ಹೆಣ್ಮಕ್ಕಳು ತಂದೆ ತಾಯಂದಿರ ಹಿಡಿತದಿಂದ ಸಡಿಲವಾಗುತ್ತಿರುವುದು ನಮ್ಮ ದೇಶದಲ್ಲಿ ಪಾಶ್ಚಾತ್ಯ ದೇಶಗಳಂತೆ ಡೈವೋರ್ಸ್ ಜಾಸ್ತಿಯಾಗಲು ಪರೋಕ್ಷವಾಗಿ ಕಾರಣವಾಗುತ್ತಿದೆ.
ನಾನು ಮಂಗಳೂರಿನ ಘಟನೆಯನ್ನು ಸಮರ್ಥಿಸುತ್ತಿಲ್ಲ. ಆದರೆ ಸಮಾಜದ ವಿಘಟನೆಯನ್ನು ತಡೆಯಲು ನಾವೆಲ್ಲ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ.ಇದನ್ನು ಪ್ರತಿಯೊಬ್ಬ ತಂದೆ ತಾಯಿ ಅರ್ಥ ಮಾಡಿಕೊಂಡರೆ...ಬಹುಶಃ ಸುಧಾರಣೆಯಾದೀತೇನೋ...
Subscribe to:
Post Comments (Atom)
2 comments:
This is the problem with the latest girls (???). They want to have everything before marriage. They might want to become the prostitutes....
one innocent family they need a help from one man, who is making there family to suicide. please any women organisation can help them. it's very urgent
Post a Comment