Sunday, May 11, 2008

ಈ ಅಜ್ಜಿಯಂದಿಗಿರುವ ಕಾಳಜಿ ಈಗಿನ ಜನರೇಷನ್ ಗಿಲ್ಲ!!!!


ಬೆಂಗಳೂರು ಮೇ ೧೧ : ಈ ಚಿತ್ರ ನೋಡಿದಿರಾ?. .....ಮೆಚ್ಚಬೇಕು ಇವರ ಕಾಳಜಿಯನ್ನು. ಕನಿಷ್ಠಪಕ್ಷ ಈ ನೂರು ದಾಟಿದ ಅಜ್ಜಿಯಂದಿರಿಗಿರುವ ರಾಜ್ಯದ ಕಾಳಜಿ ನಮ್ಮ ಹೈಟೆಕ್ ಮಂದಿಗಿಲ್ಲದಿರುವುದು ನಮ್ಮ ರಾಜ್ಯದ ದುರ್ದೈವ.
ಐಟಿ ಸಿಟಿ, ಐಟಿ ಹಬ್, ಅತೀ ಹೆಚ್ಚು ಸಾಕ್ಷರ ಮತದಾರರು ಇರುವ ಬೆಂಗಳೂರು ನಗರದಲ್ಲಿ ...ಈ ಐಟಿ ಮಂದಿ( ಹಾಗೂ ವೋಟ್ ಮಾಡದ ಎಲ್ಲರೂ) ತಮ್ಮ ಸಂಕುಚಿತ ಮನಸ್ಸನ್ನು ತೋರ್ಪಡಿಸಿದ್ದಾರೆ. ಅವರಲ್ಲಿ ಅನೇಕ ಜನ ಪಿಕ್ನಿಕ್, ಸಿನೆಮಾ, ಮೋಜು, ಮಸ್ತಿ ಮಾಡಿ ಮತದಾನದ ದಿನವಾದ ಶನಿವಾರವನ್ನು ಕಳೆದಿದ್ದಾರೆ. ಇದು ಇವರು ಈ ದೇಶಕ್ಕೆ ಸಲ್ಲಿಸುವ ಮಹಾ ಸೇವೆ. ನಡೆಯಲಾಗದಿದ್ದರೂ ಇತರರ ಸಹಾಯದಿಂದ ನಡೆದು ಬಂದು ನೂರರ ಹೊಸ್ತಿಲಲ್ಲಿರುವ ಕೆಲವು ಅಜ್ಜ,ಅಜ್ಜಿಯಂದಿರು, ನೂರು ದಾಟಿದ ಅಜ್ಜ,ಅಜ್ಜಿಯಂದಿರು ತಮ್ಮ ಅತೀ ಅಮೂಲ್ಯವಾದ ಮತವನ್ನು ಚಲಾಯಿಸಿ ತಮ್ಮ ಒಂದು ಮತದ ಮೌಲ್ಯವನ್ನು ಈ ಜನರಿಗೆ ತೋರಿಸಿದ್ದಾರೆ.
ಏನಾಗಿದೆ ಈ ಜನಕ್ಕೆ?. ಐದು ವರ್ಷಕ್ಕೊಮ್ಮೆ ಬರುವ ಮತದಾನದ ಮೌಲ್ಯ ತಿಳಿಯದಷ್ಟು ಬುದ್ದಿಹೀನರೇ ಈ ಜನ?. ಅಥವಾ ಯಾರು ಬಂದರೂ ಅಷ್ಟೆ...ನಾವು ನಮ್ಮ ಕೆಲಸ ಬಿಡಲಾಗುವುದಿಲ್ಲ ಎಂಬ ದರ್ಪವೇ?......?.
ಚುನಾವಣಾ ಅಯೋಗ ಹಾಗೂ ಭಾರತ ಸರಕಾರ ಸೇರಿ ಒಂದು ಕಾನೂನು ರಚನೆ ಮಾಡುವುದು ಒಳ್ಳೆಯದು. ಈ ಮತದಾನವನ್ನು ಖಡ್ಡಾಯ ಮಾಡಬೇಕು. ಯಾರು ಮತದಾನ ಮಾಡುತ್ತಾರೋ, ಅವರಿಗೆ ಮಾತ್ರ ಎಲ್ಲ ಸರಕಾರಿ ಸೌಲಭ್ಯ ಕೊಡಬೇಕು. ಹಾಗೂ ಮತದಾನ ಮಾಡಿದವ ಮಾತ್ರ ಈ ದೇಶದ ಪ್ರಜೆ ಎಂದು ಘೋಷಿಸಬೇಕು. ಮತದಾನ ಮಾಡದವರ ಎಲ್ಲ ಸೌಲಭ್ಯಗಳನ್ನು ಕಿತ್ತುಕೊಳ್ಳಬೇಕು. ಅಲ್ಲದೆ ಅವರಿಗೆ ಸಜೆ ಅಥವಾ ಅವರಿಗೆ ದಂಡ ವಿಧಿಸಬೇಕು.
ಹೊಡೆದೆಬ್ಬಿಸಿ ಜನರನ್ನು.....ಮತದಾನ ಮಾಡಿ....ನಿಮ್ಮ ಮತ ನಿಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ. ನಿಮ್ಮ ಮತ ನಿಮ್ಮ ನಾಡಿನ ಜನರ ಏಳಿಗೆಯನ್ನು ನಿರ್ಧರಿಸುತ್ತದೆ. ನಿಮ್ಮ ಮತ ನಿಮಗೆ ಈ ನಾಡಿನ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ. ನಿಮ್ಮ ಮತ ನಿಮ್ಮ ದೇಶಪ್ರೇಮವನ್ನು ತೋರಿಸುತ್ತದೆ.ನೀವು ನಿಜವಾಗಲೂ ಭಾರತವನ್ನು ಪ್ರೀತಿಸುತ್ತೀರಾದರೆ, ನೀವು ದೇಶಪ್ರೇಮಿಯಾದರೆ ತಪ್ಪದೆ ಮತ ನೀಡಿ. ಇಲ್ಲದಿದ್ದರೆ ನೀವು ದೇಶದ್ರೋಹಿಗಳೇ ಸರಿ.......

2 comments:

Shrinidhi Hande said...

Election commission should make voting online.... Kannada people living elsewhere will be able to vote easily

Anonymous said...

ಗುರು ಅವರಿಗೆ ವಂದನೆಗಳು,
ಹಲವಾರು ಜನರಿಗೆ ಪರವಾಗಿ ಮತ ಚಲಾಯಿಸಿದಂತೆ ವಿರೋಧವಾಗಿಯೂ ಮತ ಚಲಾಯಿಸಬಹುದು ಎಂದೆ ಗೊತ್ತಿಲ್ಲ.. ಇನ್ನು ಇವರು ಸಂವಿಧಾನ ತಮಗೆ ನೀಡಿರುವ ಹಕ್ಕನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿಯುವುದಾದರೂ ಹೇಗೆ?